Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಉತ್ಸಾಹದಿಂದ ಇರಲು ಬೇಕು ಈ ಡಯಟ್

ಏಕೆಂದರೆ ಆಹಾರಕ್ಕೂಮತ್ತು ಮೂಡ್ಗೆ ತುಂಬಾ ನಿಕಟ ಸಂಬಂಧವಿದೆ. ಒಳ್ಳೆಯ ಮೂಡ್ಗೆ ವಿಟಮಿನ್ ಬಿ12, ಮ್ಯಾಗ್ನಿಷಿಯಂ ಅಂಶವಿರುವ ಆಹಾರಗಳನ್ನು ತಿನ್ನಬೇಕು. ಇವುಗಳ ಕೊರತೆ ಉಂಟಾದರೆ ನಿಮಗೆ ಚಟುವಟಿಕೆಯಿಂದ ಇರಲು ಸಾಧ್ಯವಾಗುವುದಿಲ್ಲ, ಉತ್ಸಾಹ ಕಡಿಮೆಯಾಗುತ್ತೆ. ಆದ್ದರಿಂದ ಈ ಕೆಳಗಿನ ಡಯಟ್ ಪಾಲಿಸಿದರೆ ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಮತ್ತು ನಿಮ್ಮನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.
ಚಟುವಟಿಕೆಯಿಂದ ಇರಲು ಡಯಟ್ನಲ್ಲಿ ಇರಲೇಬೇಕಾದ ಅಂಶಗಳು:
1. ಅಯೋಡಿನ್: ಆರೋಗ್ಯಕರ ಥೈರಾಯ್ಡ್ಗೆ ಅಯೋಡಿನ್ ಅವಶ್ಯಕ. ಥೈರಾಯ್ಡ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಶಕ್ತಿ, ಜ್ಞಾಪಕ ಶಕ್ತಿ ಕಡಿಮೆಯಾಗುವುದು, ಮೈಗ್ರೇನ್, ದೇಹದ ತೂಕ ಹೆಚ್ಚಾಗುವುದು ಮತ್ತು ಮಕ್ಕಳಾಗದಿರುವ ಸಮಸ್ಯೆ, ಸೋಂಕು, ಹೃದಯ ಸಂಬಂಧಿ ಕಾಯಿಲೆಗಳು ಕಂಡು ಬರುತ್ತದೆ.
ಅಯೋಡಿನ್ ಅಧಿಕವಿರುವ ಆಹಾರಗಳು: ಮೀನು, ಮೊಟ್ಟೆ, ಆಲೂಗೆಡ್ಡೆಯ ಸಿಪ್ಪೆ
2. ಕ್ಯಾಲ್ಸಿಯಂ: ಮನಸ್ಸು ಸಂತೋಷದಿಂದ ಇರಲು ಕ್ಯಾಲ್ಸಿಯಂ ಅವಶ್ಯಕ. ಕ್ಯಾಲ್ಸಿಯಂ ಕೊರತೆ ಉಂಟಾದರೆ ಖಿನ್ನತೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಮಾನಸಿಕ ಒತ್ತಡ ಅಧಿಕವಾಗುವುದು, ನೆನಪಿನ ಶಕ್ತಿ ಕಡಿಮೆಯಾಗುವುದು, ಹಾರ್ಮೋನ್ಗಳಲ್ಲಿ ವ್ಯತ್ಯಾಸ ಉಂಟಾಗಿ ದೇಹದ ತೂಕ ಹೆಚ್ಚಾಗುತ್ತದೆ. ಅಲ್ಲದೆ ಮಹಿಳೆಯರು ಮೆನೊಪಸ್ ಕಾಯಿಲೆ ಉಂಟಾಗುವುದು.
ಕ್ಯಾಲ್ಸಿಯಂ ಇರುವ ಆಹಾರಗಳು: ಹಾಲು, ಮೊಸರು, ಎಲೆಕೋಸು, ಪಾಲಾಕ್ ಸೊಪ್ಪು, ಬಾದಾಮಿ
3. ಮ್ಯಾಗ್ನಿಷಿಯಂ:ಈ ಖನಿಜಾಂಶ ದೇಹಕ್ಕೆ ಅವಶ್ಯಕ. ಇದರ ಕೊರತೆ ಉಂಟಾದರೆ ಖಿನ್ನತೆ, ಇನ್ಸೋಮ್ನಿಯಾ, ತಲೆಸುತ್ತು ಕಂಡು ಬರುತ್ತದೆ.
ಮ್ಯಾಗ್ನಿಷಿಯಂ ಇರುವ ಆಹಾರಗಳು: ದವಸಧ್ಯಾನ್ಯಗಳು, ಸಾಲಾಮೋನ್, ಸೂರ್ಯಕಾಂತಿ ಬೀಜ, ಬೀನ್ಸ್, ಸೊಪ್ಪು
4. ವಿಟಮಿನ್ ಡಿ: ವಿಟಮಿನ್ ತ್ವಚೆ ಆರೋಗ್ಯ ಹೆಚ್ಚಿಸುವುದರ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ. ವಿಟಮಿನ್ ಡಿ ಕೊರತೆ ಉಂಟಾದರೆ ಅನಾರೋಗ್ಯ ಬೀಳುವುದು. ಖಿನ್ನತೆಯನ್ನು ಹೋಗಲಾಡಿಸಲು ವಿಟಮಿನ್ ಡಿ ಅವಶ್ಯಕ.
ವಿಟಮಿನ್ ಡಿ ಸಿಗುವ ಮೂಲಗಳು: ಸೂರ್ಯನ ಕಿರಣಗಳಲ್ಲಿ ಮತ್ತು ಮೀನುಗಳಲ್ಲಿ ಮಾತ್ರ ವಿಟಮಿನ್ ಡಿ ಅಂಶವಿರುತ್ತದೆ.
5. ನಾರಿನಂಶ: ದೇಹದ ಆರೋಗ್ಯಕ್ಕೆ ನಾರಿನಂಶವಿರುವ ಆಹಾರ ಸೇವನೆ ಅಗತ್ಯ. ಡಯಟ್ನಲ್ಲಿ ನಾರಿನಂಶವಿರುವ ಆಹಾರ ಹೆಚ್ಚಾಗಿ ಇದ್ದಷ್ಟು ದೇಹದ ತೂಕ ಕಡಿಮೆಯಾಗುತ್ತದೆ ಮತ್ತು ಆರೋಗ್ಯ ಹೆಚ್ಚುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications