Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಶಿವನ ಆರಾಧನೆಯಲ್ಲಿ ಅರಿಶಿಣ, ಕುಂಕುಮ ಬಳಸಲೇಬಾರದು, ಏಕೆ?
ಶಿವನ ಭಕ್ತನು ಭಕ್ತಿಯಿಂದ ಶಿವನ ಆರಾಧನೆ ಮಾಡಿದರೆ ಅವನ ಭಕ್ತಿಗೆ ಮೆಚ್ಚಿ ಶಿವ ಒಲಿಯುತ್ತಾನೆ, ಅವನ ಎಲ್ಲಾ ಕಷ್ಟಗಳನ್ನು ಶಿವ ಪರಮಾತ್ಮ ಹೋಗಲಾಡಿಸುತ್ತಾನೆ. ಶಿವನ ಪೂಜೆಗೆ ಯಾವುದೇ ಆಡಂಬರದ ಪ್ರದರ್ಶನವಾಗಲಿ, ವಸ್ತುಗಳಾಗಲಿ ಬೇಕಾಗಿಲ್ಲ, ಪೂಜಿಸುವ ಭಕ್ತನಲ್ಲಿ ಭಕ್ತಿ ಭಾವವೊಂದಿದ್ದರೆ ಸಾಕು. ಶಿವನ ಕೃಪೆಗೆ ಪಾತ್ರರಾಗಬಹುದು.

ಶಿವ ಪೂಜೆ ಮಾಡುವಾಗ ಕೆಲವೊಂದು ವಿಧಿ ವಿಧಾನಗಳಿವೆ, ಶಿವ ಪೂಜೆಗೆ ಇತರ ದೇವರುಗಳಿಗೆ ಅರ್ಪಿಸುವಂತೆ ತುಳಸಿ, ಕೇದಗೆ, ಅರಿಶಿಣ, ಕುಂಕುಮ ಹೀಗೆ ಕೆಲವೊಂದು ವಸ್ತುಗಳನ್ನು ಅರ್ಪಿಸುವಂತಿಲ್ಲ. ಈ ಲೇಖನದಲ್ಲಿ ಶಿವನಿಗೆ ಅರಿಶಿಣ, ಕುಂಕುಮ ಏಕೆ ಅರ್ಪಿಸಬಾರದು ಎಂದು ಹೇಳಲಾಗಿದೆ.

ಸರಳತೆ ಇಷ್ಟ ಪಡುವ ನಿರಾಲಂಕಾರ ಶಿವ
ಜಗದ ಲಯಕರ್ತ ಶಿವ ತುಂಬಾ ಸರಳ ಜೀವನವನ್ನು ಇಷ್ಟಪಡುತ್ತಾನೆ. ಆದ್ದರಿಂದ ಈತನ ಪೂಜೆಯೂ ಕೂಡ ಸರಳವಾಗಿಯೇ ಇರಲಿ ಎಂದು ಬಯಸುತ್ತಾನೆ. ಸ್ಮಶಾನವಾಸಿ, ನಿರಾಲಂಕಾರ ಶಿವನಿಗೆ ಯಾವುದೇ ಆಭರಣಗಳಾಗಲಿ, ವಿಶೇಷ ಅಲಂಕಾರವಾಗಲಿ ಇಷ್ಟವಾಗುವುದಿಲ್ಲ. ನೈವೇದ್ಯಕ್ಕೆ ಹಣ್ಣುಗಳನ್ನು ಇಟ್ಟರಷ್ಟೇ ಸಾಕು ತೃಪ್ತಿಗೊಳ್ಳುತ್ತಾನೆ.

ಶಿವ ಪೂಜೆ
ಈಶ್ವರನಿಗೆ ಪೂಜೆ ಮಾಡುವಾಗ ಹಾಲು, ಶ್ರೀಗಂಧ ಲೇಪನ, ಭಸ್ಮದಂಥ ವಸ್ತುಗಳಿಂದ ಪೂಜಿಸಬೇಕು. ಶಿವನಿಗೆ ಆಗದ ವಸ್ತುಗಳನ್ನು ಪೂಜೆಗೆ ಬಳಸಿದರೆ ಇದರಿಂದ ಮುಕ್ಕಣ್ಣನಿಗೆ ಕೋಪಯುಂಟಾಗುವುದು.

ಶಿವಲಿಂಗಕ್ಕೆ ಅರಿಶಿಣ ಏಕೆ ಹಚ್ಚಬಾರದು?
ಶಿವಲಿಂಗ ಎನ್ನುವುದು ಪುರುಷತ್ವದ ಸಂಕೇತ, ಶಿವಲಿಂಗ ಎನ್ನುವುದು ಪುರುಷನನ್ನು ಪ್ರನಿಧಿಸುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಶಿವನು ಅಗಾಧ ಶಕ್ತಿಯನ್ನು ತನ್ನಲ್ಲಿಟ್ಟಿಕೊಂಟಿರುವ ದೈವ. ಆತನಿಗೆ ಶ್ರೀಗಂಧ, ಹಾಲು, ಭಸ್ಮ, ಬಿಲ್ವ ಪತ್ರೆಗಳಂಥ ವಸ್ತುಗಳನ್ನು ಅರ್ಪಿಸಿ ಪೂಜಿಸಬೇಕು. ನಾವು ಅರ್ಪಿಸುವ ವಸ್ತುಗಳು ಆತನ ಕೋಪ-ತಾಪವನ್ನು ತ ತಣ್ಣಗಾಗಿಸಬೇಕು. ಲೌಕಿಕ ಸುಖಗಳಿಂದ ದೂರವಿರುವ ಬ್ರಹ್ಮಚಾರಿಯ ರೀತಿ ಬದುಕುತ್ತಿರುವ ಶಿವನಿಗೆ ಯಾವುದೇ ಕಾರಣಕ್ಕೂ ಅರಿಶಿಣವನ್ನು ಅರ್ಪಿಸಬಾರದು.
ಅಲ್ಲದೆ ಅರಿಶಿಣ ಸ್ತ್ರೀ ಸೌಂದರ್ಯದ ಸಂಕೇತ. ಇದು ಸೌಂದರ್ಯವನ್ನು ಪ್ರಚೋದಿಸುತ್ತದೆ, ಹೆಣ್ಣಿನ ಸೌಂದರ್ಯ ಲೌಕಿಕ ಸುಖದ ಕಡೆಗೆ ಬಾಗುವಂತೆ ಮಾಡುವುದು. ಆದ್ದರಿಂದ ಅಲೌಕಿಕ ಬದುಕು ನಡೆಸುತ್ತಿರುವ ಶಿವನಿಗೆ ಅರಿಶಿಣ ಅರ್ಪಿಸಲೇಬಾರದು.

ಶಿವನಿಗೆ ಕುಂಕುಮ ಕೂಡ ಅರ್ಪಿಸಬೇಡಿ
ಹಿಂದೂ ಧರ್ಮದಲ್ಲಿ ಪೂಜೆ ಪುರಸ್ಕಾರಗಳಲ್ಲಿ ಕುಂಕುಮಕ್ಕೆ ಪವಿತ್ರವಾದ ಸ್ಥಾನವಿದೆ. ದೇವರ ಪೂಜೆಯಲ್ಲಿ ಕುಂಕು ಬಳಸಲಾಗುವುದು. ಆದರೆ ಶಿವನ ಆರಾಧನೆ ಮಾಡುವಾಗ, ಶಿವ ಪೂಜೆಯನ್ನು ಮಾಡುವಾಗ ಕುಂಕುಮ ಬಳಸಬಾರದು. ಶಿವನು ಲೌಕಿಕ ಜಗತ್ತು ಮತ್ತು ಸಂತೋಷಗಳೊಂದಿಗೆ ಯಾವುದೇ ಬಂಧವೊಂದಿಲ್ಲ. ಶಿವ ಭಸ್ಮ ಪ್ರಿಯ. ಶಿವನ ಆರಾಧನೆಗೆ ವಿಭೂತಿ ಬಳಸಲಾಗುವುದು.



Click it and Unblock the Notifications