Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ಬೇಸಿಗೆಯ ಬಿಸಿ ಆರಿಸಲು ತಂಪು ಪಾನಕ
ಅಮೃತಮಯಿ ಪಾನಕ
ಹಳೇ ಹುಣಸೇಹಣ್ಣನ್ನು(ನಿಂಬೆ ಗಾತ್ರದಷ್ಟು) ಒಂದು ಲೋಟ ನೀರಿನಲ್ಲಿ ಹತ್ತು ನಿಮಿಷ ನೆನೆಸಿ.ಚೆನ್ನಾಗಿ ಕಿವುಚಿ ಚರಟ ತೆಗೆದು ಎಸಿಯಿರಿ. ಅದಕ್ಕೆ ಸಾಕಷ್ಟು ಬೆಲ್ಲ, ತುಸು ಕಾಳುಮೆಣಸಿನಪುಡಿ, ಚಿಟಿಕೆ ಉಪ್ಪು ಸೇರಿಸಿ, ಇದಕ್ಕೆ ಎರಡು ಲೋಟ ನೀರು, ಮಂಜುಗೆಡ್ಡೆ ಚೂರು ಸೇರಿಸಿ
ಸೌತೆ ತಿರುಳಿನ ಪಾನಕ
ಸೌತೆಕಾಯಿ ಅಥವಾ ಹಣ್ಣಿನ ಸಿಪ್ಪೆ ಹಾಗೂ ಬೀಜ ಗಳನ್ನು ತೆಗೆದು ತಿರುಳನ್ನು ಮಾತ್ರ ಚೆನ್ನಾಗಿ ತುರಿಯಿರಿ. ಇದಕ್ಕೆ ಸ್ವಲ್ಪ ಕಾಯಿತುರಿ ಹಾಗೂ ಬೆಲ್ಲ ಹಾಕಿ ರುಬ್ಬಿ, ಏಲಕ್ಕಿ ಪುಡಿ, ಮಂಜುಗೆಡ್ಡೆ ಚೂರು ಹಾಕಿ ಕುಡಿಯಿರಿ.
ಹೆಸರುಕಾಳು ಪಾನಕ
ಅರ್ಧ ಕಪ್ ಹೆಸರುಕಾಳನ್ನು ರಾತ್ರಿಯೇ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಅದಕ್ಕೆ ಸ್ವಲ್ಪ ತೆಂಗಿನ ತುರಿ. ಸಿಹಿಗೆ ಬೇಕಾದಷ್ಟು ಬೆಲ್ಲ, ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿ ತೀರಾ ತೆಳುವಾಗದಷ್ಟು ಕುಡಿಯಲು ಹಿತವಾಗುವಂತೆ ನೀರು ಸೇರಿಸಿ, ಏಲಕ್ಕಿ ಪುಡಿ ಹಾಗೂ ಮಂಜುಗೆಡ್ಡೆ ಚೂರು ಹಾಕಿ.
ಗಸಗಸೆ ಪಾನಕ
ಒಂದು ಕಪ್ ಗಸಗಸೆ ಹುರಿದು, ತೊಳೆದು, ಸ್ವಲ್ಪ ತೆಂಗಿನ ತುರಿ ನಾಯವಾಗಿ ರುಬ್ಬಿ ಬೇಕಾದಷ್ಟು ನೀರು ಸೇರಿಸಿ. ರುಚಿಗೆ ಬೆಲ್ಲ, ಸುವಾಸನೆಗೆ ಏಲಕ್ಕಿ ಪುಡಿ ಸೇರಿಸಿ. ಬೇಕಾದರೆ ಫ್ರೀಜ್ ನಲ್ಲಿಟ್ಟು ಅಥವಾ ಮಂಜುಗೆಡ್ಡೆ ಚೂರು ಸೇರಿಸಿ ಕುಡಿಯಬಹುದು. ಗಸಗಸೆ ಹುರಿಯುವ ಬದಲು 10-15ನೀರಿನಲ್ಲಿ ನೆನಸಿ, ಅದರಿಂದಲೂ ಪಾನಕ ತಯಾರಿಸಬಹುದು.
ರಾಗಿ ಪಾನಕ
ಒಂದು ಕಪ್ ರಾಗಿಯನ್ನು 10 ನಿಮಿಷ ನೀರಲ್ಲಿ ನೆನಸಿ, ತೊಳೆದು ರುಬ್ಬಿ, ಸೋಸಿ, ಬೆಲ್ಲ ಏಲಕ್ಕಿ ಪುಡಿ ಸೇರಿಸಿ.ಕುಡಿಯಿರಿ.
(ದಟ್ಸ್ ಕನ್ನಡಪಾಕಶಾಲೆ)



Click it and Unblock the Notifications











