Just In
- 6 min ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 39 min ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 1 hr ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 1 hr ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾಸ್ತು ಪ್ರಕಾರ, ಮನೆಯೊಳಗೆ ಬುದ್ಧನ ಪ್ರತಿಮೆ ಇಡಲು ಸೂಕ್ತ ಸ್ಥಳ ಯಾವುದು?
ಮನೆಯಲ್ಲಿ ಶಾಂತಿ, ಸಕಾರಾತ್ಮಕತೆ ನೆಲೆಸಲು ಬುದ್ಧನ ಪ್ರತಿಮೆ ಇಡಬೇಕು ಎಂಬ ನಂಬಿಕೆಯಿದೆ. ಬುದ್ಧನು ನೆಮ್ಮದಿ ಮತ್ತು ಶಾಂತತೆಯ ಪ್ರತೀಕ. ಅದಕ್ಕೆ ಸುಂದರವಾದ ಮನೆಗಳಲ್ಲಿ ಸೊಗಸಾದ ವಿವಿಧ ಬುದ್ಧನ ಮೂರ್ತಿಗಳನ್ನು ಇಡಲಾಗುತ್ತದೆ. ಆದರೆ ವಾಸ್ತು ಪ್ರಕಾರ, ಬುದ್ಧನನ್ನು ನಿಮ್ಮ ಮನೆಯ ಬೇರೆ ಬೇರೆ ಸ್ಥಳಗಳಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು ಎಂದು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ಇದು ಆರೋಗ್ಯ ಮತ್ತು ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ.
ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇರಿಸಲು ಸರಿಯಾದ ದಿಕ್ಕುಗಳನ್ನು ಈ ಕೆಳಗೆ ನೀಡಲಾಗಿದೆ:
ಪ್ರವೇಶ ದ್ವಾರ:
ನಾವು ಯಾರ ಮನೆಗಾದರೂ ಹೋದಾಗ, ಮನೆಯ ಪ್ರವೇಶದ್ವಾರದಲ್ಲಿ ನಿಲ್ಲುವುದು ರೂಢಿ. ಆದ್ದರಿಂದ ನಿಮ್ಮ ಮನೆಯ ಬಾಗಿಲಲ್ಲಿ ಬುದ್ಧನ ಪ್ರತಿಮೆಯನ್ನು ಇಡುವುದರಿಂದ ಎಲ್ಲಾ ಎದುರಾಳಿ ಶಕ್ತಿಗಳನ್ನು ಹೊರಕ್ಕೆ ತಳ್ಳಲಾಗುವುದು. ಬುದ್ಧ ಆಶೀರ್ವಾದ ಮಾಡುವ ಮೂರ್ತಿಯನ್ನು ನೆಲದಿಂದ ಮೂರು-ನಾಲ್ಕು ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಇಡಿ. ಬುದ್ಧನನ್ನು ಎಂದಿಗೂ ನೆಲದ ಮೇಲೆ ಇಡಬೇಡಿ.
ಲಿವಿಂಗ್ ರೂಮ್:
ವಾಸ್ತು ಪ್ರಕಾರ ಲಿವಿಂಗ್ ರೂಮ್ ನಲ್ಲಿ ಬುದ್ಧನ ಮೂರ್ತಿಯನ್ನು ಪಶ್ಚಿಮಕ್ಕೆ ಎದುರಾಗಿ ಇಡಿ. ಇದು ನಿಮ್ಮ ಮನೆಗೆ ಶಾಂತಿ ಮತ್ತು ಸಾಮರಸ್ಯವನ್ನು ತರಬಹುದು. ಆಂತರಿಕ ನಂಬಿಕೆಗಳು ಮತ್ತು ಮನಸ್ಸಿನ ಸ್ಥಿತಿಯನ್ನು ಸುಧಾರಿಸಲು ಸ್ವಚ್ಛವಾದ ಟೇಬಲ್ ಅಥವಾ ಕಪಾಟಿನಲ್ಲಿ ಇರಿಸಿ. ನೀವು ವಿವಿಂಗ್ ರೂಮ್ ನಲ್ಲಿ ಕುಳಿತಾಗ ಆ ಮೂರ್ತಿಯನ್ನು ನೋಡಿ, ಶಾಂತತೆ ಹಾಗೂ ನಿರಾಳತೆ ನಿಮ್ಮನ್ನು ಆವರಿಸಬಹುದು.
ಗಾರ್ಡನ್:
ಶಾಂತಿಯುತವಾದ ಸಂಜೆಯನ್ನು ನಿಮ್ಮ ತೋಟದಲ್ಲಿ ಕಳೆಯುವ ಮನಸ್ಸು ನಿಮ್ಮದಾಗಿದ್ದರೆ, ಗಾರ್ಡನ್ ನಲ್ಲಿ ಬುಧ್ಧನ ಮೂರ್ತಿಯನ್ನು ಇಡುವುದು ಒಳ್ಳೆಯದು. ಇದಕ್ಕಾಗಿ ಧ್ಯಾನ ಮಾಡುವ ಬುದ್ಧನನ್ನು ಹುಡುಕಿ. ಅದನ್ನು ನಿಮ್ಮ ಉದ್ಯಾನವನದ ಸ್ವಚ್ಛವಾದ ಮೂಲೆಯಲ್ಲಿ ಇರಿಸಿ. ಹೀಗೆ ಮಾಡಿದರೆ, ನಿಮ್ಮ ಸುಂದರವಾದ ಉದ್ಯಾನದಲ್ಲಿ ನೀವು ನಡೆದಾಡುವಾಗ ಹೆಚ್ಚು ಆರಾಮದಾಯಕ ಮತ್ತು ನಿರಾಳತೆಯನ್ನು ಅನುಭವಿಸುವಿರಿ. ಧ್ಯಾನ ಮಾಡುವಾಗ ಆಂತರಿಕ ಶಾಂತಿಯನ್ನು ಪಡೆಯಲು ಸುವಾಸಿತ ಮೇಣದ ಬತ್ತಿಗಳನ್ನು ಕೂಡ ಸೇರಿಸಬಹುದು.
ಪೂಜಾ ಅಥವಾ ಧ್ಯಾನ ಕೊಠಡಿ:
ಅನೇಕ ಜನರು ತಾವು ಪ್ರಾರ್ಥಿಸುವ ಕೋಣೆಯಲ್ಲಿ ಧ್ಯಾನ ಮಾಡುವ ಬುದ್ಧನ ಕಲಾಕೃತಿಯನ್ನು ಇಡುತ್ತಾರೆ. ಇದು ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುವುದಲ್ಲದೇ, ಸಕಾರಾತ್ಮಕ ಶಕ್ತಿ ಮತ್ತು ವಿಶ್ರಾಂತಿಯನ್ನು ನೀಡುತ್ತದೆ. ನೀವು ಮೂರ್ತಿಯನ್ನು ಪೂರ್ವಕ್ಕೆ ಎದುರಾಗಿರುವ ಮೂಲೆಯಲ್ಲಿ ಇಡಬಹುದು, ಏಕೆಂದರೆ ಅದು ಜ್ಞಾನೋದಯವನ್ನು ಪ್ರತಿನಿಧಿಸುತ್ತದೆ. ಪೂಜೆ ಮಾಡುವ ಕೋಣೆಯಲ್ಲಿ ಬುದ್ಧನನ್ನು ಸಹ ಇರಿಸಬಹುದು. ಆದಾಗ್ಯೂ, ಅದನ್ನು ಕಣ್ಣಿನ ಮಟ್ಟದಲ್ಲಿ ಇಡಲು ಮರೆಯದಿರಿ, ಪ್ರಬುದ್ಧ ಗುರುವನ್ನು ಕಣ್ಣಿನ ಮಟ್ಟಕ್ಕಿಂತ ಕೆಳಗಿಡುವುದು ಒಳ್ಳೆಯದಲ್ಲ.
ಮಕ್ಕಳ ಕೋಣೆ ಅಥವಾ ಅಧ್ಯಯನ ಕೊಠಡಿ:
ಶೈಕ್ಷಣಿಕ ಯಶಸ್ಸನ್ನು ಸಾಧಿಸಲು, ಬುದ್ಧನ ಸಣ್ಣ ತಲೆ ಇರುವ ಮೂರ್ತಿಯನ್ನು ಪೂರ್ವ ದಿಕ್ಕಿಗೆ ಮೇಜಿನ ಮೂಲೆಯಲ್ಲಿ ಇಡಿ. ಇದರಿಂದ ನಿಮ್ಮ ಮಕ್ಕಳ ಗಮನ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುವುದಲ್ಲದೇ, ಮಕ್ಕಳ ಅಭಿವೃದ್ಧಿಗೂ ಸಹಾಯ ಮಾಡುವುದು.