Latest Updates
-
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
Chanakya Niti : ಚಾಣಕ್ಯ ಪ್ರಕಾರ ಜೀವನದಲ್ಲಿ ಗೆಲ್ಲಬೇಕೆಂದರೆ ಇಂಥ ನಾಲ್ವರ ಸಂಘ ಇರಲೇಬೇಕಂತೆ
ಯಶಸ್ಸು ಯಾರಿಗೆ ತಾನೇ ಬೇಡ ಹೇಳಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಯಶಸ್ಸಿನ ಹಿಂದೆ ಬಿದ್ದವರೇ. ಸೋಲನ್ನ ಯಾರು ಬಯಸೋದಿಲ್ಲ ಆದರೂ ಸೋಲು ಪದೇ ಪದೇ ನಮ್ಮನ್ನು ಕಾಡದೇ ಬಿಡೋದಿಲ್ಲ. ಆದರೆ ಚಾಣಕ್ಯನ ಪ್ರಕಾರ ಈ ನಾಲ್ಕು ಜನ ನಿಮ್ಮ ಜೊತೆಗೆ ಇದ್ದರೆ ನೀವು ಅಸಾಧಾರಣ ಗೆಲವು ಸಾಧಿಸಬಹುದಂತೆ.

ಕೆಲವೊಂದು ಬಾರಿ ನಾನೊಬ್ಬನೇ ಏನನ್ನಾದರೂ ಸಾಧಿಸುತ್ತೇನೆ ಅಂದರೆ ಅದು ಖಂಡಿತ ಸಾಧ್ಯವಿಲ್ಲ. ನಮಗೆ ನಮ್ಮವರ ಬೆಂಬಲ ಬೇಕಾಗುತ್ತದೆ. ನೀವು ಯಾವಾಗ ಈ ವ್ಯಕ್ತಿಗಳ ಸಹಾಯ ಪಡೆಯುತ್ತಿರೋ ಗೆಲುವು ಸುಲಭ ಅಂತಾರೆ ಚಾಣಕ್ಯ. ಹಾಗಾದರೆ ಚಾಣಕ್ಯ ಹೇಳಿದ ಆ ನಾಲ್ಕು ಜನ ಯಾರು ಅನ್ನೋದನ್ನ ಹೇಳ್ತೀವಿ.
1. ಸ್ನೇಹಿತನ ಜೊತೆಗೆ ಅಧ್ಯಯನ ನಡೆಸಿ
ವಿದ್ಯಾರ್ಥಿ ಜೀವನದಲ್ಲೇ ಆಗಲಿ ಅಥವಾ ಬೇರೆ ಯಾವುದೇ ಸಂದರ್ಭದಲ್ಲೇ ಆಗಲಿ ಅಧ್ಯಯನ ನಡೆಸುವಾಗ ಗುಂಪು ಗುಂಪಾಗಿ ಕುಳಿತರೇ ಓದಿರೋದು ಸರಿಯಾಗಿ ತಲೆಗೆ ಹತ್ತೋದಿಲ್ಲ. ಓದುವ ಮಧ್ಯೆ ಅಡಚನೆ ಉಂಟಾಗುತ್ತದೆ. ಚಾಣಕ್ಯನ ಪ್ರಕಾರ ಒಬ್ಬರೇ ಕುಳಿತು ಓದುವುದು ಸರಿಯಲ್ಲ. ಕೆಲವೊಂದು ಸಾರಿ ನಮ್ಮ ಮನಸ್ಸು ಚಂಚಲವಾಗಿರುತ್ತದೆ, ಓದಿನ ಮಧ್ಯದಲ್ಲೇ ಎದ್ದು ಹೋಗುತ್ತೇವೆ. ಇನ್ನೂ ಅನುಮಾನಗಳು ಬಂದಾಗ ಬಗೆಹರಿಸಲು ಯಾರು ಇರುವುದಿಲ್ಲ. ಹೀಗಾಗಿ ಓದುವಾಗ ನಿಮ್ಮ ಸ್ನೇಹಿತ ನಿಮ್ಮ ಜೊತೆಗಿದ್ದರೆ ಉತ್ತಮ. ಆತ ನಿಮಗೆ ಓದಿನ ಪ್ರತಿ ಹಂತದಲ್ಲೂ ಸಹಾಯ ಮಾಡುತ್ತಾನೆ. ನೀವಿಬ್ಬರು ಪರಸ್ಪರ ಚರ್ಚಿಸಿ ಕೂಡ ಓದಬಹುದು.
2. ನಾಲ್ಕು ಜನರ ಜೊತೆಗೆ ಪ್ರವಾಸಕ್ಕೆ ತೆರಳಿ
ಚಾಣಕ್ಯನ ಪ್ರಕಾರ ಒಬ್ಬರೇ ಪ್ರವಾಸಕ್ಕೆ ಹೋಗುವುದು ಸರಿಯಲ್ಲ. ಒಬ್ಬರೇ ಹೋದರೆ ಅಪಾಯ ಎದುರಾಗಬಹುದು. ಹೀಗಾಗಿ ನಾಲ್ಕು ಜನರ ತಂಡದೊಂದಿಗೆ ಪ್ರವಾಸಕ್ಕೆ ಹೋಗುವುದು ತುಂಬಾನೇ ಒಳ್ಳೆಯದು. ಪ್ರವಾಸದ ಪ್ರತಿ ಹಂತದಲ್ಲೂ ನಿಮಗೆ ಸಹಾಯ ಮಾಡಲು, ನಿಮ್ಮ ಕಷ್ಟಕ್ಕೆ ಹೆಗಲು ಕೊಡಲು ಒಬ್ಬರಲ್ಲ ಒಬ್ಬರು ಇದ್ದೇ ಇರುತ್ತಾರೆ.
3. ಒಬ್ಬರೇ ತಪಸ್ಸು ಮಾಡಿ
ಚಾಣಕ್ಯನ ಪ್ರಕಾರ ತಪಸ್ಸು ಮಾಡುವಾಗ ಯಾರನ್ನೂ ಜೊತೆಗೆ ಕರೆದುಕೊಂಡು ಹೋಗಬೇಡಿ. ಒಬ್ಬರೇ ತಪಸ್ಸು ಮಾಡಿದರೆ ಉತ್ತಮ. ನಿಮ್ಮ ಸಂಗಡಿಗರು ಜೊತೆಗೆಗಿದ್ದಾಗ ನಿಮ್ಮ ಗಮನ ಬೇರೆ ಕಡೆಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ತಪಸ್ಸು ಮಾಡವಾಗ ಒಂಟಿಯಾಗಿದ್ದರೆ ಒಳ್ಳೆಯದು.
4. ಮನೋರಂಜನೆಗಾಗಿ ನಾಲ್ಕು ಜನ ಸ್ನೇಹಿತರು ಅಗತ್ಯ
ಚಾಣಕ್ಯನ ಪ್ರಕಾರ ಒಬ್ಬಂಟಿಯಾಗಿದ್ದರೆ ನಮಗೆ ಮನೋರಂಜನೆ ಪಡೆಯುವುದಕ್ಕೆ ಆಗೋದಿಲ್ಲ. ನೀವೇನಾದರೂ ಮನೋರಂಜನಾ ಕಾರ್ಯಕ್ರಮಕ್ಕೆ ಹೋಗಬೇಕೆಂದಿದ್ದರೆ ಖಂಡಿತ ನಾಲ್ಕು ಜನ ಜೊತೆಯಾಗಿಯೇ ಹೋಗಬೇಕು. ಸ್ನೇಹಿತರು ಜೊತೆಗಿದ್ದಾಗ ಮಾತ್ರ ಒಂದು ಕಾರ್ಯಕ್ರಮದಲ್ಲಿ ಎಂಜಾಯ್ ಮಾಡೋದಿಕ್ಕೆ ಸಾಧ್ಯ.
5. ದೊಡ್ಡ ಪಡೆಯ ಜೊತೆಗೆ ಯುದ್ಧಕ್ಕೆ ತೆರಳಿ
ಚಾಣಕ್ಯನ ಪ್ರಕಾರ ಯುದ್ಧಕ್ಕೆ ಹೋಗುವಾಗ ಒಬ್ಬನೇ ಹೋಗುತ್ತೇನೆ ಎಂಬ ಬಂಢ ದೈರ್ಯ ಖಂಡಿತ ಬೇಡ. ನಿಮ್ಮೊಬ್ಬರಿಂದ ಶತ್ರುಗಳನ್ನು ಗೆಲ್ಲೋದಿಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ದೊಡ್ಡ ಪಡೆಯ ಜೊತೆಗೆ ಶತ್ರು ಸೈನ್ಯದ ಜೊತೆಗೆ ಸೆಣಸಾಡಲು ಸಿದ್ಧರಾಗಿರಿ. ನಿಮ್ಮ ಸೈನ್ಯ ದೊಡ್ಡದಾಗಿದ್ದಾಗ ಮಾತ್ರ ನೀವು ಗೆಲ್ಲುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಜೀವನದಲ್ಲಿ ಜೊತೆಗಾರರು ಅನ್ನುವವರು ತುಂಬಾನೇ ಮುಖ್ಯವಾಗುತ್ತಾರೆ. ಒಬ್ಬಂಟಿಯಾಗಿ ಬದುಕುತ್ತೇನೆ ಅಂದರೆ ಖಂಡಿತ ಸಾಧ್ಯವೇ ಇಲ್ಲ. ಜೀವನದಲ್ಲಿ ಸಂತೋಷ-ದುಃಖಕ್ಕೆ ಪಾಲುದಾರರಾಗಿ ಯಾರಾದರೊಬ್ಬರು ಬೇಕೇಬೇಕಾಗುತ್ತದೆ.



Click it and Unblock the Notifications














