Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮಳೆಗಾಲದ ಚಳಿಗೆ ಬಿಸಿಬಿಸಿ ಆಲೂ ಪರಾಟ

* ಭಾರತಿ ಎಚ್.ಎಸ್., ಜಯನಗರ
ಬೇಕಾಗುವ ಸಾಮಾನುಗಳು
ಗೋದಿ ಹಿಟ್ಟು 4 ಚಪಾತಿಗೆ ಆಗುವಷ್ಟು
ಬೇಯಿಸಿದ ಆಲುಗೆಡ್ಡೆ
ಕೆಂಪು ಮೆಣಸಿನ ಪುಡಿ 1/2 ಚಮಚ
ಅರಿಸಿನ ಪುಡಿ 1/2 ಚಮಚ
ಹೆಚ್ಚಿದ ಹಸಿ ಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ತುರಿದ ಶುಂಟಿ 1/2 ಚಮಚ
ರುಚಿಗೆ ಉಪ್ಪು
ತಯಾರಿಸುವ ವಿಧಾನ
ಮೊದಲು ಒಂದು ಬಟ್ಟಲಿಗೆ ಬೇಯಿಸಿದ ಆಲೂಗಡ್ಡೆ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಆದಕ್ಕೆ ಮಿಕ್ಕ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಬೆರೆಸಿರಿ. ನಂತರ ಮುಷ್ಠಿಯಲ್ಲಿ ನಿಂಬೆಹಣ್ಣು ಗಾತ್ರದ ಸಣ್ಣ ಸಣ್ಣ ಉಂಡೆ ಮಾಡಿ ತೆಗೆದಿಡಿ.
ಗೋದಿ ಹಿಟ್ಟನ್ನು ಚಪಾತಿಯ ಹದಕ್ಕೆ ನೀರು ಹಾಕಿ ಕಲಿಸಿಡಿ. ಹಿಟ್ಟನ್ನು ಪೂರಿ ಆಕಾರದಷ್ಟು ಕೈಯಲ್ಲಿ ತಟ್ಟಿಕೊಂಡು ಅದರ ಮಧ್ಯೆ ಆಲೂ ಉಂಡೆಗಳನ್ನು ಇಟ್ಟು ಹಿಟ್ಟಿನಿಂದ ಪೂರ್ತಿಯಾಗಿ ಮುಚ್ಚಿರಿ. ಒಬ್ಬಟ್ಟಿನ ಹೂರಣ ತುಂಬುವಂತೆ ಆಲೂ ಉಂಡೆಯನ್ನು ತುಂಬಬೇಕು.
ಗೋದಿ ಹಿಟ್ಟನ್ನು ಹಾಕಿಕೊಂಡು ಸ್ವಲ್ಪ ದಪ್ಪವಾಗಿ ಲಟ್ಟಿಸಿ ತವಾದ ಮೇಲೆ ಎಣ್ಣೆ ಅಥವಾ ಬೆಣ್ಣೆಯನ್ನು ಹಚ್ಚಿ ಎರಡು ಬದಿ ಹದವಾಗಿ ಬೇಯಿಸಿ. ಈಗ ರುಚಿಯಾದ ಆಲೂ ಪರಾಟ ಅಥವಾ ಆಲೂ ಪರೋಟ ರೆಡಿ. ಈ ಚಳಿಗೆ ಬಿಸಿ ಬಿಸಿ ಪರಾಟ ತಿನ್ನಲು ತುಂಬಾ ರುಚಿ.



Click it and Unblock the Notifications
