Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಿಪಿ ರೋಗದ ಸಮಸ್ಯೆ ಇದ್ದರೆ-'ಮುಳ್ಳುಸೌತೆ-ಬೆಳ್ಳುಳ್ಳಿ' ಸಲಾಡ್ ಸೇವಿಸಿ
ಯಾರಿಗಾದರೂ ಅತಿಯಾಗಿ ಕೋಪ ಬಂದಾಗ ಅಥವಾ ನಮ್ಮ ಮೇಲೆ ಕಿರುಚಾಡಿದಾಗ ಆತನಿಗೆ ಬಿಪಿ ನೆತ್ತಿಗೇರಿದೆ ಎಂದು ಹೇಳುವುದುಂಟು. ಬಿಪಿ ಯಾನೆ ರಕ್ತದೊತ್ತಡ ಎನ್ನುವುದು ಒಂದು ಸಮಸ್ಯೆಯಾಗಿ ಕಾಡುತ್ತಾ ಇರುತ್ತದೆ. ಹೆಚ್ಚಿನವರಿಗೆ ಈ ರಕ್ತದೊತ್ತಡವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.
ಅಪಧಮನಿಗಳು ಕುಗ್ಗಿ, ಹೃದಯವು ಹೆಚ್ಚಿನ ರಕ್ತವನ್ನು ಹೊರಹಾಕಿದಾಗ ರಕ್ತದೊತ್ತಡವು ಹೆಚ್ಚಾಗುತ್ತದೆ. ಇದರಿಂದ ಪಾರ್ಶ್ವವಾಯು ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯು ಕಾಣಿಸಬಹುದು. ಪ್ರಾರಂಭಿಕ ಅಧಿಕ ರಕ್ತದೊತ್ತಡ ಮತ್ತು ದ್ವಿತೀಯ ರಕ್ತದೊತ್ತಡವು ತುಂಬಾ ಭಿನ್ನವಾಗಿರುತ್ತದೆ.
ವರ್ಷಗಳಿಂದ ಅಧಿಕ ರಕ್ತದೊತ್ತಡವು ಕಾಣಿಸುತ್ತಾ ಇದ್ದರೆ ಅದನ್ನು ನಾವು ಪ್ರಾರಂಭಿಕ ರಕ್ತದೊತ್ತಡವೆನ್ನಬಹುದು. ಥೈರಾಯ್ಡ್, ಕಿಡ್ನಿ ಸಮಸ್ಯೆ, ಮೂತ್ರಜನನಾಂಗದ ಗ್ರಂಥಿಯ ಗಡ್ಡೆಯಿಂದ ಬರುವಂತಹ ಅಧಿಕ ರಕ್ತದೊತ್ತಡವನ್ನು ದ್ವಿತೀಯ ಅಧಿಕ ರಕ್ತದೊತ್ತಡವೆನ್ನಲಾಗುತ್ತದೆ.
ಅಧಿಕ ರಕ್ತದೊತ್ತಡ ಬರಲು ಪ್ರಮುಖ ಕಾರಣವೆಂದರೆ ಕೊಲೆಸ್ಟ್ರಾಲ್. ಒತ್ತಡ, ಬೊಜ್ಜು, ಕೆಟ್ಟ ಆಹಾರಕ್ರಮ, ಧೂಮಪಾನ, ವಿಟಮಿನ್ ಮತ್ತು ಖನಿಜಾಂಶದ ಕೊರತೆ ಹಾಗೂ ಮದ್ಯಪಾನವು ಪ್ರಮುಖ ಕಾರಣವಾಗಿದೆ. ಮುಳ್ಳುಸೌತೆ ಮತ್ತು ಬೆಳ್ಳುಳ್ಳಿಯ ಸಲಾಡ್ ಅಧಿಕ ರಕ್ತದೊತ್ತಡಕ್ಕೆ ಒಳ್ಳೆಯ ಔಷಧಿಯಾಗಿದೆ. ಇದು ಹೇಗೆಂದು ಮುಂದೆ ತಿಳಿಯುವ.....

ಬೇಕಾಗುವ ಸಾಮಗ್ರಿಗಳು
ಬೆಳ್ಳುಳ್ಳಿಯ ಮೂರು ಎಸಲು, ಒಂದು ಮುಳ್ಳುಸೌತೆ, ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ಮತ್ತು ಅರ್ಧ ಲೋಟ ನೀರು.

ತಯಾರಿ
ಮುಳ್ಳುಸೌತೆಕಾಯಿಯನ್ನು ತೊಳೆದು ತುಂಡು ಮಾಡಿಕೊಳ್ಳಿ. ಬೆಳ್ಳುಳ್ಳಿಯನ್ನು ಕೊಚ್ಚಿಕೊಳ್ಳಿ. ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಆದಕ್ಕೆ ಆ್ಯಪಲ್ ಸೀಡರ್ ವಿನೇಗರ್ ಮತ್ತು ನೀರು ಹಾಕಿ. ಇದಕ್ಕೆ ಕೆಲವು ಪುದೀನಾ ಎಲೆಗಳನ್ನು ಕತ್ತರಿಸಿ ಹಾಕಿ. ಈಗ ಸಲಾಡ್ ಸವಿಯಿರಿ.
ತೂಕ ಇಳಿಸಿಕೊಳ್ಳಬೇಕೇ? ಸೌತೆಕಾಯಿ ಜ್ಯೂಸ್ ರೆಸಿಪಿ ಪ್ರಯತ್ನಿಸಿ

ಬೆಳ್ಳುಳ್ಳಿಯ ಪವರ್
ರಕ್ತಚಲನೆಯ ಸಮಸ್ಯೆ, ಅಪಧಮನಿ ಕಾಠಿಣ್ಯ, ಹೃದಯಾಘಾತ, ಪರಿಧಮನಿಯ ಹೃದಯ ಕಾಯಿಲೆ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡಕ್ಕೆ ಹಸಿ ಬೆಳ್ಳುಳ್ಳಿಯನ್ನು ಮನೆ ಮದ್ದಾಗಿ ಬಳಸಿಕೊಳ್ಳುತ್ತಾರೆ.

ಬೆಳ್ಳುಳ್ಳಿಯ ಪವರ್
ಬೆಳ್ಳುಳ್ಳಿಯಲ್ಲಿ ಇರುವಂತಹ ಅಲಿಸಿನ್ ರಕ್ತದೊತ್ತಡಕ್ಕೆ ಔಷಧಿಯಾಗಿ ಕೆಲಸ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ರಕ್ತನಾಳಗಳಿಗೆ ಶಮನವನ್ನು ನೀಡುವುದು.

ಮುಳ್ಳುಸೌತೆಯ ಪವರ್
ಮುಳ್ಳುಸೌತೆಯಲ್ಲಿ ನಾರಿನಾಂಶ, ಮೆಗ್ನಿಶಿಯಂ, ಪೊಟಾಶಿಯಂ ಮತ್ತು ನೀರಿನಾಂಶ ಹೆಚ್ಚಿದೆ. ಇದರಲ್ಲಿ ಇರುವಂತಹ ಪೊಟಾಶಿಯಂ ದೇಹದಲ್ಲಿರುವ ಸೋಡಿಯಂನ್ನು ಸಮತೋಲನದಲ್ಲಿಡುತ್ತದೆ. ಬೆಳ್ಳುಳ್ಳಿ ಮತ್ತು ಮುಳ್ಳುಸೌತೆಯ ಸಲಾಡ್ ಹೃದಯರಕ್ತನಾಳದ ಆರೋಗ್ಯವನ್ನು ವೃದ್ಧಿಸುತ್ತದೆ.

ಮುಳ್ಳುಸೌತೆಯ ಪವರ್
ಕಡು ಹಸಿರಾಗಿರುವ ಮುಳ್ಳುಸೌತೆಗಳನ್ನು ಆಯ್ಕೆ ಮಾಡಿ. ಖರೀದಿಸುವ ಮೊದಲು ಅದು ಮೃಧುವಾಗಿದೆಯಾ ಅಥವಾ ಗಟ್ಟಿಯಾಗಿದೆಯಾ ಎಂದು ತಿಳಿದುಕೊಳ್ಳಿ. ಗಟ್ಟಿಯಾಗಿರುವುದನ್ನು ಆಯ್ಕೆ ಮಾಡಿಕೊಳ್ಳಿ.



Click it and Unblock the Notifications











