Latest Updates
-
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ!
ಸಬ್ಬಸಿಗೆ ಸೊಪ್ಪು ಮತ್ತು ಹೀರೆಕಾಯಿ ಭಾತ್

* ಗಂಗೋತ್ರಿ, ಮೈಸೂರು
ಬೇಕಾಗುವ ಸಾಮಾನುಗಳು :
ಅಕ್ಕಿ 2 ಲೋಟ
ಸಬ್ಬಸಿಗೆ ಸೊಪ್ಪು 2 ಬಟ್ಟಲು
ಹೀರೆಕಾಯಿ 1
ಕ್ಯಾರೆಟ್ 2
ಬೀನ್ಸ್ 1/2 ಬಟ್ಟಲು
ಆಲೂಗೆಡ್ಡೆ 1/2 ಬಟ್ಟಲು
ಬದನೇಕಾಯಿ1 /2 ಬಟ್ಟಲು
ಈರುಳ್ಳಿ 1/2 ಬಟ್ಟಲು
ಟೊಮೆಟೋ 2
ಎಣ್ಣೆ 1 ಬಟ್ಟಲು
ಸಾಸಿವೆ 1 ಚಮಚ
ಕರಿಬೇವು 8 ಎಸಳು
ಈರುಳ್ಳಿ 1 ಉದ್ದಕ್ಕೆ ಹೆಚ್ಚಿದ್ದು
ರುಚಿಗೆ ಉಪ್ಪು
ಒಂದು ನಿಂಬೆಹಣ್ಣಿನ ರಸ
ತುಪ್ಪ
ಮಸಾಲೆ ರುಬ್ಬಲು ಸಾಮಾನುಗಳು :
ಈರುಳ್ಳಿ 2
ಬೆಳ್ಳುಳ್ಳಿ 8 ಎಸಳು
ಬ್ಯಾಡಗಿ ಮೆಣಸಿನಕಾಯಿ 4 ಅಥವಾ ಅಚ್ಚಮೆಣಸಿನಪುಡಿ 1 ಚಮಚ
ದನಿಯಾ ಪುಡಿ 2 ಚಮಚ
ಸಾರಿನಪುಡಿ 1 ಚಮಚ
ಗರಂ ಮಸಾಲೆ 1/2 ಚಮಚ (ಇದ್ದರೆ)
ಚಕ್ಕೆ 2
ಲವಂಗ 3
ಶುಂಠಿ 1 ಇಂಚು
ತೆಂಗಿನತುರಿ 1 ಬಟ್ಟಲು
ಗಸಗಸೆ 1/4 ಚಮಚ
ಮಾಡುವ ವಿಧಾನ :
* ಮಸಾಲೆಗಾಗಿ ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಹಾಕಿ ನುಣ್ಣೆಗ ರುಬ್ಬಿ ಇಟ್ಟುಕೊಳ್ಳಬೇಕು.
* ಕುಕ್ಕರ್ ನಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಹಾಕಿ, ಈರುಳ್ಳಿ ಹಾಕಿ ಫ್ರೈ ಮಾಡಿರಿ.
* ಎಲ್ಲ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು, ಸಬ್ಬಸಿಗೆ ಸೊಪ್ಪನ್ನು ಹಾಕಿ ಎಣ್ಣೆಯಲ್ಲೇ ಚೆನ್ನಾಗಿ ಹುರಿಯಿರಿ. ಎಣ್ಣೆಯಲ್ಲಿ ಹುರಿದಾಗ ರುಚಿ ಹೆಚ್ಚುತ್ತದೆ.
* ಆಮೇಲೆ ರುಬ್ಬಿದ ಮಸಾಲೆ ಹಾಕಿ. ತೊಳೆದಿಟ್ಟುಕೊಂಡ ಅಕ್ಕಿ, 2 ಬಟ್ಟಲು ನೀರು (ರುಬ್ಬಿದ ಮಿಶ್ರಣದಲ್ಲೂ ಇರುವುದರಿಂದ ನೋಡಿ ಹಾಕಬೇಕು) ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ, ಕೊತ್ತಂಬರಿ ಸೊಪ್ಪು, ಹಾಕಿ ಮುಚ್ಹಿಡಬೇಕು.
* ನಿಂಬೆ ರಸ ಹಾಕುವುದರಿಂದ ಬಾತ್ ಉದುರು ಉದುರು ಆಗುವುದು.
* 1 ವಿಶಲ್ ಬಂದ ಕೂಡಲೇ ಉರಿ ಸಣ್ಣ ಮಾಡಿ ಸರಿಯಾಗಿ 4 ನಿಮಿಷವಾದನಂತರ ಕುಕ್ಕರ್ ಕೆಳಗಿಳಿಸಿಡಿ.
* ಅದು ತಣ್ಣಗಾದ ಮೇಲೆ ಚೆನ್ನಾಗಿ ಮಿಕ್ಸ್ ಮಾಡಿ, ತುಪ್ಪ ಹಾಕಿ ಬಡಿಸುವುದು.
* (ಅವರೆಕಾಯಿ ಕಾಲದಲ್ಲಿ ಅವರೆಕಾಳನ್ನು ಹಾಕಿದರೆ ಇನ್ನು ಚೆನ್ನಾಗಿರುತ್ತದೆ)



Click it and Unblock the Notifications











