Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Holi 2021: ಬಣ್ಣಗಳ ಹಬ್ಬದ ದಿನಾಂಕ, ಮುಹೂರ್ತ ಹಾಗೂ ಮಹತ್ವ ನಿಮಗಾಗಿ
ಬಣ್ಣಗಳ ಹಬ್ಬ ಎಂದು ಕರೆಯಲ್ಪಡುವ ಹೋಳಿ ಹಬ್ಬ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಎಲ್ಲಾ ಜಾತಿ, ಧರ್ಮ, ಮತಗಳನ್ನು ಮೀರಿದ ಹಬ್ಬವೇ ಈ ಹೋಳಿ. ಹೋಲಿಕ ದಹನ ಆಚರಣೆಯನ್ನು ಹೋಳಿ ಸಂದರ್ಭದಲ್ಲಿ ನಡೆಸಲಾಗುತ್ತದೆ, ಇದು ದುಷ್ಟರ ಮೇಲೆ ಒಳ್ಳೆಯದನ್ನು ಗೆದ್ದಿರುವ ಸಂಕೇತವಾಗಿದೆ. ಆದಾಗ್ಯೂ, ಒಡಿಶಾದಂತಹ ಕೆಲವು ರಾಜ್ಯಗಳಲ್ಲಿ, ಹೋಳಿ ಹಬ್ಬವನ್ನು ಡೋಲ್ ಜಾತ್ರಾ ಅಥವಾ ಡಾಲ್ ಪೂರ್ಣಿಮಾ ಎಂದೂ ಕರೆಯುತ್ತಾರೆ, ಅದೇ ದಿನ ಹೋಲಿಕ ದಹನ. ಈ ವರ್ಷ ಹೋಳಿಯಾಟವು ಅಥವಾ ಓಕುಳಿಯಾಟ ಮಾರ್ಚ್ 29, 2021 ರಂದು (ಸೋಮವಾರ) ಹೋಲಿಕ ದಹನವು ಮಾರ್ಚ್ 28, 2021 ರಂದು ನಡೆಯಲಿದೆ.

ಇದು ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಬರುವ ಈ ಹೋಳಿಯನ್ನು ವಸಂತ ಉತ್ಸವ ಎಂದೂ ಕರೆಯುತ್ತಾರೆ, ಏಕೆಂದರೆ ಇದು ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ರಸ್ತೆಬದಿಯಲ್ಲಿ ಬಣ್ಣಗಳ ರಾಶಿಗಳು ಕಂಡುಬರುವುದರಿಂದ ಮಾರುಕಟ್ಟೆಯು ವರ್ಣಮಯವಾಗುತ್ತದೆ. ಮಕ್ಕಳು ಮತ್ತು ವಯಸ್ಕರು ಇಬ್ಬರೂ ಆಡುವ ಈ ಹೋಳಿಯಿಂದ ಎಲ್ಲರ ಮನಸ್ಸು ರಂಗುಮಯವಾಗುತ್ತದೆ. ಈ ಹೋಳಿಯ ಮುಹೂರ್ತ ಹಾಗೂ ಮಹತ್ವದ ಕುರಿತು ಈ ಲೇಖನದಲ್ಲಿ ಮಾಹಿತಿ ನೀಡಿದ್ದೇವೆ.
ಹೋಳಿ 2021 ತಿಥಿ ಮತ್ತು ಪೂಜಾ ಮುಹೂರ್ತ:
ಪೂರ್ಣಿಮಾ ತಿಥಿ ಪ್ರಾರಂಭ - ಮಾರ್ಚ್ 28, 2021 ರಂದು ಬೆಳಿಗ್ಗೆ 03:27
ಪೂರ್ಣಿಮಾ ತಿಥಿ ಅಂತ್ಯ - ಮಾರ್ಚ್ ೨೯, 2021 ರಂದು ಬೆಳಿಗ್ಗೆ 12:17
ಹೋಲಿಕ ದಹನ ದಿನಾಂಕ: ಮಾರ್ಚ್ 28, 2021 ರ ಭಾನುವಾರ
ಹೋಲಿಕ ದಹನ ಮುಹೂರ್ತ - 06:54 PM ರಿಂದ 09:14 PM (02 ಗಂಟೆ 20 ನಿಮಿಷಗಳು)
ಭದ್ರಾ ಪಂಚ- ಬೆಳಿಗ್ಗೆ 10: 13 ರಿಂದ 11:16
ಭದ್ರಾ ಮುಖ - 11:16 ರಿಂದ 1:00
ಹೋಳಿಯಾಟ ಅಥವಾ ಓಕುಳಿಯಾಟ- ಮಾರ್ಚ್ 29, 2021
ಹೋಳಿ ಮಹತ್ವ:
ಹೋಳಿ ಆಚರಣೆಗಳು ಹೋಳಿಯ ಹಿಂದಿನ ರಾತ್ರಿ ಹೋಲಿಕ ದಹನದೊಂದಿಗೆ ಪ್ರಾರಂಭವಾಗುತ್ತವೆ, ಅಲ್ಲಿ ಜನರು ಒಟ್ಟುಗೂಡುತ್ತಾರೆ, ದೀಪೋತ್ಸವದ ಮುಂದೆ ಧಾರ್ಮಿಕ ವಿಧಿಗಳನ್ನು ಮಾಡುತ್ತಾರೆ ಮತ್ತು ರಾಕ್ಷಸ ರಾಜ ಹಿರಣ್ಯಕಶಿಪು ಅವರ ಸಹೋದರಿ ಹೋಲಿಕಾ ಬೆಂಕಿಯಲ್ಲಿ ಸುಟ್ಟುಹೋದ ರೀತಿಯಲ್ಲಿ ನಮ್ಮ ಆಂತರಿಕ ದುಷ್ಟತನ ನಾಶವಾಗಲಿ ಎಂದು ಪ್ರಾರ್ಥಿಸುತ್ತಾರೆ. ಹಿರಣ್ಯಕಶ್ಯಪ ಅವರಿಗೆ ಪ್ರಹ್ಲಾದ್ ಎಂಬ ಮಗನಿದ್ದನು.
ಹಿರಣ್ಯಕಶ್ಯಪು ಎಂಬ ರಾಕ್ಷಸ ರಾಜನು ಎಲ್ಲರೂ ತನ್ನನ್ನು ಆರಾಧಿಸಬೇಕೆಂದು ಬಯಸಿದ್ದರು, ಆದರೆ ಅವರ ಮಗ ಪ್ರಹ್ಲಾದ್ ಅವರು ವಿಷ್ಣುವಿನ ಭಕ್ತರಾಗಿದ್ದರಿಂದ ಅದನ್ನು ಮಾಡಲು ನಿರಾಕರಿಸಿದರು. ಇದಕ್ಕೆ ಕೋಪಗೊಂಡ ಹಿರಣ್ಯಕಶ್ಯಪು ತನ್ನ ಸಹೋದರಿ ಹೋಲಿಕಾಳನ್ನು ಪ್ರಹ್ಲಾದನನ್ನು ತನ್ನ ತೋಳುಗಳಲ್ಲಿ ತೆಗೆದುಕೊಂಡು ಬೆಂಕಿಯನ್ನು ಸುಡುವಂತೆ ಕೇಳಿದನು.



Click it and Unblock the Notifications













