Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕಾಳುಮೆಣಸಿನ ಕೋಲಾರ ಚಿಕಿತ್ಸೆ

ಮೊದಲೇ ಸ್ಪಷ್ಟಪಡಿಸುತ್ತಿದ್ದೇನೆ. ಬೆಂಗಳೂರಿಗೆ ಸ್ವಂತ ಹವಾಗುಣ ಇದೆಯೋ ಇಲ್ಲವೋ ಎನ್ನುವ ಚರ್ಚಾಕೂಟಕ್ಕೆ ಸೋಮವಾರ ಬೆಳ್ಳಂಬೆಳಗ್ಗೆ ನಿಮ್ಮನ್ನು ನಾನು ಆಹ್ವಾನಿಸುತ್ತಿಲ್ಲ.ಕೋಲಾರ ಪ್ರಾಂತ್ಯದ ಒಂದು ಝುಂಯೆನ್ನುವ ಬೆಚ್ಚನೆ ಅಡುಗೆ, ಅದೇ ಅಪ್ಪಟ ಮೆಣಸಿನ ಸಾರು ಮಾಡಿ ಊಟಕ್ಕೆ ಕರಿತೀದೀನಿ, ಬರ್ತೀರಾ!
ಈಗ ನಾನು ನಿಮಗೆ ಕೋಲಾರದ ಮೆಣಸಿನ ಸಾರಿನ ಬಗ್ಗೆ ಹೇಳಿಕೊಡ್ತೀನಿ.ಇದು ನಮ್ಮ ವಂಶಪಾರಂಪರ್ಯದ ರೆಸಿಪಿ. ಸಾಮಾನ್ಯವಾಗಿ ಕೋಲಾರದಿಂದ ಹೋದ ಹಾಗೂ ಕೋಲಾರಕ್ಕೆ ಮನೆತುಂಬಿಸಿಕೊಂಡು ಬಂದ ಹೆಣ್ಣು ಮಕ್ಕಳು ಅದರ ರುಚಿಗೆ ಮಾರು ಹೋಗಿ ಆಸ್ಥೆಯಿಂದ ಕಲಿತು ತಮ್ಮ ವಂಶದ ಮುಂದುವರೆದ ಭಾಗಕ್ಕೆ ತಿಳಿಸಿಕೊಡುವ ಸಾರು :)
ಬೇಕಾದ ಸಾಮಗ್ರಿಗಳು :
ನೀರು ಮೂರು ಕಪ್, ಹುಣಿಸೆ ಹಣ್ಣು ಪುಟ್ಟ ನೆಲ್ಲಿ ಕಾಯಿ ಗಾತ್ರದಷ್ಟು ,ಕರಿಬೇವು ಎರಡು ಎಸಳು,ಜಜ್ಜಿದ ಬೆಳ್ಳುಳ್ಳಿ ಒಂದು ಪೂರ್ತಿ , ಕತ್ತರಿಸಿದ ಒಣಮೆಣಸಿನ ಕಾಯಿ ಎರಡು, ಪೂರ್ತಿ ಪುಡಿ ಮಾಡದ ಜೀರಿಗೆ-ಮೆಣಸು ಎರಡು ಸೇರಿ ಒಂದು ಚಮಚೆ,ಒಗ್ಗರಣೆಗೆ ತುಪ್ಪ ( ಕಂಪಲ್ಸರಿ),ರುಚಿಗೆ ತಕ್ಕಷ್ಟು ಉಪ್ಪು,ಕಾಲು ಸ್ಪೂನ್ ಜೀರಿಗೆ.
ಮಾಡುವ ವಿಧಾನ:
ಮೊದಲು ಹುಣಿಸೆ ಹಣ್ಣನ್ನು ನೆನೆಸಿಡಬೇಕು.ಬಾಣಲೆ ಅಥವಾ ಪಾತ್ರೆಯಲ್ಲಿ ತುಪ್ಪ ಹಾಕಿ ಅದು ಸ್ವಲ್ಪ ಕಾದ ಬಳಿಕ ಅದರಲ್ಲಿ ಸಾಸಿವೆಯನ್ನು ಚಿಟುಗುಟ್ಟಿಸಿ,ತಕ್ಷಣ ಪುಡಿಮಾಡಿದ ಜೀರಿಗೆ-ಮೆಣಸು ಹಾಕಿ ಒಂದು ಸರ್ತಿ ಅತ್ತಿತ್ತ ಮಾಡಿ,ಜಜ್ಜಿದ ಬೆಳ್ಳುಳ್ಳಿ ಅದ್ರಲ್ಲಿ ಹಾಕಿ,ಅದನ್ನು ಅತ್ತಿತ್ತಮಾಡಿ,ತಕ್ಷಣ ಮೆಣಸಿನಕಾಯಿ ಚೂರು ಹಾಕಿಕೊಳ್ಳಲಿ. ಕೊನೆಯಲ್ಲಿ ಕರಿಬೇವು ಜೀರಿಗೆ ಇವೆಲ್ಲವನ್ನೂ ಒಂದೆರಡು ಸಲ ಅತ್ತಿತ್ತ ಹುರಿಯಿರಿ.
ಅನಂತರ ನೀರನ್ನು ಹಾಕಿ,ಒಂದು ಕುದಿ ಬಂದ ತಕ್ಷಣ ಹುಣಿಸೆ ರಸ ಬೆರೆಸಿ.ಅದು ಚನ್ನಾಗಿ ಕುದ್ದಾಗ ಉಪ್ಪು ಬೆರಸಿ.ರುಚಿ ನೋಡಿ ಹುಳಿ ಅನ್ನಿಸಿದರೆ ಸ್ವಲ್ಪ ಬಿಸಿನೀರನ್ನು ಬೆರಸಬಹುದು.ಇದು ಅಡುಗೆ ಕಲಿಯ ಬಯಸುವವರ ಸಂಜೀವಿನಿ. ಆರೋಗ್ಯ ಇರಲಿ ಬಿಡಲಿ ಇದು ದೇಹಕ್ಕೆ ಉತ್ತಮ. ಚಳಿಗಾಲಕ್ಕೆ ಹೇಳಿಮಾಡಿಸಿದ ಸಾರು. ಬೇಸಿಗೆಯಲ್ಲಿ ಬಿಡದೆ ಸೇವಿಸುವ ರಸ, ಮಳೆಗಾಲದಲ್ಲೂ ತೊಂದರೆಯಿಲ್ಲದೆ ಜಮಾಯಿಸ ಬಹುದು. ಟ್ರೈ ಇಟ್ ಅಂಡ್ ಹ್ಯಾವ್ ಇಟ್.ಆದ್ರೆ ಒಳ್ಳೆಯ ಫಲಿತಾಂಶ ಸಿಗುತ್ತೆ. ಮತ್ತೆ ಇದು ರುಚಿಯಾದ ಮೆಣಸಿನ ಸಾರು.ಓಕೆ ಫ್ರೆಂಡ್ಸ್, ಟೇಕ್ ಕೇರ್.



Click it and Unblock the Notifications