Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಕಾಳುಮೆಣಸಿನ ಕೋಲಾರ ಚಿಕಿತ್ಸೆ

ಮೊದಲೇ ಸ್ಪಷ್ಟಪಡಿಸುತ್ತಿದ್ದೇನೆ. ಬೆಂಗಳೂರಿಗೆ ಸ್ವಂತ ಹವಾಗುಣ ಇದೆಯೋ ಇಲ್ಲವೋ ಎನ್ನುವ ಚರ್ಚಾಕೂಟಕ್ಕೆ ಸೋಮವಾರ ಬೆಳ್ಳಂಬೆಳಗ್ಗೆ ನಿಮ್ಮನ್ನು ನಾನು ಆಹ್ವಾನಿಸುತ್ತಿಲ್ಲ.ಕೋಲಾರ ಪ್ರಾಂತ್ಯದ ಒಂದು ಝುಂಯೆನ್ನುವ ಬೆಚ್ಚನೆ ಅಡುಗೆ, ಅದೇ ಅಪ್ಪಟ ಮೆಣಸಿನ ಸಾರು ಮಾಡಿ ಊಟಕ್ಕೆ ಕರಿತೀದೀನಿ, ಬರ್ತೀರಾ!
ಈಗ ನಾನು ನಿಮಗೆ ಕೋಲಾರದ ಮೆಣಸಿನ ಸಾರಿನ ಬಗ್ಗೆ ಹೇಳಿಕೊಡ್ತೀನಿ.ಇದು ನಮ್ಮ ವಂಶಪಾರಂಪರ್ಯದ ರೆಸಿಪಿ. ಸಾಮಾನ್ಯವಾಗಿ ಕೋಲಾರದಿಂದ ಹೋದ ಹಾಗೂ ಕೋಲಾರಕ್ಕೆ ಮನೆತುಂಬಿಸಿಕೊಂಡು ಬಂದ ಹೆಣ್ಣು ಮಕ್ಕಳು ಅದರ ರುಚಿಗೆ ಮಾರು ಹೋಗಿ ಆಸ್ಥೆಯಿಂದ ಕಲಿತು ತಮ್ಮ ವಂಶದ ಮುಂದುವರೆದ ಭಾಗಕ್ಕೆ ತಿಳಿಸಿಕೊಡುವ ಸಾರು :)
ಬೇಕಾದ ಸಾಮಗ್ರಿಗಳು :
ನೀರು ಮೂರು ಕಪ್, ಹುಣಿಸೆ ಹಣ್ಣು ಪುಟ್ಟ ನೆಲ್ಲಿ ಕಾಯಿ ಗಾತ್ರದಷ್ಟು ,ಕರಿಬೇವು ಎರಡು ಎಸಳು,ಜಜ್ಜಿದ ಬೆಳ್ಳುಳ್ಳಿ ಒಂದು ಪೂರ್ತಿ , ಕತ್ತರಿಸಿದ ಒಣಮೆಣಸಿನ ಕಾಯಿ ಎರಡು, ಪೂರ್ತಿ ಪುಡಿ ಮಾಡದ ಜೀರಿಗೆ-ಮೆಣಸು ಎರಡು ಸೇರಿ ಒಂದು ಚಮಚೆ,ಒಗ್ಗರಣೆಗೆ ತುಪ್ಪ ( ಕಂಪಲ್ಸರಿ),ರುಚಿಗೆ ತಕ್ಕಷ್ಟು ಉಪ್ಪು,ಕಾಲು ಸ್ಪೂನ್ ಜೀರಿಗೆ.
ಮಾಡುವ ವಿಧಾನ:
ಮೊದಲು ಹುಣಿಸೆ ಹಣ್ಣನ್ನು ನೆನೆಸಿಡಬೇಕು.ಬಾಣಲೆ ಅಥವಾ ಪಾತ್ರೆಯಲ್ಲಿ ತುಪ್ಪ ಹಾಕಿ ಅದು ಸ್ವಲ್ಪ ಕಾದ ಬಳಿಕ ಅದರಲ್ಲಿ ಸಾಸಿವೆಯನ್ನು ಚಿಟುಗುಟ್ಟಿಸಿ,ತಕ್ಷಣ ಪುಡಿಮಾಡಿದ ಜೀರಿಗೆ-ಮೆಣಸು ಹಾಕಿ ಒಂದು ಸರ್ತಿ ಅತ್ತಿತ್ತ ಮಾಡಿ,ಜಜ್ಜಿದ ಬೆಳ್ಳುಳ್ಳಿ ಅದ್ರಲ್ಲಿ ಹಾಕಿ,ಅದನ್ನು ಅತ್ತಿತ್ತಮಾಡಿ,ತಕ್ಷಣ ಮೆಣಸಿನಕಾಯಿ ಚೂರು ಹಾಕಿಕೊಳ್ಳಲಿ. ಕೊನೆಯಲ್ಲಿ ಕರಿಬೇವು ಜೀರಿಗೆ ಇವೆಲ್ಲವನ್ನೂ ಒಂದೆರಡು ಸಲ ಅತ್ತಿತ್ತ ಹುರಿಯಿರಿ.
ಅನಂತರ ನೀರನ್ನು ಹಾಕಿ,ಒಂದು ಕುದಿ ಬಂದ ತಕ್ಷಣ ಹುಣಿಸೆ ರಸ ಬೆರೆಸಿ.ಅದು ಚನ್ನಾಗಿ ಕುದ್ದಾಗ ಉಪ್ಪು ಬೆರಸಿ.ರುಚಿ ನೋಡಿ ಹುಳಿ ಅನ್ನಿಸಿದರೆ ಸ್ವಲ್ಪ ಬಿಸಿನೀರನ್ನು ಬೆರಸಬಹುದು.ಇದು ಅಡುಗೆ ಕಲಿಯ ಬಯಸುವವರ ಸಂಜೀವಿನಿ. ಆರೋಗ್ಯ ಇರಲಿ ಬಿಡಲಿ ಇದು ದೇಹಕ್ಕೆ ಉತ್ತಮ. ಚಳಿಗಾಲಕ್ಕೆ ಹೇಳಿಮಾಡಿಸಿದ ಸಾರು. ಬೇಸಿಗೆಯಲ್ಲಿ ಬಿಡದೆ ಸೇವಿಸುವ ರಸ, ಮಳೆಗಾಲದಲ್ಲೂ ತೊಂದರೆಯಿಲ್ಲದೆ ಜಮಾಯಿಸ ಬಹುದು. ಟ್ರೈ ಇಟ್ ಅಂಡ್ ಹ್ಯಾವ್ ಇಟ್.ಆದ್ರೆ ಒಳ್ಳೆಯ ಫಲಿತಾಂಶ ಸಿಗುತ್ತೆ. ಮತ್ತೆ ಇದು ರುಚಿಯಾದ ಮೆಣಸಿನ ಸಾರು.ಓಕೆ ಫ್ರೆಂಡ್ಸ್, ಟೇಕ್ ಕೇರ್.



Click it and Unblock the Notifications