Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕಾಳುಮೆಣಸಿನ ಕೋಲಾರ ಚಿಕಿತ್ಸೆ

ಮೊದಲೇ ಸ್ಪಷ್ಟಪಡಿಸುತ್ತಿದ್ದೇನೆ. ಬೆಂಗಳೂರಿಗೆ ಸ್ವಂತ ಹವಾಗುಣ ಇದೆಯೋ ಇಲ್ಲವೋ ಎನ್ನುವ ಚರ್ಚಾಕೂಟಕ್ಕೆ ಸೋಮವಾರ ಬೆಳ್ಳಂಬೆಳಗ್ಗೆ ನಿಮ್ಮನ್ನು ನಾನು ಆಹ್ವಾನಿಸುತ್ತಿಲ್ಲ.ಕೋಲಾರ ಪ್ರಾಂತ್ಯದ ಒಂದು ಝುಂಯೆನ್ನುವ ಬೆಚ್ಚನೆ ಅಡುಗೆ, ಅದೇ ಅಪ್ಪಟ ಮೆಣಸಿನ ಸಾರು ಮಾಡಿ ಊಟಕ್ಕೆ ಕರಿತೀದೀನಿ, ಬರ್ತೀರಾ!
ಈಗ ನಾನು ನಿಮಗೆ ಕೋಲಾರದ ಮೆಣಸಿನ ಸಾರಿನ ಬಗ್ಗೆ ಹೇಳಿಕೊಡ್ತೀನಿ.ಇದು ನಮ್ಮ ವಂಶಪಾರಂಪರ್ಯದ ರೆಸಿಪಿ. ಸಾಮಾನ್ಯವಾಗಿ ಕೋಲಾರದಿಂದ ಹೋದ ಹಾಗೂ ಕೋಲಾರಕ್ಕೆ ಮನೆತುಂಬಿಸಿಕೊಂಡು ಬಂದ ಹೆಣ್ಣು ಮಕ್ಕಳು ಅದರ ರುಚಿಗೆ ಮಾರು ಹೋಗಿ ಆಸ್ಥೆಯಿಂದ ಕಲಿತು ತಮ್ಮ ವಂಶದ ಮುಂದುವರೆದ ಭಾಗಕ್ಕೆ ತಿಳಿಸಿಕೊಡುವ ಸಾರು :)
ಬೇಕಾದ ಸಾಮಗ್ರಿಗಳು :
ನೀರು ಮೂರು ಕಪ್, ಹುಣಿಸೆ ಹಣ್ಣು ಪುಟ್ಟ ನೆಲ್ಲಿ ಕಾಯಿ ಗಾತ್ರದಷ್ಟು ,ಕರಿಬೇವು ಎರಡು ಎಸಳು,ಜಜ್ಜಿದ ಬೆಳ್ಳುಳ್ಳಿ ಒಂದು ಪೂರ್ತಿ , ಕತ್ತರಿಸಿದ ಒಣಮೆಣಸಿನ ಕಾಯಿ ಎರಡು, ಪೂರ್ತಿ ಪುಡಿ ಮಾಡದ ಜೀರಿಗೆ-ಮೆಣಸು ಎರಡು ಸೇರಿ ಒಂದು ಚಮಚೆ,ಒಗ್ಗರಣೆಗೆ ತುಪ್ಪ ( ಕಂಪಲ್ಸರಿ),ರುಚಿಗೆ ತಕ್ಕಷ್ಟು ಉಪ್ಪು,ಕಾಲು ಸ್ಪೂನ್ ಜೀರಿಗೆ.
ಮಾಡುವ ವಿಧಾನ:
ಮೊದಲು ಹುಣಿಸೆ ಹಣ್ಣನ್ನು ನೆನೆಸಿಡಬೇಕು.ಬಾಣಲೆ ಅಥವಾ ಪಾತ್ರೆಯಲ್ಲಿ ತುಪ್ಪ ಹಾಕಿ ಅದು ಸ್ವಲ್ಪ ಕಾದ ಬಳಿಕ ಅದರಲ್ಲಿ ಸಾಸಿವೆಯನ್ನು ಚಿಟುಗುಟ್ಟಿಸಿ,ತಕ್ಷಣ ಪುಡಿಮಾಡಿದ ಜೀರಿಗೆ-ಮೆಣಸು ಹಾಕಿ ಒಂದು ಸರ್ತಿ ಅತ್ತಿತ್ತ ಮಾಡಿ,ಜಜ್ಜಿದ ಬೆಳ್ಳುಳ್ಳಿ ಅದ್ರಲ್ಲಿ ಹಾಕಿ,ಅದನ್ನು ಅತ್ತಿತ್ತಮಾಡಿ,ತಕ್ಷಣ ಮೆಣಸಿನಕಾಯಿ ಚೂರು ಹಾಕಿಕೊಳ್ಳಲಿ. ಕೊನೆಯಲ್ಲಿ ಕರಿಬೇವು ಜೀರಿಗೆ ಇವೆಲ್ಲವನ್ನೂ ಒಂದೆರಡು ಸಲ ಅತ್ತಿತ್ತ ಹುರಿಯಿರಿ.
ಅನಂತರ ನೀರನ್ನು ಹಾಕಿ,ಒಂದು ಕುದಿ ಬಂದ ತಕ್ಷಣ ಹುಣಿಸೆ ರಸ ಬೆರೆಸಿ.ಅದು ಚನ್ನಾಗಿ ಕುದ್ದಾಗ ಉಪ್ಪು ಬೆರಸಿ.ರುಚಿ ನೋಡಿ ಹುಳಿ ಅನ್ನಿಸಿದರೆ ಸ್ವಲ್ಪ ಬಿಸಿನೀರನ್ನು ಬೆರಸಬಹುದು.ಇದು ಅಡುಗೆ ಕಲಿಯ ಬಯಸುವವರ ಸಂಜೀವಿನಿ. ಆರೋಗ್ಯ ಇರಲಿ ಬಿಡಲಿ ಇದು ದೇಹಕ್ಕೆ ಉತ್ತಮ. ಚಳಿಗಾಲಕ್ಕೆ ಹೇಳಿಮಾಡಿಸಿದ ಸಾರು. ಬೇಸಿಗೆಯಲ್ಲಿ ಬಿಡದೆ ಸೇವಿಸುವ ರಸ, ಮಳೆಗಾಲದಲ್ಲೂ ತೊಂದರೆಯಿಲ್ಲದೆ ಜಮಾಯಿಸ ಬಹುದು. ಟ್ರೈ ಇಟ್ ಅಂಡ್ ಹ್ಯಾವ್ ಇಟ್.ಆದ್ರೆ ಒಳ್ಳೆಯ ಫಲಿತಾಂಶ ಸಿಗುತ್ತೆ. ಮತ್ತೆ ಇದು ರುಚಿಯಾದ ಮೆಣಸಿನ ಸಾರು.ಓಕೆ ಫ್ರೆಂಡ್ಸ್, ಟೇಕ್ ಕೇರ್.



Click it and Unblock the Notifications