Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಭಾರತದ ಈ ಹಳ್ಳಿಯ ಮನೆಗಳಿಗೆ, ಬ್ಯಾಂಕ್ಗೆ ಬಾಗಿಲುಗಳೇ ಇಲ್ಲ, ಕಳ್ಳತನವೂ ನಡೆದಿಲ್ಲ!!
ನಾವೆಲ್ಲಾ ಮನೆ ಕಟ್ಟಿಸುವಾಗ ಮನೆ ಬಾಗಿಲು ಗಟ್ಟಿಯಾಗಿರಬೇಕೆಂದು ಬಯಸುತ್ತೇವೆ, ಇಲ್ಲದಿದ್ದರೆ ಯಾವುದಾದರೂ ಕಳ್ಳ ನಾವಿಲ್ಲದ ಹೊತ್ತಲ್ಲಿ ಒಳ ನುಗ್ಗಬಹುದು ಎಂಬ ಭಯ ಇದ್ದಿದ್ದೇ.

ಇನ್ನು ಬೆಂಗಳೂರಿನಂಥ ಮನೆಗಳಲ್ಲಾದರೆ ಮಲಗುವ ಮುನ್ನ ಹಾಗೂ ಹೊರಗಡೆ ಹೋಗುವ ಮುನ್ನ ಬಾಗಿಲು ಸರಿಯಾಗಿ ಹಾಕಿದೆಯೇ ಎಂದು ಎರಡೆರಡು ಸಲ ಚೆಕ್ ಮಾಡ್ತೀವಿ, ಇನ್ನು ಬ್ಯಾಂಕ್ಗಳಲ್ಲಾದರೆ ತುಂಬಾ ಸೆಕ್ಯೂರಿಟಿ ಇರುತ್ತದೆ.
ಆದರೆ ಭಾರತದ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿ ಶನಿ ಶಿಂಗ್ನಾಪುರ್ ಎಂಬ ಗ್ರಾಮ ಇದೆ. ಈ ಗ್ರಾಮದ ವಿಶೇಷವೆಂದರೆ ಈ ಗ್ರಾಮದ ಯಾವುದೇ ಮನೆಗಳಿಗೇ ಬಾಗಿಲೇ ಇಲ್ಲ, ಮನೆ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಆದರೆ ಇಲ್ಲಿ ಯಾರ ಮನೆಯಲ್ಲೂ ಬಾಗಿಲುಗಳು ಮಾತ್ರ ಇಲ್ಲ, ಇದರ ಕುರಿತ ಆಸಕ್ತಿಕರ ವಿಷಯಗಳನ್ನು ಇಲ್ಲಿ ನೀಡಿದ್ದೇವೆ ನೋಡಿ...

ಇದುವರೆಗೆ ಒಂದೂ ಕಳ್ಳತನ ನಡೆದಿಲ್ಲ
ಇಲ್ಲಿಯ ಮನೆಗಳಿಗೆ ಬಾಗಿಲು ಇಲ್ಲ, ಆದರೆ ಈ ಗ್ರಾಮದೊಳಗೆ ಬಂದು ಕಳ್ಳತನ ಮಾಡುವ ಧೈರ್ಯ ಮಾತ್ರ ಯಾವುದೇ ಕಳ್ಳನಿಗೆ ಇಲ್ಲ. ಇದುವರೆಗೆ ಈ ಹಳ್ಳಿಯಲ್ಲಿ ಒಂದೇ ಒಂದು ಕಳ್ಳತನ ನಡೆದಿಲ್ಲ. 2010ರಲ್ಲಿ ಒಬ್ಬರು ತಮ್ಮ 35, 00 ಕಳ್ಳತನವಾಗಿದೆ ಎಂದು ಹೇಳಿ ದೂರು ನೀಡಿದ್ದರು. ಆದರೆ ಪರಿಶೀಲಿಸಿದಾಗ ಆ ಕಳ್ಳತನ ಗ್ರಾಮದ ಹೊರಭಾಗದಲ್ಲಿ ನಡೆದಿತ್ತು.

ಇಲ್ಲಿನ ಬ್ಯಾಂಕ್ಗಳಿಗೂ ಬಾಗಿಲುಗಳಿಲ್ಲ
ದೇವರು ಈ ಗ್ರಾಮವನ್ನು ರಕ್ಷಿಸುತ್ತಾನೆ, ಮನೆಗೆ ಬಾಗಿಲುಗಳು ಇಟ್ಟರೆ ಒಳಿತಾಗುವುದಿಲ್ಲ ಎಂಬ ಭಾವನೆ ಗ್ರಾಮಸ್ಥರಲ್ಲಿದೆ. ಗ್ರಾಮಸ್ಥರ ಈ ಭಾವನೆಗೆ ಧಕ್ಕೆಯಾಗದಂತೆ ಅಲ್ಲಿನ ಬ್ಯಾಂಕ್ಗಳಲ್ಲಿ ಕೂಡ ಯಾವುದೇ ಬಾಗಿಲುಗಳಿಲ್ಲ.
ಆದರೆ ಕೂಲಂಕಷವಾಗಿ ನೋಡಿದರೆ ಬ್ಯಾಂಕ್ನಲ್ಲಿ ರಿಮೋಟ್ ಕಂಟ್ರೋಲ್ ಎಲೆಕ್ಟ್ರೋ ಮ್ಯಾಗ್ನೆಟ್ ಲಾಕ್ ಸಿಸ್ಟಮ್ ಇದೆ, ಅಲ್ಲದೆ ಸಂಜೆ ಹಣವನ್ನೆಲ್ಲಾ ಸಮೀಪದ ಬ್ಯಾಂಕ್ಗೆ ವರ್ಗಾಯಿಸಲಾಗುವುದು.

ನಾಮಕಾವಸ್ಥೆಗೆ ಇರುವ ಪೊಲೀಸ್ ಸ್ಟೇಷನ್
ಈ ಊರಲ್ಲಿ ಪೊಲೀಸ್ ಸ್ಟೇಷನ್ ಇರಲಿಲ್ಲ, ಆದರೆ ಸರಕಾರ ಅಲ್ಲೊಂದು ಪೊಲೀಸ್ ಸ್ಟೇಷನ್ ಹಾಕಿದೆ. ಆದರೆ ಆ ಸ್ಟೇಷನ್ ಕೇವಲ ನಾಮಕಾವಸ್ಥೆಗೆ ಇದೆ. ಅಲ್ಲಿ ಯಾವುದೇ ದೂರುಗಳು ದಾಖಲಾಗುತ್ತಿಲ್ಲ. ಇಲ್ಲಿ ಜನರ ನಂಬಿಕೆ ದೊಡ್ಡದಾಗಿದೆ, ಜನರು ಏನೇ ತಪ್ಪು ಮಾಡಲು ಭಯ ಪಡುತ್ತಾರೆ.

ಜನರಲ್ಲಿರುವ ನಂಬಿಕೆ ಏನು?
ಗ್ರಾಮಸ್ಥರು ಹೇಳುವ ಪ್ರಕಾರ ಎಷ್ಟೋ ವರ್ಷಗಳ ಹಿಂದೆ ಆ ಗ್ರಾಮದಲ್ಲಿ ಶನಿ ಪ್ರತ್ಯಕ್ಷವಾಗಿ ಈ ಗ್ರಾಮದ ಮನೆಗಳಿಗೆ ಬಾಗಿಲು ಇರಬಾರದು, ನಾನು ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದನಂತೆ, ಅಲ್ಲಿಂದ ಆ ಗ್ರಾಮದ ಮನೆಗಳಿಗೆ ಬಾಗಿಲುಗಳಿಲ್ಲ ಎನ್ನುತ್ತಾರೆ. ಅಲ್ಲದೆ ಅಲ್ಲಿಯ ಜನರ ನಂಬಿಕೆಗೆ ಇದುವರೆಗೆ ಮೋಸವಾಗಿಲ್ಲ, ಆದ್ದರಿಂದ ಶನಿ ಮಹಾತ್ಮ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾನೆ ಎಂಬ ನಂಬಿಕೆ ಬಲವಾಗಿದೆ.



Click it and Unblock the Notifications











