Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಬಿಸಿ ನೀರಿಗೆ ಜೇನು ಹಾಕಿ ಕುಡಿದರೆ ದೇಹಕ್ಕೆ ಹಾನಿಕರವೇ?
ಬೆಳಗ್ಗೆ ಬಿಸಿ ನೀರಿಗೆ ಜೇನು ಹಾಕಿ ಕುಡಿದರೆ ತೂಕ ಇಳಿಕೆಗೆ ತುಂಬಾನೇ ಒಳ್ಳೆಯದು ಎಂದು ಹೇಳುವುದನ್ನು ಕೇಳಿರಬಹುದು. ಆದರೆ ಆಯುರ್ವೇದ ಜೇನನ್ನು ಬಿಸಿ ನೀರಿಗೆ ಹಾಕುವುದು ಒಳ್ಳೆಯದಲ್ಲ ಎಂಬುವುದಾಗಿ ಹೇಳುತ್ತದೆ. ಏಕೆ ಜೇನನ್ನು ಬಿಸಿ ನೀರಿಗೆ ಹಾಕಿ ಸೇವಿಸಬಾರದು, ಈ ಕುರಿತು ಆಯುರ್ವೇದ ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:

ಜೇನನ್ನು ಬಿಸಿ ನೀರಿಗೆ ಹಾಕಿ ಕುಡಿಯುವ ಉದ್ದೇಶ
ಮೈ ತೂಕ ಕಡಿಮೆ ಮಾಡಬೇಕು ಎಂದು ಬಯಸುವವರು ಜೇನನ್ನು ಬಿಸಿ ನೀರಿಗೆ ಹಾಕಿ ಕುಡಿಯುತ್ತಾರೆ. ಇದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ, ಕೊಬ್ಬು ಕರಗಿಸುತ್ತದೆ ಎಂದು ಹೇಳಲಾಗುವುದು. ಈ ಕಾರಣಕ್ಕೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಜೇನು ಹಾಕಿ ಕುಡಿಯುವ ಅಭ್ಯಾಸ ಹಲವರಲ್ಲಿದೆ, ಆದರೆ ಆಯುರ್ವೇದ ಇದು ಉತ್ತಮ ಆಯ್ಕೆಯಲ್ಲ ಎಂಬುವುದಾಗಿ ಹೇಳುತ್ತದೆ.
ಜೇನನ್ನು ಬಿಸಿ ನೀರಿಗೆ ಹಾಕಿ ಕುಡಿದರೆ ಸ್ಲೋ ಪಾಯಿಸನ್ ಆಗುವುದು
ಆಯುರ್ವೇದ ಪ್ರಕಾರ ಜೇನನ್ನು ಬಿಸಿ ನೀರಿಗೆ ಹಾಕಿ ಕುಡಿಯುವುದರಿಂದ ಆಮ ಅಥವಾ ವಿಷವಾಗುವುದು. ಇದು ಒಂದು ರೀತಿ ಸ್ಲೋ ಪಾಯಿಸನ್ ಅಂತೆ ಆಗುವುದು. ಜೇನನ್ನು ಬಿಸಿ ನೀರಿಗೆ ಹಾಕಿ ಸೇವಿಸಿದಾಗ ಆಮ ಅಥವಾ ಕಫದ ಅಂಶ ಹೆಚ್ಚಾಗುವುದು, ಇದರಿಂದ ಅನೇಕ ಸಮಸ್ಯೆಗಳು ಉಂಟಾಗುವುದು.
ಜೇನನ್ನು ನೈಸರ್ಗಿಕವಾಗಿಯೇ ಸೇವಿಸಬೇಕು
ಜೇನು ಹೇಗೆ ಸಿಗುವುದೋ ಹಾಗೆ ನೈಸರ್ಗಿಕವಾಗಿ ಸೇವಿಸಬೇಕು. ಜೇನನ್ನು ಬಿಸಿ ಮಾಡಿದರೆ ಅದು ವಿಷವಾಗುವುದು ಈ ಕಾರಣಕ್ಕೆ ಜೇನನ್ನು ಬಿಸಿ ನೀರಿಗೆ ಕೂಡ ಹಾಕಿ ಸೇವಿಸುವುದು ಒಳ್ಳೆಯದಲ್ಲ ಎಂಬುವುದಾಗಿ ಹೇಳಿದೆ.
ಜೇನನ್ನು ಬಿಸಿ ಮಾಡಬಾರದು
ಜೇನನ್ನು ನೀವು ಜ್ಯೂಸ್, ಸಲಾಡ್, ಮನೆ ಔಷಧಿ ಮಾಡುವಾಗ ಬಳಸಬಹುದು. ಅದೇ ಜೇನನ್ನು ಬೇಯಿಸುವಾಗ ಬಳಸಬಾರದು, ಇದರಿಂದ ಫುಡ್ ಪಾಯಿಸನ್ ಆಗಿ ಆಹಾರದ ಮೇಲೆ ಗಂಭೀರ ಪರಿಣಾಮ ಬೀರುವುದು, ಈ ಕಾರಣಕ್ಕೆ ಜೇನನ್ನು ಯಾವುದೇ ಕಾರಣಕ್ಕೆ ಬಿಸಿ ಮಾಡಬಾರದು ಎಂದು ಹೇಳಲಾಗುವುದು.
ಜೇನಿನಲ್ಲಿದೆ ಔಷಧೀಯ ಗುಣ
ನೈಸರ್ಗಿಕವಾಗಿ ಸಿಗುವ ಜೇನನ್ನು ಅನೇಕ ಆರೋಗ್ಯ ಸಮಸ್ಯೆ ಹೋಗಲಾಡಿಸಲು ಮನೆಮದ್ದಾಗಿ ಬಳಸಲಾಗುವುದು. ಕೆಮ್ಮು, ಶೀತ, ಕಫ ಈ ಬಗೆಯ ಸಮಸ್ಯೆ ಹೋಗಲಾಡಿಸಲು ಜೇನು ತುಂಬಾನೇ ಪರಿಣಾಮಕಾರಿಯಾಗಿದೆ. ನೀವು ಕಲಬೆರಿತ ಜೇನು ಬಳಸುವ ಬದಲಿಗೆ ಯಾವಾಗಲೂ ನೈಸರ್ಗಿಕವಾದ ಜೇನನ್ನೇ ಬಳಸಿ.
ಜೇನನ್ನು ಬಿಸಿ ಮಾಡಿದಾಗ ಏನಾಗುತ್ತದೆ?
* ಜೇನನ್ನು ಬಿಸಿ ಮಾಡಿದಾಗ ಅದರ ಆ್ಯಂಟಿಬ್ಯಾಕ್ಟಿರಿಯಾ ಅಂದರೆ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಗುಣ ಹಾಳಾಗುವುದು.
* ಇದರಲ್ಲಿರುವ ಆ್ಯಂಟಿಆಕ್ಸಿಡೆಂಡ್ ಗುಣಗಳು ನಾಶವಾಗುವುದು.
ಈ ಕಾರಣಕ್ಕೆ ಜೇನನ್ನು ಬಿಸಿ ನೀರಿಗೆ ಹಾಕಿ ಕುಡಿಯುವುದು ಆರೋಗ್ಯಕರವಲ್ಲ ಎಂದು ಆಯುರ್ವೇದ ಹೇಳುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications