Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಳಿಗಾಲದ ಸೊಗಡು ಅವರೆಕಾಳಿನ ಜನ್ಮ ರಹಸ್ಯ
ಭಾರತದಲ್ಲಿ ಜನಿಸಿ ಏಷ್ಯಾ ಖಂಡದ ಇತರ ಭಾಗಗಳು, ಆಫ್ರಿಕಾ, ಅಮೇರಿಕಾಗಳಲ್ಲೂ ಅವರೇ ಕಾಯಿ ಬಳಕೆಯಲ್ಲಿದೆ. ಇದು ಪೊದೆಯಂತೆ ಚಿಕ್ಕ ಗಿಡವಾಗಿ ಬೆಳೆಯುವ ವಿಧಕ್ಕೆ ದಾಲಿಖಾಸ್ ಲ್ಯಾಬ್ ಲ್ಯಾಬ್ ತಳಿ ರಿಗ್ನೋಸಸ್ ಎಂದೂ, ಬಳ್ಳಿಯಂತೆ ಚಪ್ಪರದವರೆಗೆ ಹಬ್ಬುವ ತಳಿಗೆ ದಾಲಿಖಾಸ್ ಲ್ಯಾಬ್ ಲ್ಯಾಬ್ ಟಿಪಿಕಸ್ ಎಂದೂ ಶಾಸ್ತ್ರೀಯ ಹೆಸರಿದೆ.
ಭಾರತದಲ್ಲಿರುವ ಅವರೆ ವಿಧಗಳು ಅನೇಕ. ಒಂದಕ್ಕೊಂದು ಹೋಲಿಕೆ ಇರುವುದರಿಂದ ಗುರುತಿಸುವಲ್ಲಿ ಸಂಕೀರ್ಣತೆ ಬಹಳ. ಈ ಸಸ್ಯದ ಬೇರುಗಳು ಅತಿಸಾರ ಭೇದಿ, ಅಪ್ತಾಲ್ಮಿಯಾ ಮತ್ತು ಚರ್ಮ ರೋಗ ನಿವಾರಣೆಗೆ ಉಪಯೋಗಕಾರಿ. ಬೀಜಗಳ ಕಷಾಯವು ವಾಯುವಿಗೆ ಒಳ್ಳೆಯದು. ಅನೇಕ ಕಡೆ ಇದನ್ನು ಮಣ್ಣು ಸುರಕ್ಷಿತ ಬೆಳೆಯಾಗಿ ಮತ್ತು ಹಸಿರೆಲೆ ಗೊಬ್ಬರಕ್ಕಾಗಿಯೂ ಬೆಳೆಸುತ್ತಿದ್ದಾರೆ.
100 ಗ್ರಾಂ ಅವರೇ ಕಾಳಿನಲ್ಲಿರುವ ಪೋಷಕಾಂಶ ಹೀಗಿದೆ : ಪಿಷ್ಟ 60.1೧ ಗ್ರಾಂ, ಕಬ್ಬಿಣ 520 ಎಂ.ಸಿ.ಜಿ., ಸಸಾರಜನಕ 24.9 ಗ್ರಾಂ, ನಯಾಸಿಸ್ 1.8 ಮಿ. ಗ್ರಾಂ, ಕೊಬ್ಬು 0.8 ಗ್ರಾಂ ಪೊಟ್ಯಾಷಿಯಂ 402 ಮಿ. ಗ್ರಾಂ, ಸುಣ್ಣ 70 ಮಿ.ಗ್ರಾಂ, ಸೋಡಿಯಂ 89 ಮಿ. ಗ್ರಾಂ., ರಂಜಕ 455 ಮಿ. ಗ್ರಾಂ.
ಔಷಧೀಯ ಗುಣಗಳು: ಇದು ಉತ್ತಮ ಪ್ರಮಾಣದ ಅಮೈನೋ ಆಮ್ಲಗಳನ್ನು ಒಳಗೊಂಡಿದೆ. ಇದರಲ್ಲಿರುವ ಪಿಷ್ಟದ ಪ್ರಮಾಣ ಗಮನಿಸಿದರೆ ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸುವುದಕ್ಕಾಗಿ ಸೃಷ್ಟಿಯಾದಂತಿದೆ. ಈ ಕಾಯಿ ಸಮೃದ್ಧಿಯಾಗಿ ದೊರೆತರೆ ಚಳಿಗಾಲದಲ್ಲಿ ಬೇರೆ ಯಾವ ತರಕಾರಿಯೂ ಇಚ್ಛೆಯಾಗದು. ಇದರಲ್ಲಿರುವ ಪೋಷಕಾಂಶಗಳಿಂದ ರಕ್ತ ಪುಷ್ಟಿಯಾಗಿ ದೇಹದ ತೂಕ ಹೆಚ್ಚುತ್ತದೆ. ಇದರ ಸಿಪ್ಪೆಯಲ್ಲಿರುವ ಸೆಲ್ಯುಲೋಸ್
ಕಾಳಿನಿಂದಾಗುವ ಮಲಬದ್ಧತೆ ಮತ್ತು ಅಜೀರ್ಣಗಳನ್ನು ನಿವಾರಣೆ ಮಾಡುತ್ತದೆ.
ನಾವು ನಾಲಿಗೆಗೆ ದಾಸರಾದಂತೆ ಹೊಸ ಹೊಸತನ್ನು ಕಂಡು ಕೊಂಡಿದ್ದೇವೆ. ಇದರಲ್ಲಿ ಒಂದು ಹಿಸುಕು ಬೇಳೆ. ಅವರೇಕಾಯಿ ಬಳಸಿ ಹಿಚುಕಿದ ಬೇಳೆ ಹುಳಿ ತಿನ್ನುವುದು ಚಳಿಗಾಲದಲ್ಲಿ ಮಾಮೂಲಿ. ಆದರೆ ಆರೋಗ್ಯ ದೃಷ್ಟಿಯಿಂದ ಒಳ್ಳೆಯ ಅಡುಗೆಯಲ್ಲ. ಕೆಲವರಿಗೆ ಅವರೇ ಕಾಯಿ ಸೊಗಡು ಸೋಕಿದರೆ ಚರ್ಮ ಕೆರಳುತ್ತದೆ. ಅಂತಹವರು ಇದನ್ನು ಬಿಡಿಸದಿರುವುದೇ ಲೇಸು.
ಉಸುಳಿ , ಸಾರು, ಹುಳಿ, ಕೂಟು, ಇಡ್ಲಿ, ಉಪ್ಪಿಟ್ಟು, ರೊಟ್ಟಿ, ಚಕ್ಕುಲಿ, ಸೊಪ್ಪು ಕಾಳು ಸೇರಿಸಿ ಬಸಿದ ಸಾರು, ಮಸೊಪ್ಪಿನಲ್ಲಿ ಸೊಪ್ಪು ಅರೆದ ಮೇಲೆ ಬೇಯಿಸಿದ ಕಾಳು, ಹಿಸುಕಿದ ಅವರೇ ಕಾಳು, ಮಸಾಲೆ ಹಾಕಿದ ಬೇಳೆ ಇವೆಲ್ಲಾ ಅವರೆಯ ಸ್ಪೆಷಲ್ ಐಟಂಗಳು. ಡಿಸೆಂಬರ್ ಕೊನೆಗೆ ಬೆಂಗಳೂರಿನ ಬನಶಂಕರಿ, ಗಾಂಧಿಬಜಾರ್, ವಿವಿಪುರಂ, ಮಲ್ಲೇಶ್ವರದಲ್ಲಿ "ಅವರೇಬೇಳೆ ಮೇಳ" ನಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಗಳಿಸುತ್ತಿದೆ.



Click it and Unblock the Notifications
