Latest Updates
-
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ!
ಹಬ್ಬಗಳಿಗೆ ಮುನ್ನುಡಿಯಾಗಿ ಬರುತ್ತಿರುವ ನಾಗರಪಂಚಮಿ
ಹಬ್ಬಗಳ ಮುನ್ನುಡಿಯಂತೆ ಸಾಲು- ಸಾಲು ಹಬ್ಬಗಳನ್ನು ಹೊತ್ತು ಬರುವ ನಾಗರಪಂಚಮಿಯೆಂದರೆ ಹಿಂದೂಗಳಿಗೆ ಎಲ್ಲಿಲ್ಲದ ಸಂಭ್ರಮ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸುವ ಈ ಹಬ್ಬದಲ್ಲಿ ಸಹೋದರ-ಸಹೋದರಿಯ ಸಂಬಂಧಕ್ಕೂ ಹೆಚ್ಚು ಒತ್ತು ನೀಡಲಾಗುವುದು.
ಮದುವೆಯಾದ ಹೆಣ್ಣು ಮಕ್ಕಳಿಗೆ ತಾಯಿ ಮನೆಗೆ ಹೋಗಿ ತಮ್ಮ ಸಹೋದರನ ಬೆನ್ನಿನ ಮೇಲೆ ತಾಳೆ ಹೂವಿನಿಂದ ಹಾಲು ಚಿಮಿಕಿಸಿ, ಅವನನ್ನು ಹಾರೈಸಿ, ಅವನು ಕೊಟ್ಟ ಉಡುಗೊರೆ ಸ್ವೀಕರಿಸಿ ತನ್ನ ತವರಿನವರ ಜೊತೆ ಸ್ವಲ್ಪ ಸಮಯ ಕಳೆದು ಬರುವ ಸಂಭ್ರಮ. ಮಕ್ಕಳಿಗಂತೂ ಮನೆಯಲ್ಲಿ ಮಾಡುವ ಎಳ್ಳುಂಡೆ, ತಂಬಿಟ್ಟು ಈ ರೀತಿಯ ಸಿಹಿ ತಿಂಡಿಗಳನ್ನು ಸವಿಯುವ ಸಂಭ್ರಮ, ಒಟ್ಟಿನಲ್ಲಿ ಸಂಭ್ರಮ, ಸಡಗರದ ಹಬ್ಬವನ್ನು ಸ್ವಾಗತಿಸಲು ಇಡೀ ನಾಡೇ ಸಿದ್ಧವಾಗಿದೆ.

ನಾಗರ ಹಾವಿನ್ನು ಕಂಡರೆ ಭಯ ಪಡದವರು ತುಂಬಾ ವಿರಳ, ಆದರೆ ಈ ದಿನದಂದು ತಮ್ಮ ಭಯವನ್ನು ಬದಿಗಿರಿಸಿ, ನಾಗ ರಾಜನಿಗೆ ಭಯ, ಭಕ್ತಿಯಿಂದ ಹಾಲು ಎರೆದರೆ ನಮಗೆ ಏನೂ ಕೆಡಕು ಮಾಡುವುದಿಲ್ಲ, ನಮ್ಮನ್ನು ಹಾರೈಸುತ್ತಾನೆ ಎಂಬ ನಂಬಿಕೆಯೇ ಧೈರ್ಯವಾಗಿ ಮಾರ್ಪಟ್ಟು ಹಾವಿನ ಹುತ್ತಕ್ಕೆ ಹಾಲು ಎರೆದು ಬರುತ್ತಾರೆ! ಊರಿನಲ್ಲಿರುವ ನಾಗರ ಹಾವಿನ ಮೂರ್ತಿಗಳಿಗೂ ಹಾಲಿನ ಅಭಿಷೇಕ ಮಾಡಿಸಲಾಗುವುದು.
ನಾಗದೋಷವಿದ್ದರೆ ಕೆಡಕು ಉಂಟಾಗುತ್ತದೆ ಎಂಬ ನಂಬಿಕೆ ಇರುವವರಿಗೆ ತಮ್ಮ ನಾಗದೋಷ ಪರಿಹಾರಕ್ಕೆ ಇಂದು ಸುದಿನ. ತಾವು ನಾಗದೋಷದಿಂದ ಮುಕ್ತರಾಗಲು ಈ ದಿನ ನಾಗಪೂಜೆ ಮಾಡಿಸುತ್ತಾರೆ. ವಾಸುಕಿ, ತಕ್ಷಕ, ಕಾಲಿಯ, ಮಣಿಭದ್ರಕ, ಐರಾವತ, ಧೃತರಾಷ್ಟ್ರ, ಕಾರ್ಕೋಟಕ ಮತ್ತು ಧನಂಜಯ ಎಂಬ ನಾಗದೇವತೆಗಳಿಗೆ ಈ ದಿನ ವಿಶೇಷ ಪೂಜೆ ಸಲ್ಲಿಸಲಾಗುವುದು.
ನಾಗರ ಪಂಚಮಿಯೆಂದು ನಮ್ಮದೊಂದು ಕೋರಿಕೆ
ನಾಗರ ಹಾವಿಗೆ ಹಾಲೆರೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಪೂಜಿಸುವ ನಾವು, ನಿಜವಾದ ನಾಗರಾಜ ಕಾಣಿಸಿದಾಗ ಭಯಬಿದ್ದು ಅದನ್ನು ಸಾಯಿಸುವ ನಿರ್ಧಾರಕ್ಕೆ ಬರಬಾರದು, ನಾವು ಭಯಬಿದ್ದು ಕಿರುಚಾಡಲು ಪ್ರಾರಂಭಿಸಿದರೆ ಹಾವು ಕೂಡ ಭಯಬಿದ್ದು ನಮ್ಮತ್ತ ಹರಿದು ಬರಬಹುದು, ಆದ್ದರಿಂದ ಹಾವು ಕಾಣಿಸಿದರೆ ಅದನ್ನು ಕೊಲ್ಲುವ ಬದಲು ಹಾವು ಹಿಡಿಯುವವರಿಗೆ ಫೋನ್ ಮಾಡಿ, ಹಾವನ್ನು ಹಿಡಿಯುವ ಪ್ರವೀಣರು ಸಾಕಷ್ಟು ಮಂದಿ ನಮ್ಮ ನಡುವೆ ಇದ್ದಾರೆ, ಅವರು ಅದನ್ನು ಹಿಡಿದು ಕಾಡಿಗೆ ಬಿಡುತ್ತಾರೆ. ಇದರಿಂದ ನಿಮಗೂ, ಹಾವಿಗೂ ಯಾವುದೇ ಅಪಾಯ ಉಂಟಾಗುವುದಿಲ್ಲ.
ಈ ನಾಗರ ಪಂಚಮಿ ಹಬ್ಬ ನಿಮಗೆ ಶುಭವನ್ನು ತರಲಿ- ಕನ್ನಡ ಬೋಲ್ಡ್ ಸ್ಕೈ



Click it and Unblock the Notifications