Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ವಾಸ್ತು ಪ್ರಕಾರ, ದೀಪಾವಳಿಯ ಮನೆ ಅಲಂಕಾರ ಹೀಗಿರಲಿ
ದೀಪಾವಳಿ ಎಂದರೆ,ಅದು ದೀಪಗಳ ಹಬ್ಬ. ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಹಬ್ಬ. ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದ ಸಂತೋಷದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ರಾಮಾಯಣದ ಪ್ರಕಾರ, ಅಯೋಧ್ಯೆಯ ಜನರು ಇಡೀ ನಗರವನ್ನು ದೀಪಗಳಿಂದ ಅಲಂಕರಿಸುವ ಮೂಲಕ ದೀಪೋತ್ಸವವನ್ನು ಆಚರಿಸಿದರೆನ್ನಲಾಗುತ್ತದೆ.
ಇದರೊಂದಿಗೆ ಈ ದಿನದಂದು ಮನೆಗೆ ಲಕ್ಷ್ಮಿ ದೇವಿಯ ಆಗಮನದ ನಿಯಮವೂ ಇದೆ. ಅದಕ್ಕಾಗಿಯೇ ಜನರು ದೀಪಾವಳಿಯಂದು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ, ಲಕ್ಷ್ಮಿಯನ್ನು ಅಲಂಕರಿಸಿ ಪೂಜಿಸುತ್ತಾರೆ. ದೀಪಾವಳಿಯಂದು ಮನೆಯನ್ನು ಅಲಂಕರಿಸುವಾಗ ಅನುಸರಿಸಬೇಕಾದ ಕೆಲವು ವಾಸ್ತು ಸಲಹೆಗಳನ್ನು ನಾವು ನಿಮಗೆ ಹೇಳಲಿದ್ದೇವೆ. ವಾಸ್ತು ಶಾಸ್ತ್ರದ ಪ್ರಕಾರ, ಸಜ್ಜುಗೊಳಿಸಿದರೆ, ನಿಮ್ಮ ಮನೆಯಲ್ಲಿ ಸಾಮರಸ್ಯವನ್ನುಂಟು ಮಾಡಿ, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ದೀಪಾವಳಿಯಂದು ಮನೆಯನ್ನು ಅಲಂಕರಿಸಲು ಅನುಸರಿಬೇಕಾದ ವಾಸ್ತುಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

1. ಮುಖ್ಯದ್ವಾರ:
ದೀಪಾವಳಿಯಂದು ಮನೆಯನ್ನು ಅಲಂಕರಿಸುವಾಗ, ಮುಖ್ಯ ದ್ವಾರದ ಮೇಲೆ ಗಣೇಶ ಅಥವಾ ಸೂರ್ಯ ಯಂತ್ರದ ಚಿತ್ರವನ್ನು ಇಡಿ. ಹೀಗೆ ಮಾಡುವುದರಿಂದ ಮಗೆ ಬರುವ ಎಲ್ಲಾ ಅಡೆತಡೆಗಳು ಮತ್ತು ತೊಂದರೆಗಳು ತಾನಾಗಿಯೇ ದೂರವಾಗುತ್ತವೆ.

2. ಡ್ರಾಯಿಂಗ್ ರೂಮ್:
ಡ್ರಾಯಿಂಗ್ ರೂಮಿನಲ್ಲಿ ಪೀಠೋಪಕರಣಗಳು ಮತ್ತು ಭಾರವಾದ ವಸ್ತುಗಳನ್ನು ನೈಋತ್ಯ ದಿಕ್ಕಿನಲ್ಲಿ ಇಡಿ. ಕಿಟಕಿ ಬಾಗಿಲುಗಳಿಗೆ ತಿಳಿ ಬಣ್ಣದ ಪರದೆಗಳನ್ನು ಹಾಕಿ. ಹೀಗೆ ಮಾಡುವುರಿಂದ ಮನೆಯಲ್ಲಿ ಸಕಾರಾತ್ಮಕತೆ ಇರುತ್ತದೆ.

3.ಬೆಡ್ರೂಮ್ :
ಮಲಗುವ ಕೋಣೆಯನ್ನು ಅಲಂಕರಿಸುವಾಗ, ಅದರ ಬಣ್ಣವನ್ನು ತಿಳಿ ಗುಲಾಬಿ ಅಥವಾ ನೇರಳೆ ಬಣ್ಣದಲ್ಲಿ ಇಡಬೇಕು ಜೊತೆಗೆ ರಾಧಾ ಕೃಷ್ಣರ ಚಿತ್ರವನ್ನು ಮಲಗುವ ಕೋಣೆಯಲ್ಲಿ ಇಡಬೇಕು. ಇದರಿಂದಾಗಿ ಪರಸ್ಪರ ಪ್ರೀತಿ ಪ್ರೀತಿಯಾಗಿ ಉಳಿಯುತ್ತದೆ ಮತ್ತು ಸಂಬಂಧವು ಬಲಗೊಳ್ಳುತ್ತದೆ.

4. ಗೋಡೆಗಳು:
ದೀಪಾವಳಿಯಂದು ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು, ಮನೆಯ ಉತ್ತರ ಗೋಡೆಯ ಮೇಲೆ ಲಕ್ಷ್ಮಿಯ ಚಿತ್ರವನ್ನು ಇಡಿ. ಕಮಲದ ಆಸನದ ಮೇಲೆ ಕುಳಿತು ತನ್ನ ಕೈಗಳಿಂದ ಚಿನ್ನದ ನಾಣ್ಯಗಳನ್ನು ಬೀಳಿಸುವ ಧನ ಲಕ್ಷ್ಮಿಯ ಚಿತ್ರವನ್ನು ಹೊಂದುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

5. ಹೂದಾನಿ:
ಉದ್ಯೋಗ ಅಥವಾ ವ್ಯವಹಾರದಲ್ಲಿ ಸಮಸ್ಯೆಯಿದ್ದರೆ, ಮನೆಯ ಈಶಾನ್ಯ ದಿಕ್ಕಿನಲ್ಲಿ ಹಸಿರು ಹೂವಿನ ಹೂದಾನಿ ಅಥವಾ ಗಿಡವನ್ನು ನೆಡಿ. ವ್ಯವಹಾರದಲ್ಲಿ ಪ್ರಗತಿಯ ಮುಚ್ಚಿದ ಬಾಗಿಲು ತೆರೆಯುತ್ತದೆ.

6. ಕನ್ನಡಿ:
ಮನೆಯ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಕನ್ನಡಿಯನ್ನು ಇಡಿ. ಇದು ಮನೆಯ ಆದಾಯದ ಮೂಲವನ್ನು ಹೆಚ್ಚಿಸುತ್ತದೆ.

7. ಕೋಣೆಗಳು:
ಮನೆಯ ಪ್ರತಿಯೊಂದು ಕೋಣೆಯೂ ಸಾಕಷ್ಟು ಬೆಳಕನ್ನು ಹೊಂದಿರಬೇಕು. ಜೊತೆಗೆ ಆಗಾಗ ಗೋಡೆಯ ತೇವವನ್ನು ತೆಗೆದುಹಾಕಲು ಪ್ರಯತ್ನಿಸಬೇಕು. ಗೋಡೆಗಳಲ್ಲಿ ತೇವ ನಿಂತರೆ ಹಣಕಾಸಿನ ನಿರ್ಬಂಧಗಳನ್ನು ಉಂಟುಮಾಡುತ್ತದೆ.



Click it and Unblock the Notifications
