Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
Health tips: ನೀವು ಸಹ ಇದೇ ರೀತಿ ಆಹಾರ ಸೇವಿಸುತ್ತಿದ್ದರೆ ಇದು ಅತ್ಯಂತ ಕೆಟ್ಟ ಅಭ್ಯಾಸ ಇಂದೇ ಬಿಟ್ಟುಬಿಡಿ
ಆರೋಗ್ಯ ಎಂದರೆ ಕೇವಲ ಪೌಷ್ಟಿಕ ಆಹಾರ, ವ್ಯಾಯಾಮ, ಕಸರತ್ತು ಮಾತ್ರವಲ್ಲ. ಮಾನಸಿಕ ನೆಮ್ಮದಿ, ನಾವು ಮಾಡುವ ಕೆಲಸವನ್ನು ಮನಸ್ಸಿನಿಂದ ಉತ್ಸಾಹದಿಂದ ಮಾಡುವುದೂ ಆಗಿದೆ.
ಅದರಲ್ಲೂ ಈ ಆಹಾರ ಸೇವನೆಯ ವಿಚಾರಕ್ಕೆ ಬಂದರೆ ಕೆಲವರು ನಿತ್ಯ ಡಯಟ್ ಮಾಡಿ ಒಂದು ದಿನ ಚೀಟಿಂಗ್ ಡೇ ಮಾಡುತ್ತಾರೆ, ಅಂದರೆ ಇತರೆ ದಿನಗಳು ಅವರು ಸೇವಿಸುವ ಆಹಾರದ ಬಗ್ಗೆ ಅಷ್ಟೇನೂ ಮನಸ್ಸಿಲ್ಲ ಎಂದಾಯ್ತು ಅಲ್ಲವೆ. ಅಲ್ಲದೆ ಈ ಇನ್ಸ್ಟಂಟ್ ಆಹಾರಗಳು, ಮನಸ್ಸೆಲ್ಲೋ ಇದ್ದು ಆಹಾರ ಸೇವಿಸುವುದು, ಒತ್ತಡದಲ್ಲಿ ಅತಿಯಾಗಿ ಅಥವಾ ಆಹಾರ ಸೇವಿಸದೆಯೇ ಇರುವುದು ಹೀಗೆ ಕೆಲವು ವಿಚಿತ್ರ ಅಭ್ಯಾಸಗಳು ನಮ್ಮ ದೇಹ ಹಾಗೂ ತೂಕದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಇಂಥಾ ಯಾವೆಲ್ಲಾ ವಿಚಿತ್ರ ಅಭ್ಯಾಸ ನಮ್ಮ ಆರೋಗ್ಯ ಹಾಗೂ ತೂಕದ ಮೇಲೆ ಪರಿಣಾಮ ಬೀರುತ್ತದೆ ಮುಂದೆ ನೋಡೋಣ:

ಆಯಾಸವಾದಾಗ ಸಿಹಿಖಾದ್ಯ ಸೇವನೆ
ನೀವು ದಣಿದಿರುವಾಗ, ಹೆಚ್ಚಿನ ಶಕ್ತಿಯನ್ನು ಪಡೆಯಲು ಸಿಹಿತಿಂಡಿಗಳನ್ನು ಸೇವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಿಹಿ ಖಾದ್ಯಗಳು ನಮ್ಮನ್ನು ಬೇಗ ಪ್ರಚೋದಿಸುತ್ತದೆ. ಸಕ್ಕರೆಯ ಸಂಸ್ಕರಿತ ಆಹಾರಗಳು ನಿಮ್ಮ ಮೆದುಳಿನ ಪ್ರತಿಫಲ ಕೇಂದ್ರದಲ್ಲಿ "ಒಳ್ಳೆಯ ಭಾವನೆಯನ್ನು" ನ್ಯೂರೋಕೆಮಿಕಲ್ ಡೋಪಮೈನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ. ಖಿನ್ನತೆ, ನಿದ್ರೆಯ ಕೊರತೆ ಮತ್ತು ಮಧುಮೇಹದಂತಹ ವಿವಿಧ ಅಂಶಗಳು ಸಕ್ಕರೆಯ ಕಡುಬಯಕೆಗೆ ಕಾರಣಗಳಾಗಿರಬಹುದು. ಆದರೆ ಅತಿಯಾದ ಸಿಹಿ ಖಾದ್ಯಗಳ ಸೇವನೆ ಸಹ ತೂಕ ಹೆಚ್ಚಳಕ್ಕೆ ಕಾರಣ ಎಂಬುದು ಗೊತ್ತೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಮತ್ತು ಕಿಡ್ನಿ ಡಿಸೀಸ್ನ ಪ್ರಕಾರ, ಸಾಂದರ್ಭಿಕ ಸಿಹಿ ಬಯಕೆಯು ಉತ್ತಮವಾಗಿದೆ, ಆದರೆ ಪ್ರತಿದಿನ ಅಲ್ಲ. ಸಿಹಿತಿಂಡಿಗಳ ಹಂಬಲವು ನಾವು ಅವುಗಳನ್ನು ತಿನ್ನುವ ಅಭ್ಯಾಸದಿಂದಾಗಿ ಅಲ್ಲ ಆದರೆ ಅನೇಕ ಬಾರಿ ನಿರ್ಜಲೀಕರಣದ ಕಾರಣದಿಂದ ಉಂಟಾಗುತ್ತದೆ. ಆರೋಗ್ಯದ ಅಪಾಯಗಳ ಬಗ್ಗೆ ನಮಗೆ ಶಿಕ್ಷಣ ನೀಡುವ ಮೂಲಕ, ಹೆಚ್ಚು ಪ್ರೋಟೀನ್ ತಿನ್ನುವುದು, ವ್ಯಾಯಾಮ ಮತ್ತು ಸಾಕಷ್ಟು ವಿಶ್ರಾಂತಿ ಸಿಹಿತಿಂಡಿಗಳ ಕಡುಬಯಕೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಸಡ್ಡೆಯಾಗಿ ಆಹಾರ ಸೇವಿಸಬೇಡಿ, ಮನಸ್ಸಿನಿಂದ ಆಹಾರ ಸೇವಿಸಿ
ವ್ಯಕ್ತಿಯ ಮೆದುಳು ಮತ್ತೊಂದು ಕಡೆ ಬ್ಯುಸಿ ಇದ್ದಾಗ ಅಥವಾ ಬೇರೇನೋ ಕೆಲಸ ಮಾಡಿಕೊಂಡು ಊಟ ಮಾಡುವಾಗ ಸೇವಿಸಿದ ಆಹಾರ ಎಂದಿಗೂ ನಿಮಗೆ ಸೇರುವುದಿಲ್ಲ ಅಥವಾ ನೀವು ಸೇವಿಸುವ ಆಹಾರವು ನಿಮ್ಮ ನಿಯಂತ್ರಣದಲ್ಲೇ ಇರುವುದಿಲ್ಲ. ಅವರು ಏನು ಅಥವಾ ಎಷ್ಟು ಆಹಾರವನ್ನು ಸೇವಿಸುತ್ತಿದ್ದಾರೆಂದು ಅವರಿಗೆ ತಿಳಿದಿರುವುದಿಲ್ಲ. ಹಸಿವು ಇಲ್ಲದೆ ಇದ್ದರೂ ತಿನ್ನುವುದು, ಬೇಸರವನ್ನು ಹೋಗಲಾಡಿಸಲು ಮತ್ತು ಟಿವಿ ನೋಡುತ್ತಾ ತಿನ್ನುವುದು ಅತ್ಯಂತ ಕೆಟ್ಟ ಅಭ್ಯಾಸ.
ಇಂಥಾ ಬುದ್ದಿಹೀನ ಅಥವಾ ಅಸಡ್ಡೆ ಆಹಾರದಿಂದ ಆರೋಗ್ಯಕ್ಕೆ ಎಂದೂ ಉತ್ತಮವಲ್ಲ. ಗಮನವಿಟ್ಟು ತಿನ್ನುವುದು ಎಂದರೆ ಸರಿಯಾದ ಸಮಯದಲ್ಲಿ ಸರಿಯಾದ ಆಹಾರವನ್ನು ತಿನ್ನುವುದು ಎಂದಲ್ಲ ಬದಲಿಗೆ ಅದು ನಿಮ್ಮ ಎಲ್ಲಾ ಇಂದ್ರಿಯಗಳನ್ನು ಕೇಂದ್ರೀಕರಿಸುವುದು ಮತ್ತು ನೀವು ಶಾಪಿಂಗ್ ಮಾಡುವಾಗ, ಅಡುಗೆ ಮಾಡುವಾಗ, ಬಡಿಸುವಾಗ ಮತ್ತು ನಿಮ್ಮ ಆಹಾರವನ್ನು ತಿನ್ನುವಾಗ ಇರುವುದಾಗಿದೆ. ಎಚ್ಚರಿಕೆಯಿಂದ ತಿನ್ನುವುದು ಏಕಾಗ್ರತೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಆತಂಕವನ್ನು ನಿಗ್ರಹಿಸುತ್ತದೆ. ಹಾಗಾಗಿ ಮೈಂಡ್ ಫುಲ್ ಈಟರ್ ಆಗಿರಿ ಮತ್ತು ಕಡಿಮೆ ತಿನ್ನುವವರಾಗಬೇಡಿ.

ಒತ್ತಡದಿಂದಾಗಿ ಅತಿಯಾಗಿ ತಿನ್ನುವುದು
ಕೆಲಸದ ಒತ್ತಡ, ಹಣಕಾಸಿನ ಚಿಂತೆಗಳು, ಸಂಬಂಧದ ಸಮಸ್ಯೆಗಳು ಅಥವಾ ಆರೋಗ್ಯ ಸಮಸ್ಯೆಗಳಿಂದಾಗಿ ಭಾವನಾತ್ಮಕ ಒತ್ತಡ ಸಹ ನಾವು ಹೆಚ್ಚು ತಿನ್ನಲು ಪ್ರೇರೇಪಿಸುತ್ತದೆಯಂತೆ. ವಿಭಿನ್ನ ಅಧ್ಯಯನಗಳ ಪ್ರಕಾರ ಪುರುಷರಿಗಿಂತ ಮಹಿಳೆಯರಲ್ಲಿ ಒತ್ತಡದ ಸಮಯದಲ್ಲಿ ತಿನ್ನುವುದು ಹೆಚ್ಚು ಸಾಮಾನ್ಯವಾಗಿದೆ. ಅದರಲ್ಲೂ ಈ ಭಾವನಾತ್ಮಕ ಒತ್ತಡದ ಸಮಯದಲ್ಲಿ ಸೇವಿಸಲು ಬಯಸುವ ಆಹಾರಗಳು ಆರೋಗ್ಯಕ್ಕೆ ಹಾನಿಕರ ಎನ್ನಲಾಗುತ್ತದೆ. ಈ ಸಮಯದಲ್ಲಿ ಹೆಚ್ಚಾಗಿ ಜನರು ಐಸ್ ಕ್ರೀಮ್, ಕುಕೀಸ್, ಚಾಕೊಲೇಟ್, ಚಿಪ್ಸ್, ಫ್ರೆಂಚ್ ಫ್ರೈಸ್ ಮತ್ತು ಪಿಜ್ಜಾದಂತಹ ಆರಾಮದಾಯಕ ಆಹಾರಗಳನ್ನು ಸೇವಿಸಲು ಬಯಸುತ್ತಾರೆ, ಇದು ತೂಕ ಹೆಚ್ಚಾಗಲು ಕಾರಣವಾಗುತ್ತವೆ.

ಪ್ರತಿ ಬಾರಿಯೂ ರುಚಿಯಾದ ಆಹಾರವೇ ಬೇಕು
ನಾವು ತಿನ್ನುವ ಯಾವುದೇ ಆಹಾರವಾದರೂ ರುಚಿಯಾಗಿಯೇ ಇರಬೇಕು ಎನ್ನುವುದು ತಪ್ಪು, ಕೆಲವು ಆಹಾರಗಳು ಬಾಯಿಯ ರುಚಿ ಹೆಚ್ಚಿಸದಿದ್ದರೂ ದೇಹಕ್ಕೆ ಅತ್ಯವಶ್ಯಕ. ಅಂತ್ಯವಿಲ್ಲದ ಟೇಸ್ಟಿ ಆಹಾರ ಆಯ್ಕೆಗಳು ಮತ್ತು ದೀಢೀರ್ ತಿಂಡಿಗಳ ಅತಿಯಾದ ಸೇವನೆ ನಮ್ಮನ್ನು ಅತಿಯಾಗಿ ತಿನ್ನುವಂತೆ ಪ್ರೇರೇಪಿಸುತ್ತದೆ. ದೊಡ್ಡ ಭಾಗಗಳಲ್ಲಿ ತಿನ್ನುವುದು ದೇಹದ ಕೊಬ್ಬನ್ನು ಉತ್ತೇಜಿಸುತ್ತದೆ, ಹಸಿವಿನ ನಿಯಂತ್ರಣವನ್ನು ಅಡ್ಡಿಪಡಿಸುತ್ತದೆ, ರೋಗಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ, ಮೆದುಳಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ಕೆಲವೊಮ್ಮೆ ತೀವ್ರವಾದ ಅಜೀರ್ಣವನ್ನು ಉಂಟುಮಾಡುತ್ತದೆ.



Click it and Unblock the Notifications









