Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಬೆಚ್ಚಗಿನ ಗೂಡಲಿ ಬೇಕು ಪ್ರೀತಿಯ ಚಿಲುಮೆ

ಮಕ್ಕಳೊಡನೆ ಮನಬಿಚ್ಚಿ ಮಾತನಾಡುವುದರಿಂದ ಅವರು ಸಹ ತಮ್ಮ ಭಾವನೆಗಳನ್ನು ಅಪ್ಪ ಅಮ್ಮನ ಜೊತೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ, ಮಕ್ಕಳನ್ನು ಬೆಳೆಸುವಾಗ ಕಟ್ಟು ನಿಟ್ಟಿರಬೇಕು ಹಾಗಂತ ಅದೆ ವಿಪರೀತವಾದರೆ ಮಕ್ಕಳ ಮನಸ್ಸಿನಲ್ಲಿ ಹೆತ್ತವರ ಬಗ್ಗೆ ಒಂದು ಭಯ ಪ್ರಾರಂಭವಾಗುತ್ತದೆ, ಅದೆ ಮುಂದಕ್ಕೆ ಮಕ್ಕಳನ್ನು ಸಾಕಷ್ಟು ವಿಷಯಗಳನ್ನು ಅಪ್ಪ-ಆಮ್ಮನಿಂದ ಮುಚ್ಚಿ ಇಡುವಂತೆ ಮಾಡುತ್ತದೆ.
ಮಕ್ಕಳಿಗೆ ಹೆತ್ತವರು ಆಚಾರ-ವಿಚಾರಗಳ ಬಗ್ಗೆ ತಿಳಿಸಿಕೊಡಬೇಕು, ನಿಮ್ಮ ನಂಬಿಕೆಗಳ ಬಗ್ಗೆ ಮಕ್ಕಳು ಪ್ರಶ್ನೆ ಮಾಡಿದಾಗ ಕೋಪ ಮಾಡಿಕೊಳ್ಳದೆ ನಿಮ್ಮ ನಂಬಿಕೆಗೆ ಕಾರಣಗಳನ್ನು ನೀಡಿ, ಅದಲ್ಲದೆ 'ನೀ ಅಧಿಕ ಪ್ರಸಂಗ ಮಾತನಾಡುವು ಬೇಡ' ಎಂದು ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದರೆ ಅದು ಅವರ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಗಮನವಿರಲಿ.
ಮಕ್ಕಳನ್ನು ಆದಷ್ಟು ಇತರ ಮಕ್ಕಳೊಂದಿಗೆ ಬೆರೆತು ಆಡಲು ಬಿಡಬೇಕು ಇದು ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಕ್ಕಳಿಗೆ ಬೇಕಾದಷ್ಟು ಹಣ ನೀಡಿ ನಾವು ನಮ್ಮ ಮಕ್ಕಳನ್ನು ಇತರಿಗಿಂತ ಚೆನ್ನಾಗಿ ನೋಡುಕೊಳ್ಳುತ್ತಿದ್ದೇವೆ ಎಂದು ಭಾವಿಸಿದರೆ ಅದರಷ್ಟು ತಪ್ಪು ಕಲ್ಪನೆ ಬೇರೊಂದಿಲ್ಲ.
ಮಕ್ಕಳಿಗೆ ಹಣದ ಮೌಲ್ಯ ತಿಳಿಯದಿದ್ದರೆ ಅವರು ಕೆಟ್ಟ ಹಾದಿಯನ್ನು ತುಳಿಯವ ಸಂಭವ ಹೆಚ್ಚು, ಹದಿಹರೆಯದ ಮಕ್ಕಳೊಂದಿಗೆ ಹೆತ್ತವರು ಸ್ನೀಹಿತರಂತೆ ವರ್ತಿಸಿ ಅವರ ಬೇಕು ಬೇಡಗಳನ್ನು ಪೂರೈಸಿ, ಕೆಟ್ಟ ನಡತೆಯನ್ನು ತಿದ್ದಬಹುದಾಗಿದೆ,
ಹದಿಹರೆಯದವರಲ್ಲಿ ವ್ಯವಹರಿಸುವಾಗ ದರ್ಪಕ್ಕಿಂತ , ಪ್ರೀತಿಯ ಮಾತೆ ಹೆಚ್ಚು ಕೆಲಸ ಮಾಡುತ್ತದೆ.ಎಷ್ಟೆ ಬ್ಯುಸಿಯಾಗಿದ್ದರೂ ಸಹ ಕಡೆಯ ಪಕ್ಷ ತಿಂಗಳಿಗೊಮ್ಮೆಯಾದರೂ ಮಕ್ಕಳೊಂದಿಗೆ ಎಲ್ಲಾದರೂ ಪಿಕಿನಿಕ್, ರೆಸ್ಟೋರೆಂಟ್ ಅಂತ ಸಮಯ ಕಳಿದರೆ ಸಂಬಂಧವು ಮತ್ತಷ್ಟು ಗಟ್ಟಿಯಾಗುತ್ತದೆ.



Click it and Unblock the Notifications











