Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಯುಗಾದಿ ಗಮ್ಮತ್ತಿಗೆ ಬೇಕು ಒಬ್ಬಟ್ಟು ಸಾಥ್
ಯುಗಾದಿಗೆ ಒಬ್ಬಟ್ಟು ಇಲ್ಲ ಅಂದರೆ ಆ ಅಡುಗೆಯನ್ನು ಯುಗಾದಿ ಸ್ಪೆಷಲ್ ಅಡುಗೆ ಎನ್ನಲು ಸಾಧ್ಯವಿಲ್ಲ . ಏಕೆಂದರೆ ಈ ಹಬ್ಬದಲ್ಲಿ ಒಬ್ಬಟ್ಟು ಇರಲೇ ಬೇಕು.
ಮೊದಲೇ ಹೇಳಿದ ಹಾಗೆ ಹೊಸದಾಗಿ ಹಬ್ಬದ ಅಡುಗೆ ಮಾಡುವವರಿಗೆ ಒಬ್ಬಟ್ಟು ಅಡುಗೆ ಬರಲ್ಲ ಅಂದರೆ ಅಯ್ಯೊ ರಾಮ! ಯುಗಾದಿಗೆ ಒಬ್ಬಟ್ಟು ಇಲ್ಲ ಅಂದರೆ ಹೇಗೆ ಎಂದು ಮನೆಯವರು ನಕ್ಕಾರು. ಅಂತಹ ತೊಂದರೆ ನಿಮಗೆ ಬರದಿರಲಿ ಎಂದು ಈ ಒಬ್ಬಟ್ಟು ರೆಸಿಪಿ ನೀಡಲಾಗಿದೆ. ಈ ಕೆಳಗಿನ ರೆಸಿಪಿ ವಿಧಾನ ಸರಳ ಮತ್ತು ರುಚಿಕರವಾಗಿದೆ.
ಬೇಕಾಗುವ ಸಾಮಾಗ್ರಿಗಳು:
* ಕಡಲೆ ಬೇಳೆ 1 ಕಪ್
* ಒಂದೂವರೆ ಕಪ್ ಸಕ್ಕರೆ/ ಬೆಲ್ಲ
* ಏಲಕ್ಕಿ (8 ಇರಲಿ)
* ಅರ್ಧ ಕಪ್ ಮೈದಾ
* ಒಂದು ಕಪ್ ವನಸ್ಪತಿ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು ಅದನ್ನು ಪ್ರೆಶರ್ ಕುಕ್ಕರಿನಲ್ಲಿ ಹಾಕಿ, ಬೇಯಲು ಸಾಕಾಗುವಷ್ಟು ನೀರು ಹಾಕಿ ಚೆನ್ನಾಗಿ ಬೇಯಿಸಬೇಕು.
2. ಮೈದಾಕ್ಕೆ ಚಿಟಿಕೆಯಷ್ಟು ಉಪ್ಪು ಹಾಕಿ, ನೀರು ಚಿಮುಕಿಸುತ್ತಾ ಕಲೆಸಬೇಕು. ಹೀಗೆ ಕಲೆಸುವಾಗ ತುಪ್ಪ ಅಥವಾ ಎಣ್ಣೆ ಸ್ವಲ್ಪ ಸೇರಿಸಿದರೆ ಮಿಶ್ರಣ ಮೃದುವಾಗುವುದು.
3. ಕಲೆಸಿದ ಮೈದಾ ಹಿಟ್ಟನ್ನು 2 ಗಂಟೆ ಕಾಲ ಇಡಬೇಕು.
4. ಈಗ ಬೇಯಿಸಿದ ಬೇಳೆಯಿಂದ ನೀರನ್ನು ಸೋಸಿ, ಬೆಲ್ಲ ಸ್ವಲ್ಪ ಉಪ್ಪು ಹಾಕಿ ಮಿಕ್ಸಿಯಲ್ಲಿ ಗಟ್ಟಿಯಾಗಿ ಅರೆಯಬೇಕು.
5. ಈಗ ಈ ಮಿಶ್ರಣ ಒಣಗುವವರೆಗೆ ಕಡಿಮೆ ಉರಿಯಲ್ಲಿ ಬಾಣಲೆಯಲ್ಲಿ ಹಾಕಿ ಬಿಸಿ ಮಾಡಬೇಕು. ಮಿಶ್ರಣ ಒಣಗಿದಾಗ (ಡ್ರೈ ಆದಾಗ) ಉರಿಯಿಂದ ತೆಗೆದು ಆರಲು ಇಡಬೇಕು. ನಂತರ ಈ ಮಿಶ್ರಣಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ ಮಿಶ್ರ ಮಾಡಬೇಕು.
6. ಈಗ ಮಿಶ್ರಣದಿಂದ ಚಿಕ್ಕ ಉಂಡೆಗಳನ್ನು (ಈ ಅಳತೆಯ ಪ್ರಕಾರ 10-12 ಉಂಡೆ ಆಗುತ್ತದೆ) ಮಾಡಬೇಕು.
7. ಈಗ ಮೈದಾ ಹಿಟ್ಟಿನಿಂದ ಚಪಾತಿಗೆ ಕಟ್ಟುವಾಗೆ ಉಂಡೆ ಕಟ್ಟಬೇಕು. ಅದನ್ನು ಚಪಾತಿ ತಟ್ಟುವ ಹಾಗೆ ತಟ್ಟಬೇಕು. ಹೀಗೆ ತಟ್ಟುವಾಗ ತಟ್ಟಲು ಬಳಸಿದ ವೃತ್ತಾಕಾರದ ಪಾತ್ರೆ ಅಥವಾ ಮರದ ಅಲಗೆ ಅಂಟಿ ಹಿಡಿಯದಂತೆ ಪ್ಲಾಸ್ಟಿಕ್ ಹಾಕಿ ಅದರ ಮೇಲೆ ಮೈದಾ ಉಂಡೆಯನ್ನು ಇಟ್ಟು ತಟ್ಟಿ.
8. ಈಗ ಮೈದಾ ಉಂಡೆಯನ್ನು ಚಪಾತಿಗೆ ತಟ್ಟುವ ಹಾಗೆ ತಟ್ಟಿ, ಹೀಗೆ ತಟ್ಟುವಾಗ ಮಧ್ಯ ಭಾಗದಲ್ಲಿ ದಪ್ಪವಾಗಿದ್ದು ಸುತ್ತಲೂ ತೆಳುವಾಗಿರಲಿ. ನಂತರ ಬೇಳೆ ಮತ್ತು ಬೆಲ್ಲದ ಉಂಡೆಯನ್ನು ತಟ್ಟಿದ ಮೈದಾದ ಮಧ್ಯದಲ್ಲಿ ಇಟ್ಟು ಮೈದಾದ ತುದಿಗಳನ್ನು ಮಡಚಿ ಪುನಃ ಮೊದಲಿನಂತೆ ತಟ್ಟಿ.
9. ಈಗ ತವಾವನ್ನು ಉರಿಯಲ್ಲಿಟ್ಟು ಸ್ವಲ್ಪ ಎಣ್ಣೆ ಸವರಿ ಈ ಒಬ್ಬಟ್ಟನ್ನು ತವಾದಲ್ಲಿ ಹಾಕಬೇಕು. ಅದರ ಮೇಲೆ ಕೂಡ ಸ್ವಲ್ಪ ಎಣ್ಣೆ ಹಾಕಬೇಕು. ಸ್ವಲ್ಪ ಬಿಸಿಯಾದಾಗ ಮಗುಚಿ ಹಾಕಬೇಕು. ಒಬ್ಬಟ್ಟು ಬೆಂದಿದೆ ಎಂದಾಗ ಅದನ್ನು ತೆಗೆದು ತಟ್ಟೆಯಲ್ಲಿ ಹಾಕಿ.
ಇಷ್ಟು ಸರಳ ವಿಧಾನವಿರುವಾಗ ಒಬ್ಬಟ್ಟು ಮಾಡಲು ಆತಂಕ ಏಕೆ ಅಲ್ವಾ?



Click it and Unblock the Notifications