Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದೇ ತಿಂಗಳಿನಲ್ಲಿ ಅಸ್ತಮಾವನ್ನು ನಿವಾರಿಸುವ ಮನೆಮದ್ದುಗಳು
ಪ್ರತಿಯೊಂದು ರೋಗಗಳು ನಾವು ತಿನ್ನುವ ಆಹಾರ ಮತ್ತು ವಾಸಿಸುವ ಪ್ರದೇಶಕ್ಕೆ ಅನುಗುಣವಾಗಿ ಬರುತ್ತದೆ. ಕೆಲವೊಂದು ಕಾಯಿಲೆಗಳು ಋತುಮಾನಕ್ಕೆ ತಕ್ಕಂತೆ ಬಂದರೆ ಬೇರೆ ಋತು ಕಾಲಿಡುತ್ತಿದ್ದಂತೆ ಕಾಯಿಲೆಯು ದೂರ ಹೋಗುತ್ತದೆ. ಅದರಲ್ಲಿ ಪ್ರಮುಖವಾಗಿ ಅಸ್ತಮಾ ರೋಗಿಗಳಿಗೆ ಪ್ರತಿಯೊಂದು ಋತುವಿನಲ್ಲೂ ಈ ರೋಗವು ಕಾಡಿದರೂ ಚಳಿಗಾಲದಲ್ಲಿ ಇದು ಅತಿಯಾಗಿ ಕಾಡುತ್ತದೆ.
ಇದರಿಂದಾಗಿಯೇ ಚಳಿಗಾಲದಲ್ಲಿ ಅಸ್ತಮಾ ಇರುವವರು ಎಚ್ಚರಿಕೆ ವಹಿಸಬೇಕು ಎಂದು ಹೇಳಲಾಗುತ್ತದೆ. ಉಸಿರಾಟದ ವ್ಯವಸ್ಥೆಯಲ್ಲಿ ಆಗುವಂತಹ ತೊಂದರೆಯನ್ನು ಅಸ್ತಮಾ ಎನ್ನಬಹುದು. ಉಸಿರಾಟದ ವ್ಯವಸ್ಥೆಯಲ್ಲಿ ಉರಿಯೂತ ಮತ್ತು ಅತಿಯಾದ ಕಫ ಶೇಖರಣೆಯಿಂದಾಗಿ ಹೀಗೆ ಆಗುತ್ತದೆ.
12 ಮಂದಿಯಲ್ಲಿ ಒಬ್ಬರಿಗೆ ಅಸ್ತಮಾದ ಸಮಸ್ಯೆಯಿದೆ ಎಂದು ಅಧ್ಯಯನಗಳು ಹೇಳುತ್ತವೆ. ಅದರಲ್ಲೂ ಅಸ್ತಮಾಘಾತಕ್ಕೆ ಒಳಗಾದರೆ ಆ ರೋಗಿಗೆ ಉಸಿರಾಡಲು ತುಂಬಾ ಸಮಸ್ಯೆಯಾಗುತ್ತದೆ. ಅಸ್ತಮಾ ರೋಗಿಗಳಿಗೆ ದೈನಂದಿನ ಚಟುವಟಿಕೆಗಳನ್ನು ಮಾಡಿಕೊಳ್ಳಲು ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.
ಇಂತಹ ಸಮಯದಲ್ಲಿ ಮೆಟ್ಟಿಲು ಹತ್ತುವುದು, ವ್ಯಾಯಮ ಮಾಡುವುದು ಮತ್ತು ಯಾವುದೇ ಆಟವಾಡುವುದು ಕಷ್ಟಸಾಧ್ಯವಾಗಬಹುದು. ಒಣ ಕೆಮ್ಮು, ಉಸಿರಾಟದ ಸೋಂಕು, ಎದೆ ಬಿಗಿಯಾಗುವುದು, ಉಸಿರಾಡಲು ಕಷ್ಟವಾಗುವುದು, ಗಂಟಲು ನೋವು ಮೊದಲಾದವುಗಳು ಅಸ್ತಮಾದ ಲಕ್ಷಣಗಳಾಗಿವೆ. ಅಸ್ತಮಾಗೆ ಇರುವ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಅದನ್ನು ನಿಯಂತ್ರಿಸಲು ಪ್ರಯತ್ನಿಸಿ...

ಆವಕಾಡೊ (ಬೆಣ್ಣೆ ಹಣ್ಣು)
ಅಸ್ತಮಾ ರೋಗಿಗಳಿಗೆ ಉಸಿರಾಟ ವ್ಯವಸ್ಥೆಯಲ್ಲಿ ಉರಿಯೂತ ಉಂಟಾಗುತ್ತದೆ. ಇಂತಹ ಸಮಸ್ಯೆ ನಿವಾರಣೆಗೆ ಆವಕಾಡೊ ಒಳ್ಳೆಯ ಹಣ್ಣು. ಆವಕಾಡೊನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಗ್ಲುಟಾಥಿಯೊನ್ ಎನ್ನುವ ಅಂಶಗಳು ಉಸಿರಾಟವನ್ನು ಸರಾಗಗೊಳಿಸಲು ನೆರವಾಗುವುದು.

ಬಾಳೆಹಣ್ಣು
ಹೆಚ್ಚಾಗಿ ಅಸ್ತಮಾ ರೋಗಿಗಳು ಬಾಳೆಹಣ್ಣು ತಿನ್ನಬಾರದು ಎನ್ನುವ ನಂಬಿಕೆಯಿದೆ. ಆದರೆ ದೇಹದಲ್ಲಿ ಪೊಟಾಶಿಯಂ ಕಡಿಮೆ ಆಗಿರುವುದು ಕೂಡ ಅಸ್ತಮಾಗೆ ಕಾರಣವಾಗಬಹುದು. ಬಾಳೆಹಣ್ಣಿನಲ್ಲಿ ಪೊಟಾಶಿಯಂ ಸಮೃದ್ಧವಾಗಿರುವ ಕಾರಣದಿಂದ ಇದು ಅಸ್ತಮಾವನ್ನು ನಿವಾರಣೆ ಮಾಡುವುದು.

ಶುಂಠಿ
ಶುಂಠಿಯಲ್ಲಿ ಹೆಚ್ಚಿನ ಮಟ್ಟದ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಉಸಿರಾಟದ ವ್ಯವಸ್ಥೆಯ ಉರಿಯೂತ ನಿವಾರಣೆ ಮಾಡುತ್ತದೆ. ಇದರಿಂದ ಅಸ್ತಮಾದ ಲಕ್ಷಣಗಳು ಕಡಿಮೆಯಾಗುವುದು.

ಅರಿಶಿನ
ಇದು ಅಡುಗೆ ಕೋಣೆಯಲ್ಲಿರುವ ಮತ್ತೊಂದು ಉರಿಯೂತ ಶಮನಕಾರಿ ಸಾಂಬಾರ ಪದಾರ್ಥ. ಅರಶಿನವು ಉಸಿರಾಟದ ವ್ಯವಸ್ಥೆಯ ಸ್ನಾಯುಗಳನ್ನು ಸರಾಗವಾಗಿಸಿ ಅತಿಯಾಗಿ ಶೇಖರಣೆಯಾಗಿರುವ ಕಫವನ್ನು ಹೊರಹಾಕುತ್ತದೆ.

ಸೇಬು
ಅಸ್ತಮಾ ರೋಗಿಗಳು ಸೇಬು ತಿಂದರೆ ಅದರಲ್ಲಿನ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಇದರಿಂದ ಅಸ್ತಮಾ ಹೆಚ್ಚಾಗುವುದು ತಪ್ಪುತ್ತದೆ.

ಜೇನು
ಜೇನುತುಪ್ಪದಲ್ಲಿ ಉತ್ತಮ ಮಟ್ಟದ ಉರಿಯೂತ ಶಮನಕಾರಿ ಗುಣಗಳು ಇವೆ. ಅಸ್ತಮಾದಿಂದ ಬರುವಂತಹ ಸೋಂಕು ಮತ್ತು ಅಲರ್ಜಿಯನ್ನು ಇದು ನಿವಾರಣೆ ಮಾಡುತ್ತದೆ.



Click it and Unblock the Notifications