Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
Somvati Amavasya 2023 : ಸೋಮಾವತಿ ಅಮಾವಾಸ್ಯೆ ದಿನ ಈ ಮಂತ್ರ ಪಠಿಸಿದರೆ ಕಷ್ಟಗಳು ದೂರಾಗುವುದು
ಸನಾತನ ಧರ್ಮದಲ್ಲಿ ಅಮವಾಸ್ಯೆಯ ತಿಥಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಸೋಮ ಅಮವಾಸ್ಯೆ ತುಂಬಾನೇ ವಿಶೇಷವಾಗಿದೆ. ಈ ಅಮವಾಸ್ಯೆಯಂದು ಪೂರ್ವಜರಿಗೆ ಶ್ರಾದ್ಧ ಮತ್ತು ತರ್ಪಣವನ್ನು ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಲಾಗುವುದು.

ಸೋಮವಾಸ್ಯೆ ಫೆಬ್ರವರಿ 20ಕ್ಕೆ ಸೋಮಾವತಿ ಅಮವಾಸ್ಯೆ ಬಂದಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಶಿವ ಮತ್ತು ವಿಷ್ಣುವನ್ನು ಪೂಜಿಸುವುದು ಮಂಗಳಕರವಾಗಿದೆ. ಈ ದಿನ ಏನು ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:
ಸೋಮಾವತಿ ಅಮವಾಸ್ಯೆಯಂದು ಈ ರೀತಿ ಮಾಡಿದರೆ ದಾರಿದ್ರ್ಯ ದೂರಾಗುವುದು

1. ಶಿವಲಿಂಗಕ್ಕೆ ಅಭಿಷೇಕ ಮಾಡಿ
ಈ ದಿನ ತುಪ್ಪ, ಹಾಲು, ಮೊಸರು, ಜೇನುತುಪ್ಪ, ಗಂಗಾಜಲ ಮತ್ತು ಸಕ್ಕರೆಯಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಕೂಡ ಶುಭ ಫಲ ಸಿಗುವುದು. ಶಿವಲಿಂಗಕ್ಕೆ ಅಭಿಷೇಕ ಮಾಡುವಾಗ ಮಂತ್ರಗಳನ್ನು ಪಠಿಸಿ

2. ಗಾಯತ್ರಿ ಮಂತ್ರ ಪಠಿಸಿ
ಓಂ ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ
ತನ್ನೋ ರುದ್ರಃ ಪ್ರಚೋದಯಾತ್
ಅರ್ಥ: ನಾನು ದೇವತೆಗಳಿಗೆ ಆದರ್ಶ ಪುರುಷನಾಗಿರುವ ಮಹಾದೇವನನ್ನು ಪೂಜಿಸುತ್ತಿದ್ದೇನೆ. ಜ್ಞಾನದಿಂದ ನನ್ನನ್ನು ಆಶೀರ್ವದಿಸು.
ಗಾಯತ್ರಿ ಮಂತ್ರದ ಪ್ರಯೋಜನಗಳು
ನೀವು ಶಿವ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಕಷ್ಟಗಳು, ಆತಂಕ ಎಲ್ಲವೂ ದೂರಾಗುವುದು, ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ಯಾವುದೋ ಅವ್ಯಕ್ತ ಭಯ ಕಾಡುತ್ತಿದ್ದರೆ ಈ ಮಂತ್ರ ಪಠಿಸಿ ಆ ಭಯ ದೂರಾಗುವುದು.

3. ನಿಮ್ಮ ಆಸೆ ನೆರವೇರಲು
ನೀವು ಮನಸ್ಸಿನಲ್ಲಿ ಏನನ್ನಾದರೂ ಯೋಚಿಸಿದ್ದರೆ ಅದು ನೆರವೇರಲು ಸೋಮಾವತಿ ಅಮವಾಸ್ಯೆಯಂದು ಬಿಳಿ ನೂಲನ್ನು 108 ಬಾರಿ ಆಲದ ಮರಕ್ಕೆ ಸುತ್ತಿ, ಹೀಗೆ ಸುತ್ತುವಾಗ ಶಿವನ ನಾಮವನ್ನು ಜಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಆಸೆ ನೆರವೇರಲಿದೆ.
ಶಿವನನ್ನು ಮೆಚ್ಚಿಸಲು ಸೋಮಾವತಿ ಅಮಾವಾಸ್ಯೆಯ ದಿನದಂದು ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಜಪಿಸಿ.

ಸೋಮಾವತಿ ಅಮವಾಸ್ಯೆಯಂದು ಈ ಮಂತ್ರವನ್ನು ಪಠಿಸಿ
ಓಂ ವಿಘ್ನವನಿಶಕ ದೇವತಾಭ್ಯೋ ನಮಃ ।
ಓಂ ಕುಲ ದೇವತಾಭ್ಯೋ ನಮಃ ।
ಓಂ ಗ್ರಹ ದೇವತಾಭ್ಯೋ ನಮಃ ।
ಓಂ ಲಕ್ಷ್ಮೀಪತಿ ದೇವತಾಭ್ಯೋ ನಮಃ ।
ಗ್ರಾಮ ದೇವತೆಯೇ ಓಂ ನಮಃ.
ವಿಷ್ಣು ಗಾಯತ್ರಿ ಮಹಾಮಂತ್ರ:
ಓಂ ನಾರಾಯಣಾಯ ವಿಧ್ಮಹೇ|
ವಾಸುದೇವಾಯ ಧೀಮಹೀ|
ತನ್ನೋ ವಿಷ್ಣು ಪ್ರಚೋದಯಾತ್ ||
ಈ ಮಂತ್ರಗಳನ್ನು ಹೇಳುತ್ತಾ ಶ್ರೀ ವಿಷ್ಣುವಿಗೆ ಹಳದಿ ಹೂ, ಹಣ್ಣುಗಳು ತುಳಸಿಯನ್ನು ಅರ್ಪಿಸಿ ಪೂಜೆ ಮಾಡಿ.

ಸೋಮಾವತಿ ಅಮಾವಾಸ್ಯೆಯಂದು ಈ ಕೆಲಸವನ್ನು ಮಾಡಲು ಮರೆಯಬೇಡಿ
1. ಸೋಮಾವತಿ ಅಮಾವಾಸ್ಯೆಯ ದಿನ ಪೂರ್ವಜರಿಗೆ ಆಹಾರವನ್ನು ಹೊರಗಡೆ ಇಡಿ, ಇದನ್ನು ಹಸು, ಕಾಗೆ, ನಾಯಿ ತಿಂದರೆ ಒಳ್ಳೆಯದು. ಈ ದಿನ ಅಪ್ಪಿತಪ್ಪಿಯೂ ನಾಯಿ, ಹಸುವಿಗೆ ನೋವಾಗಬಾರದು, ಇಲ್ಲವಾದಲ್ಲಿ ಪಿತೃದೋಷಕ್ಕೆ ಪಾತ್ರರಾಗುತ್ತೀರಿ ಎನ್ನುತ್ತದೆ ಶಾಸ್ತ್ರ .
2. ಸೋಮಾವತಿ ಅಮಾವಾಸ್ಯೆಯ ದಿನದಂದು, ಪೂರ್ವಜರು ತಮ್ಮ ವಂಶಸ್ಥರಿಂದ ಪಿಂಡದಾನ, ಶ್ರಾದ್ಧ ಮತ್ತು ದಾನಕ್ಕಾಗಿ ಕಾಯುತ್ತಾರೆ. ಅವರು ಇದನ್ನು ಪಡೆಯದಿದ್ದರೆ, ಪಿತೃದೋಷ ಉಂಟಾಗಿ ಸಂತೋಷ ಮತ್ತು ಶಾಂತಿ ಜೀವನದಿಂದ ಕಣ್ಮರೆಯಾಗುತ್ತದೆ. ಆದ್ದರಿಂದ ಈ ದಿನ ಪಿತೃತರ್ಪಣ ಮಾಡಿ.
3. ಸೋಮಾವತಿ ಅಮವಾಸ್ಯೆಯ ದಿನ ಮಾಂಸ, ಮೀನು ಮತ್ತು ಮದ್ಯ ಸೇವಿಸಬಾರದು. ಸೋಮಾವತಿ ಅಮಾವಾಸ್ಯೆಯ ದಿನದಂದು ಬ್ರಹ್ಮಚರ್ಯವನ್ನು ಅನುಸರಿಸಬೇಕು.



Click it and Unblock the Notifications