Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಆಡಿ ಕಾರಿನಲ್ಲಿ ಸೊಪ್ಪು ಮಾರುವ ಕೇರಳ ವ್ಯಕ್ತಿಯ ವೀಡಿಯೋ ವೈರಲ್
3-4 ದಿನದಿಂದ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಪ್ರತಿಯೊಬ್ಬರಿಗೂ ಸ್ಪೂರ್ತಿ ತುಂಬುವ ವೀಡಿಯೋ ಅದು. ಯಾವ ಕೆಲಸವೂ ಕಡಿಮೆಯಲ್ಲ, ಶ್ರದ್ಧೆಯಿಂದ ನಾವುದನ್ನು ಮಾಡಬೇಕಷ್ಟೇ , ಅದಕ್ಕೆ ಈ ವ್ಯಕ್ತಿ ಸಾಕ್ಷಿ. ಸ್ವಲ್ಪ ಹಣ ಬಂದಾಗ ಆ ಕೆಲಸ ನನ್ನ ಸ್ಟೇಟಸ್ಗೆ ಸೂಟ್ ಅಲ್ಲ ಎಂದು ಭಾವಿಸುವವರೇ ಅಧಿಕ. ಆದರೆ ಇಲ್ಲೊಬ್ಬ ವ್ಯಕ್ತಿ ಆಡಿ ಕಾರಿನಲ್ಲಿ ಬಂದು ಸೊಪ್ಪು ಮಾರಾಟ ಮಾಡಿ ಹೋಗುತ್ತಿದ್ದಾರೆ. ಈ ವ್ಯಕ್ತಿ ಕೇರಳ ಮೂಲದವರಾಗಿದ್ದು ಆ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಆಡಿ A4 ಲಕ್ಷುರಿ ಸೆಡಾನ್ ಕಾರಿನಲ್ಲಿ ಬರುವ ಈ ವ್ಯಕ್ತಿ ಬೀದಿ ಬದಿಯಲ್ಲಿ ಸೊಪ್ಪು ಮಾರಾಟ ಮಾಡುವ ವ್ಯಕ್ತಿ. ಬದುಕು ಅಷ್ಟು ಲಕ್ಷುರಿ ಆಗಿದ್ದರೂ ಬೀದಿಬದಿಯಲ್ಲಿ ನಿಂತು ಸೊಪ್ಪು ಮಾರಾಟ ಮಾಡುವ ವ್ಯಕ್ತಿಯ ವೀಡಿಯೋವನ್ನು ಸುಜಿತ್ ಎಸ್ಪಿ ಶೇರ್ ಮಾಡಿದ್ದು ತುಂಬಾನೇ ವೈರಲ್ ಆಗಿದೆ. ಇವರು ಬಳಸುವ ಕಾರಿಗೆ ಏನೆಂದರೂ 44 ಲಕ್ಷ ಮೇಲಿದೆ.
ಕೆಂಪು ಕೀರೆ ಸೊಪ್ಪನ್ನು ಇವರೇ ಬೆಳೆಯುತ್ತಿದ್ದಾರೆ. ಅದನ್ನು ಕಿತ್ತು ತಮ್ಮ ಕಾರಿನಲ್ಲಿಯೇ ತರುತ್ತಾರೆ. ನಂತರ ಪೇಟೆಯಲ್ಲಿ ನೆಲದ ಮೇಲೆ ಒಂದು ಮ್ಯಾಟ್ ಹಾಸಿ ನಂತರ ಸೊಪ್ಪು ಮಾರಾಟ ಮಾಡುತ್ತಿದ್ದಾರೆ. ಹಣವಿದೆ ಎಂಬ ಮಾತ್ರಕ್ಕೆ ಬೀದಿ ಬದಿಯಲ್ಲಿ ಸೊಪ್ಪು ಮಾರಾಟ ಮಾಡುವುದೇನು ನನ್ನ ಅಂತಸ್ತಿಗೆ ಸೂಟ್ ಅಲ್ಲ ಅಂತ ಭಾವಿಸಿಯೇ ಇಲ್ಲ. ಹೀಗಾಗಿ ಇವರು ಈ ವಿಷಯದಲ್ಲಿ ರೋಲ್ ಮಾಡೆಲ್ ಆಗಿದ್ದರೆ.
ಈ ವೀಡಿಯೋವನ್ನು ನೆಟ್ಟಿಗರು ತುಂಬಾ ಮೆಚ್ಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೊದಲು ನಾನು ಆಡಿ ಕಾರು ತಗೋತೀನಿ ನಂತರ ತರಕಾರಿ ಮಾರುತ್ತೇನೆ ಎಂದು ಕೆಲವರು ತಮಾಷೆಯಾಗಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ನಮ್ಮ ಕೆಲಸ ನಾವು ಮಾಡಲು ನಾಚಿಕೆ ಏಕೆ ಅಲ್ವಾ? ನಿಯತ್ತಿನಿಂದ, ನ್ಯಾಯ ಬದ್ಧವಾಗಿ ಮಾಡುವ ಯಾವ ಕೆಲಸವೂ ಕಡಿಮೆಯಲ್ಲ ಅಲ್ವಾ?
ಸುಜಿತ್ ಎಸ್ಪಿ ತುಂಬಾನೇ ಜನಪ್ರಿಯ ವ್ಯಕ್ತಿ ಕೂಡ
ವೆರೈಟಿ ಫಾರ್ಮಿಂಗ್ ಎಂಬ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವ ಇವರಿಗೆ ತುಂಬಾನೇ ಫಾಲೋವರ್ಸ್ ಇದ್ದಾರೆ. ಇವರು ಕೃಷಿ ಬಗ್ಗೆ ತುಂಬಾನೇ ಉಪಯುಕ್ತ ಮಾಹಿತಿ ನೀಡುತ್ತಿರುತ್ತಾರೆ. ತಾವೇ ಕೃಷಿ ಬೆಳೆದು ಮಾರ್ಕೆಟಿಂಗ್ ಕೂಡ ತಾವೇ ಮಾಡುತ್ತಾರೆ, ಇದರಿಂದ ಇವರು ಕೃಷಿಯಿಂದ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಜೊತೆಗೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಮಾತನಾಡಿಸಿ ಈ ಕುರಿತು ಕೂಡ ಜನರಿಗೆ ಮಾಹಿತಿ ನೀಡುತ್ತಿರುತ್ತಾರೆ, ಸಾಮಾಜಿಕ ತಾಣದಿಂದ ಕೂಡ ಲಕ್ಷಾಂತರ ರುಪಾಯಿ ದುಡಿಯುತ್ತಿದ್ದಾರೆ. ಒಟ್ಟಿನಲ್ಲಿ ಸ್ವಲ್ಪ ಕ್ರಿಯಾತ್ಮಕವಾಗಿ ಯೋಚಿಸಿದರೆ ಚೆನ್ನಾಗಿ ಸಂಪಾದನೆ ಮಾಡಬಹುದು ಎಂಬುವುದಕ್ಕೆ ಇವರು ಉದಾಹರಣೆ.



Click it and Unblock the Notifications