Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯ ಗ್ರಹಣ 2023 : ಸೂರ್ಯ ಗ್ರಹಣದಂದು ಆಹಾರ ಪದಾರ್ಥಗಳಿಗೆ ತುಳಸಿ ಹಾಕೋದ್ಯಾಕೆ ಗೊತ್ತಾ?
ತುಳಸಿ ವೃಕ್ಷಕ್ಕೆ ಹಿಂದೂ ಸಂಪ್ರದಾಯದಲ್ಲಿ ಮಹತ್ವದ ಸ್ಥಾನ-ಮಾನ ಕಲ್ಪಿಸಲಾಗಿದೆ. ಬೆಳಗ್ಗೆ ಎದ್ದು ಗೃಹಿಣಿಯು ಭಕ್ತಿಯಿಂದ ತುಳಸಿ ವೃಕ್ಷವನ್ನು ಪೂಜಿಸಿದರೆ ಅಂತಹ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಯಾಗುತ್ತದೆ ಎಂದು ನಂಬಲಾಗಿದೆ. ಅಷ್ಟಕ್ಕು ಗ್ರಹಣದ ಸಂದರ್ಭದಲ್ಲಿ ತುಳಸಿ ಅತೀ ಮುಖ್ಯ ಯಾಕೆ? ಆ ದಿನ ಆಹಾರ ಪದಾರ್ಥಗಳಿಗೆ ತುಳಸಿಯನ್ನು ಹಾಕೋದ್ಯಾಕೆ ಅನ್ನೋದನ್ನು ತಿಳಿಯೋಣ.

ಗ್ರಹಣ ಎಂದರೆ ಪ್ರತಿಯೊಬ್ಬರಲ್ಲೂ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಎಲ್ಲಿ ಸಂಕಷ್ಟ, ಆಪತ್ತು ಎದುರಾಗುತ್ತೋ ಅನ್ನೋ ಭಯವಂತೂ ಖಂಡಿತ ಇದೆ. ಪ್ರತಿ ಸರಿ ಗ್ರಹಣ ಬಂದಾಗಲೂ ನಾವು ದೇವರಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನು ಸಲ್ಲಿಸುತ್ತೇವೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ಒಂದು ಶಕ್ತಿ ಕಾಯುತ್ತಿರುತ್ತದೆ. ಕಣ್ಣಿಗೆ ಕಾಣದೇ ಹೋದರು ನಮ್ಮನ್ನು ರಕ್ಷಣೆ ಮಾಡುತ್ತಿರುತ್ತಾನೆ. ಅದುವೇ ದೈವೀ ಶಕ್ತಿ. ನಾವು ದೇವರನ್ನು ಇಂತಹದ್ದೇ ರೂಪದಲ್ಲಿ ಕಾಣಬೇಕಾಗಿಲ್ಲ. ಗಿಡ ಮರಗಳಲ್ಲೂ ಕೂಡ ದೇವರನ್ನೂ ಕಾಣುತ್ತೇವೆ. ಪವಿತ್ರವಾದ ತುಳಸಿ ವೃಕ್ಷದಲ್ಲೂ ನಾವು ದೇವರನ್ನೂ ಕಾಣುತ್ತೇವೆ. ಯಾಕಂದ್ರೆ ಆ ತುಳಸಿ ವೃಕ್ಷಕ್ಕಿರುವ ಶಕ್ತಿ ಅಂತಹದ್ದು.

ಗ್ರಹದ ಗೋಚರಿಸುವ ಪ್ರದೇಶಗಳು
ಗ್ರಹಣದ ಆರಂಭದಿಂದ ಅಂತ್ಯದ ಸಮಯದವರೆಗೆ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ಪೂಜೆ ಇತ್ಯಾದಿಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ , ಏನನ್ನೂ ತಿನ್ನಲು ಮತ್ತು ಕುಡಿಯಲು ನಿಷೇಧಿಸಲಾಗಿದೆ. ದೇವಸ್ಥಾನಗಳಸಹ ಈ ಸಮಯದಲ್ಲಿ ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಇದ್ದ ಆಹಾರವನ್ನು ಮರುಬಳಕೆ ಮಾಡಬಾರದು ಹಾಗೂ ಮಾಡುವುದಾದರೆ ಅದಕ್ಕೆ ತುಳಸಿ ಎಲೆಯನ್ನು ಹಾಕಿ ನಂತರ ಬಳಸಬೇಕು ಎಂಬ ನಂನಿಕೆ ಇದೆ, ಇದು ಏಕೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ:

ಆಹಾರಕ್ಕೆ ತುಳಸಿ ಬಳಕೆ ಏಕೆ?
ಜೊತೆಗೆ, ಸೂರ್ಯ ಗ್ರಹಣವು ಪ್ರಾರಂಭವಾಗುವ ಮೊದಲು ತುಳಸಿ ಎಲೆಯನ್ನು ಆಹಾರ ಪದಾರ್ಥಗಳಿಗೆ ಸೇರಿಸಲಾಗುತ್ತದೆ. ತುಳಸಿ ಎಲೆಯು ಅಶುದ್ಧವಾಗಿರುವುದಿಲ್ಲ ಎಂಬುದು ವಾಡಿಕೆ. ಗ್ರಹಣ ಅವಧಿ ಮುಗಿದ ನಂತರ ಇದನ್ನು ಮರುಬಳಕೆ ಮಾಡಬಹುದು. ಆದರೆ, ಈ ಬಾರಿ ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ. ಈ ಕಾರಣದಿಂದಾಗಿ, ಸೂತಕದ ಈ ನಿಯಮಗಳು ಸಹ ಇಲ್ಲಿ ಅನ್ವಯಿಸುವುದಿಲ್ಲ. ಅದೇನೇ ಇದ್ದರೂ, ತುಳಸಿ ಎಲೆಗಳನ್ನು ಸೇರಿಸುವುದರಿಂದ ಮಸಿ ಮತ್ತು ಗ್ರಹಣದ ಪ್ರಭಾವವನ್ನು ತಪ್ಪಿಸುವುದು ಹೇಗೆ ಎಂಬುದು ಆಶ್ಚರ್ಯಕರ ವಿಷಯವಾಗಿದೆ. ತುಳಸಿ ಎಲೆಗಳು ಏಕೆ ಸೂತದಿಂದ ಪ್ರಭಾವಿತವಾಗುವುದಿಲ್ಲ ಎಂಬುದು ಇಲ್ಲಿದೆ.

ತುಳಸಿ ಎಲೆಯನ್ನು ಆಹಾರ ಮತ್ತು ಪಾನೀಯಕ್ಕೆ ಏಕೆ ಸೇರಿಸಲಾಗುತ್ತದೆ
ವೈಜ್ಞಾನಿಕವಾಗಿ ಹೇಳುವುದಾದರೆ, ಗ್ರಹಣದ ಸಮಯದಲ್ಲಿ ವಾತಾವರಣದಲ್ಲಿ ಇರುವ ಕಿರಣಗಳು ನಕಾರಾತ್ಮಕ ಪರಿಣಾಮ ಬೀರುತ್ತವೆ. ಅಂತಹ ಸಮಯದಲ್ಲಿ, ಆಹಾರ ಅಥವಾ ಪಾನೀಯವನ್ನು ತೆರೆದಿದ್ದರೆ ಅಥವಾ ಈ ಸಮಯದಲ್ಲಿ ಏನನ್ನಾದರೂ ತಿನ್ನುತ್ತಿದ್ದರೆ ಅಥವಾ ಸೇವಿಸಿದರೆ, ಈ ಕಿರಣಗಳ ನಕಾರಾತ್ಮಕ ಪರಿಣಾಮವು ಆ ವಸ್ತುವನ್ನು ತಲುಪುತ್ತದೆ ಮತ್ತು ನಮ್ಮ ಆರೋಗ್ಯವನ್ನು ಹಾನಿಗೊಳಿಸುತ್ತದೆ.

ತುಳಸಿ ಎಲೆಗಳಲ್ಲಿ ಪಾದರಸ
ತುಳಸಿ ಎಲೆಗಳಲ್ಲಿ ಪಾದರಸ ಇರುವುದರಿಂದ. ಯಾವುದೇ ಕಿರಣಗಳು ಪಾದರಸದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗ್ರಹಣದ ಸಮಯದಲ್ಲಿ ಆಕಾಶದಿಂದ ಮತ್ತು ಬ್ರಹ್ಮಾಂಡದಿಂದ ಬರುವ ನಕಾರಾತ್ಮಕ ಶಕ್ತಿಯು ತುಳಸಿ ಸಮೀಪಿಸಿದ ತಕ್ಷಣ ನಿಷ್ಕ್ರಿಯಗೊಳ್ಳುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ತುಳಸಿ ಎಲೆಯನ್ನು ಸೇರಿಸಿದರೂ ವಾತಾವರಣದಲ್ಲಿರುವ ಕಿರಣಗಳ ಋಣಾತ್ಮಕ ಪರಿಣಾಮಗಳಿಂದ ಕೂಡಿದ ವಸ್ತುಗಳು ದೂರವಾಗುತ್ತವೆ. ಆದ್ದರಿಂದ ಆ ವಸ್ತುಗಳನ್ನು ಶುದ್ಧವೆಂದು ಪರಿಗಣಿಸಲಾಗುತ್ತದೆ.



Click it and Unblock the Notifications