Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಬೇಸಿಗೆಯ ಬಿಸಿ ಆರಿಸಲು ತಂಪು ಪಾನಕ
ಅಮೃತಮಯಿ ಪಾನಕ
ಹಳೇ ಹುಣಸೇಹಣ್ಣನ್ನು(ನಿಂಬೆ ಗಾತ್ರದಷ್ಟು) ಒಂದು ಲೋಟ ನೀರಿನಲ್ಲಿ ಹತ್ತು ನಿಮಿಷ ನೆನೆಸಿ.ಚೆನ್ನಾಗಿ ಕಿವುಚಿ ಚರಟ ತೆಗೆದು ಎಸಿಯಿರಿ. ಅದಕ್ಕೆ ಸಾಕಷ್ಟು ಬೆಲ್ಲ, ತುಸು ಕಾಳುಮೆಣಸಿನಪುಡಿ, ಚಿಟಿಕೆ ಉಪ್ಪು ಸೇರಿಸಿ, ಇದಕ್ಕೆ ಎರಡು ಲೋಟ ನೀರು, ಮಂಜುಗೆಡ್ಡೆ ಚೂರು ಸೇರಿಸಿ
ಸೌತೆ ತಿರುಳಿನ ಪಾನಕ
ಸೌತೆಕಾಯಿ ಅಥವಾ ಹಣ್ಣಿನ ಸಿಪ್ಪೆ ಹಾಗೂ ಬೀಜ ಗಳನ್ನು ತೆಗೆದು ತಿರುಳನ್ನು ಮಾತ್ರ ಚೆನ್ನಾಗಿ ತುರಿಯಿರಿ. ಇದಕ್ಕೆ ಸ್ವಲ್ಪ ಕಾಯಿತುರಿ ಹಾಗೂ ಬೆಲ್ಲ ಹಾಕಿ ರುಬ್ಬಿ, ಏಲಕ್ಕಿ ಪುಡಿ, ಮಂಜುಗೆಡ್ಡೆ ಚೂರು ಹಾಕಿ ಕುಡಿಯಿರಿ.
ಹೆಸರುಕಾಳು ಪಾನಕ
ಅರ್ಧ ಕಪ್ ಹೆಸರುಕಾಳನ್ನು ರಾತ್ರಿಯೇ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಅದಕ್ಕೆ ಸ್ವಲ್ಪ ತೆಂಗಿನ ತುರಿ. ಸಿಹಿಗೆ ಬೇಕಾದಷ್ಟು ಬೆಲ್ಲ, ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿ ತೀರಾ ತೆಳುವಾಗದಷ್ಟು ಕುಡಿಯಲು ಹಿತವಾಗುವಂತೆ ನೀರು ಸೇರಿಸಿ, ಏಲಕ್ಕಿ ಪುಡಿ ಹಾಗೂ ಮಂಜುಗೆಡ್ಡೆ ಚೂರು ಹಾಕಿ.
ಗಸಗಸೆ ಪಾನಕ
ಒಂದು ಕಪ್ ಗಸಗಸೆ ಹುರಿದು, ತೊಳೆದು, ಸ್ವಲ್ಪ ತೆಂಗಿನ ತುರಿ ನಾಯವಾಗಿ ರುಬ್ಬಿ ಬೇಕಾದಷ್ಟು ನೀರು ಸೇರಿಸಿ. ರುಚಿಗೆ ಬೆಲ್ಲ, ಸುವಾಸನೆಗೆ ಏಲಕ್ಕಿ ಪುಡಿ ಸೇರಿಸಿ. ಬೇಕಾದರೆ ಫ್ರೀಜ್ ನಲ್ಲಿಟ್ಟು ಅಥವಾ ಮಂಜುಗೆಡ್ಡೆ ಚೂರು ಸೇರಿಸಿ ಕುಡಿಯಬಹುದು. ಗಸಗಸೆ ಹುರಿಯುವ ಬದಲು 10-15ನೀರಿನಲ್ಲಿ ನೆನಸಿ, ಅದರಿಂದಲೂ ಪಾನಕ ತಯಾರಿಸಬಹುದು.
ರಾಗಿ ಪಾನಕ
ಒಂದು ಕಪ್ ರಾಗಿಯನ್ನು 10 ನಿಮಿಷ ನೀರಲ್ಲಿ ನೆನಸಿ, ತೊಳೆದು ರುಬ್ಬಿ, ಸೋಸಿ, ಬೆಲ್ಲ ಏಲಕ್ಕಿ ಪುಡಿ ಸೇರಿಸಿ.ಕುಡಿಯಿರಿ.
(ದಟ್ಸ್ ಕನ್ನಡಪಾಕಶಾಲೆ)



Click it and Unblock the Notifications