Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ಇದು ಉಪ್ಪಿಟ್ಟನ್ನು ಗೇಲಿ ಮಾಡೋರಿಗೆ ಮಾತ್ರ!

ಸುನಂದಾ ಗೋಸಿ
ಬೇಕಾಗುವ ಸಾಮಗ್ರಿಗಳು :
1ಕಪ್ ರವೆ
1ಈರುಳ್ಳಿ
4ಹಸಿಮೆಣಸಿನಕಾಯಿ
1ಟೊಮ್ಯಾಟೋ
1/4ಕಪ್ ಹಸಿ ಬಟಾಣಿ(ಹೆಚ್ಚಿದ್ದು)
1/4ಕಪ್ ಬೀನ್ಸ್(ಹೆಚ್ಚಿದ್ದು)
1/4ಕಪ್ ಕ್ಯಾರಟ್(ಹೆಚ್ಚಿದ್ದು)
1/4ಕಪ್ ದಪ್ಪ ಮೆಣಸಿನಕಾಯಿ(ಹೆಚ್ಚಿದ್ದು)
1/4ಕಪ್ ಆಲೂಗಡ್ಡೆ(ಹೆಚ್ಚಿದ್ದು)
ರುಚಿಗೆ ತಕ್ಕ ಉಪ್ಪು
ನಿಂಬೆರಸ(ಸ್ವಲ್ಪ)
ಕೋತಂಬರಿ ಸೊಪ್ಪು(ಹೆಚ್ಚಿದ್ದು)
ಒಗ್ಗರಣೆಗೆ :
ಎಣ್ಣೆ(ಸ್ವಲ್ಪ)
ಸಾಸಿವೆ(ಸ್ವಲ್ಪ)
ಕರಿಬೇವು(ಸ್ವಲ್ಪ)
ಕಡಲೇಬೇಳೆ(ಸ್ವಲ್ಪ)
ಉದ್ದಿನಬೇಳೆ(ಸ್ವಲ್ಪ)
ಮಾಡುವ ವಿಧಾನ :
ಮೊದಲಿಗೆ ರವೆಯನ್ನು ಸ್ವಲ್ಪ ಎಣ್ಣೆ ಹಾಕಿ ಹದವಾಗಿ ಹುರಿದುಕೊಳ್ಳಿ. ಇನ್ನೊಂದು ಕಡೆ ಈರುಳ್ಳಿ, ಹಸಿಮೆಣಸಿನಕಾಯಿ, ಟೊಮ್ಯಾಟೋ ಮೊದಲಾದ ತರಕಾರಿಗಳನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
ಆನಂತರ ಪಾತ್ರೆಯಲ್ಲಿ ಎಣ್ಣೆ ಹಾಕಿ, ಕಾದ ಬಳಿಕ ಸಾಸಿವೆ, ಕಡಲೇಬೇಳೆ, ಉದ್ದಿನಬೇಳೆ, ಕರಿಬೇವು, ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ತಿರುವಾಡಿ. ಈಗ ಹೆಚ್ಚಿಕೊಂಡ ತರಕಾರಿ ಹಾಗೂ ಬಟಾಣಿಯನ್ನು ಇದಕ್ಕೆ ಹಾಕಿ. ತರಕಾರಿ ಬೆಂದ ನಂತರ ಟೊಮ್ಯಾಟೋ ಹಾಗೂ ಎರಡು ಲೋಟಾ ನೀರು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ.
ಕುದಿ ಬಂದ ನಂತರ ಹುರಿದಿಟ್ಟುಕೊಂಡ ರವೆಯನ್ನು ನಿಧಾನವಾಗಿ ಅದಕ್ಕೆ ಸುರಿಯುತ್ತಾ, ತಿರುಗಿಸುತ್ತಿರಿ. ರವೆ ಬೆಂದ ನಂತರ ನಿಂಬೆಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ.
ಕೊನೆಯಲ್ಲಿ ಹೆಚ್ಚಿದ ಕೋತಂಬರಿ ಸೊಪ್ಪನ್ನು ಹಾಕಿ. ಈಗ ರುಚಿಯಾದ ಉಪ್ಪಿಟ್ಟು ರೆಡಿ. ಇಷ್ಟವಿದ್ದವರು ಕಾಯಿತುರಿ ಹಾಕಿಕೊಳ್ಳಬಹುದು. ಬೇಕಿದ್ದರೆ ಬಟಾಣಿ ಬದಲು ಅವರೇಕಾಳು ಹಾಕಿ ಮಾಡಬಹುದು.



Click it and Unblock the Notifications