Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಮನೆಯಲ್ಲಿ ಹಣ, ಸಂಪತ್ತು ಹೆಚ್ಚಲು ಇಲ್ಲಿದೆ ಸರಳ ವಾಸ್ತು ಟಿಪ್ಸ್..!!
ನಮ್ಮ ಆರೋಗ್ಯ, ಹಣಕಾಸು ಪರಿಸ್ಥಿತಿ, ಮನೆಯಲ್ಲಿನ ವಾತಾವರಣ ಇದಕ್ಕೆಲ್ಲ ನೇರವಾಗಿ ವಾಸ್ತು ಶಾಸ್ತ್ರದ ಸಂಬಂಧವಿರುತ್ತದೆ. ಯಾವ ಮನೆಯಲ್ಲಿ ವಾಸ್ತು ಚಿಹ್ನೆಗಳು ಶಾಸ್ತ್ರದಲ್ಲಿ ಹೇಳಲಾಗಿದ್ಯೋ ಅದೇ ರೀತಿ ಇದ್ದರೆ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ, ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.
ಆದರೆ ಕೆಲವು ಬಾರಿ ನಾವು ಸರಳವಾಗಿ ವಾಸ್ತುವನ್ನು ಪಾಲಿಸುವ ಬದಲಾಗಿ ನಿರ್ಲಕ್ಷ್ಯ ಮಾಡುತ್ತೇವೆ. ಇದು ನಮ್ಮಲ್ಲಿ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಈ ರೀತಿಯ ವಾಸ್ತು ದೋಷದಿಂದ ಒಬ್ಬ ವ್ಯಕ್ತಿ ಏಳಿಗೆ ಕಾಣುವುದು ಕಷ್ಟವಾಗುತ್ತದೆ. ಹಾಗಾದರೆ ಮನೆಯಲ್ಲಿ ನಾವು ಯಾವ ರೀತಿಯ ವಾಸ್ತುವನ್ನು ಪಾಲಿಸಬೇಕು? ಯಾವ ವಾಸ್ತು ದೋಷ ಯಾವ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮನೆಯಲ್ಲಿ ಕುಬೇರ ಯಂತ್ರ ಇಡಿ
ಮನೆಯಲ್ಲಿ ಹಣದ ಸಮಸ್ಯೆ ಮತ್ತು ಖರ್ಚು ಹೆಚ್ಚಾಗುತ್ತಿದ್ದರೆ ಕುಬೇರ ಯಂತ್ರವನ್ನು ಇಡಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಕುಬೇರ ಸಂಪತ್ತಿನ ಪ್ರತೀಕವಾಗಿದ್ದು, ಮನೆಯ ಈಶಾನ್ಯ ಮೂಲೆಯಲ್ಲಿ ಕುಬೇರ ಯಂತ್ರ ಇಡಬೇಕು. ಈಶಾನ್ಯ ಮೂಲೆಯು ಸಂಪತ್ತು ಸಂಗ್ರಹದ ಪ್ರತೀಕವಾಗಿದೆ ಹೀಗಾಗಿ ಆ ಮೂಲೆಯಲ್ಲಿ ಶೌಚಾಲಯ, ಚಪ್ಪಲಿ ಬಿಡುವುದು, ಪೊರಕೆ ಇಡುವುದು ಮಾಡಬಾರದು ಎಂದು ವಾಸ್ತು ಶಾಸ್ತ್ರದ ಉಲ್ಲೇಖವಾಗಿದೆ.
ಮನೆಯಲ್ಲಿ ವಸ್ತುಗಳ ಜೋಡಿಸಿಡಿ
ಕೆಲವು ಬಾರಿ ಮನೆಯಲ್ಲಿ ಇಲ್ಲವೆ ನಿಮ್ಮ ರೂಮಿಯಲ್ಲಿ ಎಲ್ಲಾ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿರುತ್ತಾರೆ. ಈ ರೀತಿ ಮಾಡಬಾರದು ಎಂಬುದು ವಾಸ್ತು ಶಾಸ್ತ್ರದ ಉಲ್ಲೇಖವಾಗಿದೆ. ನಿಮ್ಮ ಮನೆಯು ಆರ್ಥಿಕ, ಭಾವನಾತ್ಮಕ ರೀತಿಯ ಅಂಶವೂ ಧನಾತ್ಮಕ ಶಕ್ತಿಯ ಒಟ್ಟಾರೆ ಸಾರವಾಗಿದೆ. ಆದರೆ ಮನೆಯಲ್ಲಿ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ಅಲ್ಲಿ ಧನಾತ್ಮಕ ಶಕ್ತಿ ನೆಲೆಸುವುದಿಲ್ಲ ಎಂಬುದು ಶಾಸ್ತ್ರದ ಉಲ್ಲೇಖವಾಗಿದೆ.
ಲಾಕರ್ ಯವಾಗಲು ನೈಋತ್ಯ ಮೂಲೆಯಲ್ಲಿರಲಿ
ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಲಾಕರ್ ಇಲ್ಲವೆ, ಹಣವಿಡಲು ಒಂದು ಕಮೋಡ್ ಇದ್ದೇ ಇರುತ್ತದೆ. ಆದರೆ ನಮ್ಮ ಅರಿವಿಲ್ಲದೆ ನಾವು ಅದನ್ನು ಎಲ್ಲಿ ಜಾಗ ಸಿಗುತ್ತದೆಯೋ ಅಲ್ಲಿ ಇಡುತ್ತೇವೆ. ಆದರೆ ಈ ರೀತಿ ಮಾಡುವುದರಿಂದ ಹಣದ ಸಮಸ್ಯೆ ಉದ್ಭವಿಸುತ್ತದೆ. ಹೀಗಾಗಿ ಲಾಕರ್ ಇಲ್ಲವೆ ಹಣವಿಡುವ ಕಮೋಡ್ ಅನ್ನು ಮನೆಯ ನೈರುತ್ಯ ಮೂಲೆಯಲ್ಲಿ ಇಡುವುದು ಸೂಕ್ತ. ಆದರೆ ಎಂದಿಗೂ ಲಾಕರ್ ಅನ್ನು ಪಶ್ಚಿಮ ಇಲ್ಲವೆ ದಕ್ಷಿಣ ದಿಕ್ಕಿನೆಡೆಗೆ ಇಡಬಾರದು.
ನೀರಿನ ಟ್ಯಾಂಕ್ ತಪ್ಪು ದಿಕ್ಕಿಗೆ ಇಡಬೇಡಿ
ನಿಮ್ಮ ಮನೆಯಲ್ಲಿ ನೀರಿನ ಟ್ಯಾಂಕ್ ಇದ್ದರೆ ಅದನ್ನು ಟೆರೆಸ್ ಮೇಲೆ ಇರಿಸುತ್ತೇವೆ. ಆದರೆ ಆ ಟ್ಯಾಂಕ್ ಅನ್ನು ಆಗ್ನೇಯ ಅಥವಾ ಈಶಾನ್ಯ ಮೂಲೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಸಂಪತ್ತು ಮತ್ತು ಆರೋಗ್ಯದಲ್ಲಿ ವೇಗದ ಬದಲಾವಣೆ ಹಾಗೂ ಯಶಸ್ಸು ಸಾಧಿಸಬಹುದು ಎಂಬುದು ವಾಸ್ತುಶಾಸ್ತ್ರದ ಉಲ್ಲೇಖವಾಗಿದೆ.
ಮನೆಯಲ್ಲಿ ವಾಸ್ತು ಗಿಡಗಳು ಇರಲಿ
ಮನೆಯಲ್ಲಿ ಗಿಡಗಳನ್ನು ಇಟ್ಟುಕೊಳ್ಳುವುದು ಮನೆಯಲ್ಲಿ ಧನಾತ್ಮಕ ಶಕ್ತಿ ವೃದ್ಧಿಗೆ ಕಾರಣವಾಗುತ್ತದೆ. ಸ್ತು ಶಾಸ್ತ್ರದ ಪ್ರಕಾರ, ವಿವಿಧ ಸಸ್ಯಗಳು ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿವೆ. ಕೆಲವು ಸಸ್ಯಗಳು ಮನೆಯಲ್ಲಿ ಹಣ ಮತ್ತು ಸಂಪತ್ತನ್ನು ಆಕರ್ಷಿಸುತ್ತವೆ. ಈ ಸಸ್ಯಗಳಲ್ಲಿ ಮನಿ ಪ್ಲಾಂಟ್, ಬಿದಿರಿನ ಸಸ್ಯ ಮತ್ತು ರಬ್ಬರ್ ಪ್ಲಾಂಟ್ ಸೇರಿವೆ. ಈ ಸಸ್ಯಗಳನ್ನು ಮನೆಯೊಳಗೆ ಇಟ್ಟು ಪೋಷಿಸಬೇಕು. ಜೊಗೆಗೆ ಅವುಗಳನ್ನು ಇಡುವ ಜಾಗವೂ ಹೊಂದಾಣಿಕೆಯಾಗಬೇಕು.
ತಾಮ್ರದ ಸ್ವಸ್ತಿಕ್ ಇಡುವುದು
ಮನೆಯಲ್ಲಿ ತಾಮ್ರದಿಂದ ಮಾಡಲಾಗಿರುವ ಸ್ವಸ್ತಿಕ್ ಚಿಹ್ನೆಯನ್ನು ಇಡುವುದು ಸಹ ಸಂಪತ್ತು ಮತ್ತು ಶಾಂತಿಯ ಸಂಕೇತವಾಗಿದೆ. ಜೊತೆಗೆ ಹಣದ ಸಮಸ್ಯೆಗೆ ಪರಿಹಾರ ಬೇಕೆಂದರೆ ನೀವು ತಾಮ್ರದಿಂದ ಮಾಡಲಾದ ಸ್ವಸ್ತಿಕ್ ಅನ್ನು ಮನೆಯ ಆಗ್ನೇಯ ಭಾಗದ ಗೋಡೆಯ ಮೇಲೆ ಇಡಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.



Click it and Unblock the Notifications