Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ದಿಢೀರ್ ಅವಲಕ್ಕಿ ಒಗ್ಗರಣೆ
ದಿಢೀರ್ ತಿಂಡಿ ಬೇಕೆ? ಹಾಗಿದ್ದರೆ ಅವಲಕ್ಕಿ ಒಗ್ಗರಣೆ ಮಾಡಲು ಅಣಿಯಾಗಿ. ಅರ್ಧ ಗಂಟೆಯೊಳಗೆ ತಿಂಡಿ ತಯಾರಿಸಬಹುದು. ರುಚಿ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ನಾನು ದಪ್ಪ ಅವಲಕ್ಕಿ ಬಳಸಿದ್ದೇನೆ. ಹಲವಾರು ಮಂದಿ ನಾನಾ ತರವಾಗಿ ಅವಲಕ್ಕಿ ಒಗ್ಗರಣೆ ಮಾಡುತ್ತಾರೆ. ನನಗೆ ತಿಳಿದ ಒಂದು ವಿಧಾನವನ್ನು ಇಲ್ಲಿ ಹೇಳಿದ್ದೇನೆ. ಪ್ರಯತ್ನಿಸಿ ನೋಡಿ.
ಇವಿಷ್ಟನ್ನು ಹೊಂದಿಸಿಕೊಳ್ಳಿ:
ದಪ್ಪ ಅವಲಕ್ಕಿ: ¼ ಕೆಜಿ
ಈರುಳ್ಳಿ: 2, ಸಣ್ಣ್ಣಗೆ ಹೆಚ್ಚಿಕೊಳ್ಳಬೇಕು
ಹಸಿ ಮೆಣಸಿನಕಾಯಿ: 4-5(ಅಥವಾ ನಿಮ್ಮ ರುಚಿಗೆ ತಕ್ಕಂತೆ), ಉದ್ದುದ್ದ ಹೆಚ್ಚಿಕೊಳ್ಳ ಬೇಕು
ಮಿಶ್ರ ತರಕಾರಿಗಳು: ಹಸಿ ಬಟಾಣಿ, ಕ್ಯಾರೆಟ್(ಅಥವಾ ನಿಮಗಿಷ್ಟವಾದ ತರಕಾರಿಗಳು)
ಕೊತ್ತಂಬರಿ ಸೊಪ್ಪು: 1 ಹಿಡಿ, ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು
ಕೊಬ್ಬರಿ ತುರಿ: 2 ಟೇಬಲ್ ಚಮಚ (ಅಲಂಕರಿಸಲು)
ನಿಂಬೆ ರಸ: 1 ಟೇಬಲ್ ಚಮಚ
ಒಗ್ಗರಣೆಗೆ
ಎಣ್ಣೆ: 3 ಟೇಬಲ್ ಚಮಚ
ಸಾಸಿವೆ: ' ಟೀ ಚಮಚ
ಕಡಲೆ ಬೇಳೆ: ' ಟೇಬಲ್ ಚಮಚ
ಉದ್ದ್ದಿನ ಬೇಳೆ: ' ಟೇಬಲ್ ಚಮಚ
ಅರಿಶಿಣ: ' ಟೀ ಚಮಚ
ಕರಿಬೇವಿನ ಎಲೆಗಳು
ಎಣ್ಣೆಯನ್ನು ಅಳತೆ ಪ್ರಕಾರ ನಾನು ಒಗ್ಗರಣೆಗೆ ಬಳಸಿದ್ದಿಲ್ಲ.ನಿಮ್ಮ ರುಚಿಗೆ ತಕ್ಕಂತೆ ನೀವು ಎಣ್ಣೆಯನ್ನು ಬಳಸಬಹುದು. ಅಂತಿಮವಾಗಿ ಅವಲಕ್ಕಿ ಒಗ್ಗರಣೆ ಜಿಡ್ಡು ಜಿಡ್ಡಾಗಿರಬಾರದು ಅಷ್ಟೆ. ಮೊದಲು ಅವಲಕ್ಕಿಯನ್ನು ತೊಳೆದು ಹಾಗೇ 5 ರಿಂದ 10 ನಿಮಿಷಗಳ ಕಾಲ ಬಿಟ್ಟರೆ ಚೆನ್ನಾಗಿ ನೆನೆಯುತ್ತದೆ. ಅವಲಕ್ಕಿಯನ್ನು ಬೆರಳಿನಿಂದ ಒತ್ತಿದರೆ ಎರಡು ತುಂಡಾಗುತ್ತದೆ, ಆಗ ಅವಲಕ್ಕಿ ಚೆನ್ನಾಗಿ ನೆನೆಸಿದೆ ಎಂದರ್ಥ. ಸೋಸುವ ಪಾತ್ರೆಗೆ ಹಾಕಿ ನೀರನ್ನು ತೆಗೆಯಿರಿ.
ತಯಾರಿಸುವ ವಿಧಾನ:
1. ಬಾಣೆಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸಿವೆ ಹಾಕಿ ಸಿಡಿಸಿ.
2. ಸಾಸಿವೆ ಚಿಟುಗುಟ್ಟುವುದನ್ನು ನಿಲ್ಲಿಸಿದ ಕೂಡಲೆ ಕಡಲೆ ಬೇಳೆ,ಉದ್ದಿನ ಬೇಳೆ, ಅರಿಶಿಣ ಮತ್ತು ಕರಿಬೇವು ಹೀಗೆ ಒಂದಾದ ನಂತರ ಒಂದು ಬಾಣಲೆ ಸೇರಲಿ.
3. ಈರುಳ್ಳಿ ಹಾಕಿ ಚೆನ್ನಾಗಿ ತಿರುವಿ. ಮೆದುವಾಗುವವರೆಗೂ ಹುರಿಯಿರಿ.
4. ತರಕಾರಿಗಳನ್ನು ಹಾಕಿ ನಾಜೂಕಾಗಿ ತಿರುವಿ. ರುಚಿಗೆ ತಕ್ಕಷ್ಟು ಉಪ್ಪು/ಅವಲಕ್ಕಿಯನ್ನು ಹಾಕಿ ಅಂತಿಮವಾಗಿ ಎಲ್ಲವನ್ನೂ ಕಲೆಸಿ.
5. ಉರಿಯನ್ನು ಕಡಿಮೆ ಮಾಡಿ ಬಾಣಲೆ ಮೇಲೆ ಮುಚ್ಚಿಡಿ. 2-3 ನಿಮಿಷಗಳ ಬಳಿಕ ಒಲೆಯನ್ನು ನಂದಿಸಿ. ನಿಂಬೆ ರಸವನ್ನು ಹಾಕಿ ಚೆನ್ನಾಗಿ ಕಲೆಸಿ. ಬಡಿಸುವುದಕ್ಕೂ ಮುನ್ನ 5 ನಿಮಿಷ ಹಾಗೇ ಬಿಡಿ. ಕೊನೆಯದಾಗಿ ಕೊಬ್ಬರಿ ತುರಿ ಹಾಗೂ ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.



Click it and Unblock the Notifications











