Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಹೆರಿಗೆಯ ವೇಳೆ ಎಷ್ಟೇ ಧೈರ್ಯ ಮಾಡಿಕೊಂಡರೂ, ಕಾಡುವ ಭಯ....
ಹರಿಗೆ ವೇಳೆ ಕೆಲವೊಂದು ಅನಿರೀಕ್ಷಿತ ವಿಷಯಗಳು ನಡೆಯುವುದರಿಂದ ಮಹಿಳೆಯ ಪತಿ, ಕುಟುಂಬಸ್ಥರು ಹಾಗೂ ಬಂಧುಗಳು ಆಕೆಯ ಜತಗಿದ್ದು, ಆಕೆಗೆ ಬೆಂಬಲವನ್ನು ನೀಡುತ್ತಿರುತ್ತಾರೆ..ಆದರೂ ಆಕೆಗೆ ಆ ಅನಿರೀಕ್ಷಿತ ವಿಷಯಗಳ ಭಯ ಇದ್ದೇ ಇರುತ್ತದೆ
ಮಹಿಳೆಯರಿಗೆ ಜೀವನದಲ್ಲಿ ಅತೀ ದೊಡ್ಡ ಸವಾಲೆಂದರೆ ಗರ್ಭಧಾರಣೆ ಮತ್ತು ಮಗುವಿಗೆ ಜನ್ಮ ನೀಡುವುದು. ಮಗುವಿಗೆ ಜನ್ಮ ನೀಡುವ ವೇಳೆ ಮಹಿಳೆಯು ಮತ್ತೊಂದು ಜನ್ಮವನ್ನು ಪಡೆದಂತೆ. ಯಾಕೆಂದರೆ ಆ ನೋವು ಸಹಿಸಲು ಅಸಾಧ್ಯವಾಗಿರುವಂತದ್ದಾಗಿರುತ್ತದೆ.

ಹರಿಗೆ ವೇಳೆ ಕೆಲವೊಂದು ಅನಿರೀಕ್ಷಿತ ವಿಷಯಗಳು ನಡೆಯುವುದರಿಂದ ಮಹಿಳೆಯ ಪತಿ, ಕುಟುಂಬಸ್ಥರು ಹಾಗೂ ಬಂಧುಗಳು ಆಕೆಯ ಜತಗಿದ್ದು, ಆಕೆಗೆ ಬೆಂಬಲವನ್ನು ನೀಡುತ್ತಿರುತ್ತಾರೆ. ಪ್ರೀತಿಪಾತ್ರರು ಹಾಗೂ ಸಂಬಂಧಿಕರು ಆಕೆಗೆ ಬೆಂಬಲವಾಗಿ ನಿಂತುಕೊಂಡು ಹೆರಿಗೆಯ ಪ್ರಕ್ರಿಯೆಯು ಸುಲಭವಾಗಿ ಆಗುವಂತೆ ನೋಡಿಕೊಳ್ಳಬೇಕು. ಹೆರಿಗೆ ವೇಳೆ ಆಗುವಂತಹ ಕೆಲವೊಂದು ಅನಿರೀಕ್ಷಿತ ವಿಷಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಹೆರಿಗೆ ಬಳಿಕ ಬಾಣಂತಿಯರಿಗೆ ಕಾಡುವ ಆ ನರಕಯಾತನೆ...
ಪ್ರತಿಯೊಬ್ಬ ಮಹಿಳೆಯು ಸಾಮಾನ್ಯ ಹೆರಿಗೆಯಾಗಬೇಕೆಂದು ಬಯಸುತ್ತಾ ಇರುತ್ತಾಳೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಅಂತಿಮವಾಗಿ ಸಿಸೇರಿಯನ್ ಮಾಡಲೇಬೇಕಾಗುತ್ತದೆ.
ಮಗುವಿನ ಜನನದ ಬಳಿಕವೂ ಕುಗ್ಗುವಿಕೆಯು ಕೆಲವೊಂದು ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದು. ಹೆರಿಗೆ ಬಳಿಕ ದೇಹವು ಮತ್ತೆ ತನ್ನ ಹಳೆಯ ಸ್ಥಿತಿಗೆ ಬರಲು ಪ್ರಯತ್ನ ಮಾಡುವ ಕಾರಣದಿಂದಾಗಿ ಗರ್ಭಕೋಶದಲ್ಲಿ ಕೆಲವೊಂದು ಹೊಂದಾಣಿಕೆಗಳು ಆಗುತ್ತಿರುತ್ತದೆ. ಹೆರಿಗೆಯ ಬಳಿಕ ಇದೆಲ್ಲಾ ಮಾಮೂಲು, ಭಯ ಪಡದಿರಿ...
ಮತ್ತೊಂದು ಅನಿರೀಕ್ಷಿತ ಸಂಗತಿಯೆಂದರೆ ಕೆಲವೊಂದು ಮಹಿಳೆಯರಲ್ಲಿ ಹೆರಿಗೆ ತುಂಬಾ ವೇಗವಾಗಿ ಹಾಗೂ ಹೆಚ್ಚು ನೋವಿಲ್ಲದೆ ನಡೆದುಬಿಡುತ್ತದೆ. ಇದು ತುಂಬಾ ಹೆಚ್ಚು ಸಮಾಧಾನವನ್ನು ನೀಡುತ್ತದೆ. ಹೆರಿಗೆಯ ಬಳಿಕ, ಮಹಿಳೆಯ ಸಮಸ್ಯೆ ಕೇಳುವವರು ಯಾರು?
ಕೈ ಹಾಗೂ ಕಾಲುಗಳಲ್ಲಿ ಯಾವುದೇ ಸಂವೇದನ ಇಲ್ಲದೆ ಇರುವಂತಹ ಅನುಭವವು ಆಗುತ್ತಾ ಇದ್ದರೆ ತಕ್ಷಣ ವೈದ್ಯರನ್ನು ಕರೆಸಿ ಇದನ್ನು ತಿಳಿಸಬೇಕು. ಯಾಕೆಂದರೆ ಇದಕ್ಕೆ ವೈದ್ಯರ ಚಿಕಿತ್ಸೆ ಅಗತ್ಯವಾಗಿರುತ್ತದೆ.



Click it and Unblock the Notifications















