Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೆನಪಿಡಿ, ಮಳೆಗಾಲದಲ್ಲಿ ಮೀನು ಆರೋಗ್ಯಕ್ಕೆ ಒಳ್ಳೆಯದಲ್ಲ...
ಮಳೆಗಾಲದಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವ ಕಾರಣದಿಂದ ಮೀನು ಹಿಡಿಯಬಾರದು ಎಂದು ಸುಮಾರು 60 ದಿನಗಳ ಕಾಲ ಮೀನುಗಾರರಿಕೆಗೆ ನಿಷೇಧ ಹೇರಲಾಗುತ್ತದೆ. ಆದರೆ ಕೆಲವು ಮಂದಿ ಕದ್ದುಮುಚ್ಚಿ ಮೀನುಗಾರಿಕೆ ನಡೆಸುವರು. ಇದರಿಂದ ಮೀನುಗಳ ಸಂತತಿ ನಾಶವಾಗುವುದು ಮಾತ್ರವಲ್ಲದೆ ಮುಂದಿನ ಜನಾಂಗಕ್ಕೆ ಮೀನು ಸಿಗದೇ ಇರಬಹುದು. ಈಗಾಗಲೇ ಕೈಗಾರಿಕೆಯ ಕಲುಷಿತ ನೀರನ್ನು ಬಿಟ್ಟು ಮತ್ಸ್ಯ ಸಂತತಿಯ ನಾಶ ಮಾಡಲಾಗಿದೆ.
ವಿದೇಶಗಳಿಗೆ ರಫ್ತಾಗುವಂತಹ ಮೀನಿನ ಸಂತತಿ ನಾಶವಾದರೆ ಅದರಿಂದ ಆರ್ಥಿಕವಾಗಿಯೂ ಮುಂದೆ ಭಾರೀ ಪರಿಣಾಮ ಬೀರಲಿದೆ. ಆದರೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ಮಳೆಗಾಲದಲ್ಲಿ ಮೀನು ತಿನ್ನುವುದು ಸರಿಯೇ ಎನ್ನುವ ಬಗ್ಗೆ ನಿಮಗೆ ತಿಳಿಸಿಕೊಡಲಿದೆ. ಕೆಲವೊಂದು ಆರೋಗ್ಯ ಕಾರಣಗಳಿಂದಾಗಿ ಮಳೆಗಾಲದಲ್ಲಿ ಮೀನು ತಿನ್ನಬಾರದು ಎಂದು ಹೇಳಲಾಗುತ್ತದೆ. ಇದು ಯಾಕೆ ಎಂದು ತಿಳಿಯಲು ಮುಂದೆ ಕಣ್ಣು ಹಾಯಿಸಿ....

ಮಳೆಗಾಲದಲ್ಲಿ ಜೀರ್ಣಾಂಗ ವ್ಯವಸ್ಥೆಯು ದುರ್ಬಲ
ಮಳೆಗಾಲದ ಸಮಯದಲ್ಲಿ ಜೀರ್ಣಾಂಗ ವ್ಯವಸ್ಥೆಯು ತುಂಬಾ ದುರ್ಬಲವಾಗಿರುವುದು. ಹೆಚ್ಚು ಭಾರವಾಗಿರುವುದನ್ನು ತಿಂದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಉಂಟಾಗಬಹುದು. ಮಳೆಗಾಲದಲ್ಲಿ ಮಂಸಾಹಾರವನ್ನು ತ್ಯಜಿಸಿದರೆ ತುಂಬಾ ಒಳ್ಳೆಯದು.

ಮಳೆಗಾಲದಲ್ಲಿ ನೀರು ಕಲುಷಿತವಾಗುವುದು
ಮಳೆಗಾಲದಲ್ಲಿ ನೀರು ಕಲುಷಿತವಾಗುವುದು ಸಾಮಾನ್ಯ. ಕಲುಷಿತ ನೀರಿನಿಂದ ಹಿಡಿದ ಮೀನನ್ನು ನೀವು ತಿಂದರೆ ಕಾಲರಾ, ಅತಿಸಾರ, ಕಾಮಾಲೆ ಮತ್ತು ಟೈಫಾಯ್ಡ್ ಆಗಬಹುದು.

ಮೀನುಗಳ ಮೊಟ್ಟೆ ಹೊಟ್ಟೆ ಸೇರಿದರೆ ಏನಾಗಬಹುದು?
ಮಳೆಗಾಲದಲ್ಲಿ ಹೆಚ್ಚಾಗಿ ಮೀನುಗಳು ಮೊಟ್ಟೆಯಿಡುವ ಸಮಯವಾಗಿದೆ. ಮೊಟ್ಟೆಯಿರುವ ಮೀನನ್ನು ನೀವು ತಿಂದರೆ ಆಗ ಆಹಾರ ವಿಷವಾಗಬಹುದು ಅಥವಾ ಹೊಟ್ಟೆಯಲ್ಲಿ ಸೋಂಕು ಕಾಣಿಸಬಹುದು.

ತಾಜಾ ಮೀನಲ್ಲ
ಮಳೆಗಾಲದಲ್ಲಿ ಬೇಡಿಕೆಯಿರುವ ಕಾರಣದಿಂದಾಗಿ ಮೇ ತಿಂಗಳ ಅಂತ್ಯದ ವೇಳೆ ಹಿಡಿದ ಮೀನನ್ನು ಸಂಗ್ರಹಿಸಿಡಲಾಗುತ್ತದೆ. ಮಳೆಗಾಲದಲ್ಲಿ ಮಾರಲಾಗುವ ಹೆಚ್ಚಿನ ಮೀನುಗಳು ತಾಜಾವಾಗಿರಲ್ಲ. ಮೀನು ಶೇಖರಣೆಯ ಜಾಗವು ಸ್ವಚ್ಛವಾಗಿರದಿದ್ದರೆ ಮೀನು ತಿಂದ ಮರುದಿನ ನಿಮಗೆ ವಾಂತಿಯಾಗಬಹುದು.

ನೀರು ಕಲುಷಿತಗೊಂಡರೆ ಏನಾಗುವುದು?
ನಗರಗಳ ಚರಂಡಿಯಲ್ಲಿರುವ ಎಲ್ಲಾ ರೀತಿಯ ಕಸಕಡ್ಡಿಗಳು ಮಳೆಗಾಲದ ನೀರಿಗೆ ಕೊಚ್ಚಿ ಹೋಗುವುದು. ಇದರಿಂದ ಕೆರೆ ಹಾಗೂ ಸಮುದ್ರದ ನೀರು ಕೂಡ ಕಲುಷಿತವಾಗುವುದು. ಮಳೆಗಾಲದಲ್ಲಿ ಈ ಕಾರಣದಿಂದಲೇ ನೀರು ವಿಷವಾಗುವುದು. ಇಂತಹ ನೀರಿನಿಂದ ಹಿಡಿದ ಮೀನು ತಿಂದರೆ ಆರೋಗ್ಯ ಕೆಡಬಹುದು.

ಮೀನಿನ ಸಂಗ್ರಹಣೆಗೆ ರಾಸಾಯನಿಕ ಬಳಕೆ
ಕೆಲವೊಂದು ಕಡೆಗಳಲ್ಲಿ ಮಳೆಗಾಲಕ್ಕೆ ಮೀನನ್ನು ಸಂಗ್ರಹಿಸಿಡಲು ರಾಸಾಯನಿಕಗಳನ್ನು ಬಳಸಲಾಗುವುದು. ಪಾಲಿಫಾಸ್ಪೇಟ್ ಮತ್ತು ಸಲ್ಫೇಟ್ ಬ್ಯಾಕ್ಟೀರಿಯಾ ಮತ್ತು ಫಂಗಲ್ ನ್ನು ದೂರವಿಡುತ್ತದೆ. ಆದರೆ ಈ ರಾಸಾಯನಿಕಗಳಿಂದ ಆರೋಗ್ಯಕ್ಕೆ ಹಾನಿಯಾಗುವುದು.



Click it and Unblock the Notifications











