Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Chanakya Niti : ಚಾಣಕ್ಯ ಪ್ರಕಾರ ಜೀವನದಲ್ಲಿ ಗೆಲ್ಲಬೇಕೆಂದರೆ ಇಂಥ ನಾಲ್ವರ ಸಂಘ ಇರಲೇಬೇಕಂತೆ
ಯಶಸ್ಸು ಯಾರಿಗೆ ತಾನೇ ಬೇಡ ಹೇಳಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಯಶಸ್ಸಿನ ಹಿಂದೆ ಬಿದ್ದವರೇ. ಸೋಲನ್ನ ಯಾರು ಬಯಸೋದಿಲ್ಲ ಆದರೂ ಸೋಲು ಪದೇ ಪದೇ ನಮ್ಮನ್ನು ಕಾಡದೇ ಬಿಡೋದಿಲ್ಲ. ಆದರೆ ಚಾಣಕ್ಯನ ಪ್ರಕಾರ ಈ ನಾಲ್ಕು ಜನ ನಿಮ್ಮ ಜೊತೆಗೆ ಇದ್ದರೆ ನೀವು ಅಸಾಧಾರಣ ಗೆಲವು ಸಾಧಿಸಬಹುದಂತೆ.

ಕೆಲವೊಂದು ಬಾರಿ ನಾನೊಬ್ಬನೇ ಏನನ್ನಾದರೂ ಸಾಧಿಸುತ್ತೇನೆ ಅಂದರೆ ಅದು ಖಂಡಿತ ಸಾಧ್ಯವಿಲ್ಲ. ನಮಗೆ ನಮ್ಮವರ ಬೆಂಬಲ ಬೇಕಾಗುತ್ತದೆ. ನೀವು ಯಾವಾಗ ಈ ವ್ಯಕ್ತಿಗಳ ಸಹಾಯ ಪಡೆಯುತ್ತಿರೋ ಗೆಲುವು ಸುಲಭ ಅಂತಾರೆ ಚಾಣಕ್ಯ. ಹಾಗಾದರೆ ಚಾಣಕ್ಯ ಹೇಳಿದ ಆ ನಾಲ್ಕು ಜನ ಯಾರು ಅನ್ನೋದನ್ನ ಹೇಳ್ತೀವಿ.
1. ಸ್ನೇಹಿತನ ಜೊತೆಗೆ ಅಧ್ಯಯನ ನಡೆಸಿ
ವಿದ್ಯಾರ್ಥಿ ಜೀವನದಲ್ಲೇ ಆಗಲಿ ಅಥವಾ ಬೇರೆ ಯಾವುದೇ ಸಂದರ್ಭದಲ್ಲೇ ಆಗಲಿ ಅಧ್ಯಯನ ನಡೆಸುವಾಗ ಗುಂಪು ಗುಂಪಾಗಿ ಕುಳಿತರೇ ಓದಿರೋದು ಸರಿಯಾಗಿ ತಲೆಗೆ ಹತ್ತೋದಿಲ್ಲ. ಓದುವ ಮಧ್ಯೆ ಅಡಚನೆ ಉಂಟಾಗುತ್ತದೆ. ಚಾಣಕ್ಯನ ಪ್ರಕಾರ ಒಬ್ಬರೇ ಕುಳಿತು ಓದುವುದು ಸರಿಯಲ್ಲ. ಕೆಲವೊಂದು ಸಾರಿ ನಮ್ಮ ಮನಸ್ಸು ಚಂಚಲವಾಗಿರುತ್ತದೆ, ಓದಿನ ಮಧ್ಯದಲ್ಲೇ ಎದ್ದು ಹೋಗುತ್ತೇವೆ. ಇನ್ನೂ ಅನುಮಾನಗಳು ಬಂದಾಗ ಬಗೆಹರಿಸಲು ಯಾರು ಇರುವುದಿಲ್ಲ. ಹೀಗಾಗಿ ಓದುವಾಗ ನಿಮ್ಮ ಸ್ನೇಹಿತ ನಿಮ್ಮ ಜೊತೆಗಿದ್ದರೆ ಉತ್ತಮ. ಆತ ನಿಮಗೆ ಓದಿನ ಪ್ರತಿ ಹಂತದಲ್ಲೂ ಸಹಾಯ ಮಾಡುತ್ತಾನೆ. ನೀವಿಬ್ಬರು ಪರಸ್ಪರ ಚರ್ಚಿಸಿ ಕೂಡ ಓದಬಹುದು.
2. ನಾಲ್ಕು ಜನರ ಜೊತೆಗೆ ಪ್ರವಾಸಕ್ಕೆ ತೆರಳಿ
ಚಾಣಕ್ಯನ ಪ್ರಕಾರ ಒಬ್ಬರೇ ಪ್ರವಾಸಕ್ಕೆ ಹೋಗುವುದು ಸರಿಯಲ್ಲ. ಒಬ್ಬರೇ ಹೋದರೆ ಅಪಾಯ ಎದುರಾಗಬಹುದು. ಹೀಗಾಗಿ ನಾಲ್ಕು ಜನರ ತಂಡದೊಂದಿಗೆ ಪ್ರವಾಸಕ್ಕೆ ಹೋಗುವುದು ತುಂಬಾನೇ ಒಳ್ಳೆಯದು. ಪ್ರವಾಸದ ಪ್ರತಿ ಹಂತದಲ್ಲೂ ನಿಮಗೆ ಸಹಾಯ ಮಾಡಲು, ನಿಮ್ಮ ಕಷ್ಟಕ್ಕೆ ಹೆಗಲು ಕೊಡಲು ಒಬ್ಬರಲ್ಲ ಒಬ್ಬರು ಇದ್ದೇ ಇರುತ್ತಾರೆ.
3. ಒಬ್ಬರೇ ತಪಸ್ಸು ಮಾಡಿ
ಚಾಣಕ್ಯನ ಪ್ರಕಾರ ತಪಸ್ಸು ಮಾಡುವಾಗ ಯಾರನ್ನೂ ಜೊತೆಗೆ ಕರೆದುಕೊಂಡು ಹೋಗಬೇಡಿ. ಒಬ್ಬರೇ ತಪಸ್ಸು ಮಾಡಿದರೆ ಉತ್ತಮ. ನಿಮ್ಮ ಸಂಗಡಿಗರು ಜೊತೆಗೆಗಿದ್ದಾಗ ನಿಮ್ಮ ಗಮನ ಬೇರೆ ಕಡೆಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ತಪಸ್ಸು ಮಾಡವಾಗ ಒಂಟಿಯಾಗಿದ್ದರೆ ಒಳ್ಳೆಯದು.
4. ಮನೋರಂಜನೆಗಾಗಿ ನಾಲ್ಕು ಜನ ಸ್ನೇಹಿತರು ಅಗತ್ಯ
ಚಾಣಕ್ಯನ ಪ್ರಕಾರ ಒಬ್ಬಂಟಿಯಾಗಿದ್ದರೆ ನಮಗೆ ಮನೋರಂಜನೆ ಪಡೆಯುವುದಕ್ಕೆ ಆಗೋದಿಲ್ಲ. ನೀವೇನಾದರೂ ಮನೋರಂಜನಾ ಕಾರ್ಯಕ್ರಮಕ್ಕೆ ಹೋಗಬೇಕೆಂದಿದ್ದರೆ ಖಂಡಿತ ನಾಲ್ಕು ಜನ ಜೊತೆಯಾಗಿಯೇ ಹೋಗಬೇಕು. ಸ್ನೇಹಿತರು ಜೊತೆಗಿದ್ದಾಗ ಮಾತ್ರ ಒಂದು ಕಾರ್ಯಕ್ರಮದಲ್ಲಿ ಎಂಜಾಯ್ ಮಾಡೋದಿಕ್ಕೆ ಸಾಧ್ಯ.
5. ದೊಡ್ಡ ಪಡೆಯ ಜೊತೆಗೆ ಯುದ್ಧಕ್ಕೆ ತೆರಳಿ
ಚಾಣಕ್ಯನ ಪ್ರಕಾರ ಯುದ್ಧಕ್ಕೆ ಹೋಗುವಾಗ ಒಬ್ಬನೇ ಹೋಗುತ್ತೇನೆ ಎಂಬ ಬಂಢ ದೈರ್ಯ ಖಂಡಿತ ಬೇಡ. ನಿಮ್ಮೊಬ್ಬರಿಂದ ಶತ್ರುಗಳನ್ನು ಗೆಲ್ಲೋದಿಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ದೊಡ್ಡ ಪಡೆಯ ಜೊತೆಗೆ ಶತ್ರು ಸೈನ್ಯದ ಜೊತೆಗೆ ಸೆಣಸಾಡಲು ಸಿದ್ಧರಾಗಿರಿ. ನಿಮ್ಮ ಸೈನ್ಯ ದೊಡ್ಡದಾಗಿದ್ದಾಗ ಮಾತ್ರ ನೀವು ಗೆಲ್ಲುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಜೀವನದಲ್ಲಿ ಜೊತೆಗಾರರು ಅನ್ನುವವರು ತುಂಬಾನೇ ಮುಖ್ಯವಾಗುತ್ತಾರೆ. ಒಬ್ಬಂಟಿಯಾಗಿ ಬದುಕುತ್ತೇನೆ ಅಂದರೆ ಖಂಡಿತ ಸಾಧ್ಯವೇ ಇಲ್ಲ. ಜೀವನದಲ್ಲಿ ಸಂತೋಷ-ದುಃಖಕ್ಕೆ ಪಾಲುದಾರರಾಗಿ ಯಾರಾದರೊಬ್ಬರು ಬೇಕೇಬೇಕಾಗುತ್ತದೆ.



Click it and Unblock the Notifications


