Latest Updates
-
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!
ಕಾಳಸರ್ಪ ದೋಷವಿದ್ದರೆ ಆಷಾಢ ಅಮವಾಸ್ಯೆಗೆ ಈ ಪರಿಹಾರ ಮಾಡಿ
ಜುಲೈ 17ಕ್ಕೆ ಆಷಾಢ ಅಮವಾಸ್ಯೆ, ಆಷಾಢ ಅಮವಾಸ್ಯೆ ಹಲವಾರು ಕಾರಣಗಳಿಂದ ಪ್ರಾಮುಖ್ಯತೆಯನ್ನು ಪಡೆದಿದೆ. ಈ ದಿನ ಪಿತೃದೋಷ ಪರಿಹಾರ ಮಾಡಲಾಗುವುದು ಅಷ್ಟು ಮಾತ್ರವಲ್ಲ ಯಾರಿಗೆ ಕಾಳ ಸರ್ಪ ದೋಷವಿರುತ್ತದೋ ಅವರು ಈ ದಿನ ಪರಿಹಾರ ಮಾಡಿದರೆ ಕಾಳ ಸರ್ಪ ದೋಷ ಪರಿಹಾರವಾಗಲಿದೆ.
ಕಾಳ ಸರ್ಪದೋಷವಿದೆಯೆಂದು ಸೂಚಿಸುವ ಲಕ್ಷಣಗಳೇನು, ಕಾಳ ಸರ್ಪ ದೋಷ ಇರುವವರು ಆಷಾಢ ಅಮವಾಸ್ಯೆಯಂದು ಯಾವ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಈ ರೀತಿಯ ಸೂಚನೆಗಳು ಕಾಳ ಸರ್ಪದೋಷವಿದೆ ಎಂಬುವುದನ್ನು ಸೂಚಿಸುತ್ತದೆ
- ಕನಸಿನಲ್ಲಿ ಹಾವು ಕಂಡು ಬರುವುದು
- ಕಠಿಣ ಪರಿಶ್ರಮದ ನಂತರವೂ ಕೆಲಸ ಕಾರ್ಯಗಳಲ್ಲಿ ಅಪೇಕ್ಷಿತ ಫಲ ಸಿಗುವುದಿಲ್ಲ
- ಅತ್ಯಧಿಕ ಮಾನಸಿಕ ಒತ್ತಡವಿರುತ್ತದೆ
- ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಸದಾ ಗೊಂದಲದ ಸ್ಥಿತಿ ಇರುತ್ತದೆ
- ಕುಟುಂಬದಲ್ಲಿ ಸಮಸ್ಯೆ
- ಶತ್ರುಗಳಿಂದ ತೊಂದರೆ
ಕಾಳ ಸರ್ಪ ದೋಷ ಏಕೆ ಉಂಟಾಗುತ್ತದೆ?
ಜಾತಕದಲ್ಲಿ ರಾಹು ಮತ್ತು ಕೇತುಗಳಿಂದ ಉಂಟಾಗುವ ಕೆಟ್ಟ ಪರಿಣಾಮದಿಂದಾಗಿ ಕಾಳಸರ್ಪ ದೋಷ ಉಂಟಾಗುವುದು. ವ್ಯಕ್ತಿಯ ಜಾತಕದಲ್ಲಿ ರಾಹು ಮತ್ತು ಕೇತುಗಳ ನಡುವೆ ಗ್ರಹಗಳು ಬಂದಾಗ ಕಾಳ ಸರ್ಪ ದೋಷ ಉಂಟಾಗುವುದು. ಜ್ಯೋತಿಷ್ಯದಲ್ಲಿ, ರಾಹುವನ್ನು ಹಾವಿನ ತಲೆ ಮತ್ತು ಕೇತುವನ್ನು ಹಾವಿನ ಬಾಲ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಕಾಳಸರ್ಪ ದೋಷವಿದ್ದರೆ ಜೀವನದಲ್ಲಿ ಪ್ರಗತಿಯಾಗಲು ರಾಹು ಮತ್ತು ಕೇತು ಬಿಡುವುದಿಲ್ಲ.
ಕಾಳ ಸರ್ಪ ದೋಷಕ್ಕೆ ಆಷಾಢ ಅಮವಾಸ್ಯೆಗೆ ಈ ಪರಿಹಾರ ಮಾಡಿದರೆ ಒಳ್ಳೆಯದು:
- ನಿಮ್ಮ ಜಾತಕದಲ್ಲಿ ಕಲಸರ್ಪ ದೋಷವಿದ್ದರೆ, ಆಷಾಢ ಅಮಾವಾಸ್ಯೆಯಂದು ಶಾಸ್ತ್ರೋಕ್ತವಾಗಿ ಶಿವನನ್ನು ಆರಾಧಿಸಿ. ಈ ಪೂಜೆಯನ್ನು ರಾಹುಕಾಲದಲ್ಲಿ ಮಾಡಬೇಕು ಏಕೆಂದರೆ ಜಾತಕದಲ್ಲಿ ರಾಹು ಮತ್ತು ಕೇತುಗಳ ವಿಶೇಷ ಸ್ಥಾನದಿಂದಾಗಿ ಕಾಲಸರ್ಪ ದೋಷ ಉಂಟಾಗಿರುತ್ತದೆ, ಈ ಸಮಯದಲ್ಲಿ ಶಿವ ಆರಾಧನೆ ಮಾಡಿದರೆ ರಾಹು ಕೇತುವಿಗೆ ಪರಿಹಾರ ಮಾಡಿದಂತಾಗುವುದು.
- ಆಷಾಢ ಅಮಾವಾಸ್ಯೆಯಂದು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ನದಿಯ ದಡದಲ್ಲಿ ಜೋಡಿ ಹಾವಿನ ಮೂರ್ತಿಗೆ ಪೂಜೆಮಾಡಬೇಕು. ಈ ಹಾವಿನ ಜೋಡಿಯನ್ನು ಚಿನ್ನ ಅಥವಾ ಬೆಳ್ಳಿಯಿಂದ ಮಾಡಬಹುದಾಗಿದೆ. ಪೂಜೆಯ ನಂತರ ಆ ಮೂರ್ತಿಗಳನ್ನು ನದಿ ನೀರಿನಲ್ಲಿ ಬಿಡಬೇಕು, ಹೀಗೆ ಮಾಡುವುದರಿಂದ ಕಾಳಸರ್ಪ ದೋಷ ನಿವಾರಣೆಯಾಗುವುದು.
- ಕಾಳಸರ್ಪ ದೋಷವನ್ನು ಹೋಗಲಾಡಿಸಲು ಈ ದಿನ ಉದ್ದಿನ ಬೇಳೆ ಮತ್ತು ತೆಂಗಿನಕಾಯಿಯನ್ನು ನದಿ ನೀರಿನಲ್ಲಿ ಬಿಡಿ.
ಇತರ ಪರಿಹಾರ
* ಕಾಳಸರ್ಪ ದೋಷವಿರುವವರು ಪ್ರತಿದಿನ ಶ್ರೀವಿಷ್ಣುವಿನ ಆರಾಧನೆ ಮಾಡಬೇಕು.
* ವೈದಿಕ ಶಾಸ್ತ್ರದ ಪ್ರಕಾರ ಕಾಳಸರ್ಪ ದೋಷವನ್ನು ಹೋಗಲಾಡಿಸಲು, ಶನಿವಾರದಂದು ಹರಿಯುವ ನೀರಿನಲ್ಲಿ ಕಲ್ಲಿದ್ದಲಿನ ತುಂಡುಗಳನ್ನು ತೇಲುವಂತೆ ಮಾಡಿ.
* ಶ್ರಾವಣಮಾಸದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ.
* ಪ್ರತಿ ಶನಿವಾರ ಆಲದ ಮರವನ್ನು ಪೂಜಿಸುವುದರಿಂದ ಕಾಲಸರ್ಪ ದೋಷ ಕಡಿಮೆಯಾಗುವುದು. ಈ ರೀತಿ 7 ಶನಿವಾರ ಮಾಡಬೇಕು.
ಅದೃಷ್ಟ ಹೆಚ್ಚಲು ಈ ಪರಿಹಾರ ಮಾಡಿ
* ಆಷಾಢ ಅಮವಾಸ್ಯೆಯಂದು ಹಿಟ್ಟಿನಲ್ಲಿ ಸಕ್ಕರೆ ಬೆರೆಸಿ ಕಪ್ಪು ಇರುವೆಗಳಿಗೆ ಹಾಕಿದರೆ ಒಳ್ಳೆಯದು
* ಆಷಾಢ ಅಮಾವಾಸ್ಯೆಯ ಸಂಜೆ ಈಶಾನ್ಯ ಮೂಲೆಯಲ್ಲಿ ದೀಪವನ್ನು ಹಚ್ಚಿ. ಕೆಂಪು ಬತ್ತಿಯಿಂದ ತುಪ್ಪದ ದೀಪ ಹಚ್ಚಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ, ನಿಮ್ಮ ಸಂಪತ್ತು ವೃದ್ಧಿಸುವುದು.



Click it and Unblock the Notifications