Latest Updates
-
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು!
ಉತ್ಸಾಹದಿಂದ ಇರಲು ಬೇಕು ಈ ಡಯಟ್

ಏಕೆಂದರೆ ಆಹಾರಕ್ಕೂಮತ್ತು ಮೂಡ್ಗೆ ತುಂಬಾ ನಿಕಟ ಸಂಬಂಧವಿದೆ. ಒಳ್ಳೆಯ ಮೂಡ್ಗೆ ವಿಟಮಿನ್ ಬಿ12, ಮ್ಯಾಗ್ನಿಷಿಯಂ ಅಂಶವಿರುವ ಆಹಾರಗಳನ್ನು ತಿನ್ನಬೇಕು. ಇವುಗಳ ಕೊರತೆ ಉಂಟಾದರೆ ನಿಮಗೆ ಚಟುವಟಿಕೆಯಿಂದ ಇರಲು ಸಾಧ್ಯವಾಗುವುದಿಲ್ಲ, ಉತ್ಸಾಹ ಕಡಿಮೆಯಾಗುತ್ತೆ. ಆದ್ದರಿಂದ ಈ ಕೆಳಗಿನ ಡಯಟ್ ಪಾಲಿಸಿದರೆ ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಮತ್ತು ನಿಮ್ಮನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.
ಚಟುವಟಿಕೆಯಿಂದ ಇರಲು ಡಯಟ್ನಲ್ಲಿ ಇರಲೇಬೇಕಾದ ಅಂಶಗಳು:
1. ಅಯೋಡಿನ್: ಆರೋಗ್ಯಕರ ಥೈರಾಯ್ಡ್ಗೆ ಅಯೋಡಿನ್ ಅವಶ್ಯಕ. ಥೈರಾಯ್ಡ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಶಕ್ತಿ, ಜ್ಞಾಪಕ ಶಕ್ತಿ ಕಡಿಮೆಯಾಗುವುದು, ಮೈಗ್ರೇನ್, ದೇಹದ ತೂಕ ಹೆಚ್ಚಾಗುವುದು ಮತ್ತು ಮಕ್ಕಳಾಗದಿರುವ ಸಮಸ್ಯೆ, ಸೋಂಕು, ಹೃದಯ ಸಂಬಂಧಿ ಕಾಯಿಲೆಗಳು ಕಂಡು ಬರುತ್ತದೆ.
ಅಯೋಡಿನ್ ಅಧಿಕವಿರುವ ಆಹಾರಗಳು: ಮೀನು, ಮೊಟ್ಟೆ, ಆಲೂಗೆಡ್ಡೆಯ ಸಿಪ್ಪೆ
2. ಕ್ಯಾಲ್ಸಿಯಂ: ಮನಸ್ಸು ಸಂತೋಷದಿಂದ ಇರಲು ಕ್ಯಾಲ್ಸಿಯಂ ಅವಶ್ಯಕ. ಕ್ಯಾಲ್ಸಿಯಂ ಕೊರತೆ ಉಂಟಾದರೆ ಖಿನ್ನತೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಮಾನಸಿಕ ಒತ್ತಡ ಅಧಿಕವಾಗುವುದು, ನೆನಪಿನ ಶಕ್ತಿ ಕಡಿಮೆಯಾಗುವುದು, ಹಾರ್ಮೋನ್ಗಳಲ್ಲಿ ವ್ಯತ್ಯಾಸ ಉಂಟಾಗಿ ದೇಹದ ತೂಕ ಹೆಚ್ಚಾಗುತ್ತದೆ. ಅಲ್ಲದೆ ಮಹಿಳೆಯರು ಮೆನೊಪಸ್ ಕಾಯಿಲೆ ಉಂಟಾಗುವುದು.
ಕ್ಯಾಲ್ಸಿಯಂ ಇರುವ ಆಹಾರಗಳು: ಹಾಲು, ಮೊಸರು, ಎಲೆಕೋಸು, ಪಾಲಾಕ್ ಸೊಪ್ಪು, ಬಾದಾಮಿ
3. ಮ್ಯಾಗ್ನಿಷಿಯಂ:ಈ ಖನಿಜಾಂಶ ದೇಹಕ್ಕೆ ಅವಶ್ಯಕ. ಇದರ ಕೊರತೆ ಉಂಟಾದರೆ ಖಿನ್ನತೆ, ಇನ್ಸೋಮ್ನಿಯಾ, ತಲೆಸುತ್ತು ಕಂಡು ಬರುತ್ತದೆ.
ಮ್ಯಾಗ್ನಿಷಿಯಂ ಇರುವ ಆಹಾರಗಳು: ದವಸಧ್ಯಾನ್ಯಗಳು, ಸಾಲಾಮೋನ್, ಸೂರ್ಯಕಾಂತಿ ಬೀಜ, ಬೀನ್ಸ್, ಸೊಪ್ಪು
4. ವಿಟಮಿನ್ ಡಿ: ವಿಟಮಿನ್ ತ್ವಚೆ ಆರೋಗ್ಯ ಹೆಚ್ಚಿಸುವುದರ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ. ವಿಟಮಿನ್ ಡಿ ಕೊರತೆ ಉಂಟಾದರೆ ಅನಾರೋಗ್ಯ ಬೀಳುವುದು. ಖಿನ್ನತೆಯನ್ನು ಹೋಗಲಾಡಿಸಲು ವಿಟಮಿನ್ ಡಿ ಅವಶ್ಯಕ.
ವಿಟಮಿನ್ ಡಿ ಸಿಗುವ ಮೂಲಗಳು: ಸೂರ್ಯನ ಕಿರಣಗಳಲ್ಲಿ ಮತ್ತು ಮೀನುಗಳಲ್ಲಿ ಮಾತ್ರ ವಿಟಮಿನ್ ಡಿ ಅಂಶವಿರುತ್ತದೆ.
5. ನಾರಿನಂಶ: ದೇಹದ ಆರೋಗ್ಯಕ್ಕೆ ನಾರಿನಂಶವಿರುವ ಆಹಾರ ಸೇವನೆ ಅಗತ್ಯ. ಡಯಟ್ನಲ್ಲಿ ನಾರಿನಂಶವಿರುವ ಆಹಾರ ಹೆಚ್ಚಾಗಿ ಇದ್ದಷ್ಟು ದೇಹದ ತೂಕ ಕಡಿಮೆಯಾಗುತ್ತದೆ ಮತ್ತು ಆರೋಗ್ಯ ಹೆಚ್ಚುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











