Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
Chanakya Niti : ಚಾಣಕ್ಯ ಪ್ರಕಾರ ಜೀವನದಲ್ಲಿ ಗೆಲ್ಲಬೇಕೆಂದರೆ ಇಂಥ ನಾಲ್ವರ ಸಂಘ ಇರಲೇಬೇಕಂತೆ
ಯಶಸ್ಸು ಯಾರಿಗೆ ತಾನೇ ಬೇಡ ಹೇಳಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಯಶಸ್ಸಿನ ಹಿಂದೆ ಬಿದ್ದವರೇ. ಸೋಲನ್ನ ಯಾರು ಬಯಸೋದಿಲ್ಲ ಆದರೂ ಸೋಲು ಪದೇ ಪದೇ ನಮ್ಮನ್ನು ಕಾಡದೇ ಬಿಡೋದಿಲ್ಲ. ಆದರೆ ಚಾಣಕ್ಯನ ಪ್ರಕಾರ ಈ ನಾಲ್ಕು ಜನ ನಿಮ್ಮ ಜೊತೆಗೆ ಇದ್ದರೆ ನೀವು ಅಸಾಧಾರಣ ಗೆಲವು ಸಾಧಿಸಬಹುದಂತೆ.

ಕೆಲವೊಂದು ಬಾರಿ ನಾನೊಬ್ಬನೇ ಏನನ್ನಾದರೂ ಸಾಧಿಸುತ್ತೇನೆ ಅಂದರೆ ಅದು ಖಂಡಿತ ಸಾಧ್ಯವಿಲ್ಲ. ನಮಗೆ ನಮ್ಮವರ ಬೆಂಬಲ ಬೇಕಾಗುತ್ತದೆ. ನೀವು ಯಾವಾಗ ಈ ವ್ಯಕ್ತಿಗಳ ಸಹಾಯ ಪಡೆಯುತ್ತಿರೋ ಗೆಲುವು ಸುಲಭ ಅಂತಾರೆ ಚಾಣಕ್ಯ. ಹಾಗಾದರೆ ಚಾಣಕ್ಯ ಹೇಳಿದ ಆ ನಾಲ್ಕು ಜನ ಯಾರು ಅನ್ನೋದನ್ನ ಹೇಳ್ತೀವಿ.
1. ಸ್ನೇಹಿತನ ಜೊತೆಗೆ ಅಧ್ಯಯನ ನಡೆಸಿ
ವಿದ್ಯಾರ್ಥಿ ಜೀವನದಲ್ಲೇ ಆಗಲಿ ಅಥವಾ ಬೇರೆ ಯಾವುದೇ ಸಂದರ್ಭದಲ್ಲೇ ಆಗಲಿ ಅಧ್ಯಯನ ನಡೆಸುವಾಗ ಗುಂಪು ಗುಂಪಾಗಿ ಕುಳಿತರೇ ಓದಿರೋದು ಸರಿಯಾಗಿ ತಲೆಗೆ ಹತ್ತೋದಿಲ್ಲ. ಓದುವ ಮಧ್ಯೆ ಅಡಚನೆ ಉಂಟಾಗುತ್ತದೆ. ಚಾಣಕ್ಯನ ಪ್ರಕಾರ ಒಬ್ಬರೇ ಕುಳಿತು ಓದುವುದು ಸರಿಯಲ್ಲ. ಕೆಲವೊಂದು ಸಾರಿ ನಮ್ಮ ಮನಸ್ಸು ಚಂಚಲವಾಗಿರುತ್ತದೆ, ಓದಿನ ಮಧ್ಯದಲ್ಲೇ ಎದ್ದು ಹೋಗುತ್ತೇವೆ. ಇನ್ನೂ ಅನುಮಾನಗಳು ಬಂದಾಗ ಬಗೆಹರಿಸಲು ಯಾರು ಇರುವುದಿಲ್ಲ. ಹೀಗಾಗಿ ಓದುವಾಗ ನಿಮ್ಮ ಸ್ನೇಹಿತ ನಿಮ್ಮ ಜೊತೆಗಿದ್ದರೆ ಉತ್ತಮ. ಆತ ನಿಮಗೆ ಓದಿನ ಪ್ರತಿ ಹಂತದಲ್ಲೂ ಸಹಾಯ ಮಾಡುತ್ತಾನೆ. ನೀವಿಬ್ಬರು ಪರಸ್ಪರ ಚರ್ಚಿಸಿ ಕೂಡ ಓದಬಹುದು.
2. ನಾಲ್ಕು ಜನರ ಜೊತೆಗೆ ಪ್ರವಾಸಕ್ಕೆ ತೆರಳಿ
ಚಾಣಕ್ಯನ ಪ್ರಕಾರ ಒಬ್ಬರೇ ಪ್ರವಾಸಕ್ಕೆ ಹೋಗುವುದು ಸರಿಯಲ್ಲ. ಒಬ್ಬರೇ ಹೋದರೆ ಅಪಾಯ ಎದುರಾಗಬಹುದು. ಹೀಗಾಗಿ ನಾಲ್ಕು ಜನರ ತಂಡದೊಂದಿಗೆ ಪ್ರವಾಸಕ್ಕೆ ಹೋಗುವುದು ತುಂಬಾನೇ ಒಳ್ಳೆಯದು. ಪ್ರವಾಸದ ಪ್ರತಿ ಹಂತದಲ್ಲೂ ನಿಮಗೆ ಸಹಾಯ ಮಾಡಲು, ನಿಮ್ಮ ಕಷ್ಟಕ್ಕೆ ಹೆಗಲು ಕೊಡಲು ಒಬ್ಬರಲ್ಲ ಒಬ್ಬರು ಇದ್ದೇ ಇರುತ್ತಾರೆ.
3. ಒಬ್ಬರೇ ತಪಸ್ಸು ಮಾಡಿ
ಚಾಣಕ್ಯನ ಪ್ರಕಾರ ತಪಸ್ಸು ಮಾಡುವಾಗ ಯಾರನ್ನೂ ಜೊತೆಗೆ ಕರೆದುಕೊಂಡು ಹೋಗಬೇಡಿ. ಒಬ್ಬರೇ ತಪಸ್ಸು ಮಾಡಿದರೆ ಉತ್ತಮ. ನಿಮ್ಮ ಸಂಗಡಿಗರು ಜೊತೆಗೆಗಿದ್ದಾಗ ನಿಮ್ಮ ಗಮನ ಬೇರೆ ಕಡೆಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ತಪಸ್ಸು ಮಾಡವಾಗ ಒಂಟಿಯಾಗಿದ್ದರೆ ಒಳ್ಳೆಯದು.
4. ಮನೋರಂಜನೆಗಾಗಿ ನಾಲ್ಕು ಜನ ಸ್ನೇಹಿತರು ಅಗತ್ಯ
ಚಾಣಕ್ಯನ ಪ್ರಕಾರ ಒಬ್ಬಂಟಿಯಾಗಿದ್ದರೆ ನಮಗೆ ಮನೋರಂಜನೆ ಪಡೆಯುವುದಕ್ಕೆ ಆಗೋದಿಲ್ಲ. ನೀವೇನಾದರೂ ಮನೋರಂಜನಾ ಕಾರ್ಯಕ್ರಮಕ್ಕೆ ಹೋಗಬೇಕೆಂದಿದ್ದರೆ ಖಂಡಿತ ನಾಲ್ಕು ಜನ ಜೊತೆಯಾಗಿಯೇ ಹೋಗಬೇಕು. ಸ್ನೇಹಿತರು ಜೊತೆಗಿದ್ದಾಗ ಮಾತ್ರ ಒಂದು ಕಾರ್ಯಕ್ರಮದಲ್ಲಿ ಎಂಜಾಯ್ ಮಾಡೋದಿಕ್ಕೆ ಸಾಧ್ಯ.
5. ದೊಡ್ಡ ಪಡೆಯ ಜೊತೆಗೆ ಯುದ್ಧಕ್ಕೆ ತೆರಳಿ
ಚಾಣಕ್ಯನ ಪ್ರಕಾರ ಯುದ್ಧಕ್ಕೆ ಹೋಗುವಾಗ ಒಬ್ಬನೇ ಹೋಗುತ್ತೇನೆ ಎಂಬ ಬಂಢ ದೈರ್ಯ ಖಂಡಿತ ಬೇಡ. ನಿಮ್ಮೊಬ್ಬರಿಂದ ಶತ್ರುಗಳನ್ನು ಗೆಲ್ಲೋದಿಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ದೊಡ್ಡ ಪಡೆಯ ಜೊತೆಗೆ ಶತ್ರು ಸೈನ್ಯದ ಜೊತೆಗೆ ಸೆಣಸಾಡಲು ಸಿದ್ಧರಾಗಿರಿ. ನಿಮ್ಮ ಸೈನ್ಯ ದೊಡ್ಡದಾಗಿದ್ದಾಗ ಮಾತ್ರ ನೀವು ಗೆಲ್ಲುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಜೀವನದಲ್ಲಿ ಜೊತೆಗಾರರು ಅನ್ನುವವರು ತುಂಬಾನೇ ಮುಖ್ಯವಾಗುತ್ತಾರೆ. ಒಬ್ಬಂಟಿಯಾಗಿ ಬದುಕುತ್ತೇನೆ ಅಂದರೆ ಖಂಡಿತ ಸಾಧ್ಯವೇ ಇಲ್ಲ. ಜೀವನದಲ್ಲಿ ಸಂತೋಷ-ದುಃಖಕ್ಕೆ ಪಾಲುದಾರರಾಗಿ ಯಾರಾದರೊಬ್ಬರು ಬೇಕೇಬೇಕಾಗುತ್ತದೆ.



Click it and Unblock the Notifications



