Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಬೇಸಿಗೆಯ ಬಿಸಿ ಆರಿಸಲು ತಂಪು ಪಾನಕ
ಅಮೃತಮಯಿ ಪಾನಕ
ಹಳೇ ಹುಣಸೇಹಣ್ಣನ್ನು(ನಿಂಬೆ ಗಾತ್ರದಷ್ಟು) ಒಂದು ಲೋಟ ನೀರಿನಲ್ಲಿ ಹತ್ತು ನಿಮಿಷ ನೆನೆಸಿ.ಚೆನ್ನಾಗಿ ಕಿವುಚಿ ಚರಟ ತೆಗೆದು ಎಸಿಯಿರಿ. ಅದಕ್ಕೆ ಸಾಕಷ್ಟು ಬೆಲ್ಲ, ತುಸು ಕಾಳುಮೆಣಸಿನಪುಡಿ, ಚಿಟಿಕೆ ಉಪ್ಪು ಸೇರಿಸಿ, ಇದಕ್ಕೆ ಎರಡು ಲೋಟ ನೀರು, ಮಂಜುಗೆಡ್ಡೆ ಚೂರು ಸೇರಿಸಿ
ಸೌತೆ ತಿರುಳಿನ ಪಾನಕ
ಸೌತೆಕಾಯಿ ಅಥವಾ ಹಣ್ಣಿನ ಸಿಪ್ಪೆ ಹಾಗೂ ಬೀಜ ಗಳನ್ನು ತೆಗೆದು ತಿರುಳನ್ನು ಮಾತ್ರ ಚೆನ್ನಾಗಿ ತುರಿಯಿರಿ. ಇದಕ್ಕೆ ಸ್ವಲ್ಪ ಕಾಯಿತುರಿ ಹಾಗೂ ಬೆಲ್ಲ ಹಾಕಿ ರುಬ್ಬಿ, ಏಲಕ್ಕಿ ಪುಡಿ, ಮಂಜುಗೆಡ್ಡೆ ಚೂರು ಹಾಕಿ ಕುಡಿಯಿರಿ.
ಹೆಸರುಕಾಳು ಪಾನಕ
ಅರ್ಧ ಕಪ್ ಹೆಸರುಕಾಳನ್ನು ರಾತ್ರಿಯೇ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಅದಕ್ಕೆ ಸ್ವಲ್ಪ ತೆಂಗಿನ ತುರಿ. ಸಿಹಿಗೆ ಬೇಕಾದಷ್ಟು ಬೆಲ್ಲ, ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿ ತೀರಾ ತೆಳುವಾಗದಷ್ಟು ಕುಡಿಯಲು ಹಿತವಾಗುವಂತೆ ನೀರು ಸೇರಿಸಿ, ಏಲಕ್ಕಿ ಪುಡಿ ಹಾಗೂ ಮಂಜುಗೆಡ್ಡೆ ಚೂರು ಹಾಕಿ.
ಗಸಗಸೆ ಪಾನಕ
ಒಂದು ಕಪ್ ಗಸಗಸೆ ಹುರಿದು, ತೊಳೆದು, ಸ್ವಲ್ಪ ತೆಂಗಿನ ತುರಿ ನಾಯವಾಗಿ ರುಬ್ಬಿ ಬೇಕಾದಷ್ಟು ನೀರು ಸೇರಿಸಿ. ರುಚಿಗೆ ಬೆಲ್ಲ, ಸುವಾಸನೆಗೆ ಏಲಕ್ಕಿ ಪುಡಿ ಸೇರಿಸಿ. ಬೇಕಾದರೆ ಫ್ರೀಜ್ ನಲ್ಲಿಟ್ಟು ಅಥವಾ ಮಂಜುಗೆಡ್ಡೆ ಚೂರು ಸೇರಿಸಿ ಕುಡಿಯಬಹುದು. ಗಸಗಸೆ ಹುರಿಯುವ ಬದಲು 10-15ನೀರಿನಲ್ಲಿ ನೆನಸಿ, ಅದರಿಂದಲೂ ಪಾನಕ ತಯಾರಿಸಬಹುದು.
ರಾಗಿ ಪಾನಕ
ಒಂದು ಕಪ್ ರಾಗಿಯನ್ನು 10 ನಿಮಿಷ ನೀರಲ್ಲಿ ನೆನಸಿ, ತೊಳೆದು ರುಬ್ಬಿ, ಸೋಸಿ, ಬೆಲ್ಲ ಏಲಕ್ಕಿ ಪುಡಿ ಸೇರಿಸಿ.ಕುಡಿಯಿರಿ.
(ದಟ್ಸ್ ಕನ್ನಡಪಾಕಶಾಲೆ)



Click it and Unblock the Notifications