Latest Updates
-
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ!
ವಾಸ್ತು ಪ್ರಕಾರ, ಮನೆಯೊಳಗೆ ಬುದ್ಧನ ಪ್ರತಿಮೆ ಇಡಲು ಸೂಕ್ತ ಸ್ಥಳ ಯಾವುದು?
ಮನೆಯಲ್ಲಿ ಶಾಂತಿ, ಸಕಾರಾತ್ಮಕತೆ ನೆಲೆಸಲು ಬುದ್ಧನ ಪ್ರತಿಮೆ ಇಡಬೇಕು ಎಂಬ ನಂಬಿಕೆಯಿದೆ. ಬುದ್ಧನು ನೆಮ್ಮದಿ ಮತ್ತು ಶಾಂತತೆಯ ಪ್ರತೀಕ. ಅದಕ್ಕೆ ಸುಂದರವಾದ ಮನೆಗಳಲ್ಲಿ ಸೊಗಸಾದ ವಿವಿಧ ಬುದ್ಧನ ಮೂರ್ತಿಗಳನ್ನು ಇಡಲಾಗುತ್ತದೆ. ಆದರೆ ವಾಸ್ತು ಪ್ರಕಾರ, ಬುದ್ಧನನ್ನು ನಿಮ್ಮ ಮನೆಯ ಬೇರೆ ಬೇರೆ ಸ್ಥಳಗಳಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು ಎಂದು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ಇದು ಆರೋಗ್ಯ ಮತ್ತು ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ.
ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇರಿಸಲು ಸರಿಯಾದ ದಿಕ್ಕುಗಳನ್ನು ಈ ಕೆಳಗೆ ನೀಡಲಾಗಿದೆ:

ಪ್ರವೇಶ ದ್ವಾರ:
ನಾವು ಯಾರ ಮನೆಗಾದರೂ ಹೋದಾಗ, ಮನೆಯ ಪ್ರವೇಶದ್ವಾರದಲ್ಲಿ ನಿಲ್ಲುವುದು ರೂಢಿ. ಆದ್ದರಿಂದ ನಿಮ್ಮ ಮನೆಯ ಬಾಗಿಲಲ್ಲಿ ಬುದ್ಧನ ಪ್ರತಿಮೆಯನ್ನು ಇಡುವುದರಿಂದ ಎಲ್ಲಾ ಎದುರಾಳಿ ಶಕ್ತಿಗಳನ್ನು ಹೊರಕ್ಕೆ ತಳ್ಳಲಾಗುವುದು. ಬುದ್ಧ ಆಶೀರ್ವಾದ ಮಾಡುವ ಮೂರ್ತಿಯನ್ನು ನೆಲದಿಂದ ಮೂರು-ನಾಲ್ಕು ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಇಡಿ. ಬುದ್ಧನನ್ನು ಎಂದಿಗೂ ನೆಲದ ಮೇಲೆ ಇಡಬೇಡಿ.

ಲಿವಿಂಗ್ ರೂಮ್:
ವಾಸ್ತು ಪ್ರಕಾರ ಲಿವಿಂಗ್ ರೂಮ್ ನಲ್ಲಿ ಬುದ್ಧನ ಮೂರ್ತಿಯನ್ನು ಪಶ್ಚಿಮಕ್ಕೆ ಎದುರಾಗಿ ಇಡಿ. ಇದು ನಿಮ್ಮ ಮನೆಗೆ ಶಾಂತಿ ಮತ್ತು ಸಾಮರಸ್ಯವನ್ನು ತರಬಹುದು. ಆಂತರಿಕ ನಂಬಿಕೆಗಳು ಮತ್ತು ಮನಸ್ಸಿನ ಸ್ಥಿತಿಯನ್ನು ಸುಧಾರಿಸಲು ಸ್ವಚ್ಛವಾದ ಟೇಬಲ್ ಅಥವಾ ಕಪಾಟಿನಲ್ಲಿ ಇರಿಸಿ. ನೀವು ವಿವಿಂಗ್ ರೂಮ್ ನಲ್ಲಿ ಕುಳಿತಾಗ ಆ ಮೂರ್ತಿಯನ್ನು ನೋಡಿ, ಶಾಂತತೆ ಹಾಗೂ ನಿರಾಳತೆ ನಿಮ್ಮನ್ನು ಆವರಿಸಬಹುದು.

ಗಾರ್ಡನ್:
ಶಾಂತಿಯುತವಾದ ಸಂಜೆಯನ್ನು ನಿಮ್ಮ ತೋಟದಲ್ಲಿ ಕಳೆಯುವ ಮನಸ್ಸು ನಿಮ್ಮದಾಗಿದ್ದರೆ, ಗಾರ್ಡನ್ ನಲ್ಲಿ ಬುಧ್ಧನ ಮೂರ್ತಿಯನ್ನು ಇಡುವುದು ಒಳ್ಳೆಯದು. ಇದಕ್ಕಾಗಿ ಧ್ಯಾನ ಮಾಡುವ ಬುದ್ಧನನ್ನು ಹುಡುಕಿ. ಅದನ್ನು ನಿಮ್ಮ ಉದ್ಯಾನವನದ ಸ್ವಚ್ಛವಾದ ಮೂಲೆಯಲ್ಲಿ ಇರಿಸಿ. ಹೀಗೆ ಮಾಡಿದರೆ, ನಿಮ್ಮ ಸುಂದರವಾದ ಉದ್ಯಾನದಲ್ಲಿ ನೀವು ನಡೆದಾಡುವಾಗ ಹೆಚ್ಚು ಆರಾಮದಾಯಕ ಮತ್ತು ನಿರಾಳತೆಯನ್ನು ಅನುಭವಿಸುವಿರಿ. ಧ್ಯಾನ ಮಾಡುವಾಗ ಆಂತರಿಕ ಶಾಂತಿಯನ್ನು ಪಡೆಯಲು ಸುವಾಸಿತ ಮೇಣದ ಬತ್ತಿಗಳನ್ನು ಕೂಡ ಸೇರಿಸಬಹುದು.

ಪೂಜಾ ಅಥವಾ ಧ್ಯಾನ ಕೊಠಡಿ:
ಅನೇಕ ಜನರು ತಾವು ಪ್ರಾರ್ಥಿಸುವ ಕೋಣೆಯಲ್ಲಿ ಧ್ಯಾನ ಮಾಡುವ ಬುದ್ಧನ ಕಲಾಕೃತಿಯನ್ನು ಇಡುತ್ತಾರೆ. ಇದು ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುವುದಲ್ಲದೇ, ಸಕಾರಾತ್ಮಕ ಶಕ್ತಿ ಮತ್ತು ವಿಶ್ರಾಂತಿಯನ್ನು ನೀಡುತ್ತದೆ. ನೀವು ಮೂರ್ತಿಯನ್ನು ಪೂರ್ವಕ್ಕೆ ಎದುರಾಗಿರುವ ಮೂಲೆಯಲ್ಲಿ ಇಡಬಹುದು, ಏಕೆಂದರೆ ಅದು ಜ್ಞಾನೋದಯವನ್ನು ಪ್ರತಿನಿಧಿಸುತ್ತದೆ. ಪೂಜೆ ಮಾಡುವ ಕೋಣೆಯಲ್ಲಿ ಬುದ್ಧನನ್ನು ಸಹ ಇರಿಸಬಹುದು. ಆದಾಗ್ಯೂ, ಅದನ್ನು ಕಣ್ಣಿನ ಮಟ್ಟದಲ್ಲಿ ಇಡಲು ಮರೆಯದಿರಿ, ಪ್ರಬುದ್ಧ ಗುರುವನ್ನು ಕಣ್ಣಿನ ಮಟ್ಟಕ್ಕಿಂತ ಕೆಳಗಿಡುವುದು ಒಳ್ಳೆಯದಲ್ಲ.

ಮಕ್ಕಳ ಕೋಣೆ ಅಥವಾ ಅಧ್ಯಯನ ಕೊಠಡಿ:
ಶೈಕ್ಷಣಿಕ ಯಶಸ್ಸನ್ನು ಸಾಧಿಸಲು, ಬುದ್ಧನ ಸಣ್ಣ ತಲೆ ಇರುವ ಮೂರ್ತಿಯನ್ನು ಪೂರ್ವ ದಿಕ್ಕಿಗೆ ಮೇಜಿನ ಮೂಲೆಯಲ್ಲಿ ಇಡಿ. ಇದರಿಂದ ನಿಮ್ಮ ಮಕ್ಕಳ ಗಮನ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುವುದಲ್ಲದೇ, ಮಕ್ಕಳ ಅಭಿವೃದ್ಧಿಗೂ ಸಹಾಯ ಮಾಡುವುದು.



Click it and Unblock the Notifications