Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಟೆನ್ಶನ್ ಕಡಿಮೆಯಾಗಲು ಈ ಆಹಾರ ಸೇವಿಸಿ

ನಿಮ್ಮ ಮನಸ್ಥಿತಿ ಬದಲಾಯಿಸುವ 7 ಬಗೆಯ ಆಹಾರ:
1. ದ್ರಾಕ್ಷಿ ಅಥವಾ ಬೆರಿ: ದ್ರಾಕ್ಷಿ, ಸ್ಟ್ರಾಬೆರಿ, ಬ್ಲೂಬೆರಿ, ರಾಸ್ಪ್ ಬೆರಿ ಮುಂತಾದ ಹಣ್ಣುಗಳ ಸೇವನೆ ಭಾವನಾತ್ಮಕ ಶಕ್ತಿ ಹೆಚ್ಚಿಸುತ್ತವೆ. ಇವುಗಳಲ್ಲಿ ಆಂಟಿಯಾಕ್ಸಿಡಂಟ್ ಹೇರಳವಾಗಿರುವುದರಿಂದ ಒತ್ತಡ ಕಡಿಮೆ ಮಾಡುವುದರೊಂದಿಗೆ ಕ್ಯಾನ್ಸರ್ ಸಾಧ್ಯತೆಯನ್ನೂ ನಿವಾರಿಸುತ್ತದೆ.
2. ಚೆರ್ರಿ: ಸಾಮಾನ್ಯವಾಗಿ ಕೇಕ್ ಗಳ ಮೇಲಿಟ್ಟಿರುವ ಚೆರಿ ಹಣ್ಣು ನಿಜಕ್ಕೂ ಒಳ್ಳೆ ನಿದ್ದೆ ಕೊಡುವುದರೊಂದಿಗೆ ನಿಮ್ಮ ಚೈತನ್ಯವನ್ನೂ ಹೆಚ್ಚಿಸುತ್ತೆ. ಚೆರಿಯಲ್ಲಿರುವ ಮೆಲಟೊನಿನ್ ರಾತ್ರಿ ಒಳ್ಳೆ ನಿದ್ದೆ ನೀಡಲು ಸಹಕಾರಿ. ರಾತ್ರಿ ಇದನ್ನು ಸೇವಿಸಿದರೆ ಬೆಳಗ್ಗೆ ಸಂತಸವಾಗಿ ಏಳಲು ಸಹಾಯ ಮಾಡುತ್ತೆ. ಒಳ್ಳೆ ನಿದ್ದೆ ಇದ್ದರೆ ಮಾನಸಿಕ ಒತ್ತಡವೂ ಕಡಿಮೆಯಾಗುತ್ತೆ.
3. ಕಿತ್ತಳೆ ಮತ್ತು ನಿಂಬೆ: ಸಿಟ್ರಸ್ ಇರುವ ಹಣ್ಣುಗಳ ಸೇವನೆ ಚಳಿಗಾಲದ ಸೋಮಾರಿತನವನ್ನು ಹೊಡೆದೋಡಿಸುತ್ತೆ. ದೇಹಕ್ಕೆ ಮತ್ತು ಮನಸ್ಸಿಗೆ ತಕ್ಷಣವೇ ಶಕ್ತಿ ನೀಡಿ ನಿಮ್ಮನ್ನು ಕೆಲಸದಲ್ಲಿ ಉತ್ಸಾಹದಿಂದ ತೊಡಗಿಕೊಳ್ಳುವಂತೆ ಮಾಡುತ್ತೆ.
4. ಹಸಿರು ಸೊಪ್ಪು: ಪಾಲಾಕ್, ದಂಟು ಇಂತಹ ಸೊಪ್ಪು ಮತ್ತು ತರಕಾರಿಗಳ ಸೇವನೆ ದೈಹಿಕ ಸ್ವಾಸ್ಥ್ಯಮಾತ್ರವಲ್ಲ ಮಾನಸಿಕ ಸ್ವಾಸ್ಥ್ಯವನ್ನೂ ಕಾಪಾಡುತ್ತದೆ.
ಇದು ಮೆದುಳಿನ ಜೀವಕಣಗಳನ್ನು ಸಮತೋಲನದಲ್ಲಿ ನಡೆಯುವಂತೆ ಮಾಡಿ ಒತ್ತಡ ತರುವ ಅಂಶಗಳನ್ನು ದೂರವಿರಿಸುತ್ತೆ.
5. ಕಬ್ಬಿಣಾಂಶದ ಕೊರತೆ: ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದಾಗಲೇ ಸುಸ್ತಾಗಿ ಅನವಶ್ಯಕ ಒತ್ತಡ ಹೆಚ್ಚಾಗಿ ಮೆದುಳಿನ ಕಾರ್ಯ ವೈಖರಿ ಮೇಲೆ ಪರಿಣಾಮ ಬೀರುತ್ತೆ. ಆದ್ದರಿಂದ ಕಬ್ಬಿಣಾಂಶ ಹೆಚ್ಚಿರುವ ಆಹಾರ ಹೆಚ್ಚಾಗಿ ಸೇವಿಸಬೇಕು. ಮಾಂಸಾಹಾರಿಗಳಾಗಿದ್ದರೆ ಮಾಂಸವನ್ನು ಹೆಚ್ಚಾಗಿ ಸೇವಿಸಿ. ಸಸ್ಯಾಹಾರಿಗಳು ಪಾಲಾಕ್, ತರಕಾರಿ, ಹಣ್ಣುಗಳನ್ನು ಸೇವಿಸಬಹುದು.
6. ಮೀನು: ಮೀನಿನೆಣ್ಣೆಯ ಆರೋಗ್ಯಕರ ಉಪಯೋಗದ ಬಗ್ಗೆ ತಿಳಿದೇ ಇದೆ. ಇದರಲ್ಲಿ ಒಳ್ಳೆಯ ಕೊಬ್ಬು ಮತ್ತು ಜ್ಞಾಪಕ ಶಕ್ತಿ ಹೆಚ್ಚಿಸುವ ಅಂಶವಿದೆ. ಮೀನಿನಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ ಭಾವನಾತ್ಮಕ ಸ್ವಾಸ್ತ್ಯ ಹೆಚ್ಚಿಸುತ್ತದೆ. ಇದು ಮಾನಸಿಕ ಸ್ಥಿಮಿತ ಕಾಯ್ದುಕೊಳ್ಳುವಲ್ಲಿ ಹೆಚ್ಚು ಸಹಕಾರಿ.
7. ಜ್ಯಾಮ್ ಮತ್ತು ಜೆಲ್ಲಿ: ನೀವು ತುಂಬಾ ಸುಸ್ತಾದಾಗ ದೇಹದಲ್ಲಿನ ಕಾರ್ಬೊಹೈಡ್ರೇಟ್ ತಕ್ಷಣವೇ ಶಕ್ತಿ ಒದಗಿಸುತ್ತದೆ. ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಒತ್ತಡ ನಿವಾರಕ ಸೆರೊಟೊನಿನ್ ಅಂಶವನ್ನು ಜ್ಯಾಮ್ ಜೆಲ್ಲಿ ನೀಡುವುದರಿಂದ ಇದರ ಸೇವನೆಯಿಂದ ಉಪಯೋಗ ಪಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications