Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮನೆಯಲ್ಲಿ ಗೂಡು ಕಟ್ಟಿದ ಜೇನುನೊಣಗಳಿಂದ ಮುಕ್ತಿ ಹೇಗೆ?
ಹೂವಿನಿಂದ ಹೂವಿಗೆ ಹಾರುತ್ತಾ ಮಕರಂದವನ್ನು ಹೀರಿ ಅದರಿಂದ ಸಿಹಿಯಾದ ಜೇನು ತಯಾರಿಸುವ ಜೇನ್ನೊಣಗಳು ಪರೋಪಕಾರಿ ಜೀವಿಗಳಾಗಿವೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಜೇನು ಹುಳುಗಳು ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆಯೇ ನಮಗೆ ಸಹಾಯವನ್ನು ಮಾಡುತ್ತವೆ. ಕಷ್ಟಪಟ್ಟು ಜೇನು ಸಂಪಾದಿಸಿ ಅದನ್ನು ನಮಗೆ ನೀಡುತ್ತವೆ ಅಂತೆಯೇ ಆದಾಯದ ಹೊಸ ಹಾದಿಯನ್ನು ಇವು ನಮಗೆ ತೋರಿಸಿವೆ.
ಇಂದು ಎಷ್ಟೋ ನಿರುದ್ಯೋಗಿಗಳು ಜೇನು ಕೃಷಿಯ ಮೂಲಕ ತಮ್ಮ ಜೀವನದಲ್ಲಿ ಬೆಳಕನ್ನು ಕಂಡುಕೊಂಡಿದ್ದಾರೆ. ಕಡಿಮೆ ಬಂಡವಾಳದಲ್ಲಿ ಹೆಚ್ಚುವರಿ ಆದಾಯವನ್ನು ಗಳಿಸುವ ಜೇನು ವ್ಯವಸಾಯ ಇಂದು ಮಾರುಕಟ್ಟೆಯಲ್ಲಿ ಉತ್ತಮ ಹೆಸರನ್ನು ಗಳಿಸಿದೆ. ಆದರೆ ಜೇನು ಕೃಷಿ ನಾವಂದುಕೊಂಡಷ್ಟೇ ಸುಲಭದಲ್ಲಿ ನಮ್ಮ ಕೈಗೆ ಬರುವಂತಹದ್ದಲ್ಲ. ಮುಟ್ಟಿದರೆ ಮುನಿ ಎಂಬಂತಿರುವ ಜೇನ್ನೊಣಗಳ ದೃಷ್ಟಿಗೆ ನಾವು ಬಿದ್ದರಂತೂ ಅದರಿಂದ ತಪ್ಪಿಸಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಇಂತಹ ಅತಿಥಿಗಳನ್ನು ಮನೆಯಿಂದ ಆದಷ್ಟು ಬೇಗ ಓಡಿಸಿ!

ಅದಾಗ್ಯೂ ಒಮ್ಮೊಮ್ಮೆ ಚಿಕ್ಕಮಕ್ಕಳು ಅಂತೆಯೇ ದೊಡ್ಡವರು ಕೂಡ ಜೇನ್ನೊಣದ ಕಡಿತಕ್ಕೆ ಒಳಗಾಗುತ್ತಾರೆ. ಜೇನು ಹುಳುಗಳು ಭಾರೀ ಗಾತ್ರದಲ್ಲಿ ಗೂಡು ಕಟ್ಟಿಬಿಡುತ್ತವೆ. ಮಕ್ಕಳಿರುವ ಮನೆಯಲ್ಲಿ ಈ ಗೂಡುಗಳು ಅಪಾಯಕಾರಿಯಾಗಿವೆ. ಅಂತೆಯೇ ಅವುಗಳ ಗೂಡಿಗೆ ಯಾವುದೋ ಕಾರಣಕ್ಕೆ ಹಾನಿಯುಂಟಾಯಿತು ಎಂದಾದಲ್ಲಿ ಅವುಗಳು ಏಕಾಏಕಿಯಾಗಿ ದಾಳಿಮಾಡಿಬಿಡುತ್ತವೆ. ಹಾಗಿದ್ದರೆ ಇವುಗಳನ್ನು ಹಾಗಿದ್ದರೆ ಜೇನ್ನೊಣಳಗಳ ಕಡಿತದಿಂದ ತಪ್ಪಿಸಿಕೊಂಡು ಜೇನು ಪಡೆಯುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳಲಿದ್ದೇವೆ.
ಸೋಪು ನೀರು
ಜೇನ್ನೊಣಗಳಿಂದ ಸಂರಕ್ಷಣೆಯನ್ನು ಪಡೆದುಕೊಳ್ಳಲು ಸೋಪು ನೀರು ಉತ್ತಮವಾಗಿದೆ. ಒಂದು ಭಾಗಷ್ಟು ದ್ರವ ರೂಪದ ಸೋಪು ನೀರನ್ನು ತೆಗೆದುಕೊಳ್ಳಿ ಮತ್ತು 4 ಭಾಗದಷ್ಟು ನೀರನ್ನು ಇದರೊಂದಿಗೆ ಮಿಶ್ರ ಮಾಡಿ. ಸ್ಪ್ರೇ ಬಾಟಲಿಗೆ ಹಾಕಿ. ಸ್ಪ್ರೇ ಮಾಡುವ ಮುನ್ನ ನಿಮ್ಮ ದೇಹವನ್ನು ಬಟ್ಟೆಗಳಿಂದ ಮುಚ್ಚಿಕೊಳ್ಳಿ.
ವಿನೇಗರ್
ಜೇನು ಗೂಡಿಗೆ ವಿನೇಗರ್ ಸಿಂಪಡಿಸುವುದೂ ಉತ್ತಮ ಸಲಹೆಯಾಗಿದೆ. ಮುಕ್ಕಾಲು ನೀರಿಗೆ 1 ಚಮಚದಷ್ಟು ವಿನೇಗರ್ ಅನ್ನು ಮಿಶ್ರ ಮಾಡಿ ಮತ್ತು ಸ್ಪ್ರೇ ಬಾಟಲಿಗೆ ಇದನ್ನು ಹಾಕಿ. ಜೇನು ಗೂಡಿಗೆ ಸ್ಪ್ರೇ ಮಾಡಿ. ಇದರ ವಾಸನೆಯನ್ನು ಜೇನ್ನೊಣಗಳಿಗೆ ತಡೆಯಲಾಗುವುದಿಲ್ಲ.
ಸೋಡಾ ಪಾಪ್
ಸೋಡಾ ಬಾಟಲ್ ಮತ್ತು ಸಿಹಿಯಾದ ಮೌಂಟನ್ ಡ್ಯೂ ಅಥವಾ ಸ್ಪ್ರೈಟ್ ಪಾನೀಯವನ್ನು ತೆಗೆದುಕೊಳ್ಳಿ. ಹಳೆಯ ಸೋಡಾ ಬಾಟಲಿಯನ್ನು ಅರ್ಧಕ್ಕೆ ತುಂಡರಿಸಿ. ತದನಂತರ ಅದಕ್ಕೆ ಸಿಹಿ ಸೋಡಾವನ್ನು ಹಾಕಿ ಮತ್ತು ಗಾರ್ಡನ್ ಬಳಿ ನೇತು ಹಾಕಿ. ಸೋಡಾದ ಪರಿಮಳವು ಜೇನ್ನೊಳಗಳನ್ನು ಆಕರ್ಷಿಸುತ್ತದೆ ಮತ್ತು ದ್ರಾವಣದಲ್ಲಿ ಅವು ಬಿದ್ದು ಸಾಯುತ್ತವೆ.
ಜೇಪರ್
ಜೇಪರ್ ವಸ್ತುವನ್ನು ನೋಡಿದ್ದೀರಾ? ಇದೊಂದು ಇಲೆಕ್ಟ್ರಾನಿಕ್ ಡಿವೈಸ್ ಆಗಿದ್ದು ಇದು ಕೀಟಗಳನ್ನು ಕೊಲ್ಲುತ್ತದೆ. ಸೂಪರ್ ಮಾರ್ಕೆಟ್ ಮತ್ತು ಗ್ರಾಸರಿ ಅಂಗಡಿಗಳಲ್ಲಿ ಇದು ಲಭ್ಯವಿದೆ. ನೀವು ಒಂದನ್ನು ಖರೀದಿಸಿ ಮತ್ತು ಗೂಡಿನ ಬಳಿ ಇದನ್ನು ಇರಿಸಿ. ಈ ಅಂಟಾದ ಸಾಮಾಗ್ರಿಗೆ ಜೇನ್ನೊಣಗಳು ಸಿಕ್ಕಿ ಹಾಕಿಕೊಳ್ಳುತ್ತವೆ ಮತ್ತು ಅವುಗಳಿಗೆ ಹಾರಲಾಗುವುದಿಲ್ಲ.
ಬೆಳ್ಳುಳ್ಳಿ ಪೌಡರ್
ಮೊದಲೇ ನಾವು ತಿಳಿಸಿರುವಂತೆ, ಜೇನ್ನೊಣಗಳು ಪರಿಮಳಕ್ಕೆ ಆಕರ್ಷಣೆಗೊಳ್ಳುತ್ತವೆ. ಬೆಳ್ಳುಳ್ಳಿ ಹುಡಿ ಕೂಡ ಅತ್ಯುತ್ತಮವಾಗಿದೆ. ಜೇನು ಗೂಡಿನ ಬಳಿ ಬೆಳ್ಳುಳ್ಳಿ ಹುಡಿಯನ್ನು ಸಿಂಪಡಿಸಿ. ಅಂತೆಯೇ ಅವುಗಳಿಗೆ ಗೂಡಿನ ಬಳಿ ಬರಲಾಗುವುದಿಲ್ಲ. ಇದರಿಂದ ಹುಳಗಳು ನಿಮ್ಮ ಮನೆಯನ್ನು ಬಿಟ್ಟು ಬೇರೆ ಕಡೆ ಹೊರಟು ಹೋಗುತ್ತವೆ.



Click it and Unblock the Notifications



