Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಯುಗಾದಿ ಗಮ್ಮತ್ತಿಗೆ ಬೇಕು ಒಬ್ಬಟ್ಟು ಸಾಥ್
ಯುಗಾದಿಗೆ ಒಬ್ಬಟ್ಟು ಇಲ್ಲ ಅಂದರೆ ಆ ಅಡುಗೆಯನ್ನು ಯುಗಾದಿ ಸ್ಪೆಷಲ್ ಅಡುಗೆ ಎನ್ನಲು ಸಾಧ್ಯವಿಲ್ಲ . ಏಕೆಂದರೆ ಈ ಹಬ್ಬದಲ್ಲಿ ಒಬ್ಬಟ್ಟು ಇರಲೇ ಬೇಕು.
ಮೊದಲೇ ಹೇಳಿದ ಹಾಗೆ ಹೊಸದಾಗಿ ಹಬ್ಬದ ಅಡುಗೆ ಮಾಡುವವರಿಗೆ ಒಬ್ಬಟ್ಟು ಅಡುಗೆ ಬರಲ್ಲ ಅಂದರೆ ಅಯ್ಯೊ ರಾಮ! ಯುಗಾದಿಗೆ ಒಬ್ಬಟ್ಟು ಇಲ್ಲ ಅಂದರೆ ಹೇಗೆ ಎಂದು ಮನೆಯವರು ನಕ್ಕಾರು. ಅಂತಹ ತೊಂದರೆ ನಿಮಗೆ ಬರದಿರಲಿ ಎಂದು ಈ ಒಬ್ಬಟ್ಟು ರೆಸಿಪಿ ನೀಡಲಾಗಿದೆ. ಈ ಕೆಳಗಿನ ರೆಸಿಪಿ ವಿಧಾನ ಸರಳ ಮತ್ತು ರುಚಿಕರವಾಗಿದೆ.
ಬೇಕಾಗುವ ಸಾಮಾಗ್ರಿಗಳು:
* ಕಡಲೆ ಬೇಳೆ 1 ಕಪ್
* ಒಂದೂವರೆ ಕಪ್ ಸಕ್ಕರೆ/ ಬೆಲ್ಲ
* ಏಲಕ್ಕಿ (8 ಇರಲಿ)
* ಅರ್ಧ ಕಪ್ ಮೈದಾ
* ಒಂದು ಕಪ್ ವನಸ್ಪತಿ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು ಅದನ್ನು ಪ್ರೆಶರ್ ಕುಕ್ಕರಿನಲ್ಲಿ ಹಾಕಿ, ಬೇಯಲು ಸಾಕಾಗುವಷ್ಟು ನೀರು ಹಾಕಿ ಚೆನ್ನಾಗಿ ಬೇಯಿಸಬೇಕು.
2. ಮೈದಾಕ್ಕೆ ಚಿಟಿಕೆಯಷ್ಟು ಉಪ್ಪು ಹಾಕಿ, ನೀರು ಚಿಮುಕಿಸುತ್ತಾ ಕಲೆಸಬೇಕು. ಹೀಗೆ ಕಲೆಸುವಾಗ ತುಪ್ಪ ಅಥವಾ ಎಣ್ಣೆ ಸ್ವಲ್ಪ ಸೇರಿಸಿದರೆ ಮಿಶ್ರಣ ಮೃದುವಾಗುವುದು.
3. ಕಲೆಸಿದ ಮೈದಾ ಹಿಟ್ಟನ್ನು 2 ಗಂಟೆ ಕಾಲ ಇಡಬೇಕು.
4. ಈಗ ಬೇಯಿಸಿದ ಬೇಳೆಯಿಂದ ನೀರನ್ನು ಸೋಸಿ, ಬೆಲ್ಲ ಸ್ವಲ್ಪ ಉಪ್ಪು ಹಾಕಿ ಮಿಕ್ಸಿಯಲ್ಲಿ ಗಟ್ಟಿಯಾಗಿ ಅರೆಯಬೇಕು.
5. ಈಗ ಈ ಮಿಶ್ರಣ ಒಣಗುವವರೆಗೆ ಕಡಿಮೆ ಉರಿಯಲ್ಲಿ ಬಾಣಲೆಯಲ್ಲಿ ಹಾಕಿ ಬಿಸಿ ಮಾಡಬೇಕು. ಮಿಶ್ರಣ ಒಣಗಿದಾಗ (ಡ್ರೈ ಆದಾಗ) ಉರಿಯಿಂದ ತೆಗೆದು ಆರಲು ಇಡಬೇಕು. ನಂತರ ಈ ಮಿಶ್ರಣಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ ಮಿಶ್ರ ಮಾಡಬೇಕು.
6. ಈಗ ಮಿಶ್ರಣದಿಂದ ಚಿಕ್ಕ ಉಂಡೆಗಳನ್ನು (ಈ ಅಳತೆಯ ಪ್ರಕಾರ 10-12 ಉಂಡೆ ಆಗುತ್ತದೆ) ಮಾಡಬೇಕು.
7. ಈಗ ಮೈದಾ ಹಿಟ್ಟಿನಿಂದ ಚಪಾತಿಗೆ ಕಟ್ಟುವಾಗೆ ಉಂಡೆ ಕಟ್ಟಬೇಕು. ಅದನ್ನು ಚಪಾತಿ ತಟ್ಟುವ ಹಾಗೆ ತಟ್ಟಬೇಕು. ಹೀಗೆ ತಟ್ಟುವಾಗ ತಟ್ಟಲು ಬಳಸಿದ ವೃತ್ತಾಕಾರದ ಪಾತ್ರೆ ಅಥವಾ ಮರದ ಅಲಗೆ ಅಂಟಿ ಹಿಡಿಯದಂತೆ ಪ್ಲಾಸ್ಟಿಕ್ ಹಾಕಿ ಅದರ ಮೇಲೆ ಮೈದಾ ಉಂಡೆಯನ್ನು ಇಟ್ಟು ತಟ್ಟಿ.
8. ಈಗ ಮೈದಾ ಉಂಡೆಯನ್ನು ಚಪಾತಿಗೆ ತಟ್ಟುವ ಹಾಗೆ ತಟ್ಟಿ, ಹೀಗೆ ತಟ್ಟುವಾಗ ಮಧ್ಯ ಭಾಗದಲ್ಲಿ ದಪ್ಪವಾಗಿದ್ದು ಸುತ್ತಲೂ ತೆಳುವಾಗಿರಲಿ. ನಂತರ ಬೇಳೆ ಮತ್ತು ಬೆಲ್ಲದ ಉಂಡೆಯನ್ನು ತಟ್ಟಿದ ಮೈದಾದ ಮಧ್ಯದಲ್ಲಿ ಇಟ್ಟು ಮೈದಾದ ತುದಿಗಳನ್ನು ಮಡಚಿ ಪುನಃ ಮೊದಲಿನಂತೆ ತಟ್ಟಿ.
9. ಈಗ ತವಾವನ್ನು ಉರಿಯಲ್ಲಿಟ್ಟು ಸ್ವಲ್ಪ ಎಣ್ಣೆ ಸವರಿ ಈ ಒಬ್ಬಟ್ಟನ್ನು ತವಾದಲ್ಲಿ ಹಾಕಬೇಕು. ಅದರ ಮೇಲೆ ಕೂಡ ಸ್ವಲ್ಪ ಎಣ್ಣೆ ಹಾಕಬೇಕು. ಸ್ವಲ್ಪ ಬಿಸಿಯಾದಾಗ ಮಗುಚಿ ಹಾಕಬೇಕು. ಒಬ್ಬಟ್ಟು ಬೆಂದಿದೆ ಎಂದಾಗ ಅದನ್ನು ತೆಗೆದು ತಟ್ಟೆಯಲ್ಲಿ ಹಾಕಿ.
ಇಷ್ಟು ಸರಳ ವಿಧಾನವಿರುವಾಗ ಒಬ್ಬಟ್ಟು ಮಾಡಲು ಆತಂಕ ಏಕೆ ಅಲ್ವಾ?



Click it and Unblock the Notifications