Just In
- 8 min ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 42 min ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 1 hr ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 2 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಬ್ಬಗಳಿಗೆ ಮುನ್ನುಡಿಯಾಗಿ ಬರುತ್ತಿರುವ ನಾಗರಪಂಚಮಿ
ಹಬ್ಬಗಳ ಮುನ್ನುಡಿಯಂತೆ ಸಾಲು- ಸಾಲು ಹಬ್ಬಗಳನ್ನು ಹೊತ್ತು ಬರುವ ನಾಗರಪಂಚಮಿಯೆಂದರೆ ಹಿಂದೂಗಳಿಗೆ ಎಲ್ಲಿಲ್ಲದ ಸಂಭ್ರಮ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸುವ ಈ ಹಬ್ಬದಲ್ಲಿ ಸಹೋದರ-ಸಹೋದರಿಯ ಸಂಬಂಧಕ್ಕೂ ಹೆಚ್ಚು ಒತ್ತು ನೀಡಲಾಗುವುದು.
ಮದುವೆಯಾದ ಹೆಣ್ಣು ಮಕ್ಕಳಿಗೆ ತಾಯಿ ಮನೆಗೆ ಹೋಗಿ ತಮ್ಮ ಸಹೋದರನ ಬೆನ್ನಿನ ಮೇಲೆ ತಾಳೆ ಹೂವಿನಿಂದ ಹಾಲು ಚಿಮಿಕಿಸಿ, ಅವನನ್ನು ಹಾರೈಸಿ, ಅವನು ಕೊಟ್ಟ ಉಡುಗೊರೆ ಸ್ವೀಕರಿಸಿ ತನ್ನ ತವರಿನವರ ಜೊತೆ ಸ್ವಲ್ಪ ಸಮಯ ಕಳೆದು ಬರುವ ಸಂಭ್ರಮ. ಮಕ್ಕಳಿಗಂತೂ ಮನೆಯಲ್ಲಿ ಮಾಡುವ ಎಳ್ಳುಂಡೆ, ತಂಬಿಟ್ಟು ಈ ರೀತಿಯ ಸಿಹಿ ತಿಂಡಿಗಳನ್ನು ಸವಿಯುವ ಸಂಭ್ರಮ, ಒಟ್ಟಿನಲ್ಲಿ ಸಂಭ್ರಮ, ಸಡಗರದ ಹಬ್ಬವನ್ನು ಸ್ವಾಗತಿಸಲು ಇಡೀ ನಾಡೇ ಸಿದ್ಧವಾಗಿದೆ.
ನಾಗರ ಹಾವಿನ್ನು ಕಂಡರೆ ಭಯ ಪಡದವರು ತುಂಬಾ ವಿರಳ, ಆದರೆ ಈ ದಿನದಂದು ತಮ್ಮ ಭಯವನ್ನು ಬದಿಗಿರಿಸಿ, ನಾಗ ರಾಜನಿಗೆ ಭಯ, ಭಕ್ತಿಯಿಂದ ಹಾಲು ಎರೆದರೆ ನಮಗೆ ಏನೂ ಕೆಡಕು ಮಾಡುವುದಿಲ್ಲ, ನಮ್ಮನ್ನು ಹಾರೈಸುತ್ತಾನೆ ಎಂಬ ನಂಬಿಕೆಯೇ ಧೈರ್ಯವಾಗಿ ಮಾರ್ಪಟ್ಟು ಹಾವಿನ ಹುತ್ತಕ್ಕೆ ಹಾಲು ಎರೆದು ಬರುತ್ತಾರೆ! ಊರಿನಲ್ಲಿರುವ ನಾಗರ ಹಾವಿನ ಮೂರ್ತಿಗಳಿಗೂ ಹಾಲಿನ ಅಭಿಷೇಕ ಮಾಡಿಸಲಾಗುವುದು.
ನಾಗದೋಷವಿದ್ದರೆ ಕೆಡಕು ಉಂಟಾಗುತ್ತದೆ ಎಂಬ ನಂಬಿಕೆ ಇರುವವರಿಗೆ ತಮ್ಮ ನಾಗದೋಷ ಪರಿಹಾರಕ್ಕೆ ಇಂದು ಸುದಿನ. ತಾವು ನಾಗದೋಷದಿಂದ ಮುಕ್ತರಾಗಲು ಈ ದಿನ ನಾಗಪೂಜೆ ಮಾಡಿಸುತ್ತಾರೆ. ವಾಸುಕಿ, ತಕ್ಷಕ, ಕಾಲಿಯ, ಮಣಿಭದ್ರಕ, ಐರಾವತ, ಧೃತರಾಷ್ಟ್ರ, ಕಾರ್ಕೋಟಕ ಮತ್ತು ಧನಂಜಯ ಎಂಬ ನಾಗದೇವತೆಗಳಿಗೆ ಈ ದಿನ ವಿಶೇಷ ಪೂಜೆ ಸಲ್ಲಿಸಲಾಗುವುದು.
ನಾಗರ
ಪಂಚಮಿಯೆಂದು
ನಮ್ಮದೊಂದು
ಕೋರಿಕೆ
ನಾಗರ
ಹಾವಿಗೆ
ಹಾಲೆರೆದರೆ
ಒಳ್ಳೆಯದಾಗುತ್ತದೆ
ಎಂಬ
ನಂಬಿಕೆಯಿಂದ
ಪೂಜಿಸುವ
ನಾವು,
ನಿಜವಾದ
ನಾಗರಾಜ
ಕಾಣಿಸಿದಾಗ
ಭಯಬಿದ್ದು
ಅದನ್ನು
ಸಾಯಿಸುವ
ನಿರ್ಧಾರಕ್ಕೆ
ಬರಬಾರದು,
ನಾವು
ಭಯಬಿದ್ದು
ಕಿರುಚಾಡಲು
ಪ್ರಾರಂಭಿಸಿದರೆ
ಹಾವು
ಕೂಡ
ಭಯಬಿದ್ದು
ನಮ್ಮತ್ತ
ಹರಿದು
ಬರಬಹುದು,
ಆದ್ದರಿಂದ
ಹಾವು
ಕಾಣಿಸಿದರೆ
ಅದನ್ನು
ಕೊಲ್ಲುವ
ಬದಲು
ಹಾವು
ಹಿಡಿಯುವವರಿಗೆ
ಫೋನ್
ಮಾಡಿ,
ಹಾವನ್ನು
ಹಿಡಿಯುವ
ಪ್ರವೀಣರು
ಸಾಕಷ್ಟು
ಮಂದಿ
ನಮ್ಮ
ನಡುವೆ
ಇದ್ದಾರೆ,
ಅವರು
ಅದನ್ನು
ಹಿಡಿದು
ಕಾಡಿಗೆ
ಬಿಡುತ್ತಾರೆ.
ಇದರಿಂದ
ನಿಮಗೂ,
ಹಾವಿಗೂ
ಯಾವುದೇ
ಅಪಾಯ
ಉಂಟಾಗುವುದಿಲ್ಲ.
ಈ ನಾಗರ ಪಂಚಮಿ ಹಬ್ಬ ನಿಮಗೆ ಶುಭವನ್ನು ತರಲಿ- ಕನ್ನಡ ಬೋಲ್ಡ್ ಸ್ಕೈ