Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಬಾಸುಮತಿ ಅಕ್ಕಿ ತರಕಾರಿ ಬಿರಿಯಾನಿ

* ಮೇದಿನಿ ಗುಪ್ತ, ಸೋಮವಾರಪೇಟೆ
ಬೇಕಾದ ಪದಾರ್ಥಗಳು
ಬಾಸುಮತಿ ಅಕ್ಕಿ - 2 ಲೋಟದ ತುಂಬ (ಅಥವಾ ಪಲಾವ್ ಅಕ್ಕಿ)
ಸಣ್ಣಗೆ ಕತ್ತರಿಸಿದ ವಿಧವಿಧವಾದ ತರಕಾರಿಗಳು - 4 ಲೋಟ ( ಬಟಾಣಿ, ಕ್ಯಾರೆಟ್, ಆಲೂಗೆಡ್ಡೆ, ಹೂಕೋಸು, ಬೀನ್ಸ್)
ದೊಡ್ಡ ಈರುಳ್ಳಿ - 3
ಬೆಳ್ಳುಳ್ಳಿ - 8 ತೊಳೆ
ಎಲಕ್ಕಿ - 4
ಲವಂಗ - 6
ದಾಲ್ಚಿನಿ - 2
ಇಂಚಿನ ಒಂದು ತುಂಡು
ಪಲಾವ್ ಎಲೆ - 4
ಮರಾಠ ಮೊಗ್ಗು - 4
ಎಣ್ಣೆ - 6 ಚಮಚ
ರುಚಿಗೆ ತಕ್ಕಷ್ಟು ಉಪ್ಪು.
ಮಿಕ್ಸಿಯ ಕೆಲಸ :
ತೆಂಗಿನಕಾಯಿ ತುರಿ - 1 ಲೋಟ
ಕೊತ್ತಂಬರಿ ಸೊಪ್ಪು - 1 ದೊಡ್ಡ ಕಟ್ಟು
ಬೆಳ್ಳುಳ್ಳಿ 6 ತೊಳೆ, ಹಸಿರುಮೆಣಸಿನಕಾಯಿ 8 ಕಡ್ಡಿ, ಎರಡನ್ನೂ ಚೂರು ಎಣ್ಣೆಯಲ್ಲಿ ಹುರಿದು ಆನಂತರ ಮಿಕ್ಸಿಗೆ ಹಾಕಿ. ನುಣ್ಣಗೆ ರುಬ್ಬಿ.
ತಯಾರಿಸುವ ವಿಧಾನ
ಮೊದಲು ಅಕ್ಕಿಯನ್ನು ತೊಳೆದು, 10 ನಿಮಿಷ ನೀರಿನಲ್ಲಿ ನೆನೆಸಿರಿ. ಎಣ್ಣೆ ಯನ್ನು ಪ್ರೆಜರ್ ಕುಕ್ಕರ್ ನಲ್ಲಿ ಬಿಸಿಮಾಡಿ, ಮಸಾಲೆ ಪದಾರ್ಥಗಳು ನಂತರ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿರಿ. ಈರುಳ್ಳಿ ಬೆಂದ ಮೇಲೆ, ಅಕ್ಕಿ ಬೆರೆಸಿ ಎರಡು ನಿಮಿಷ ಹುರಿಯಿರಿ. ಅದಕ್ಕೆ ಮಸಾಲೆ ಮತ್ತು ಅರ್ಧಬೆಂದ ತರಕಾರಿ ಸೇರಿಸಿ. ಒಳ್ಳೆ ವಾಸನೆ ಬರುವವರೆಗೆ ಹುರಿಯಿರಿ. 4 ಲೋಟ ಬಿಸಿ ನೀರು ಮತ್ತು ಉಪ್ಪನ್ನು ಸೇರಿಸಿರಿ. 12 ನಿಮಿಷ ಪ್ರೆಜರ್ ಕುಕ್ಕರ್ ನಲ್ಲಿ ಬೇಯಿಸಿ. ಅನ್ನ ಆರುವ ಮುಂಚೆ ಬಿರಿಯಾನಿಯನ್ನು ಹುರಿದ ಗೋಡ೦ಬಿಯಿ೦ದ ಸಿಂಗಾರಗೊಳಿಸಿ.
ಹೀಗೂ ಮಾಡಬಹುದು :
ದೊಡ್ಡ ಈರುಳ್ಳಿ ಬದಲಾಗಿ ಸಣ್ಣ (ಸಾಂಬಾರ್) ಈರುಳ್ಳಿಯನ್ನು ಬಳಸಿ. ಕೊತ್ತಂಬರಿಸೊಪ್ಪು ಕಡಿಮೆ ಹಾಕಿ, ರುಬ್ಬುವಾಗ ಶುಂಠಿ ಸೇರಿಸಬಹುದು. ತೆಂಗಿನಕಾಯಿ ನೀರನ್ನು ಅನ್ನ ಬೇಯಿಸಲು ಉಪಯೋಗಿಸಬಹುದು.ಕತ್ತರಿಸಿದ ಟೊಮೇಟೊ ಸೇರಿಸಬಹುದು. ಬೇಯಿಸಿದ ಮಷ್ ರೂಂ ಮತ್ತು ಸೋಯಾ ತುಣುಕುಗಳನ್ನು ಸೇರಿಸಬಹುದು.



Click it and Unblock the Notifications











