Latest Updates
-
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು?
ಮೊದಲ ಆಷಾಢ ಶುಕ್ರವಾರ: ಈ ದಿನ ಮೈಸೂರು ಚಾಮುಂಡೇಶ್ವರಿ ದರ್ಶನದ ಮಹತ್ವವೇನು?
ಜೂನ್ 23ಕ್ಕೆ ಮೊದಲ ಆಷಾಢ ಶುಕ್ರವಾರ. ಈ ದಿನ ಲಕ್ಷ್ಮಿ ಪೂಜೆಗೆ ತುಂಬಾ ಶ್ರೇಷ್ಠ ಅದರಲ್ಲೂ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ದೇವಿಯ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿರುವ ನಾಡ ದೇವತೆ ಚಾಮುಂಡೇಶ್ವರಿಗೆ ಆಷಾಢ ಶುಕ್ರವಾರದಂದು ವಿಶೇಷ ಪೂಜೆ ಸಲ್ಲಿಸಲಾಗುವುದು.

ಚಾಮುಂಡೇಶ್ವರಿ ಮಹಿಷಾಸುರ ರಾಕ್ಷಸನನ್ನು ಕೊಂದ ಕಾರಣ ಮಹಿಷಾಸುರ ಮರ್ದಿನಿ ಎಂದು ಕೂಡ ಕರೆಯಲಾಗುವುದು. ಚಾಮುಂಡೇಶ್ವರಿ ದೇವಿಗೆ ಆಷಾಢ ಶುಕ್ರವಾರ ಸಲ್ಲಿಸುವ ಪೂಜೆ ತುಂಬಾ ವಿಶೇಷ ಏಕೆ? ಈ ದಿನ ಚಾಮುಂಡೇಶ್ವರಿಯನ್ನು ದರ್ಶನ ಮಾಡಬೇಕೆಂದು ಹೇಳುವುದು ಏಕೆ ಎಂದು ನೋಡೋಣ ಬನ್ನಿ:
ಆಷಾಢ ಮೊದಲ ಶುಕ್ರವಾರದಂದು ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ಸಲ್ಲಿಸುವ ಪೂಜೆ ತುಂಬಾ ವಿಶೇಷ ಏಕೆ?
ಮೈಸೂರು ಚಾಮುಂಡೇಶ್ವರಿ ದೇವಿಗೆ ಆಷಾಢ ಮಾಸದ ಮೊದಲ ಶುಕ್ರವಾರದಂದು ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಈ ದಿನ ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿ ತಾಯಿಯ ಜನ್ಮ ದಿನ. ಈ ಬಾರಿ ಚಾಮುಂಡೇಶ್ವರಿ ಜಯಂತಿಯನ್ನು ಜೂನ್ 23ರಂದು ಆಚರಿಸಲಾಗುತ್ತಿದೆ.
ಈ ದಿನ ತಾಯಿ ಚಾಮುಂಡಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ತ್ರಿಪಾದಿ, ಅಷ್ಟೋತ್ತರ ಹೀಗೆ ವಿವಿಧ ಬಗೆಯ ವಿಶೇಷ ಪೂಜೆಯನ್ನು ಆಯೋಜಿಸಲಾಗುತ್ತದೆ. ಆಷಾಢದ ಮೊದಲ ಶುಕ್ರವಾರದಿಂದ ಹಿಡಿದು ಪ್ರತೀಶುಕ್ರವಾರ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಆಷಾಢ ಶುಕ್ರವಾರದ ಸಮಯದಲ್ಲಿ ತುಂಬಾ ಭಕ್ತರು ಆಗಮಿಸುತ್ತಾರೆ. ಇವರಿಗೆ ಪ್ರಸಾದವನ್ನು ವಿತರಿಸಲಾಗುವುದು.
ಈ ಬಾರಿ ಭಕ್ತರಿಗೆ ಸಿದ್ಧವಾಗಿದೆ ಮ್ಯಾಂಗೋ ಬರ್ಫಿ ಪ್ರಸಾದ
ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ಬರುವ ಭಕ್ತರಿಗೆ ಮ್ಯಾಂಗೋ ಬರ್ಫಿ ಪ್ರಸಾದ ಸಿದ್ಧವಾಗುತ್ತಿದೆ. 18 ವರ್ಷಗಳಿಂದ ಪ್ರಸಾದ ವ್ಯವಸ್ಥೆ ಮಾಡುತ್ತಿರುವ ನೂರಡಿ ರಸ್ತೆಯ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಈ ಬಾರಿಯೂ ಪ್ರಸಾದ ವಿತರಣೆ ಮಾಡಲಿದೆ. ನಾಳೆ ಅಂದರೆ ಜೂನ್ 23 ಶುಕ್ರವಾರ ಬೆಳಗ್ಗೆಯೇ ಪ್ರಸಾದ ನೀಡಲಾರಂಭಿಸುತ್ತಾರೆ. ಬೆಳಗ್ಗೆ ಉಪಹಾರಕ್ಕೆ ಪೈನಾಪಲ್ ಕೇಸರ್ಬಾತ್, ಪೊಂಗಲ್, ರವಾವಾಂಗೀಬಾತ್ ಇರಲಿದೆ. ಮಧ್ಯಾಹ್ನ ಊಟಕ್ಕೆ ಕೋಸಂಬರಿ, ಪಲ್ಯ, ಬಿಸಿಬೇಳೆಬಾತ್, ಅನ್ನ ಸಾಂಬಾರ್, ಹಪ್ಪಳ, ಮೊಸರು ಹಾಗೂ ಮ್ಯಾಂಗೋಬರ್ಫಿ ನೀಡಲಾಗುವುದು.
ಆಷಾಢ ಶುಕ್ರವಾರ ಭಕ್ತರು ಚಾಮುಂಡೇಶ್ವರಿ ದರ್ಶನವನ್ನೇಕೆ ಮಾಡುತ್ತಾರೆ?
* ಆಷಾಢ ಶುಕ್ರವಾರದಂದು ದೇವಿಗೆ ವಿಶೇಷ ಅಲಂಕಾರ ಮಾಡಲಾಗುವುದು, ಇದನ್ನು ಕಣ್ತುಂಬಿಕೊಳ್ಳುವುದೇ ಮಹಾದೃಷ್ಟ.
* ದೇವಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುವುದು, ಈ ಭಾಗ್ಯವನ್ನು ಕಣ್ತುಂಬಿಕೊಳ್ಳಬಹುದು.
* ದೇವಿಯ ವಿಶೇಷ ಮಂತ್ರಗಳ ಪಠಣೆ ಮಾಡಲಾಗುವುದು, ಇದನ್ನು ಕೇಳಿದರೆ ನಮಗೆ ಭಾಗ್ಯ ಒದಗಲಿದೆ.
* ಚಾಮುಂಡೇಶ್ವರಿ ದೇವಿ ಕ್ಷೇತ್ರಕ್ಕೆ ಬಂದು ಈ ದಿನ ಏನು ಬೇಡಿಕೊಂಡರೂ ಅದು ನೆರವೇರುವುದು ಎಂದು ಹೇಳಲಾಗುವುದು. ಆದ್ದರಿಂದ ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ.



Click it and Unblock the Notifications