Latest Updates
-
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ
ಹನುಮ ಜಯಂತಿಯಂದು ಈ ಕ್ರಮಗಳನ್ನು ಮಾಡುವುದರಿಂದ ರಾಹು-ಕೇತು, ಶನಿಯ ಕೆಟ್ಟ ಪ್ರಭಾವದಿಂದ ಪಾರಾಗಬಹುದು
ಹಿಂದೂ ಕ್ಯಾಲೆಂಡರ್ನ ಮೊದಲ ತಿಂಗಳು ಅಂದರೆ ಚೈತ್ರ ಮಾಸ ಬಹಳ ವಿಶೇಷವಾಗಿದೆ. ಇದು ಹಿಂದೂ ಹೊಸ ವರ್ಷ ಪ್ರಾರಂಭವಾಗುವ ತಿಂಗಳು. ಚೈತ್ರ ನವರಾತ್ರಿ, ಶ್ರೀರಾಮನ ಜನ್ಮದಿನವೂ ಇದೇ ತಿಂಗಳಿನಲ್ಲಿ ಬರುತ್ತದೆ. ಅಷ್ಟೇ ಅಲ್ಲ, ಶ್ರೀರಾಮನ ಭಕ್ತ ಹನುಮನ ಜಯಂತಿಯೂ ಇದೇ ತಿಂಗಳಲ್ಲಿ ನಡೆಯುತ್ತದೆ. ಹನುಮ ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಜನಿಸಿದ. ಈ ವರ್ಷ ಹನುಮ ಜಯಂತಿಯು 16ನೇ ಏಪ್ರಿಲ್ 2022 ರ ಶನಿವಾರದಂದು ಬರುತ್ತದೆ.

ಏಪ್ರಿಲ್ ತಿಂಗಳಿನಲ್ಲಿ ಶನಿ, ರಾಹು-ಕೇತುವಿನ ರಾಶಿ ಬದಲಾವಣೆ:
ಜ್ಯೋತಿಷ್ಯದ ದೃಷ್ಟಿಕೋನದಿಂದ, ಏಪ್ರಿಲ್ ತಿಂಗಳು ಅನೇಕ ಬದಲಾವಣೆಗಳನ್ನು ತಂದಿದೆ. ಈ ತಿಂಗಳು ಶನಿ, ರಾಹು-ಕೇತುಗಳಂತಹ ಗ್ರಹಗಳು ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತಿದ್ದು, ಅದರಿಂದ ಶುಭ-ಆಶುಭ ಫಲಿತಾಂಶಗಳು ಸಿಗಲಿದೆ. ರಾಹು-ಕೇತು 12 ಏಪ್ರಿಲ್ 2022 ರಂದು ರಾಶಿಚಕ್ರವನ್ನು ಬದಲಾಯಿಸಿದರೆ, ಶನಿಯು 29 ಏಪ್ರಿಲ್ 2022 ರಂದು ಸ್ಥಾನ ಬದಲಾವಣೆ ಮಾಡಲಿದೆ. ಜ್ಯೋತಿಷ್ಯದ ಪ್ರಕಾರ, ಈ ಕ್ರೂರ ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯು ಅನೇಕ ರಾಶಿಚಕ್ರದ ಮೇಲೆ ಭಾರೀ ಪ್ರಭಾವ ಬೀರಲಿದೆ. ಈ ಸಂದರ್ಭದಲ್ಲಿ, ಈ ಗ್ರಹಗಳಲ್ಲಿ ಕಂಡುಬರುವ ಅಶುಭ ಫಲಗಳನ್ನು ಗುಣಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಗ್ರಹಗಳ ಸ್ಥಾನ ಬದಲಾವಣೆಯಿಂದ ಅಶುಭ ಫಲಗಳನ್ನು ತಪ್ಪಿಸಲು ಹನುಮಂತನಿಗೆ ಮಾಡಬೇಕಾದ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ. ಅವುಗಳೆಂದರೆ:
ಸಾಡೇ ಸಾತಿಯಿರುವವರು ಹೀಗೆ ಮಾಡಿ:
ಹನುಮನ ಜಯಂತಿಯಂದು ಹನುಮಾನ್ ಚಾಲೀಸಾವನ್ನು 11 ಬಾರಿ ಪಠಿಸಬೇಕು. ಹನುಮಾನ್ ದೇವಸ್ಥಾನಕ್ಕೆ ಹೋಗಿ ವಿಗ್ರಹದ ಮುಂದೆ ಕುಳಿತು ಪಠಿಸಿ. ಹಾಗೆ ಮಾಡುವುದರಿಂದ ಶನಿ ದೈಯ್ಯ ಅಥವಾ ಸಾಡೇ ಸಾತಿಯಿಂದ ಬಳಲುತ್ತಿರುವವರಿಗೆ ಸಾಕಷ್ಟು ಪರಿಹಾರ ದೊರೆಯುತ್ತದೆ.

ಜೀವನದಲ್ಲಿ ಶಾಂತಿ ನೆಲೆಸಲು:
ಹನುಮಂತನಿಗೆ ಕಡಲೆ ಹಿಟ್ಟಿನ ಲಡ್ಡು ಎಂದರೆ ತುಂಬಾ ಇಷ್ಟ. ಹನುಮ ಜಯಂತಿಯ ದಿನ ಈ ಹಿಟ್ಟಿನ ಲಡ್ಡುವನ್ನು ನೈವೇದ್ಯ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಜೀವನಕ್ಕೆ ಸಂತೋಷ ಸಿಗುತ್ತದೆ. ಜೊತೆಗೆ ಸಂಕಟಗಳೆಲ್ಲವೂ ಮರೆಯಾಗುವುದು.

ಬಿಕ್ಕಟ್ಟುಗಳಿಂದ ಮುಕ್ತಿ ಪಡೆಯಲು:
ಹನುಮನಿಗೆ ಸಿಂಧೂರವನ್ನು ಅರ್ಪಿಸುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಹನುಮ ಜಯಂತಿಯ ದಿನ ಸಿಂಧೂರವನ್ನು ಬಜರಂಗಬಲಿ ಅರ್ಪಿಸಬೇಕು. ಮಲ್ಲಿಗೆ ಹೂವಿನ ಮಾಲೆ ಮತ್ತು ಕೆಂಪು ವಸ್ತ್ರಗಳನ್ನು ಸಹ ಅರ್ಪಿಸಿ. ಹನುಮ ಜಯಂತಿಯಿಂದ ಆರಂಭವಾಗಿ ಮುಂದಿನ 11 ಹುಣ್ಣಿಮೆಗಳವರೆಗೆ ಈ ಪರಿಹಾರವನ್ನು ಮಾಡಿದರೆ ದೊಡ್ಡ ಬಿಕ್ಕಟ್ಟುಗಳಿಂದ ಮುಕ್ತಿ ಪಡೆಯಬಹುದು.

ಯಶಸ್ಸು ದೊರೆಯಲು:
ಹನುಮ ಅಂದರೆ, ಕೆಂಪು ವಸ್ತ್ರ ನೆನಪಾಗುವುದು ಸಹಜ. ಜೊತೆಗೆ ಧೈರ್ಯ ಸಾಹಸದ ಸಂಕೇತ. ಇದರ ಸಾಂಕೇತಿಕವೇ ತ್ರಿಕೋನ ಕೆಂಪು ಧ್ವಜ. ಆದ್ದರಿಂದ ಈ ಹನುಮ ಜಯಂತಿಯಂದು ಹನುಮನ ದೇವಸ್ಥಾನದಲ್ಲಿ ತ್ರಿಕೋನ ಕೆಂಪು ಧ್ವಜವನ್ನು ಹಾರಿಸಬೇಕು. ಹೀಗೆ ಮಾಡುವುದರಿಂದ ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸು ಸಿಗುತ್ತದೆ.



Click it and Unblock the Notifications











