Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಸಬ್ಬಸಿಗೆ ಸೊಪ್ಪು ಮತ್ತು ಹೀರೆಕಾಯಿ ಭಾತ್

* ಗಂಗೋತ್ರಿ, ಮೈಸೂರು
ಬೇಕಾಗುವ ಸಾಮಾನುಗಳು :
ಅಕ್ಕಿ 2 ಲೋಟ
ಸಬ್ಬಸಿಗೆ ಸೊಪ್ಪು 2 ಬಟ್ಟಲು
ಹೀರೆಕಾಯಿ 1
ಕ್ಯಾರೆಟ್ 2
ಬೀನ್ಸ್ 1/2 ಬಟ್ಟಲು
ಆಲೂಗೆಡ್ಡೆ 1/2 ಬಟ್ಟಲು
ಬದನೇಕಾಯಿ1 /2 ಬಟ್ಟಲು
ಈರುಳ್ಳಿ 1/2 ಬಟ್ಟಲು
ಟೊಮೆಟೋ 2
ಎಣ್ಣೆ 1 ಬಟ್ಟಲು
ಸಾಸಿವೆ 1 ಚಮಚ
ಕರಿಬೇವು 8 ಎಸಳು
ಈರುಳ್ಳಿ 1 ಉದ್ದಕ್ಕೆ ಹೆಚ್ಚಿದ್ದು
ರುಚಿಗೆ ಉಪ್ಪು
ಒಂದು ನಿಂಬೆಹಣ್ಣಿನ ರಸ
ತುಪ್ಪ
ಮಸಾಲೆ ರುಬ್ಬಲು ಸಾಮಾನುಗಳು :
ಈರುಳ್ಳಿ 2
ಬೆಳ್ಳುಳ್ಳಿ 8 ಎಸಳು
ಬ್ಯಾಡಗಿ ಮೆಣಸಿನಕಾಯಿ 4 ಅಥವಾ ಅಚ್ಚಮೆಣಸಿನಪುಡಿ 1 ಚಮಚ
ದನಿಯಾ ಪುಡಿ 2 ಚಮಚ
ಸಾರಿನಪುಡಿ 1 ಚಮಚ
ಗರಂ ಮಸಾಲೆ 1/2 ಚಮಚ (ಇದ್ದರೆ)
ಚಕ್ಕೆ 2
ಲವಂಗ 3
ಶುಂಠಿ 1 ಇಂಚು
ತೆಂಗಿನತುರಿ 1 ಬಟ್ಟಲು
ಗಸಗಸೆ 1/4 ಚಮಚ
ಮಾಡುವ ವಿಧಾನ :
* ಮಸಾಲೆಗಾಗಿ ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಹಾಕಿ ನುಣ್ಣೆಗ ರುಬ್ಬಿ ಇಟ್ಟುಕೊಳ್ಳಬೇಕು.
* ಕುಕ್ಕರ್ ನಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಹಾಕಿ, ಈರುಳ್ಳಿ ಹಾಕಿ ಫ್ರೈ ಮಾಡಿರಿ.
* ಎಲ್ಲ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು, ಸಬ್ಬಸಿಗೆ ಸೊಪ್ಪನ್ನು ಹಾಕಿ ಎಣ್ಣೆಯಲ್ಲೇ ಚೆನ್ನಾಗಿ ಹುರಿಯಿರಿ. ಎಣ್ಣೆಯಲ್ಲಿ ಹುರಿದಾಗ ರುಚಿ ಹೆಚ್ಚುತ್ತದೆ.
* ಆಮೇಲೆ ರುಬ್ಬಿದ ಮಸಾಲೆ ಹಾಕಿ. ತೊಳೆದಿಟ್ಟುಕೊಂಡ ಅಕ್ಕಿ, 2 ಬಟ್ಟಲು ನೀರು (ರುಬ್ಬಿದ ಮಿಶ್ರಣದಲ್ಲೂ ಇರುವುದರಿಂದ ನೋಡಿ ಹಾಕಬೇಕು) ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ, ಕೊತ್ತಂಬರಿ ಸೊಪ್ಪು, ಹಾಕಿ ಮುಚ್ಹಿಡಬೇಕು.
* ನಿಂಬೆ ರಸ ಹಾಕುವುದರಿಂದ ಬಾತ್ ಉದುರು ಉದುರು ಆಗುವುದು.
* 1 ವಿಶಲ್ ಬಂದ ಕೂಡಲೇ ಉರಿ ಸಣ್ಣ ಮಾಡಿ ಸರಿಯಾಗಿ 4 ನಿಮಿಷವಾದನಂತರ ಕುಕ್ಕರ್ ಕೆಳಗಿಳಿಸಿಡಿ.
* ಅದು ತಣ್ಣಗಾದ ಮೇಲೆ ಚೆನ್ನಾಗಿ ಮಿಕ್ಸ್ ಮಾಡಿ, ತುಪ್ಪ ಹಾಕಿ ಬಡಿಸುವುದು.
* (ಅವರೆಕಾಯಿ ಕಾಲದಲ್ಲಿ ಅವರೆಕಾಳನ್ನು ಹಾಕಿದರೆ ಇನ್ನು ಚೆನ್ನಾಗಿರುತ್ತದೆ)



Click it and Unblock the Notifications