Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಮಳೆಗಾಲದಲ್ಲಿ ಕೈ ತೋಟದ ಆರೈಕೆ
ಹೂ ಗಿಡಗಳನ್ನು ಹೆಚ್ಚಾಗಿ ಮಳೆಗಾಲದ ಸಮಯದಲ್ಲಿ ನೆಡಲಾಗುವುದು. ಅದರಲ್ಲೂ ಮಳೆ ಜೋರಾಗಿ ಪ್ರಾರಂಭವಾಗುವ ಮುನ್ನ ಹೂಗಿಡಗಳನ್ನು ನೆಡಲಾಗುವುದು. ಈ ಸಮಯದಲ್ಲಿ ಗಿಡಗಳನ್ನು ನೆಟ್ಟರೆ, ಗಿಡಗಳಿಗೆ ನೀರಿನ ಕೊರತೆ ಉಂಟಾಗುವುದಿಲ್ಲ. ಆದರೆ ಹೀಗೆ ನೆಡುವ ಗಿಡವನ್ನು ಸರಿಯಾದ ಕ್ರಮದಲ್ಲಿ ಆರೈಕೆ ಮಾಡದಿದ್ದರೆ ಅಧಿಕ ತಂಪಿನಿಂದ ಗಿಡ ಕೊಳೆತು ಹೋಗುವುದು. ಆದ್ದರಿಂದ ಮಳೆಗಾಲದಲ್ಲಿ ಹೂ ತೋಟದ ಆರೈಕೆಗೆ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

1. ಗಿಡವನ್ನು ಹೂ ಕುಂಡದಲ್ಲಿ ನೆಡಬಯಸುವವರು ಬಿಳಿ ವಿನಿಗರ್, ರಬ್ಬಿಂಗ್ ಆಲ್ಕೋಹಾಲ್ ಮತ್ತು ನೀರು ಹಾಕಿ ಮಿಶ್ರ ಮಾಡಿ ಅದನ್ನು ಒಂದು ಬ್ರೆಷ್ ನಿಂದ ಮಣ್ಣಿನ ಹೂಕುಂಡಕ್ಕೆ ಪೇಯಿಂಟ್ ಮಾಡಿದ ರೀತಿ ಮಾಡಿ, ನಂತರ ಆ ಹೂಕುಂಡಗಳನ್ನು ಒಣಗಿಸಿ ನಂತರ ಅದರಲ್ಲಿ ಮಣ್ಣು ತುಂಬಿ ಗಿಡ ನೆಡಬೇಕು.
2. ಹೂತೋಟದ ಆರೈಕೆ ಮಾಡುವಾಗ ಉಗುರಿನಲ್ಲಿ ಮಣ್ಣು ಸೇರದಿರಲು ಸೋಪನ್ನು ಉಗುರಿನಿಂದ ಗೀರಬೇಕು. ಆಗ ಸೋಪು ಉಗುರಿನಲ್ಲಿ ಸೇರಿಕೊಳ್ಳುವುದು. ಈ ರೀತಿ ಮಾಡಿದರೆ ಉಗುರಿನಲ್ಲಿ ಮಣ್ಣು ಸೇರಲು ಸಾಧ್ಯವಾಗುವುದಿಲ್ಲ. ನಂತರ ಕೆಲಸ ಮುಗಿದ ನಂತರ ಉಗುರನ್ನು ಹಳೆಯ ಹಲ್ಲುಜ್ಜುವ ಬ್ರೆಷ್ ಬಳಸಿ ತಿಕ್ಕಿ ತೊಳೆದರೆ ಉಗುರು ಸ್ವಚ್ಛವಾಗುವುದು.
3. ತೋಟ ಆರೈಕೆಯಲ್ಲಿ ಬಳಸುವ ಪರಿಕರಗಳನ್ನು ಬಳಸುವ ಮುನ್ನ ಅದಕ್ಕೆ ವನಸ್ಪತಿ ಎಣ್ಣೆ ಸವರಿದರೆ ಒಳ್ಳೆಯದು.
4. ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಸ್ವಲ್ಪ ಅಂತರ ಇರಬೇಕು. ತುಂಬಾ ಹತ್ತಿರ ಗಿಡಗಳನ್ನು ನೆಟ್ಟರೆ ಅದಕ್ಕೆ ಸರಿಯಾಗಿ ಬೆಳೆಯಲು ಸ್ಥಳಾವಕಾಶವಿಲ್ಲದೆ ಗಿಡಗಳು ಸೊರಗುವುದು
5. ಮಳೆಗಾಲದಲ್ಲಿ ಗಿಡವನ್ನು ನೆಡುವುದಾದರೆ ಅಧಿಕ ಮಳೆಯಿಲ್ಲದ ಸಮಯದಲ್ಲಿ ನೆಡುವುದು ಒಳ್ಳೆಯದು. ತುಂಬಾ ಮಳೆ ಬಿದ್ದರೆ ಪುಟ್ಟ ಗಿಡಗಳು ಕೊಳೆತು ಹೋಗುವುದು.
6. ಮಳೆಗಾಲದಲ್ಲಿ ಹೂ ಕುಂಡದಲ್ಲಿರುವ ಗಿಡಗಳಿಗೆ ಪ್ರತಿದಿನ ನೀರು ಹಾಕುವ ಅವಶ್ಯಕತೆಯಿಲ್ಲ.
7. ಕೊಳೆತ ತರಕಾರಿಗಳನ್ನು ಬಿಸಾಡುವ ಬದಲು ಅದನ್ನು ಗಿಡದ ಬುಡದಲ್ಲಿ ಹಾಕಿದರೆ ಗಿಡಕ್ಕೆ ಒಳ್ಳೆಯ ಗೊಬ್ಬರವಾಗುವುದು.
8. ಗಾರ್ಡನ್ ಅಥವಾ ಹೂ ತೋಟಕ್ಕೆ ಗೊಬ್ಬರ ಹಾಕ ಬಯಸುವವರು ಈ ಸಮಯದಲ್ಲಿ ಹಾಕುವುದು ಒಳ್ಳೆಯದು. ತುಂಬಾ ಮಳೆಯ ಸಮಯದಲ್ಲಿ ಗೊಬ್ಬರ ಹಾಕಿದರೆ ಗೊಬ್ಬರ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದರಿಂದ, ಗಿಡಕ್ಕೆ ಯಾವುದೇ ಫಲ ಸಿಗುವುದಿಲ್ಲ.
9. ಟೀ ಮತ್ತು ಕಾಫಿ ಮಾಡಿದ ಮಡ್ಡಿಯನ್ನು ಬಿಸಾಡದೆ ಅದನ್ನು ಗಿಡಕ್ಕೆ ಹಾಕಿದರೆ ಗಿಡ ಸೊಗಸಾಗಿ ಬೆಳೆಯುತ್ತದೆ.
10. ಗಿಡಗಳನ್ನು ಕೀಟನಾಶಕದಿಂದ ರಕ್ಷಿಸಲು ಮದ್ದು ಸಿಂಪಡಿಸುವುದಾದರೆ ಮಳೆ ಇದ್ದಾಗ ಸಿಂಪಡಿಸಬಾರದು. ಸ್ವಲ್ಪ ಬಿಸಿಲಿರುವ ದಿನ ನೋಡಿ ಮದ್ದು ಸಿಂಪಡಿಸಬೇಕು.
11. ಈ ಸಮಯದಲ್ಲಿ ಹೂ ತೋಟದ ಮಣ್ಣನ್ನು ಅಗೆದು ಸಡಿಲ ಮಾಡುವುದು ಒಳ್ಳೆಯದು. ಇದರಿಂದ ನೀರು ಚೆನ್ನಾಗಿ ಇಂಗುವುದು, ಗಿಡ ಕೂಡ ಫಲವತ್ತಾಗಿ ಬೆಳೆಯುತ್ತದೆ.
12. ಹೂ ತೋಟದಲ್ಲಿ ನೀರು ನಿಲ್ಲದಂತೆ ಚಿಕ್ಕ ಚರಂಡಿಗಳನ್ನು ತೋಡಿದರೆ ಚಿಕ್ಕ ಗಿಡಗಳು ಕೊಳೆಯುವುದನ್ನು ತಪ್ಪಿಸಬಹುದು.



Click it and Unblock the Notifications











