Just In
- 49 min ago
ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ತುಂಬಾ ಕಷ್ಟ, ಏಕೆ?
- 3 hrs ago
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- 8 hrs ago
Chanakya Neeti: ಚಾಣಕ್ಯ ಪ್ರಕಾರ ಪುರುಷನ ಬದುಕಿನಲ್ಲಿ ಅದೃಷ್ಟ ತರುವ 3 ವ್ಯಕ್ತಿಗಳಿವರು
- 11 hrs ago
50, 000 ವರ್ಷಗಳ ಬಳಿಕ ಗೋಚರಿಸಲಿದೆ ಹಸಿರು ಧೂಮಕೇತು: ಬರೀಗಣ್ಣಿನಲ್ಲಿ ಇದನ್ನು ಯಾವ ಸಮಯದಲ್ಲಿ ವೀಕ್ಷಿಸಬಹುದು
Don't Miss
- News
Aero India 2023: 'ಇಂಡಿಯಾ ಪೆವಿಲಿಯನ್' ಮಧ್ಯದಲ್ಲಿ ಭಾರತದ ಈ ಪ್ರತಿಷ್ಠಿತ ವಿಮಾನ ಪ್ರದರ್ಶನ- ವಿನ್ಯಾಸ, ತೂಕ, ಮಾಹಿತಿ
- Sports
Ranji Trophy 2023: ಕ್ವಾರ್ಟರ್ ಫೈನಲ್ನಲ್ಲಿ ಉತ್ತರಾಖಂಡ ವಿರುದ್ಧ ಗೆಲುವಿನತ್ತ ದಾಪುಗಾಲಿಟ್ಟ ಕರ್ನಾಟಕ
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾರ್ಗಶಿರ ಹುಣ್ಣಿಮೆ: ಈ ದಿನ ಆಚರಿಸುವ ಹೊಸ್ತಿಲ ಹುಣ್ಣಿಮೆ, ಹುತ್ತರಿಯ ಮಹತ್ವವೇನು?
ಹಿಂದೂ ಸಂಪ್ರದಾಯದಲ್ಲಿ ಅಮವಾಸ್ಯೆ,ಹುಣ್ಣಿಮೆಗೆ ತುಂಬಾನೇ ಮಹತ್ವವಿದೆ. ಕೆಲವೊಂದು ಹುಣ್ಣಿಮೆ ಹಾಗೂ ಅಮವಾಸ್ಯೆ ತುಂಬಾನೇ ವಿಶೇಷ ದಿನಗಳಾಗಿರುತ್ತದೆ. ಡಿಸೆಂಬರ್ 8ಕ್ಕೆ ಮಾರ್ಗಶಿರ ಹುಣ್ಣಿಮೆ, ಇದು ವರ್ಷದ ಕೊನೆಯ ಹುಣ್ಣಿಮೆ.
ಧಾರ್ಮಿಕ ಆಚರಣೆಗಳ ದೃಷ್ಟಿಯಿಂದ ಈ ಹುಣ್ಣಿಮೆ ತುಂಬಾನೇ ಮಹತ್ವ ಹೊಂದಿದೆ. ಈ ದಿನವನ್ನು ಹೊಸ್ತಿಲ ಹುಣ್ಣಿಮೆಯಂದು ಆಚರಿಸಲಾಗುವುದು. ಉತ್ತರ ಕರ್ನಾಟಕದ ಕಡೆ ಈ ಹುಣ್ಣಿಮೆಯನ್ನು ತುಂಬಾ ವಿಶೇಷವಾಗಿ ಆಚರಿಸಲಾಗುವುದು.
ಹುತ್ತರಿ ಹಬ್ಬ
ಈ ದಿನದಂದು ಹುತ್ತರಿ ಹಬ್ಬವನ್ನು ಆಚರಿಸಲಾಗುವುದು. ಹೊಸದಾಗಿ ಬೆಳೆದ ಪೈರನ್ನು ಕಿತ್ತು ಮನೆಗೆ ಅಂದು ಹೊಸ ಅಕ್ಕಿಯಿಂದ ಪಾಯಸ ಮಾಡಲಾಗುವುದು. ಬೆಳೆದ ಹೊಸ ಪೈರನ್ನು ಮನೆ-ಮನೆಯ ಹೊಸ್ತಿಲಿನಲ್ಲಿ ಕಟ್ಟಿ ತಂಬಿಟ್ಟು ಮುಂತಾದ ಸಿಹಿ ತಿಂಡಿಗಳನ್ನು ಮಾಡಿ ಹಬ್ಬವನ್ನು ಆಚರಿಸಲಾಗುವುದು.
ಶ್ರೀಕೃಷ್ಣನಿಗೆ ಪ್ರಿಯವಾದ ತಿಂಗಳು
ಮಾರ್ಗಶಿರ ಮಾಸ ಶ್ರೀಕೃಷ್ಣನಿಗೆ ತುಂಬಾನೇ ಪ್ರಿಯವಾದ ದಿನ. ಈ ತಿಂಗಳಿನಲ್ಲಿ ಶ್ರೀಕೃಷ್ಣ, ರಾಧೆ, ವಿಷ್ಣು-ಲಕ್ಷ್ಮಿಯರನ್ನು ಆರಾಧಿಸಲಾಗುವುದು.
ಈ ದಿನದ ಪೂಜಾ ವಿಧಿಗಳೇನು?
ಈ ದಿನ ಬೆಳಗ್ಗೆ ಬೇಗನೆ ಎದ್ದು ಪುಣ್ಯ ನದಿಯಲ್ಲಿ ಸ್ನಾನ ಮಾಡಿ, ನಂತರ ಸಂಕಲ್ಪ ತೆಗೆದುಕೊಂಡು ಉಪವಾಸ ವ್ರತ ಮಾಡಬೇಕು. ನಂತರ ಪೂಜೆಯನ್ನು ಮಾಡಲಾಗುವುದು. ಈ ದಿನ ಮಾಡುವ ಧಾನ ಧರ್ಮಗಳಿಗೆ ಹೆಚ್ಚಿನ ಫಲ ಇದೆ.
ಮಾರ್ಗಶಿರ ಉಪವಾಸದ ಮಹತ್ವ
ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಚಂದ್ರನಿಗೆ ಆರ್ಘ್ಯವನ್ನು ಅರ್ಪಿಸಿದ ಬಳಿಕವಷ್ಟೇ ಉಪವಾಸ ಮುರಿಯಬೇಕು. ಯಾರು ಈ ದಿನ ಉಪವಾಸ ಇರುತ್ತಾರೋ ಅವರು ಮರಣದ ಬಂಧನದಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ.
ಹೊಸ್ತಿಲ ಹುಣ್ಣಿಮೆಯ ಮಹತ್ವ
ಹಿಂದೂ ಧರ್ಮಗ್ರಂಥಗಳ ಪ್ರಕಾರ ಮಾರ್ಗಶಿರ ಮಾಸದಿಂದ ಸತ್ಯಯುಗ ಪ್ರಾರಂಭವಾಯ್ತು ಎನ್ನಲಾಗುತ್ತಿದೆ. ನಮ್ಮ ರಾಶಿಯ ಮೇಲೆ ಚಂದ್ರನ ಪ್ರಭಾವ ಕೂಡ ಇರುತ್ತದೆ, ಈ ದಿನ ಶ್ರೀ ವಿಷ್ಣುವನ್ನು ಆರಾಧಿಸುವುದರಿಂದ ಒಳಿತಾಗುವುದು ಎಂಬ ನಂಬಿಕೆ.

ಮಹಾವಿಷ್ಣುವಿನ ಕೃಪೆಗೆ ಈ ಮಂತ್ರ ಪಠಿಸಿ
'ಓಂ ನಮಃ ನಾರಾಯಣ' ಈ ಮಂತ್ರವನ್ನು ಪಠಿಸುವುದರಿಂದ ಎಲ್ಲಾ ರೀತಿಯ ದುಃಖಗಳು ದೂರವಾಗುತ್ತವೆ ಮತ್ತು ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ನಿಮಗೆ ಉಪವಾಸ ಮಾಡಲು ಸಾಧ್ಯವಾಗದಿದ್ದರೂ ಈ ಮಂತ್ರವನ್ನು ಜಪಿಸಬಹುದು.
ಆರ್ಥಿಕ ಸಮಸ್ಯೆ ದೂರ ಮಾಡಲು:
ನಿಮಗೂ ಲಕ್ಷ್ಮಿಯ ಪೃಪೆಗೆ ಪಾತ್ರರಾಗಬೇಕೆಂದರೆ ಈ ಸಂಜೆ ಆಲದ ಮರಕ್ಕೆ ಸುತ್ತು ಹಾಕಿ ತುಪ್ಪದ ದೀಪವನ್ನು ಬೆಳಗಿ. ಈ ದಿನ ವಿಷ್ಣು-ಲಕ್ಷ್ಮಿಯನ್ನು ಪೂಜಿಸಿ ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ, ಹಣದ ಕೊರತೆ ಇರುವುದಿಲ್ಲ.

ಬಾಕಿಯುಳಿದ ಕೆಲಸ ಪೂರ್ಣಗೊಳ್ಳಲು
ಹುಣ್ಣಿಮೆಯಂದು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ನಿಮ್ಮ ಅಪೂರ್ಣ ಕೆಲಸ ಪೂರ್ಣವಾಗುವುದು.
ವೃತ್ತಿ ಜೀವನದಲ್ಲಿ ಬಡ್ತಿ ಪಡೆಯಲು
ವೃತ್ತಿ ಜೀವನದಲ್ಲಿ ನೀವು ಬಯಸಿದ ಎತ್ತರವನ್ನು ತಲುಪಲು ಹಸಿ ಹಾಲನ್ನು ಗಂಗಾ ಜಲಕ್ಕೆ ಬೆರೆಸಿ ಶ್ರೀ ನಾರಾಯಣನಿಗೆ ಅರ್ಪಿಸಿ. ಇದಲ್ಲದೆ ಸತ್ಯನಾರಾಯಣ ಕತೆಯನ್ನು ಓದುವುದು, ಕೇಳುವುದು ಮಾಡಿ.

ವಾಸ್ತು ಟಿಪ್ಸ್
ವಾಸ್ತು ಶಾಸ್ತ್ರದ ಪ್ರಕಾರ ಮಾರ್ಗಶಿರ ಪೂರ್ಣಿಮಾ ದಿನದಂದು ಲಕ್ಷ್ಮಿ ದೇವಿಯ ಚಿತ್ರವನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿ ಇಡುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಮನೆಯಲ್ಲಿ ಲಕ್ಷ್ಮಿಯ ವಾಸಸ್ಥಾನವನ್ನು ಕಾಪಾಡಿಕೊಳ್ಳಲು, ಸಂಜೆ ಮನೆಯ ಹೊಸ್ತಿಲಿನಲ್ಲಿ ದೀಪವನ್ನು ಬೆಳಗಿಸಿ.