Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಮನೆಯಲ್ಲಿಯೆ ಸವಿಯಬಹುದು ಪಾವ್ ಬಾಜಿ ಸವಿ

ಬೇಕಾಗುವ ಸಾಮಗ್ರಿಗಳು:
1. ಅರ್ಧ ಓಪನ್ ಮಾಡಿದ ಬನ್ 8
2. ಬೇಯಿಸಿದ ಆಲೂಗೆಡ್ಡೆ 2
3. ಬೇಯಿಸಿದ ಬಟಾಣಿ 1 ಕಪ್
4. ಬೇಯಿಸಿದ ಕ್ಯಾರೆಟ್ 2
5. ಬೇಯಿಸಿದ ಹೂಕೋಸು
6. ಬೇಯಿಸಿದ ಎಲೆಕೋಸು1/2
7. ಬೇಯಿಸಿದ ಬೀನ್ಸ್ 10
8. ಈರುಳ್ಳಿ ಕತ್ತರಿಸಿದ 2
9. 2 ಟೊಮೆಟೊ
10. ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
11. ದುಂಡು ಮೆಣಸಿನ ಕಾಯಿ 1
12. ಕತ್ತರಿಸಿದ ಹಸಿಮೆಣಸಿನ ಕಾಯಿ 4
13. ಕೊತ್ತಂಬರಿ ಸೊಪ್ಪು
14. ಮೆಣಸಿನ ಪುಡಿ 1 ಚಮಚ
15. ಜೀರಿಗೆ ಪುಡಿ 1 ಚಮಚ
16. ಕೊತ್ತಂಬರಿ ಪುಡಿ 1 ಚಮಚ
17. ಪಾವ್ ಬಾಜಿ ಮಸಾಲ ಪುಡಿ 1 ಚಮಚ
18. ಗರಂ ಮಸಾಲ 1 ಚಮಚ ( ಕರಿಮೆಣಸಿನ ಕಾಯಿ, ಬೆಳ್ಳುಳ್ಳಿ, ಚಕ್ಕೆ, ಏಲಕ್ಕಿ )
19. ತುಪ್ಪ 2 ಚಮಚ
20. ಎಣ್ಣೆ 2 ಚಮಚ
21. ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
1. ದುಂಡು ಮೆಣಸಿನ ಕಾಯಿ ಬಿಟ್ಟು , ಕತ್ತರಿಸಿದ ಎಲ್ಲಾ ತರಕಾರಿಗಳನ್ನು ಉಪ್ಪು ಹಾಕಿ ಬೇಯಿಸಿ ನಂತರ ಅವುಗಳನ್ನು ಮಸೆದಾಗ ಪೇಸ್ಟ್ ರೀತಿ ಆಗುವುದು.
2. ನಂತರ ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಶ್ರ ಮಾಡಬೇಕು.
3. ನಂತರ ಆ ಬಾಣಲೆಗೆ ದುಂಡು ಮೆಣಸಿನ ಕಾಯಿ ಮತ್ತು ಹಸಿ ಮೆಣಸಿನ ಕಾಯಿಯನ್ನು ಹಾಕಿ 2 ನಿಮಿಷ ಬೆರೆಸಿ ನಂತರ ಮೆಣಸಿನ ಪುಡಿ ಮತ್ತು ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಬೆರೆಸ ಬೇಕು, ಗರಂ ಮಸಾಲ ಪುಡಿಯನ್ನು ಈಗ ಹಾಕಬಾರದು.
4. ಅದಕ್ಕೆ ಟೊಮೆಟೊ ಹಾಕಿ ಅದು ಮೆದುವಾದಾಗ ರಸ ತರ ಮಾಡಬೇಕು .
5. ಈಗ ಮಸೆದ ತರಕಾರಿಯನ್ನು ಬೆರೆಸಿ ಅದಕ್ಕೆ 1/2 ಕಪ್ ನೀರು ಸೇರಿಸಬೇಕು, ಅದಕ್ಕೆ ರುಚಿಗೆ ತಕ್ಕ ಹಾಗೆ ಉಪ್ಪು ಸೇರಿಸಿ.
6. ಅದಕ್ಕೆ ಗರಂ ಮಸಾಲ ಹಾಕಿ 5 ನಿಮಿಷ ಕಾಲ ಕುದಿಸಿ, ನಂತರ ಅದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
7. ಬನ್ ಅನ್ನು ತುಪ್ಪದಲ್ಲಿ ಮುಳುಗಿಸಿ ಅದನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ ಅದನ್ನು ತಯಾರಿಸಿದ ಮಸಾಲೆಯೊಂದಿಗೆ ತಿನ್ನಲು ಕೊಡಿ. ಎಲ್ಲರೊಂದಿಗೆ ತಿನ್ನಲು ತುಂಬಾನೆ ಮಜವಾಗಿರುತ್ತದೆ.



Click it and Unblock the Notifications
