Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಆಡಿ ಕಾರಿನಲ್ಲಿ ಸೊಪ್ಪು ಮಾರುವ ಕೇರಳ ವ್ಯಕ್ತಿಯ ವೀಡಿಯೋ ವೈರಲ್
3-4 ದಿನದಿಂದ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಪ್ರತಿಯೊಬ್ಬರಿಗೂ ಸ್ಪೂರ್ತಿ ತುಂಬುವ ವೀಡಿಯೋ ಅದು. ಯಾವ ಕೆಲಸವೂ ಕಡಿಮೆಯಲ್ಲ, ಶ್ರದ್ಧೆಯಿಂದ ನಾವುದನ್ನು ಮಾಡಬೇಕಷ್ಟೇ , ಅದಕ್ಕೆ ಈ ವ್ಯಕ್ತಿ ಸಾಕ್ಷಿ. ಸ್ವಲ್ಪ ಹಣ ಬಂದಾಗ ಆ ಕೆಲಸ ನನ್ನ ಸ್ಟೇಟಸ್ಗೆ ಸೂಟ್ ಅಲ್ಲ ಎಂದು ಭಾವಿಸುವವರೇ ಅಧಿಕ. ಆದರೆ ಇಲ್ಲೊಬ್ಬ ವ್ಯಕ್ತಿ ಆಡಿ ಕಾರಿನಲ್ಲಿ ಬಂದು ಸೊಪ್ಪು ಮಾರಾಟ ಮಾಡಿ ಹೋಗುತ್ತಿದ್ದಾರೆ. ಈ ವ್ಯಕ್ತಿ ಕೇರಳ ಮೂಲದವರಾಗಿದ್ದು ಆ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಆಡಿ A4 ಲಕ್ಷುರಿ ಸೆಡಾನ್ ಕಾರಿನಲ್ಲಿ ಬರುವ ಈ ವ್ಯಕ್ತಿ ಬೀದಿ ಬದಿಯಲ್ಲಿ ಸೊಪ್ಪು ಮಾರಾಟ ಮಾಡುವ ವ್ಯಕ್ತಿ. ಬದುಕು ಅಷ್ಟು ಲಕ್ಷುರಿ ಆಗಿದ್ದರೂ ಬೀದಿಬದಿಯಲ್ಲಿ ನಿಂತು ಸೊಪ್ಪು ಮಾರಾಟ ಮಾಡುವ ವ್ಯಕ್ತಿಯ ವೀಡಿಯೋವನ್ನು ಸುಜಿತ್ ಎಸ್ಪಿ ಶೇರ್ ಮಾಡಿದ್ದು ತುಂಬಾನೇ ವೈರಲ್ ಆಗಿದೆ. ಇವರು ಬಳಸುವ ಕಾರಿಗೆ ಏನೆಂದರೂ 44 ಲಕ್ಷ ಮೇಲಿದೆ.
ಕೆಂಪು ಕೀರೆ ಸೊಪ್ಪನ್ನು ಇವರೇ ಬೆಳೆಯುತ್ತಿದ್ದಾರೆ. ಅದನ್ನು ಕಿತ್ತು ತಮ್ಮ ಕಾರಿನಲ್ಲಿಯೇ ತರುತ್ತಾರೆ. ನಂತರ ಪೇಟೆಯಲ್ಲಿ ನೆಲದ ಮೇಲೆ ಒಂದು ಮ್ಯಾಟ್ ಹಾಸಿ ನಂತರ ಸೊಪ್ಪು ಮಾರಾಟ ಮಾಡುತ್ತಿದ್ದಾರೆ. ಹಣವಿದೆ ಎಂಬ ಮಾತ್ರಕ್ಕೆ ಬೀದಿ ಬದಿಯಲ್ಲಿ ಸೊಪ್ಪು ಮಾರಾಟ ಮಾಡುವುದೇನು ನನ್ನ ಅಂತಸ್ತಿಗೆ ಸೂಟ್ ಅಲ್ಲ ಅಂತ ಭಾವಿಸಿಯೇ ಇಲ್ಲ. ಹೀಗಾಗಿ ಇವರು ಈ ವಿಷಯದಲ್ಲಿ ರೋಲ್ ಮಾಡೆಲ್ ಆಗಿದ್ದರೆ.
ಈ ವೀಡಿಯೋವನ್ನು ನೆಟ್ಟಿಗರು ತುಂಬಾ ಮೆಚ್ಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೊದಲು ನಾನು ಆಡಿ ಕಾರು ತಗೋತೀನಿ ನಂತರ ತರಕಾರಿ ಮಾರುತ್ತೇನೆ ಎಂದು ಕೆಲವರು ತಮಾಷೆಯಾಗಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ನಮ್ಮ ಕೆಲಸ ನಾವು ಮಾಡಲು ನಾಚಿಕೆ ಏಕೆ ಅಲ್ವಾ? ನಿಯತ್ತಿನಿಂದ, ನ್ಯಾಯ ಬದ್ಧವಾಗಿ ಮಾಡುವ ಯಾವ ಕೆಲಸವೂ ಕಡಿಮೆಯಲ್ಲ ಅಲ್ವಾ?
ಸುಜಿತ್ ಎಸ್ಪಿ ತುಂಬಾನೇ ಜನಪ್ರಿಯ ವ್ಯಕ್ತಿ ಕೂಡ
ವೆರೈಟಿ ಫಾರ್ಮಿಂಗ್ ಎಂಬ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವ ಇವರಿಗೆ ತುಂಬಾನೇ ಫಾಲೋವರ್ಸ್ ಇದ್ದಾರೆ. ಇವರು ಕೃಷಿ ಬಗ್ಗೆ ತುಂಬಾನೇ ಉಪಯುಕ್ತ ಮಾಹಿತಿ ನೀಡುತ್ತಿರುತ್ತಾರೆ. ತಾವೇ ಕೃಷಿ ಬೆಳೆದು ಮಾರ್ಕೆಟಿಂಗ್ ಕೂಡ ತಾವೇ ಮಾಡುತ್ತಾರೆ, ಇದರಿಂದ ಇವರು ಕೃಷಿಯಿಂದ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಜೊತೆಗೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಮಾತನಾಡಿಸಿ ಈ ಕುರಿತು ಕೂಡ ಜನರಿಗೆ ಮಾಹಿತಿ ನೀಡುತ್ತಿರುತ್ತಾರೆ, ಸಾಮಾಜಿಕ ತಾಣದಿಂದ ಕೂಡ ಲಕ್ಷಾಂತರ ರುಪಾಯಿ ದುಡಿಯುತ್ತಿದ್ದಾರೆ. ಒಟ್ಟಿನಲ್ಲಿ ಸ್ವಲ್ಪ ಕ್ರಿಯಾತ್ಮಕವಾಗಿ ಯೋಚಿಸಿದರೆ ಚೆನ್ನಾಗಿ ಸಂಪಾದನೆ ಮಾಡಬಹುದು ಎಂಬುವುದಕ್ಕೆ ಇವರು ಉದಾಹರಣೆ.



Click it and Unblock the Notifications