Latest Updates
-
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ?
ಮಲಗಲು ಹೊರಟಿರಾ? ಹಾಗಾದರೆ ಇವುಗಳನ್ನು ಒಮ್ಮೆ ಮಾಡಿ ಮುಗಿಸಿ!
ಬೆಳಗ್ಗೆಯಿಂದ ಸಂಜೆಯವರೆಗೂ ದಣಿದ ಜೀವ ಬಯಸುವುದು ಒಂದೇ. ಅದು ಕಣ್ತುಂಬ ನಿದ್ರೆ. ನಿತ್ಯದ ದಿನಚರಿಯಾದ ನಿದ್ರೆ ಸರಿಯಾಗದಿದ್ದರೆ ಅದೇನೋ ಒಂದು ಬಗೆಯ ಕಿರಿ ಕಿರಿ ಉಂಟಾಗುವುದು. ಅದೆಷ್ಟೇ ಕಷ್ಟ-ಸುಖಗಳಿರಲಿ ನಿದ್ರೆ ಮಾಡಿದಾಗ ಎಲ್ಲವೂ ಮರೆಯಾಗುತ್ತವೆ. ಜೊತೆಗೆ ದೇಹಕ್ಕೆ ಶಕ್ತಿ ಹಗೂ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ.
ಮರುದಿನದ ಚಟುವಟಿಕೆಗೆ ಸಿದ್ಧರಾಗಲು ಚೈತನ್ಯ ನೀಡುತ್ತದೆ. ಕೆಲವೊಮ್ಮೆ ನಕಾರಾತ್ಮ ಶಕ್ತಿ ನಮ್ಮ ನಿದ್ರೆಯನ್ನು ಕೆಡಿಸುತ್ತದೆ. ಸರಿಯಾಗಿರದ ವಾಸ್ತುವೂ ಸಹ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಂದ ನಿದ್ರೆ ಭಂಗವಾಗಿ ಕೆಟ್ಟಕನಸುಗಳು ನಮ್ಮನ್ನು ಕಾಡುತ್ತವೆ.
ಜ್ಯೋತಿಷ್ಯದ ಪ್ರಕಾರ ಜೀವನದಲ್ಲಿ ದಕ್ಷತೆ ಹೆಚ್ಚಿಸಲು ಮತ್ತು ಉತ್ತಮ ನಿದ್ರೆಯಿಂದ ಅದೃಷ್ಟ ಹೆಚ್ಚಿಸಿಕೊಳ್ಳಲು ಕೆಲವು ನಿಯಮ ಹಾಗೂ ಸಂಪ್ರದಾಯಗಳನ್ನು ಅನುಸರಿಸಬೇಕಾಗುವುದು. ಇಲ್ಲವಾದರೆ ಒಂದಲ್ಲಾ ಒಂದು ಬಗೆಯ ತೊಡಕುಗಳು ನಮ್ಮನ್ನು ಕಾಡುತ್ತಿರುತ್ತವೆ. ಈ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆಂದರೆ ಮುಂದೆ ಓದಿ. ನಿಯಮಗಳನ್ನು ಅನುಸರಿಸಿ ಅದೃಷ್ಟಗಳನ್ನು ಪಡೆದುಕೊಳ್ಳಿ....

ಕೆಟ್ಟ ಕನಸುಗಳ ತಡೆಗೆ
ಮಲಗುವ ಮುನ್ನ ಒಂದು ಸಣ್ಣ ಚೀಲದಲ್ಲಿ ಸೋಂಪು ಕಾಳುಗಳ (ಫೆನ್ನೆಲ್ ಸೀಡ್ಸ್)ನ್ನು ತುಂಬಿ, ದಿಂಬಿನ ಕೆಳಗೆ ಇಟ್ಟು, ಮಲಗಬೇಕು. ಹೀಗೆ ಮಾಡುವುದರಿಂದ ಕೆಟ್ಟಕನಸುಗಳಿಂದ ಬೆಚ್ಚಿ ಬೀಳುವುದು, ಬೆವರುವುದು ಮತ್ತು ಭಯಪಡುವ ಸಮಸ್ಯೆ ಇರದು. ಸುಖಕರ ನಿದ್ರೆ ನಿಮ್ಮದಾಗುವುದು.

ಅದೃಷ್ಟ ಹೆಚ್ಚುವುದು
ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿಸಿ, ತಲೆಗೆ ಹತ್ತಿರ ಇರುವ ಮೇಜಿನ ಮೇಲಿಟ್ಟುಕೊಂಡು ಮಲಗಬೇಕು. ಬೆಳಗ್ಗೆ ಈ ತಂಬಿಗೆ ನೀರನ್ನು ಸಸ್ಯಕ್ಕೆ ಹಾಕಬೇಕು. ಈ ವಿಧಾನದಿಂದ ಅದೃಷ್ಟ ಹೆಚ್ಚುವುದು.

ಮಲಗುವ ಮುನ್ನ ಓದುವ ಅಭ್ಯಾಸ
ಮಲಗುವ ಮುನ್ನ ಓದುವುದು ಉತ್ತಮ ಅಭ್ಯಾಸ. ಅದರಲ್ಲೂ ಧಾರ್ಮಿಕ ಹಾಗೂ ಸ್ಫೂರ್ತಿದಾಯಕ ವಿಚಾರಗಳನ್ನು ಓದಿ ಮಲಗಿದರೆ ಮನಸ್ಸಿನ ಒತ್ತಡಗಳು ಕಡಿಮೆಯಾಗುತ್ತವೆ. ಜೊತೆಗೆ ಅಲ್ಝೈಮರ್ಸ್ನಂತಹ ರೋಗಗಳನ್ನು ಬಾರದಂತೆ ತಡೆಯಬಹುದು. ಮಲಗುವಾಗ ತಲೆಯು ಉತ್ತರ ದಿಕ್ಕಿಗೆ ಇರುವಂತೆ ಮಲಗಬೇಕು.

ಮೊಬೈಲ್ನಿಂದ ದೂರವಿರಿ...
ಮಲಗುವ ಮುನ್ನ ಮೊಬೈಲ್ಅನ್ನು ದೂರವಿಡಿ ಅಥವಾ ಸ್ವಿಚ್ ಆಫ್ ಮಾಡಿ. ಕನಿಷ್ಠ ಪಕ್ಷ 10 ನಿಮಿಷ ಧ್ಯಾನಮಾಡಿ. ಇದರಿಂದ ಮೆದುಳಿನ ಶಕ್ತಿ ಮತ್ತು ಏಕಾಗ್ರತೆಯ ಶಕ್ತಿ ಹೆಚ್ಚುವುದು.
ಮಹಿಳೆಯ ಕನಸು ಬಿದ್ದರೆ-ಕನಸಲ್ಲಿ ಅರೆರೆರೇ! ಭವಿಷ್ಯ ಅಯ್ಯಯ್ಯಯ್ಯೋ..!

ಕರ್ಪೂರ ಮತ್ತು ತೆಂಗಿನ ಎಣ್ಣೆ
ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಕಾಲನ್ನು ತೊಳೆಯಬೇಕು. ಕರ್ಪೂರ ಮತ್ತು ತೆಂಗಿನ ಎಣ್ಣೆಯ ಮಿಶ್ರಣದ ತೈಲವನ್ನು ಪಾದ ಹಾಗೂ ಅಂಗಾಲಿಗೆ ಸವರಿಕೊಂಡು ಮಲಗಬೇಕು. ಹೀಗೆ ಮಾಡುವುದರಿಂದ ಆರಾಮದಾಯಕ ಅನುಭವ ಪಡೆದು, ವಿಶ್ರಾಂತ ನಿದ್ರೆಗೆ ಜಾರಬಹುದು.

ಮಲಗುವ ಮುನ್ನ ವಿಷ್ಣು ಮಂತ್ರ....
ಈ ಕೆಳಗಿನ ವಿಷ್ಣು ಮಂತ್ರವನ್ನು ಜಪಿಸಿ ಮಲಗಿದರೆ ಸಕಾರಾತ್ಮಕ ಶಕ್ತಿಯು ನಿಮ್ಮನ್ನು ರಕ್ಷಿಸುವುದು.
"ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಧಾರಂ ಗಗನಸದೃಶಂ, ಮೇಘವರ್ಣಂ ಶುಭಾಂಗಮ್
ಲಕ್ಷ್ಮಿಕಾಂತಂ ಕಮಲನಯನಂ, ಯೋಗಿಹೃದ್ಧ್ಯಾನಗಮ್ಯಂ,
ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ''.



Click it and Unblock the Notifications