Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
WHO ಶ್ರವಣ ದಿನದ ಪೋಸ್ಟರ್ನಲ್ಲಿ ಕೇರಳದ ಯುವತಿ: ಈಕೆಗೆ ಮೊತ್ತ ಮೊದಲು ಕಿವಿ ಕೇಳಿಸಿದ್ದೇ ತನ್ನ 6ನೇ ವಯಸ್ಸಿನಲ್ಲಿ
ಅದೋ ಪಕ್ಷಿಯ ಚಿಲಿಪಿಲಿ ಕೇಳಿಸುತ್ತಿದೆ, ಪಟ್ ಪಟ್ ಬೀಳುವ ಮಳೆ ಹನಿ, ಅರೇ ನನ್ನದೇ ಕಾಲ್ಗೆಜ್ಜೆ ಶಬ್ದ ಇಷ್ಟೊಂದು ಇಂಪಾಗಿದೆಯೇ, ಎಂದು 6 ವರ್ಷದ ಆ ಪುಟ್ಟ ಬಾಲಕಿ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದಳು. ಇಷ್ಟು ವರ್ಷ ಶಬ್ದ ಏನೆಂದೇ ಗೊತ್ತಿರದ ಬಾಲಕಿ ತನ್ನ 6ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಬ್ದ ಕೇಳಿ ಬಂದಾಗ ಖುಷಿ ಹೇಳತೀರದು.

ಮೊದಲ ಬಾರಿಗೆ ತನ್ನ ತಾಯಿಯ ಮಾತುಗಳು ಕಿವಿಗೆ ಬೀಳುತ್ತದೆ, 6 ವರ್ಷಗಳ ಕಾಲ ಕಿವಿ ಕೇಳದೆ ಕಳೆದ ಬಾಲಕಿಗೆ ಕಿವಿ ಕೇಳುವಂತಾಗಿದ್ದು ಯಾವುದೇ ಪವಾಡದಿಂದಲ್ಲ, ಬದಲಿಗೆ ತಕ್ಕ ಸಮಯಕ್ಕೆ ಆಕೆಗೆ ಇಯರಿಂಗ್ ಇಂಪ್ಲ್ಯಾಂಟ್ ಮಾಡಿದ್ದರಿಂದ ಆಕೆಗೆ ಕಿವಿ ಕೇಳಲು ಸಾಧ್ಯವಾಗಿದೆ. ಇದೀಗ ಅದೇ ಬಾಲಕಿ ವಿಶ್ವ ಆರೋಗ್ಯ ಸಂಸ್ಥೆಯ ಶ್ರವಣ ದಿನದ ಪೋಸ್ಟರ್ನಲ್ಲಿ ಕಾಣುವ ಮೂಲಕ ವಿಶ್ವದ ಗಮನ ಸೆಳೆದಿದ್ದಾಳೆ. ಈಕೆಯ ಹೆಸರಿ ರಿಜ್ವಾನ, ಭಾರತೀಯಳು.
ರಿಜ್ವಾನಾ ಕೇರಳದ ಗವರ್ನ್ಮೆಂಟ್ ಮೆಡಿಕಲ್ ಹಾಸ್ಪೆಟಲ್
ಕೋಟ್ಯಾಯಂನಲ್ಲಿ ಫೈನಲ್ ಇಯರ್ ಎಂಬಿಬಿಎಸ್ ವಿದ್ಯಾರ್ಥಿನಿ. ಹುಟ್ಟುವಾಗಲೇ ಕಿವಿ ಕೇಳುತ್ತದೆಯೇ ಎಂದು ಪರೀಕ್ಷೆ ಮಾಡಿದರೆ ಒಂದು ವೇಳೆ ಕಿವಿ ಕೇಳಿಸದೇ ಇದ್ದರೆ ಚಿಕ್ಕ ವಯಸ್ಸಿನಲ್ಲಿಯೇ ಕಾಕ್ಲಿಯರ್ ಇಂಪ್ಲಾಂಟೇಶನ್( cochlear implantation)ಮಾಡುವುದರಿಂದ ಸಹಜ ಜೀವನ ನಡೆಸಬಹುದು ಎಂಬುವುದಕ್ಕೆ ಉದಾಹರಣೆಯಾಗಿದ್ದಾರೆ..
ರಿಜ್ವಾನಾಳಿಗೆ ಒಂದು ವರ್ಷ ಇರುವಾಗ ಆಕೆಯ ಪೋಷಕರಿಗೆ ಅವಳಿಗೆ ಕಿವಿ ಕೇಳಲ್ಲ ಎಂಬುದು ತಿಳಿಯುತ್ತದೆ, ಆಗ ಅವರಿಗೆ ಕಾಕ್ಲಿಯರ್ ಇಂಪ್ಲಾಂಟೇಶನ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಅವರು ಅವಳಿಗೆ ಸ್ಪೀಚ್ ಥೆರಪಿ ಕೊಡಿಸುತ್ತಾರೆ, ಮನೆಯಲ್ಲಿಯೇ ಶಿಕ್ಷಣ ಕೊಡಿಸುತ್ತಾರೆ. ಆಕಎಗೆ 6 ವರ್ಷ ಇರುವಾಗ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡಿಸುತ್ತಾರೆ, ಆಗ ಆಕೆಗೆ ಮಾತು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುವುದಾಗಿ ವೈದ್ಯರು ಹೇಳಿದ್ದರು.
ನನ್ನ ಪೋಷಕರು ನಾನು ಮಾತನಾಡುವಂತಾಗಲು ಸ್ಪೀಚ್ ಥೆರಪಿ
ಕೊಡಿಸಿದರು, ತುಂಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದರು, ಆದರೆ ಯಾವಾಗ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡಲಾಯಿತೋ ನನಗೆ ಸರಿಯಾಗಿ ಕೇಳಿಸಲು, ಮಾತನಾಡಲು ಸಾಧ್ಯವಾಯಿತು ಎಂದು ರಿಜ್ವಾನಾ ಹೇಳಿದ್ದಾರೆ.
ಕಾಕ್ಲಿಯರ್ ಇಂಪ್ಲಾಂಟೇಶನ್ ಎಂದರೇನು?
ಕಾಕ್ಲಿಯರ್ ಇಂಪ್ಲಾಂಟೇಶನ್ ಎಂಬುವುದು ಎಲೆಕ್ಟ್ರಾನಿಕ್ ಸಾಧನವಾಗಿದೆ, ಕಿವಿಯ ಒಳಗಡೆ ನರವನ್ನು ವಿದ್ಯುತ್ತ್ ಉತ್ತೇಜಿಸುವ ಮೂಲಕ ( electrically stimulating) ಕಿವಿ ಕೇಳುವಂತಾಗುವುದು.
ಯಾವಾಗ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡಿಸುವುದು ಒಳ್ಳೆಯದು?
ಮಗುವಿಗೆ 18 ತಿಂಗಳು ತುಂಬುವ ಮುನ್ನ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡುವುದು ಒಳ್ಳೆಯದು, ಆಗ ಪ್ರಯೋಜನ ಹೆಚ್ಚು, ಈ ಕಾರಣಕ್ಕೆ ಮಕ್ಕಳಿಗೆ ಚಿಕ್ಕ ಪ್ರಾಯದಲ್ಲಿಯೇ ಕಿವಿ ಪರೀಕ್ಷೆ ಮಾಡಿಸಬೇಕು. ಬಹುತೇಕ ಆಸ್ಪತ್ರೆಗಳಲ್ಲಿ ಮಗು ಜನಿಸಿದಾಗಲೇ ಮಗುವಿಗೆ ಶ್ರವಣ ಶಕ್ತಿ ಇದೆಯೇ ಎಂದು ಪರೀಕ್ಷಿಸಲಾಗುವುದು.
ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡಿಸಿದ ಬಳಿಕ ಸ್ಪೀಚ್ ಥೆರಪಿ ಕೊಡಿಸಬೇಕಾಗುತ್ತದೆ.
ಭಾರತದಲ್ಲಿ 63 ಮಿಲಿಯನ್ ಜನರಲ್ಲಿ ಶ್ರವಣದೋಷವಿದೆ
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತದಲ್ಲಿ 63 ಮಿಲಿಯನ್ ಜನರಿಗೆ ಶ್ರವಣದೋಷವಿದೆ. ಅದರಲ್ಲಿ ಶೇ. 60ರಷ್ಟು ಮಕ್ಕಳಾಗಿದ್ದಾರೆ. ಅವರಿಗೆ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡುವುದರಿಂದ ಕಿವಿ ಕೇಳುವಂತೆ ಮಾಡಲಾಗುವುದು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಆರ್ಥಿಕವಾಗಿ ಹಿಂದುಳಿದವರಿಗೆ 7 ಲಕ್ಷದವರಿಗೆ ಆರ್ಥಿಕವಾಗಿ ದೊರೆಯಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
