Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
Somvati Amavasya 2023 : ಸೋಮಾವತಿ ಅಮಾವಾಸ್ಯೆ ದಿನ ಈ ಮಂತ್ರ ಪಠಿಸಿದರೆ ಕಷ್ಟಗಳು ದೂರಾಗುವುದು
ಸನಾತನ ಧರ್ಮದಲ್ಲಿ ಅಮವಾಸ್ಯೆಯ ತಿಥಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಸೋಮ ಅಮವಾಸ್ಯೆ ತುಂಬಾನೇ ವಿಶೇಷವಾಗಿದೆ. ಈ ಅಮವಾಸ್ಯೆಯಂದು ಪೂರ್ವಜರಿಗೆ ಶ್ರಾದ್ಧ ಮತ್ತು ತರ್ಪಣವನ್ನು ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಲಾಗುವುದು.

ಸೋಮವಾಸ್ಯೆ ಫೆಬ್ರವರಿ 20ಕ್ಕೆ ಸೋಮಾವತಿ ಅಮವಾಸ್ಯೆ ಬಂದಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಶಿವ ಮತ್ತು ವಿಷ್ಣುವನ್ನು ಪೂಜಿಸುವುದು ಮಂಗಳಕರವಾಗಿದೆ. ಈ ದಿನ ಏನು ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:
ಸೋಮಾವತಿ ಅಮವಾಸ್ಯೆಯಂದು ಈ ರೀತಿ ಮಾಡಿದರೆ ದಾರಿದ್ರ್ಯ ದೂರಾಗುವುದು

1. ಶಿವಲಿಂಗಕ್ಕೆ ಅಭಿಷೇಕ ಮಾಡಿ
ಈ ದಿನ ತುಪ್ಪ, ಹಾಲು, ಮೊಸರು, ಜೇನುತುಪ್ಪ, ಗಂಗಾಜಲ ಮತ್ತು ಸಕ್ಕರೆಯಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಕೂಡ ಶುಭ ಫಲ ಸಿಗುವುದು. ಶಿವಲಿಂಗಕ್ಕೆ ಅಭಿಷೇಕ ಮಾಡುವಾಗ ಮಂತ್ರಗಳನ್ನು ಪಠಿಸಿ

2. ಗಾಯತ್ರಿ ಮಂತ್ರ ಪಠಿಸಿ
ಓಂ ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ
ತನ್ನೋ ರುದ್ರಃ ಪ್ರಚೋದಯಾತ್
ಅರ್ಥ: ನಾನು ದೇವತೆಗಳಿಗೆ ಆದರ್ಶ ಪುರುಷನಾಗಿರುವ ಮಹಾದೇವನನ್ನು ಪೂಜಿಸುತ್ತಿದ್ದೇನೆ. ಜ್ಞಾನದಿಂದ ನನ್ನನ್ನು ಆಶೀರ್ವದಿಸು.
ಗಾಯತ್ರಿ ಮಂತ್ರದ ಪ್ರಯೋಜನಗಳು
ನೀವು ಶಿವ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಕಷ್ಟಗಳು, ಆತಂಕ ಎಲ್ಲವೂ ದೂರಾಗುವುದು, ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ಯಾವುದೋ ಅವ್ಯಕ್ತ ಭಯ ಕಾಡುತ್ತಿದ್ದರೆ ಈ ಮಂತ್ರ ಪಠಿಸಿ ಆ ಭಯ ದೂರಾಗುವುದು.

3. ನಿಮ್ಮ ಆಸೆ ನೆರವೇರಲು
ನೀವು ಮನಸ್ಸಿನಲ್ಲಿ ಏನನ್ನಾದರೂ ಯೋಚಿಸಿದ್ದರೆ ಅದು ನೆರವೇರಲು ಸೋಮಾವತಿ ಅಮವಾಸ್ಯೆಯಂದು ಬಿಳಿ ನೂಲನ್ನು 108 ಬಾರಿ ಆಲದ ಮರಕ್ಕೆ ಸುತ್ತಿ, ಹೀಗೆ ಸುತ್ತುವಾಗ ಶಿವನ ನಾಮವನ್ನು ಜಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಆಸೆ ನೆರವೇರಲಿದೆ.
ಶಿವನನ್ನು ಮೆಚ್ಚಿಸಲು ಸೋಮಾವತಿ ಅಮಾವಾಸ್ಯೆಯ ದಿನದಂದು ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಜಪಿಸಿ.

ಸೋಮಾವತಿ ಅಮವಾಸ್ಯೆಯಂದು ಈ ಮಂತ್ರವನ್ನು ಪಠಿಸಿ
ಓಂ ವಿಘ್ನವನಿಶಕ ದೇವತಾಭ್ಯೋ ನಮಃ ।
ಓಂ ಕುಲ ದೇವತಾಭ್ಯೋ ನಮಃ ।
ಓಂ ಗ್ರಹ ದೇವತಾಭ್ಯೋ ನಮಃ ।
ಓಂ ಲಕ್ಷ್ಮೀಪತಿ ದೇವತಾಭ್ಯೋ ನಮಃ ।
ಗ್ರಾಮ ದೇವತೆಯೇ ಓಂ ನಮಃ.
ವಿಷ್ಣು ಗಾಯತ್ರಿ ಮಹಾಮಂತ್ರ:
ಓಂ ನಾರಾಯಣಾಯ ವಿಧ್ಮಹೇ|
ವಾಸುದೇವಾಯ ಧೀಮಹೀ|
ತನ್ನೋ ವಿಷ್ಣು ಪ್ರಚೋದಯಾತ್ ||
ಈ ಮಂತ್ರಗಳನ್ನು ಹೇಳುತ್ತಾ ಶ್ರೀ ವಿಷ್ಣುವಿಗೆ ಹಳದಿ ಹೂ, ಹಣ್ಣುಗಳು ತುಳಸಿಯನ್ನು ಅರ್ಪಿಸಿ ಪೂಜೆ ಮಾಡಿ.

ಸೋಮಾವತಿ ಅಮಾವಾಸ್ಯೆಯಂದು ಈ ಕೆಲಸವನ್ನು ಮಾಡಲು ಮರೆಯಬೇಡಿ
1. ಸೋಮಾವತಿ ಅಮಾವಾಸ್ಯೆಯ ದಿನ ಪೂರ್ವಜರಿಗೆ ಆಹಾರವನ್ನು ಹೊರಗಡೆ ಇಡಿ, ಇದನ್ನು ಹಸು, ಕಾಗೆ, ನಾಯಿ ತಿಂದರೆ ಒಳ್ಳೆಯದು. ಈ ದಿನ ಅಪ್ಪಿತಪ್ಪಿಯೂ ನಾಯಿ, ಹಸುವಿಗೆ ನೋವಾಗಬಾರದು, ಇಲ್ಲವಾದಲ್ಲಿ ಪಿತೃದೋಷಕ್ಕೆ ಪಾತ್ರರಾಗುತ್ತೀರಿ ಎನ್ನುತ್ತದೆ ಶಾಸ್ತ್ರ .
2. ಸೋಮಾವತಿ ಅಮಾವಾಸ್ಯೆಯ ದಿನದಂದು, ಪೂರ್ವಜರು ತಮ್ಮ ವಂಶಸ್ಥರಿಂದ ಪಿಂಡದಾನ, ಶ್ರಾದ್ಧ ಮತ್ತು ದಾನಕ್ಕಾಗಿ ಕಾಯುತ್ತಾರೆ. ಅವರು ಇದನ್ನು ಪಡೆಯದಿದ್ದರೆ, ಪಿತೃದೋಷ ಉಂಟಾಗಿ ಸಂತೋಷ ಮತ್ತು ಶಾಂತಿ ಜೀವನದಿಂದ ಕಣ್ಮರೆಯಾಗುತ್ತದೆ. ಆದ್ದರಿಂದ ಈ ದಿನ ಪಿತೃತರ್ಪಣ ಮಾಡಿ.
3. ಸೋಮಾವತಿ ಅಮವಾಸ್ಯೆಯ ದಿನ ಮಾಂಸ, ಮೀನು ಮತ್ತು ಮದ್ಯ ಸೇವಿಸಬಾರದು. ಸೋಮಾವತಿ ಅಮಾವಾಸ್ಯೆಯ ದಿನದಂದು ಬ್ರಹ್ಮಚರ್ಯವನ್ನು ಅನುಸರಿಸಬೇಕು.



Click it and Unblock the Notifications
