Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಶಿವರಾತ್ರಿ ವ್ರತಕ್ಕಾಗಿ ವಿಶೇಷ ರೆಸಿಪಿ: ಬಾಳೆಹಣ್ಣಿನ ಸಲಾಡ್
ಶಿವರಾತ್ರಿಯಂದು ವ್ರತವಿರಿಸುವ ಭಕ್ತರು ಕೆಲವು ಆಹಾರಗಳನ್ನು ಮಾತ್ರ ಸೇವಿಸುತ್ತಾರೆ.ಈ ಮಿತಿಯೊಳಗೆ ಬರುವ ಆಹಾರವೆಂದರೆ ಬಾಳೆಹಣ್ಣು. ಬಾಳೆಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಇದನ್ನು ಸಲಾಡ್ ರೂಪದಲ್ಲಿ ಸೇವಿಸುವುದೇ ಉತ್ತಮ
ಭಾರತದ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಪ್ರತಿ ರಾಜ್ಯದಲ್ಲಿಯೂ ಭಿನ್ನವಾಗಿ ಆಚರಿಸಲ್ಪಡುತ್ತದೆ. ಆಚರಣೆಯ ವಿಧಾನಗಳಲ್ಲಿ ಕೊಂಚ ಬದಲಾವಣೆ ಇದ್ದರೂ ಮೂಲವಿಧಾನ ಮಾತ್ರ ಒಂದೇ ಆಗಿದೆ. ಅದೆಂದರೆ ಉಪವಾಸ ಆಚರಣೆ ಮತ್ತು ಶಿವನ ಆರಾಧನೆ.
ಶಿವರಾತ್ರಿಯಂದು ವ್ರತವಿರಿಸುವ ಭಕ್ತರು ಕೆಲವು ಆಹಾರಗಳನ್ನು ಮಾತ್ರ ಸೇವಿಸುವ ಕಟ್ಟುಪಾಡು ಆಚರಿಸಬೇಕಾಗುತ್ತದೆ. ಈ ಮಿತಿಯೊಳಗೆ ಬರುವ ಆಹಾರವೆಂದರೆ ಬಾಳೆಹಣ್ಣು. ಉಪವಾಸದ ಅವಧಿಯಲ್ಲಿ ಬಾಳೆಹಣ್ಣನ್ನು ಸೇವಿಸುವ ಮೂಲಕ ಆಹಾರವಿಲ್ಲದ ದೇಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ. ಮಹಾಶಿವರಾತ್ರಿಗೆ 5 ಸ್ಪೆಷೆಲ್ ರೆಸಿಪಿ
ಬಾಳೆಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಇದನ್ನು ಸಲಾಡ್ ರೂಪದಲ್ಲಿ ಸೇವಿಸುವುದೇ ಉತ್ತಮ. ಬನ್ನಿ, ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಹಾಗೂ ಕೆಲವೇ ಸಾಮಾಗ್ರಿಗಳು ಬೇಕಾಗುವ ಈ ಸಲಾಡ್ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ....

ಪ್ರಮಾಣ
*ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
*ತಯಾರಿಕಾ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು
ಬಾಳೆಹಣ್ಣು - 2 (ಚಿಕ್ಕದಾಗಿ ತುಂಡರಿಸಿದ್ದು)

ಅಗತ್ಯವಿರುವ ಸಾಮಾಗ್ರಿಗಳು
ಪುದೀನಾ ಎಲೆಗಳು - ¼ ಕಪ್

ಅಗತ್ಯವಿರುವ ಸಾಮಾಗ್ರಿಗಳು
ಮೊಸರು - ¾ಕಪ್ (ಚಮಚದಲ್ಲಿ ಕಡೆದದ್ದು)

ಅಗತ್ಯವಿರುವ ಸಾಮಾಗ್ರಿಗಳು
ಸಕ್ಕರೆ - 2 ಚಿಕ್ಕ ಚಮಚ

ಅಗತ್ಯವಿರುವ ಸಾಮಾಗ್ರಿಗಳು
ಉಪ್ಪು - ರುಚಿಗನುಸಾರ

ಅಗತ್ಯವಿರುವ ಸಾಮಾಗ್ರಿಗಳು
ಕಾಳುಮೆಣಸಿನ ಅಥವಾ ಕರಿಮೆಣಸಿನ ಪುಡಿ - ರುಚಿಗನುಸಾರ

ಅಗತ್ಯವಿರುವ ಸಾಮಾಗ್ರಿಗಳು....
ಲಿಂಬೆ ರಸ - ಕೆಲವು ಹನಿಗಳು

ಅಗತ್ಯವಿರುವ ಸಾಮಾಗ್ರಿಗಳು....
ಸೌತೆ ಕಾಯಿ - ½ ಕಪ್ (ಕೊಂಚ ದೊಡ್ಡ ತುಂಡುಗಳಾಗಿಸಿದ್ದು)

ಅಗತ್ಯವಿರುವ ಸಾಮಾಗ್ರಿಗಳು....
ಶೇಂಗಾಬೀಜ- 1 ದೊಡ್ಡಚಮಚ (ಚೆನ್ನಾಗಿ ಹುರಿದು ಚಿಕ್ಕ ತುಂಡುಗಳನ್ನಾಗಿಸಿದ್ದು)

ಅಗತ್ಯವಿರುವ ಸಾಮಾಗ್ರಿಗಳು....
ಸಬ್ಬಸಿಗೆ ಸೊಪ್ಪು - ½ ದೊಡ್ಡ ಚಮಚ (ಚಿಕ್ಕದಾಗಿ ಹೆಚ್ಚಿದ್ದು)

ವಿಧಾನ
1. ಮೊದಲು ಮೊಸರನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ಇದಕ್ಕೆ ಪುದೀನಾ ಎಲೆಗಳು, ಸಕ್ಕರೆ, ಉಪ್ಪು, ಕಾಳುಮೆಣಸು ಹಾಕಿ ಮಿಶ್ರಣ ಮಾಡಿ, ಪಕ್ಕಕ್ಕಿಡಿ.
2. ಈಗ ಇನ್ನೊಂದು ಪಾತ್ರೆಯಲ್ಲಿ ಬಾಳೆಹಣ್ಣು ಹಾಕಿ ಲಿಂಬೆರಸ ಸೇರಿಸಿ.

ವಿಧಾನ
3. ಇದಕ್ಕೆ ಸೌತೆ, ಉಪ್ಪು, ಶೇಂಗಾ ಮತ್ತು ಸಬ್ಬಸಿಗೆ ಸೊಪ್ಪು ಸೇರಿಸಿ. ಬಳಿಕ ಮೊದಲ ಪಾತ್ರೆಯಲ್ಲಿದ್ದ ಮೊಸರನ್ನು ಸೇರಿಸಿ.
4. ಎಲ್ಲಾ ಸಾಮಾಗ್ರಿಗಳು ಚೆನ್ನಾಗಿ ಬೆರಕೆಯಾಗುವಂತೆ ಚಿಮ್ಮಿಸಿ ಮಿಶ್ರಣಮಾಡಿ.

ಸವಿಯಾದ ಬಾಳೆಹಣ್ಣಿನ ಸಾಲಾಡ್ ಸಿದ್ಧ!
ಅಷ್ಟೇ, ನಿಮ್ಮ ಸವಿಯಾದ ಬಾಳೆಹಣ್ಣಿನ ಸಾಲಾಡ್ ಸಿದ್ಧ. ಈ ಶಿವರಾತ್ರಿಯಂದು ನಿಮ್ಮ ಉಪವಾಸದ ಸಮಯದಲ್ಲಿ ಹೆಚ್ಚು ಕಾಲ ಹಸಿವಾಗದೇ ನಿಮ್ಮ ಮನ ಪೂರ್ಣವಾಗಿ ಭಕ್ತಿಪರವಶಗೊಳ್ಳಲು ನೆರವಾಗಲು ಈ ಸಾಲಾಡ್ ಖಂಡಿತಾ ನೆರವಾಗುತ್ತದೆ.



Click it and Unblock the Notifications