Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಉತ್ತಮ ಆರೋಗ್ಯಕ್ಕೆ ಮನೆಯ ವಾಸ್ತು ಹೀಗಿರಲಿ
ಆರೋಗ್ಯ ಪ್ರತಿಯೊಬ್ಬರಿಗೂ ಅತೀ ಅಗತ್ಯ. ಆರೋಗ್ಯವಿಲ್ಲದೆ ಇದ್ದರೆ ಆಗ ವಿವಿಧ ರೀತಿಯ ಸಮಸ್ಯೆಗಳು ಕಾಡುವುದು. ಆರೋಗ್ಯವು ಸಂಪತ್ತನ್ನು ಹೆಚ್ಚಿಸಿದರೆ, ಅದೇ ಅನಾರೋಗ್ಯವು ಸಂಪತ್ತನ್ನು ಕರಗಿಸುವುದು. ಹೀಗಾಗಿ ಉತ್ತಮ ಆರೋಗ್ಯವಂತ ಜೀವನ ನಡೆಸಲು ಕೆಲವೊಂದು ವಾಸ್ತುಶಾಸ್ತ್ರದ ವಿಧಾನಗಳನ್ನು ಅಳವಡಿಸಿಕೊಂಡು ಹೋಗಬೇಕು. ವಾಸ್ತು ಕೇವಲ ನಿರ್ಮಾಣ ಕಾರ್ಯಗಳಿಗೆ ಮಾತ್ರ ಸೀಮಿತವಾಗದೆ ನಮ್ಮ ಆರೋಗ್ಯಕ್ಕೂ ಇದನ್ನು ಅಳವಡಿಸಿಕೊಳ್ಳಬಹುದು.

ಉತ್ತಮ ಆರೋಗ್ಯ ಹಾಗೂ ಮನೆಯಲ್ಲಿ ಕುಟುಂಬ ಸದಸ್ಯರು ಸಂತೋಷವಾಗಿ ಇರಬೇಕಾದರೆ ಪಾಲಿಸಬೇಕಾದ ಆರೋಗ್ಯ ಕ್ರಮಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಮಲಗುವ ದಿಕ್ಕು
ಸಂಪೂರ್ಣ ಆರೋಗ್ಯ ಪಡೆಯಬೇಕಾದರೆ ದಕ್ಷಿಣಕ್ಕೆ ತಲೆಯಿಟ್ಟು ಮಲಗಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾತ ಮತ್ತು ಕಫ ದೇಹ ಪ್ರಕೃತಿ ಹೊಂದಿರುವಂತಹವರು ಎಡ ಬದಿಗೆ ಮಲಗಬೇಕು ಮತ್ತು ಪಿತ್ತ ಪ್ರವೃತ್ತಿ ಹೊಂದಿರುವ ದೇಹದವರು ಬಲದ ಬದಿಗೆ ಮಲಗಬೇಕು.

ಮನೆಯ ಮೆಟ್ಟಿಲು
ಮನೆಯಲ್ಲಿ ಮೆಟ್ಟಿಲುಗಳು ಮನೆಯ ಮಧ್ಯಭಾಗದಲ್ಲಿ ಇರಲೇಬಾರದು. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಬರುವುದು. ಹೀಗಾಗಿ ಒಂದೇ ಬದಿಗೆ ಇದನ್ನು ಅಳವಡಿಸಿ.

ಬ್ರಹ್ಮಸ್ಥಾನ ಖಾಲಿ
ಮನೆಯ ಮಧ್ಯ ಭಾಗವನ್ನು ಬ್ರಹ್ಮಸ್ಥಾನ ಎಂದು ಕರೆಯಲಾಗುತ್ತದೆ. ಈ ಭಾಗವು ಯಾವಾಗಲೂ ಖಾಲಿಯಾಗಿ ಇರಬೇಕು. ಕೇಂದ್ರ ಭಾಗದಲ್ಲಿ ಯಾವುದೇ ಪೀಠೋಪಕರಣಗಳನ್ನು ಇಡಬೇಡಿ. ಈ ಭಾಗವು ಖಾಲಿಯಾಗಿರಲಿ. ಮನೆಯ ಕೇಂದ್ರ ಭಾಗದಿಂದ ಕೆಲವು ಕಂಬಗಳು ಹೋಗಿರುವುದು ಒತ್ತಡ ಹಾಗೂ ಮನಸ್ಥಿತಿಯಲ್ಲಿ ಗೊಂದಲ ಉಂಟು ಮಾಡುವುದು.

ಸ್ಪಟಿಕದ ಜಾಲರಿ
ಮನೆಯ ಮಧ್ಯ ಭಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ಮಾಡಬೇಡಿ. ಬ್ರಹ್ಮಸ್ಥಾನವು ಎಲ್ಲಾ ಕಂಬ ಅಥವಾ ಪೀಠೋಪಕರಣಗಳಿಂದ ಮುಕ್ತವಾಗಿ ಇರಬೇಕು. ಈ ಭಾಗವು ಖಾಲಿ ಇರಲಿ. ಸ್ಪಟಿಕದ ಜಾಲರಿ ಇದಕ್ಕೆ ಅಳವಡಿಸಿಕೊಂಡರೆ ಆಗ ಖಂಡಿತವಾಗಿಯೂ ಮನೆಯಲ್ಲಿ ಧನಾತ್ಮಕ ಶಕ್ತಿಯು ಬರುವುದು.

ಅಗ್ನಿಯ ಸಮತೋಲನ
ಮನೆಯಲ್ಲಿ ಅಗ್ನಿಯ ಅಸಮತೋಲನದಿಂದಾಗಿ ಅನಾರೋಗ್ಯವು ಕುಟುಂಬ ಸದಸ್ಯರನ್ನು ಬಾಧಿಸಬಹುದು. ಇದಕ್ಕೆ ನೀವು ಕೆಲವೊಂದು ವಿಧಾನಗಳನ್ನು ಅನುಸರಿಸಿಕೊಂಡು ಹೋಗಬೇಕು. ಮನೆಯು ದಕ್ಷಿಣ ಭಾಗಕ್ಕೆ ಮುಖಮಾಡಿ ಇಳಿಜಾರಾಗಿ, ಜನರೇಟರ್ ಕೋಣೆಯು ವಾಯುವ್ಯ ದಿಕ್ಕು ಮತ್ತು ನೀರಿನ ಭೂಗರ್ಭದ ಟಾಂಕ್ ಆಗ್ನೇಯ ಭಾಗದಲ್ಲಿ ಇದ್ದರೆ ಆಗ ಅಗ್ನಿಯ ಸಮತೋಲನವು ಇಲ್ಲ ಎಂದು ಹೇಳಬಹುದು.

ಆಗ್ನೇಯ ದಿಕ್ಕಲ್ಲಿ ದೀಪ
ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಭಾಗದಲ್ಲಿ ಇರುವಂತಹ ಪ್ರವೇಶದ್ವಾರದ ಗೇಟ್ ಅನ್ನು ಆದಷ್ಟು ಮಟ್ಟಿಗೆ ಮುಚ್ಚಿಡಿ. ಮರದ ಗೇಟ್ ಮಾಡಿಕೊಂಡು ಹೊರಗಿನ ರಸ್ತೆಯು ಕಾಣದಂತೆ ಮಾಡಿ. ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ಮನೆಯ ಆಗ್ನೇಯ ದಿಕ್ಕಿನಲ್ಲಿ ದೀಪ ಬೆಳಗಿ.



Click it and Unblock the Notifications









