Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ಕಾಳುಮೆಣಸಿನ ಕೋಲಾರ ಚಿಕಿತ್ಸೆ

ಮೊದಲೇ ಸ್ಪಷ್ಟಪಡಿಸುತ್ತಿದ್ದೇನೆ. ಬೆಂಗಳೂರಿಗೆ ಸ್ವಂತ ಹವಾಗುಣ ಇದೆಯೋ ಇಲ್ಲವೋ ಎನ್ನುವ ಚರ್ಚಾಕೂಟಕ್ಕೆ ಸೋಮವಾರ ಬೆಳ್ಳಂಬೆಳಗ್ಗೆ ನಿಮ್ಮನ್ನು ನಾನು ಆಹ್ವಾನಿಸುತ್ತಿಲ್ಲ.ಕೋಲಾರ ಪ್ರಾಂತ್ಯದ ಒಂದು ಝುಂಯೆನ್ನುವ ಬೆಚ್ಚನೆ ಅಡುಗೆ, ಅದೇ ಅಪ್ಪಟ ಮೆಣಸಿನ ಸಾರು ಮಾಡಿ ಊಟಕ್ಕೆ ಕರಿತೀದೀನಿ, ಬರ್ತೀರಾ!
ಈಗ ನಾನು ನಿಮಗೆ ಕೋಲಾರದ ಮೆಣಸಿನ ಸಾರಿನ ಬಗ್ಗೆ ಹೇಳಿಕೊಡ್ತೀನಿ.ಇದು ನಮ್ಮ ವಂಶಪಾರಂಪರ್ಯದ ರೆಸಿಪಿ. ಸಾಮಾನ್ಯವಾಗಿ ಕೋಲಾರದಿಂದ ಹೋದ ಹಾಗೂ ಕೋಲಾರಕ್ಕೆ ಮನೆತುಂಬಿಸಿಕೊಂಡು ಬಂದ ಹೆಣ್ಣು ಮಕ್ಕಳು ಅದರ ರುಚಿಗೆ ಮಾರು ಹೋಗಿ ಆಸ್ಥೆಯಿಂದ ಕಲಿತು ತಮ್ಮ ವಂಶದ ಮುಂದುವರೆದ ಭಾಗಕ್ಕೆ ತಿಳಿಸಿಕೊಡುವ ಸಾರು :)
ಬೇಕಾದ ಸಾಮಗ್ರಿಗಳು :
ನೀರು ಮೂರು ಕಪ್, ಹುಣಿಸೆ ಹಣ್ಣು ಪುಟ್ಟ ನೆಲ್ಲಿ ಕಾಯಿ ಗಾತ್ರದಷ್ಟು ,ಕರಿಬೇವು ಎರಡು ಎಸಳು,ಜಜ್ಜಿದ ಬೆಳ್ಳುಳ್ಳಿ ಒಂದು ಪೂರ್ತಿ , ಕತ್ತರಿಸಿದ ಒಣಮೆಣಸಿನ ಕಾಯಿ ಎರಡು, ಪೂರ್ತಿ ಪುಡಿ ಮಾಡದ ಜೀರಿಗೆ-ಮೆಣಸು ಎರಡು ಸೇರಿ ಒಂದು ಚಮಚೆ,ಒಗ್ಗರಣೆಗೆ ತುಪ್ಪ ( ಕಂಪಲ್ಸರಿ),ರುಚಿಗೆ ತಕ್ಕಷ್ಟು ಉಪ್ಪು,ಕಾಲು ಸ್ಪೂನ್ ಜೀರಿಗೆ.
ಮಾಡುವ ವಿಧಾನ:
ಮೊದಲು ಹುಣಿಸೆ ಹಣ್ಣನ್ನು ನೆನೆಸಿಡಬೇಕು.ಬಾಣಲೆ ಅಥವಾ ಪಾತ್ರೆಯಲ್ಲಿ ತುಪ್ಪ ಹಾಕಿ ಅದು ಸ್ವಲ್ಪ ಕಾದ ಬಳಿಕ ಅದರಲ್ಲಿ ಸಾಸಿವೆಯನ್ನು ಚಿಟುಗುಟ್ಟಿಸಿ,ತಕ್ಷಣ ಪುಡಿಮಾಡಿದ ಜೀರಿಗೆ-ಮೆಣಸು ಹಾಕಿ ಒಂದು ಸರ್ತಿ ಅತ್ತಿತ್ತ ಮಾಡಿ,ಜಜ್ಜಿದ ಬೆಳ್ಳುಳ್ಳಿ ಅದ್ರಲ್ಲಿ ಹಾಕಿ,ಅದನ್ನು ಅತ್ತಿತ್ತಮಾಡಿ,ತಕ್ಷಣ ಮೆಣಸಿನಕಾಯಿ ಚೂರು ಹಾಕಿಕೊಳ್ಳಲಿ. ಕೊನೆಯಲ್ಲಿ ಕರಿಬೇವು ಜೀರಿಗೆ ಇವೆಲ್ಲವನ್ನೂ ಒಂದೆರಡು ಸಲ ಅತ್ತಿತ್ತ ಹುರಿಯಿರಿ.
ಅನಂತರ ನೀರನ್ನು ಹಾಕಿ,ಒಂದು ಕುದಿ ಬಂದ ತಕ್ಷಣ ಹುಣಿಸೆ ರಸ ಬೆರೆಸಿ.ಅದು ಚನ್ನಾಗಿ ಕುದ್ದಾಗ ಉಪ್ಪು ಬೆರಸಿ.ರುಚಿ ನೋಡಿ ಹುಳಿ ಅನ್ನಿಸಿದರೆ ಸ್ವಲ್ಪ ಬಿಸಿನೀರನ್ನು ಬೆರಸಬಹುದು.ಇದು ಅಡುಗೆ ಕಲಿಯ ಬಯಸುವವರ ಸಂಜೀವಿನಿ. ಆರೋಗ್ಯ ಇರಲಿ ಬಿಡಲಿ ಇದು ದೇಹಕ್ಕೆ ಉತ್ತಮ. ಚಳಿಗಾಲಕ್ಕೆ ಹೇಳಿಮಾಡಿಸಿದ ಸಾರು. ಬೇಸಿಗೆಯಲ್ಲಿ ಬಿಡದೆ ಸೇವಿಸುವ ರಸ, ಮಳೆಗಾಲದಲ್ಲೂ ತೊಂದರೆಯಿಲ್ಲದೆ ಜಮಾಯಿಸ ಬಹುದು. ಟ್ರೈ ಇಟ್ ಅಂಡ್ ಹ್ಯಾವ್ ಇಟ್.ಆದ್ರೆ ಒಳ್ಳೆಯ ಫಲಿತಾಂಶ ಸಿಗುತ್ತೆ. ಮತ್ತೆ ಇದು ರುಚಿಯಾದ ಮೆಣಸಿನ ಸಾರು.ಓಕೆ ಫ್ರೆಂಡ್ಸ್, ಟೇಕ್ ಕೇರ್.



Click it and Unblock the Notifications