Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮದ್ದೂರು ವಡೆಗೆ ಸರಿಸಾಟಿ ಯಾವುದು?
ಬೆಂಗಳೂರು-ಮೈಸೂರು ರಸ್ತೆಯಲ್ಲಿ ನೀವು ಎಂದಾದರೂಪ್ರಯಾಣಿಸಿದ್ದರೆ ಬಹುಶಃ ಮದ್ದೂರು ವಡೆಯನ್ನು ಮಿಸ್ ಮಾಡಿಕೊಂಡಿರಲ್ಲ.ಅದರ ಸ್ವಾದ, ಪರಿಮಳ,ಸ್ಥಳ ಮಹಿಮೆ ನಿಮ್ಮನ್ನು ಒಂದಾದರೂ ಕೊಂಡುಕೊಳ್ಳುವಂತೆ ಪ್ರೇರೇಪಿಸುತ್ತದೆ. ತಿಂದ ನಂತರ ನಿಮಗರಿವಿಲ್ಲದಂತೆಯೇ ಮತ್ತೆರಡನ್ನು ಪಾರ್ಸಲ್ ಕಟ್ಟಿಸಿಕೊಂಡಿರುತ್ತೀರಿ.ಮದ್ದೂರು ವಡೆಯನ್ನು ಮತ್ತಷ್ಟು ರುಚಿಯಾಗಿಸಲು ಹಾಗೂ ಅದರ ಅಸಲಿ ಸ್ವಾದಕ್ಕೆ ಮೋಸವಾಗದಂತೆ ಅದನ್ನು ಒಂಚೂರು ಬದಲಾಯಿಸಿದ್ದೇನೆ.
*ಶ್ರೀರಕ್ಷಾ, ಬೆಂಗಳೂರು
ಬೇಕಾಗುವ ಪದಾರ್ಥಗಳು
ಅಕ್ಕಿ ಹಿಟ್ಟು: 2 ಕಪ್ಪು
ಹುರಿದು ಹೊಟ್ಟು ತೆಗೆದ ನೆಲಗಡಲೆ ಹುಡಿ:1 ಕಪ್ಪು
ರವೆ: 1 ಕಪ್ಪು
ಕಡಲೆಹಿಟ್ಟು: 1 ಕಪ್ಪು
ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ: 1
ಸಣ್ಣಗೆ ಹೆಚ್ಚಿಕೊಂಡ ಪುದೀನ ಸೊಪ್ಪು: 1 ಹಿಡಿ
ಶುಂಠಿ ತುರಿ:1 ಟೀ ಚಮಚ
ಬೆಳ್ಳುಳ್ಳಿ ತುರಿ:1 ಟೀ ಚಮಚ
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು:1 ಹಿಡಿ
ಕರಿಬೇವು: 1 ಎಸಳು
ಲವಂಗಪಟ್ಟೆ ಪುಡಿ: ¼ ಟೀ ಚಮಚ
ಚಕ್ಕೆ: ಒಂಚೂರು
ಉಪ್ಪು, ಕೆಂಪು ಮೆಣಸಿನಕಾಯಿ ಖಾರದ ಪುಡಿ: ರುಚಿಗೆ ತಕ್ಕಷ್ಟು
ಎಣ್ಣೆ: ಕರಿಯಲು
ತಯಾರಿಸುವ ವಿಧಾನ
1. ಮೇಲಿನ ಪದಾರ್ಥಗಳನ್ನೆಲ್ಲಾ ಚೆನ್ನಾಗಿ ಕಲೆಸಿ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಈ ಮಿಶ್ರಣಕ್ಕೆ ನೀರು ಹಾಕಿ ಚೆನ್ನಾಗಿ ನಾದಿ ಹಿಟ್ಟು ತಯಾರಿಸಿಕೊಳ್ಳಿ.
2.ನಿಂಬೆಹಣ್ಣು ಗಾತ್ರದ ಉಂಡೆಗಳನ್ನು ಮಾಡಿಕೊಂಡು ಮೃದುವಾಗಿ ತಟ್ಟಿ ದುಂಡಗೆ ಮದ್ದೂರು ವಡೆ ಆಕಾರಕ್ಕೆ ಮಾಡಿಕೊಳ್ಳಿ.
3. ಚೆನ್ನಾಗಿ ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿದುಕೊಳ್ಳಿ.
4.ಕಡಿಮೆ ಉರಿಯಲ್ಲಿ ಎಣ್ಣೆಯನ್ನು ಕಾಯಿಸಿ. ಮದ್ದೂರು ವಡೆಗಳು ಗರಿಗರಿಯಾಗಿ ಬರುತ್ತವೆ.
5.ಚಟ್ನಿಯೊಂದಿಗೆ ಬಡಿಸಿ ಅಥವಾ ಹಾಗೆ ಸವಿಯಬಹುದು.
ಮದ್ದೂರು ವಡೆಗಳನ್ನು ಬರಿಗೈಯಲ್ಲೆ ಮಾಡಬಹುದು(ಮಾಡಿದ ನಂತರ ಒಂದು ವೇಳೆ ಉಳಿದರೆ ಅತಿಥಿಗಳಿಗೂ ಕೊಡಿ!). ಇಲ್ಲಿ ಕೊಟ್ಟಿರುವ ಪದಾರ್ಥಗಳನ್ನು ಬಳಸಿಕೊಂಡು 30ರಿಂದ 35 ಮದ್ದೂರು ವಡೆಗಳನ್ನು ತಯಾರಿಸಬಹುದು.



Click it and Unblock the Notifications











