Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
WHO ಶ್ರವಣ ದಿನದ ಪೋಸ್ಟರ್ನಲ್ಲಿ ಕೇರಳದ ಯುವತಿ: ಈಕೆಗೆ ಮೊತ್ತ ಮೊದಲು ಕಿವಿ ಕೇಳಿಸಿದ್ದೇ ತನ್ನ 6ನೇ ವಯಸ್ಸಿನಲ್ಲಿ
ಅದೋ ಪಕ್ಷಿಯ ಚಿಲಿಪಿಲಿ ಕೇಳಿಸುತ್ತಿದೆ, ಪಟ್ ಪಟ್ ಬೀಳುವ ಮಳೆ ಹನಿ, ಅರೇ ನನ್ನದೇ ಕಾಲ್ಗೆಜ್ಜೆ ಶಬ್ದ ಇಷ್ಟೊಂದು ಇಂಪಾಗಿದೆಯೇ, ಎಂದು 6 ವರ್ಷದ ಆ ಪುಟ್ಟ ಬಾಲಕಿ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದಳು. ಇಷ್ಟು ವರ್ಷ ಶಬ್ದ ಏನೆಂದೇ ಗೊತ್ತಿರದ ಬಾಲಕಿ ತನ್ನ 6ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಬ್ದ ಕೇಳಿ ಬಂದಾಗ ಖುಷಿ ಹೇಳತೀರದು.

ಮೊದಲ ಬಾರಿಗೆ ತನ್ನ ತಾಯಿಯ ಮಾತುಗಳು ಕಿವಿಗೆ ಬೀಳುತ್ತದೆ, 6 ವರ್ಷಗಳ ಕಾಲ ಕಿವಿ ಕೇಳದೆ ಕಳೆದ ಬಾಲಕಿಗೆ ಕಿವಿ ಕೇಳುವಂತಾಗಿದ್ದು ಯಾವುದೇ ಪವಾಡದಿಂದಲ್ಲ, ಬದಲಿಗೆ ತಕ್ಕ ಸಮಯಕ್ಕೆ ಆಕೆಗೆ ಇಯರಿಂಗ್ ಇಂಪ್ಲ್ಯಾಂಟ್ ಮಾಡಿದ್ದರಿಂದ ಆಕೆಗೆ ಕಿವಿ ಕೇಳಲು ಸಾಧ್ಯವಾಗಿದೆ. ಇದೀಗ ಅದೇ ಬಾಲಕಿ ವಿಶ್ವ ಆರೋಗ್ಯ ಸಂಸ್ಥೆಯ ಶ್ರವಣ ದಿನದ ಪೋಸ್ಟರ್ನಲ್ಲಿ ಕಾಣುವ ಮೂಲಕ ವಿಶ್ವದ ಗಮನ ಸೆಳೆದಿದ್ದಾಳೆ. ಈಕೆಯ ಹೆಸರಿ ರಿಜ್ವಾನ, ಭಾರತೀಯಳು.
ರಿಜ್ವಾನಾ ಕೇರಳದ ಗವರ್ನ್ಮೆಂಟ್ ಮೆಡಿಕಲ್ ಹಾಸ್ಪೆಟಲ್
ಕೋಟ್ಯಾಯಂನಲ್ಲಿ ಫೈನಲ್ ಇಯರ್ ಎಂಬಿಬಿಎಸ್ ವಿದ್ಯಾರ್ಥಿನಿ. ಹುಟ್ಟುವಾಗಲೇ ಕಿವಿ ಕೇಳುತ್ತದೆಯೇ ಎಂದು ಪರೀಕ್ಷೆ ಮಾಡಿದರೆ ಒಂದು ವೇಳೆ ಕಿವಿ ಕೇಳಿಸದೇ ಇದ್ದರೆ ಚಿಕ್ಕ ವಯಸ್ಸಿನಲ್ಲಿಯೇ ಕಾಕ್ಲಿಯರ್ ಇಂಪ್ಲಾಂಟೇಶನ್( cochlear implantation)ಮಾಡುವುದರಿಂದ ಸಹಜ ಜೀವನ ನಡೆಸಬಹುದು ಎಂಬುವುದಕ್ಕೆ ಉದಾಹರಣೆಯಾಗಿದ್ದಾರೆ..
ರಿಜ್ವಾನಾಳಿಗೆ ಒಂದು ವರ್ಷ ಇರುವಾಗ ಆಕೆಯ ಪೋಷಕರಿಗೆ ಅವಳಿಗೆ ಕಿವಿ ಕೇಳಲ್ಲ ಎಂಬುದು ತಿಳಿಯುತ್ತದೆ, ಆಗ ಅವರಿಗೆ ಕಾಕ್ಲಿಯರ್ ಇಂಪ್ಲಾಂಟೇಶನ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಅವರು ಅವಳಿಗೆ ಸ್ಪೀಚ್ ಥೆರಪಿ ಕೊಡಿಸುತ್ತಾರೆ, ಮನೆಯಲ್ಲಿಯೇ ಶಿಕ್ಷಣ ಕೊಡಿಸುತ್ತಾರೆ. ಆಕಎಗೆ 6 ವರ್ಷ ಇರುವಾಗ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡಿಸುತ್ತಾರೆ, ಆಗ ಆಕೆಗೆ ಮಾತು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುವುದಾಗಿ ವೈದ್ಯರು ಹೇಳಿದ್ದರು.
ನನ್ನ ಪೋಷಕರು ನಾನು ಮಾತನಾಡುವಂತಾಗಲು ಸ್ಪೀಚ್ ಥೆರಪಿ
ಕೊಡಿಸಿದರು, ತುಂಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದರು, ಆದರೆ ಯಾವಾಗ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡಲಾಯಿತೋ ನನಗೆ ಸರಿಯಾಗಿ ಕೇಳಿಸಲು, ಮಾತನಾಡಲು ಸಾಧ್ಯವಾಯಿತು ಎಂದು ರಿಜ್ವಾನಾ ಹೇಳಿದ್ದಾರೆ.
ಕಾಕ್ಲಿಯರ್ ಇಂಪ್ಲಾಂಟೇಶನ್ ಎಂದರೇನು?
ಕಾಕ್ಲಿಯರ್ ಇಂಪ್ಲಾಂಟೇಶನ್ ಎಂಬುವುದು ಎಲೆಕ್ಟ್ರಾನಿಕ್ ಸಾಧನವಾಗಿದೆ, ಕಿವಿಯ ಒಳಗಡೆ ನರವನ್ನು ವಿದ್ಯುತ್ತ್ ಉತ್ತೇಜಿಸುವ ಮೂಲಕ ( electrically stimulating) ಕಿವಿ ಕೇಳುವಂತಾಗುವುದು.
ಯಾವಾಗ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡಿಸುವುದು ಒಳ್ಳೆಯದು?
ಮಗುವಿಗೆ 18 ತಿಂಗಳು ತುಂಬುವ ಮುನ್ನ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡುವುದು ಒಳ್ಳೆಯದು, ಆಗ ಪ್ರಯೋಜನ ಹೆಚ್ಚು, ಈ ಕಾರಣಕ್ಕೆ ಮಕ್ಕಳಿಗೆ ಚಿಕ್ಕ ಪ್ರಾಯದಲ್ಲಿಯೇ ಕಿವಿ ಪರೀಕ್ಷೆ ಮಾಡಿಸಬೇಕು. ಬಹುತೇಕ ಆಸ್ಪತ್ರೆಗಳಲ್ಲಿ ಮಗು ಜನಿಸಿದಾಗಲೇ ಮಗುವಿಗೆ ಶ್ರವಣ ಶಕ್ತಿ ಇದೆಯೇ ಎಂದು ಪರೀಕ್ಷಿಸಲಾಗುವುದು.
ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡಿಸಿದ ಬಳಿಕ ಸ್ಪೀಚ್ ಥೆರಪಿ ಕೊಡಿಸಬೇಕಾಗುತ್ತದೆ.
ಭಾರತದಲ್ಲಿ 63 ಮಿಲಿಯನ್ ಜನರಲ್ಲಿ ಶ್ರವಣದೋಷವಿದೆ
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತದಲ್ಲಿ 63 ಮಿಲಿಯನ್ ಜನರಿಗೆ ಶ್ರವಣದೋಷವಿದೆ. ಅದರಲ್ಲಿ ಶೇ. 60ರಷ್ಟು ಮಕ್ಕಳಾಗಿದ್ದಾರೆ. ಅವರಿಗೆ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡುವುದರಿಂದ ಕಿವಿ ಕೇಳುವಂತೆ ಮಾಡಲಾಗುವುದು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಆರ್ಥಿಕವಾಗಿ ಹಿಂದುಳಿದವರಿಗೆ 7 ಲಕ್ಷದವರಿಗೆ ಆರ್ಥಿಕವಾಗಿ ದೊರೆಯಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
