Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಜನ್ಮಾಷ್ಟಮಿ ವಿಶೇಷ: ಬಾದಾಮಿ ಹಲ್ವಾ, ಪ್ರಯತ್ನಿಸಿ ನೋಡಿ
ಪ್ರತಿ ವರ್ಷ ಆಗಸ್ಟ್- ಸೆಪ್ಟೆಂಬರ್ ತಿಂಗಳು ಹಬ್ಬಗಳ ಸಂಭ್ರಮಕ್ಕೆ ಬರವಿಲ್ಲದ ತಿಂಗಳು ಅಂತಾನೆ ಹೇಳಬಹುದು, ಏಕೆಂದರೆ ಈ ಮಾಸದಲ್ಲಿ ಹಬ್ಬಗಳು, ಸಾಲು, ಸಾಲಾಗಿ ಒಂದರ ಹಿಂದೆ ಒಂದರಂತೆ ಧಾವಿಸುತ್ತಲೇ ಇರುತ್ತದೆ. ಇನ್ನೇನು ಕೃಷ್ಣನ ಹುಟ್ಟುಹಬ್ಬ ಜನ್ಮಾಷ್ಟಮಿಗೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಭಾರತೀಯರಿಗಂತೂ ಈ ಹಬ್ಬ ಹೆಚ್ಚು ಉತ್ಸಾಹದ ಪ್ರತೀಕದಂತೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ಜನ್ಮಾಷ್ಟಮಿಯಲ್ಲಿ ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
ಇನ್ನು ಪುಟ್ಟ ಮಕ್ಕಳಿಗೆ ಬಾಲ ಕೃಷ್ಣನ ವೇಷವನ್ನು ತೊಡಿಸಿ ಅಮ್ಮಂದಿರು ಸಂಭ್ರಮಪಟ್ಟರೆ ಪುಟ್ಟ ಮಕ್ಕಳಿಗಂತೂ ತಾವೇ ಕೃಷ್ಣನಾಗಿ ಧರೆಗಿಳಿದಂತಹ ಅನುಭವ. ಬೆಣ್ಣೆ ಕಳ್ಳ ಮುದ್ದು ಕೃಷ್ಣನ ಬಾಲ ಲೀಲೆಗಳನ್ನು ಪ್ರದರ್ಶಿಸಿ ನಲಿದಾಡುವ ಮುದ್ದು ಪುಟಾಣಿಗಳಿಗೆ ಅಂದು ಸಡಗರ ಮೇರೆ ಮೀರಿರುತ್ತದೆ. ವಿವಿಧ ಸ್ಪರ್ಧೆಗಳು, ಆಟಗಳನ್ನು, ಮೊಸರು ಕುಡಿಕೆ ಸ್ಪರ್ಧೆ ಹೀಗೆ ಜನ್ಮಾಷ್ಟಮಿಯ ಕಳೆಯನ್ನು ಹೆಚ್ಚಿಸುವ ಹಳ್ಳಿಯಾಟಗಳು ನಿಜಕ್ಕೂ ಮನರಂಜನೀಯ.
ಇನ್ನು ಹಬ್ಬದ ಸವಿಯನ್ನು ಸವಿಯಲು ರುಚಿಕರವಾದ ತಿನಿಸುಗಳು ಬೇಕೇ ಬೇಕು ಅಲ್ಲವೇ?. ಜನ್ಮಾಷ್ಟಮಿ ಪ್ರಯುಕ್ತ ಬಾಯನ್ನು ಸಿಹಿಮಾಡುವ ಬಾದಾಮಿ ಹಲ್ವಾ ರೆಸಿಪಿಯೊಂದಿಗೆ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದು ಈ ಹಲ್ವಾದ ಕಮಾಲನ್ನು ನೀವು ಆಸ್ವಾದಿಸಿಯೇ ತೀರಬೇಕು.

ಪ್ರಮಾಣ: 2
*ಸಿದ್ಧತಾ ಸಮಯ: 30 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 45 ನಿಮಿಷಗಳು
ಸಾಮಾಗ್ರಿಗಳು
1.ಬಾದಾಮಿ - 1/2 ಕಪ್ (ರಾತ್ರಿ ನೆನೆಸಿಟ್ಟು ರುಬ್ಬಿರುವಂಥದ್ದು)
2.ಸಕ್ಕರೆ - 1/2 ಕಪ್ ಅಥವಾ 3/4 ಕಪ್ (ನಿಮ್ಮ ರುಚಿಯನ್ನು ಆಧರಿಸಿ)
3.ಹಾಲು - 1 ಕಪ್
4.ತುಪ್ಪ - 1/2 ಕಪ್
5.ಕೇಸರಿ - ಕೆಲವು ಎಸಳು (ಹಾಲಿನಲ್ಲಿ ನೆನೆಸಿರುವಂಥದ್ದು)
ಮಾಡುವ ವಿಧಾನ
* ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಕರಗಿಸಿಕೊಳ್ಳಿ ಹಾಗೂ ಇದನ್ನು ಪಾತ್ರೆಯ ಸುತ್ತಲೂ ಹರಡಿಸಿಕೊಳ್ಳಿ ಈ ರೀತಿ ಮಾಡುವುದರಿಂದ ಹಲ್ವಾ ಪಾತ್ರೆಗೆ ಅಂಟಿಕೊಳ್ಳುವುದಿಲ್ಲ.
* ಇದೇ ಪಾತ್ರಯಲ್ಲಿ 1/4 ಕಪ್ನಷ್ಟು ನೀರನ್ನು ಕುದಿಸಿಕೊಳ್ಳಿ, ನಂತರ ಉರಿಯನ್ನು ನಿಲ್ಲಿಸಿ, ಇದಕ್ಕೆ ಸಕ್ಕರೆಯನ್ನು ಹಾಕಿ ಮತ್ತು ಸಕ್ಕರೆ ಕರಗುವವರೆಗೆ ಇದನ್ನು ಸಮಮಿಶ್ರಣ ಮಾಡಿಕೊಳ್ಳಿ.
* ಇದೀಗ ಬಾದಾಮಿ ಪೇಸ್ಟ್ ಅನ್ನು ಸೇರಿಸಿಕೊಳ್ಳಿ, ಉಳಿದ ಹಾಲಿಗೆ ಕೇಸರಿಯನ್ನು ಹಾಕಿ ಮತ್ತು ಮಧ್ಯಮ ಉರಿಯಲ್ಲಿ ಇದನ್ನು ಚೆನ್ನಾಗಿ ಕಲಸುತ್ತಿರಿ.
* ಇದು ದಪ್ಪನಾಗುತ್ತಿದ್ದಂತೆ ಪಾತ್ರೆಯ ಬದಿ ಒಣಗುತ್ತದೆ, ಎಲ್ಲಾ ತುಪ್ಪವನ್ನು ಇದಕ್ಕೆ ಹಾಕಿ ಮತ್ತು 10 ನಿಮಿಷ ಇದನ್ನು ಬೇಯಿಸಿಕೊಳ್ಳಿ ಸಣ್ಣ ಉರಿಯಲ್ಲಿ ಇದನ್ನು ಚೆನ್ನಾಗಿ ಕಲಸುತ್ತಿರಿ.
* ಹಲ್ವಾವು ತುಪ್ಪವನ್ನು ಚೆನ್ನಾಗಿ ಹೀರುತ್ತಿರುವಂತೆ ಪಾತ್ರೆಯ ಬದಿಯಲ್ಲಿ ಗಟ್ಟಿಯಾಗಿ ಅಂಟಿಕೊಂಡಿರುವಂತಹ ಪಾಕ ಬಿಡುತ್ತದೆ. ಇದೀಗ ಉರಿಯನ್ನು ನಿಲ್ಲಿಸಿ. ಉಳಿದ ತುಪ್ಪವನ್ನು ಇದಕ್ಕೆ ಸೇರಿಸಿ ಮತ್ತು ಹಲ್ವಾವನ್ನು ಮೆತ್ತಗಾಗಿಸಲು ಚೆನ್ನಾಗಿ ಕಲಸಿ. ಹಲ್ವಾ ತಣ್ಣಗಾಗುತ್ತಿರುವಂತೆ ಸುಂದರವಾಗಿ ಪಾತ್ರೆಯಲ್ಲಿ ಮೂಡಿಬರುತ್ತದೆ.
ಈ ಬಾದಾಮಿ ಹಲ್ವಾವನ್ನು ನೀವು ತಂಪಾಗಿ ಅಥವಾ ಕೊಠಡಿಯ ಉಷ್ಣಾಂಶಕ್ಕೆ ಹೊಂದಿರುವಾಗ ಕೂಡ ಬಡಿಸಬಹುದು. ಜನ್ಮಾಷ್ಟಮಿಯ ವಿಶೇಷ ಖಾದ್ಯವಾಗಿರುವ ಬಾದಾಮಿ ಹಲ್ವಾವನ್ನು ಶ್ರೀಕೃಷ್ಣ ದೇವರಿಗೆ ಪ್ರಸಾದ ರೂಪದಲ್ಲಿ ಕೂಡ ನಿಮಗೆ ಅರ್ಪಿಸಬಹುದು.



Click it and Unblock the Notifications
