Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಪೊರಕೆಯನ್ನ ಈ ದಿನ ಖರೀದಿಸಿದರೆ, ಜೀವನದಲ್ಲಿ ಎಂದಿಗೂ ಹಣದ ಕೊರತೆಯಾಗದು
ಪೊರಕೆ ಎಂಬುದು ಪ್ರತಿ ಮನೆಯಲ್ಲೂ ಸ್ವಚ್ಛಗೊಳಿಸಲು ಬಳಸುವ ವಸ್ತುವಾದರೂ ಸಹ, ಶಾಸ್ತ್ರದಲ್ಲಿ ಇದನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಹೇಳಲಾಗುತ್ತದೆ. ಅದೇ ಕಾರಣಕ್ಕೆ ಪೊರಕೆಯನ್ನು ಖರೀದಿಸಲು, ಬಳಸಲು ಕೆಲವೊಂದು ನಿಯಮಗಳನ್ನು ಮಾಡಿರುವುದು. ಇಂದು ಈ ಶಾಸ್ತ್ರ ಸಂಪ್ರದಾಯದ ಮಹತ್ವ ಕಡಿಮೆಯಾಗಿದ್ದರೂ ಸಹ, ಪೊರಕೆಗೆ ಇರುವ ದೈವಿಕ ಗುಣವಂತೂ ಸುಳ್ಳಲ್ಲ. ಅದೇ ಕಾರಣಕ್ಕೆ ಇಂದಿಗೂ ಪೊರಕೆ ತೊಳಿಯಬಾರದು, ದಾಟಬಾರದು ಎಂದು ಹೇಳುವುದು. ಇದಲ್ಲದೇ ಪೊರಕೆಗೆ ಸಂಬಂಧಿಸಿದಂತೆ ಇನ್ನೂ ಕೆಲವು ವಿಶೇಷ ನಿಯಮಗಳಿವೆ. ಇವುಗಳನ್ನು ಅನುಸರಿಸಿದರೆ, ನಿಮ್ ಜೀವನದಲ್ಲಿ ಸಂಪತ್ತಿನ ಕೊರತೆಯಾಗುವುದಿಲ್ಲ ಎಂಬುದು ನಂಬಿಕೆ.
ಶಾಸ್ತ್ರದ ಪ್ರಕಾರ, ಪೊರಕೆಗೆ ಸಂಬಂಧಿಸಿದ ನಿಯಮಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಈ ದಿನ ಪೊರಕೆ ಎಸೆಯಬೇಡಿ:
ಹಿಂದೂ ಧರ್ಮದಲ್ಲಿ, ಪೊರಕೆಯನ್ನು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಗುರುವಾರ ಅಥವಾ ಶುಕ್ರವಾರದಂದು ಹಳೆಯ ಅಥವಾ ಹಾಳಾದ ಪೊರಕೆಯನ್ನು ಮನೆಯಿಂದ ಹೊರಗೆ ಹಾಕಬಾರದು. ಏಕೆಂದರೆ ಗುರುವಾರ ಮತ್ತು ಶುಕ್ರವಾರ ಕ್ರಮವಾಗಿ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಸಂಬಂಧಿಸಿವೆ. ಆದ್ದರಿಂದ ಈ ದಿನ, ಪೊರಕೆಯನ್ನು ಮನೆಯಿಂದ ಹೊರಗೆ ಹಾಕಿದರೆ, ಲಕ್ಷ್ಮಿ ದೇವಿಯು ಕೋಪದಿಂದ ಮನೆಯಿಂದ ಹೊರಹೋಗುತ್ತಾಳೆ. ಇದಲ್ಲದೇ ವಿಷ್ಣುವಿನ ಕೃಪೆಯೂ ನಿಮ್ಮ ಮೇಲೆ ಇರಲಾರದು.

ಪೊರಕೆಯನ್ನು ಈ ದಿನ ಖರೀದಿಸಿದರೆ ಶುಭ:
ಶಾಸ್ತ್ರಗಳ ಪ್ರಕಾರ, ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಸಲು ಉತ್ತಮ ಮತ್ತು ಮಂಗಳಕರ ದಿನವಾಗಿದೆ. ಹೀಗೆ ಮಾಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದರೊಂದಿಗೆ ಸಂಪತ್ತು ಬರುತ್ತದೆ. ಅಷ್ಟೇ ಅಲ್ಲ ಲಕ್ಷ್ಮಿಯ ಕೃಪೆ ಸದಾ ಇರುತ್ತದೆ. ಅದೇ ಸಮಯದಲ್ಲಿ, ಈ ದಿನವನ್ನು ಹೊರತುಪಡಿಸಿ, ಕೃಷ್ಣ ಪಕ್ಷದಲ್ಲಿ ಪೊರಕೆ ಕೊಳ್ಳುವುದು ಒಳ್ಳೆಯದು. ಇದರಿಂದ ನಿಮ್ಮ ಮನೆಯಲ್ಲಿ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ, ಲಕ್ಷ್ಮಿ ಸದಾ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ.

ಪೊರಕೆ ಬಗ್ಗೆ ಇರುವ ನಂಬಿಕೆಗಳು:
ಶಾಸ್ತ್ರಗಳ ಪ್ರಕಾರ, ಪೊರಕೆಯನ್ನು ತುಳಿಯುವುದು ಅಥವಾ ದಾಟುವುದು ಅಶುಭವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅದು ಲಕ್ಷ್ಮಿಯ ಸಂಕೇತ. ಮಾತ್ರವಲ್ಲ, ಪೊರಕೆಯನ್ನು ಮನೆಯಲ್ಲಿ ಯಾರಿಗೂ ಕಾಣದಂತಹ ಸ್ಥಳದಲ್ಲಿ ಇಡಬೇಕು. ಹಾಗಂತ ಪೊರಕೆಯನ್ನು ಹಾಸಿಗೆಯ ಕೆಳಗೆ ಇಡುವುದು ಸರಿಯಲ್ಲ. ಮನೆ ಎದುರು ಸಹ ಪೊರಕೆ ಇಡಬಾರದು. ಜೊತೆಗೆ, ಸೂರ್ಯಾಸ್ತದ ನಂತರ ಗುಡಿಸಬಾರದು ಎಂಬ ನಂಬಿಕೆಯಿದೆ. ಏಕೆಂದರೆ ಸೂರ್ಯಾಸ್ತದ ವೇಳೆ ಲಕ್ಷ್ಮಿ ಮನೆ ಪ್ರವೇಶಿಸುವ ಸಮಯ ಹಾಗೂ ಆಕೆಯನ್ನು ಪೂಜಿಸುವ ಸಮಯ. ಈ ವೇಳೆ ಗುಡಿಸುವುದರಿಂದ ಲಕ್ಷ್ಮಿ ದೇವಿಯು ಕೋಪಗೊಂಡು ಮನೆಯಿಂದ ಹೊರಹೋಗುತ್ತಾಳೆ.



Click it and Unblock the Notifications
