Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಮಳೆಗಾಲದ ಚಳಿಗೆ ಬಿಸಿಬಿಸಿ ಆಲೂ ಪರಾಟ

* ಭಾರತಿ ಎಚ್.ಎಸ್., ಜಯನಗರ
ಬೇಕಾಗುವ ಸಾಮಾನುಗಳು
ಗೋದಿ ಹಿಟ್ಟು 4 ಚಪಾತಿಗೆ ಆಗುವಷ್ಟು
ಬೇಯಿಸಿದ ಆಲುಗೆಡ್ಡೆ
ಕೆಂಪು ಮೆಣಸಿನ ಪುಡಿ 1/2 ಚಮಚ
ಅರಿಸಿನ ಪುಡಿ 1/2 ಚಮಚ
ಹೆಚ್ಚಿದ ಹಸಿ ಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ತುರಿದ ಶುಂಟಿ 1/2 ಚಮಚ
ರುಚಿಗೆ ಉಪ್ಪು
ತಯಾರಿಸುವ ವಿಧಾನ
ಮೊದಲು ಒಂದು ಬಟ್ಟಲಿಗೆ ಬೇಯಿಸಿದ ಆಲೂಗಡ್ಡೆ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಆದಕ್ಕೆ ಮಿಕ್ಕ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಬೆರೆಸಿರಿ. ನಂತರ ಮುಷ್ಠಿಯಲ್ಲಿ ನಿಂಬೆಹಣ್ಣು ಗಾತ್ರದ ಸಣ್ಣ ಸಣ್ಣ ಉಂಡೆ ಮಾಡಿ ತೆಗೆದಿಡಿ.
ಗೋದಿ ಹಿಟ್ಟನ್ನು ಚಪಾತಿಯ ಹದಕ್ಕೆ ನೀರು ಹಾಕಿ ಕಲಿಸಿಡಿ. ಹಿಟ್ಟನ್ನು ಪೂರಿ ಆಕಾರದಷ್ಟು ಕೈಯಲ್ಲಿ ತಟ್ಟಿಕೊಂಡು ಅದರ ಮಧ್ಯೆ ಆಲೂ ಉಂಡೆಗಳನ್ನು ಇಟ್ಟು ಹಿಟ್ಟಿನಿಂದ ಪೂರ್ತಿಯಾಗಿ ಮುಚ್ಚಿರಿ. ಒಬ್ಬಟ್ಟಿನ ಹೂರಣ ತುಂಬುವಂತೆ ಆಲೂ ಉಂಡೆಯನ್ನು ತುಂಬಬೇಕು.
ಗೋದಿ ಹಿಟ್ಟನ್ನು ಹಾಕಿಕೊಂಡು ಸ್ವಲ್ಪ ದಪ್ಪವಾಗಿ ಲಟ್ಟಿಸಿ ತವಾದ ಮೇಲೆ ಎಣ್ಣೆ ಅಥವಾ ಬೆಣ್ಣೆಯನ್ನು ಹಚ್ಚಿ ಎರಡು ಬದಿ ಹದವಾಗಿ ಬೇಯಿಸಿ. ಈಗ ರುಚಿಯಾದ ಆಲೂ ಪರಾಟ ಅಥವಾ ಆಲೂ ಪರೋಟ ರೆಡಿ. ಈ ಚಳಿಗೆ ಬಿಸಿ ಬಿಸಿ ಪರಾಟ ತಿನ್ನಲು ತುಂಬಾ ರುಚಿ.



Click it and Unblock the Notifications