Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾವ್ ಅನ್ನಿಸೋ ವಾಟೆಕಾಯಿ ಮಂದನಗೊಜ್ಜು
ಮಾವಿನಕಾಯಿಯನ್ನು ಹೊರತು ಪಡಿಸಿ ಅನೇಕ ರೀತಿಯ ಹುಳಿ ಅಂಶವಿರುವ ಆಹಾರ ಪದಾರ್ಥಗಳು ಪ್ರಕೃತಿಯಲ್ಲಿ ಲಭ್ಯವಿದೆ. ಆದರೆ ಅಂತಹ ಕೆಲವು ಆಹಾರ ಪದಾರ್ಥಗಳು ಜನರಿಗೆ ಅಪರಿಚಿತವಾಗಿ ಉಳಿದಿವೆ. ಅವುಗಳಲ್ಲಿ ವಾಟೆಕಾಯಿ ಎಂದು ಕರೆಯುವ ಹುಳಿ ಅಂಶದ ಕಾಯಿಯೂ ಕೂಡ ಹೌದು.
ವಾಟೆಕಾಯಿ ಅಥವಾ ಮಂಕಿ ಫ್ರೂಟ್ ಎಂದು ಇದನ್ನು ಕರೆಯಲಾಗುತ್ತದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ನೇಪಾಳ,ಭೂತಾನ್,ಮಾಯನ್ಮಾರ್, ಶ್ರೀಲಂಕಾ,ಥೈಲ್ಯಾಂಡ್,ಮಲೇಶಿಯಾ,ಸಿಂಗಾಪುರ, ಕಾಂಬೋಡಿಯಾ ದೇಶಗಳಲ್ಲೂ ಕೂಡ ಇದನ್ನು ಬೆಳೆಯಲಾಗುತ್ತದೆ.

ವಾಟೆಕಾಯಿಯಿಂದ ಅನೇಕ ರೀತಿಯ ಅಡುಗೆಗಳನ್ನು ಮಾಡಬಹುದು. ಇವುಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಕತ್ತರಿಸಿ,ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ ಒಂದು ವರ್ಷದವರೆಗೂ ಬಳಸಬಹುದು.
ನಾವಿಲ್ಲಿ ಹಸಿಯಾದ ವಾಟೆಕಾಯಿಯಿಂದ ಮಂದನಗೊಜ್ಜು ತಯಾರಿಸುವುದು ಹೇಗೆ ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.
Recipe By: Sushma
Recipe Type: Veg
Serves: 4
-
ಬೇಕಾಗುವ ಸಾಮಗ್ರಿಗಳು
ವಾಟೆಕಾಯಿ- ಎರಡು
ಸಾಸಿವೆಕಾಳು- ಒಂದು ಚಮಚ
ಬೆಳ್ಳುಳ್ಳಿ - 10 ರಿಂದ 12 ಎಸಳು
ಅಡುಗೆ ಎಣ್ಣೆ- ನಾಲ್ಕು ಚಮಚ
ಹಸಿಮೆಣಸು- ನಾಲ್ಕರಿಂದ ಐದು
ಉಪ್ಪು- ರುಚಿಗೆ ತಕ್ಕಷ್ಟು
ಅರಿಶಿನ- ಚಿಟಿಕೆ
ಬೇವಿನ ಸೊಪ್ಪು - 10 ರಿಂದ 12 ಎಸಳು
-
ಮಾಡುವ ವಿಧಾನ-
ವಾಟೆಕಾಯಿಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ನಂತರ ಕೆಲವು ನಿಮಿಷ ತಣಿಯಲು ಬಿಡಿ. ನಂತರ ಅದನ್ನು ಕಿವುಚಿ ರಸ ಹಿಂಡಿಕೊಳ್ಳಿ.(ಮಾವಿನಕಾಯಿಯನ್ನು ಬೇಯಿಸಿ ಅದರ ಹುಳಿ ಹಿಂಡಿಕೊಳ್ಳುವ ವಿಧಾನವನ್ನೇ ಇದರಲ್ಲೂ ಅನುಸರಿಸಬೇಕು)
ನಂತರ ಬಾಣಲೆಯಲ್ಲಿ ಒಗ್ಗರಣೆ ಇಡಿ. ಮೊದಲಿಗೆ ಅಡುಗೆ ಎಣ್ಣೆ,ಸಾಸಿವೆ ಕಾಳು ಹಾಕಿ.
ಸಾಸಿವೆ ಚಟಿಪಟಿ ಅಂದಾಗ ಬೆಳ್ಳುಳ್ಳಿ ಹಾಕಿ ಕೆಂಬಣ್ಣಕ್ಕೆ ಬರುವವರೆಗೆ ಹುರಿಯಿರಿ.
ನಂತರ ಹಸಿಮೆಣಸನ್ನು ಸೇರಿಸಿ ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ. ಚಿಟಿಕೆ ಅರಿಶಿನ ಹಾಕಿ.
ನಂತರ ವಾಟೆಕಾಯಿಯ ರಸವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಒಂದೆರಡು ನಿಮಿಷ ಕುದಿಯಲು ಬಿಡಿ.
- ಲಿವರ್ ಸಮಸ್ಯೆ ಇರುವವರಿಗೆ ಇದು ಪ್ರಯೋಜನವಾಗುವ ಅಡುಗೆ ಅನೇಕ ರೀತಿಯ ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುವುದಕ್ಕೆ ಇದು ಪ್ರಯೋಜನಕಾರಿ, ಕೂದಲಿನ ಆರೋಗ್ಯ ಹೆಚ್ಚಿಸುವಲ್ಲಿ ಇದು ನೆರವಾಗುತ್ತದೆ. ಅನೇಕ ರೀತಿಯ ಚರ್ಮದ ಸಮಸ್ಯೆಯನ್ನು ನಿವಾರಿಸುವುದಕ್ಕೆ ಇದು ಪ್ರಯೋಜನಕಾರಿ. ಗಾಯಗಳನ್ನು ಗುಣಪಡಿಸುವುದಕ್ಕೆ ಇದು ಪ್ರಯೋಜನಕಾರಿ. ಉರಿಯೂತ ಸಮಸ್ಯೆ ನಿವಾರಿಸುವ ಚಿಕಿತ್ಸೆಗಳಲ್ಲಿ ಇದನ್ನು ಬಳಸಲಾಗುತ್ತದೆ.
- ಪ್ರೋಟೀನ್ - 2 grams
- ಕೊಬ್ಬು - 1 gram
- ಮಿನರಲ್ - 1 gram
- ಫೈಬರ್ - 3 grams
- ಫಾಸ್ಪರಸ್ - 25 mg



Click it and Unblock the Notifications