Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಆರೋಗ್ಯಕರ ಈ 8 ಆಹಾರಗಳನ್ನು ಚೆನ್ನಾಗಿ ಬೇಯಸದಿದ್ದರೆ ಪ್ರಾಣಕ್ಕೆ ಅಪಾಯಕಾರಿ
ಕೆಲವೊಂದು ಆಹಾರಗಳು ಎಷ್ಟು ಆರೋಗ್ಯಕರವೋ ಅಷ್ಟೊಂದು ಅಪಾಯಕರವೂ ಹೌದು ಎಂಬುವುದು ನಿಮಗೆ ಗೊತ್ತೇ? ಮಳೆಗಾಲದಲ್ಲಿ ಹೆಚ್ಚಾಗಿ ಸಿಗುವ ಅಣಬೆ, ಕಣಲೆ ಮುಂತಾದ ಆಹಾರಗಳನ್ನು ಸರಿಯಾದ ರೀತಿಯಲ್ಲಿ ಬೇಯಿಸಿ ತಿನ್ನದಿದ್ದರೆ ಸಾವು ಕೂಡ ಸಂಭವಿಸಬಹುದು.

ಆಲೂಗಡ್ಡೆ, ಕಿಡ್ನಿ ಬೀನ್, ಮರ ಗೆಣಸು ಇಂಥ ಆಹಾರಗಳನ್ನು ತಿಂದು ಸಾವನ್ನಪ್ಪಿರುವ ಎಷ್ಟೋ ಉದಾಹರಣೆಗಳಿವೆ. ಆದ್ದರಿಂದ ಇಂಥ ಆಹಾರಗಳನ್ನು ತಿನ್ನುವಾಗ ಅವುಗಳನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಇಲ್ಲಿ ನಾವು ಯಾವ ಆಹಾರಗಳನ್ನು ಚೆನ್ನಾಗಿ ಬೇಯಿಸಿ ತಿನ್ನದಿದ್ದರೆ ಅಪಾಯಕಾರಿ ಎಂಬ ಮಾಹಿತಿ ನೀಡಿದ್ದೇವೆ ನೋಡಿ:

ಕಣಲೆ
ಮಲೆನಾಡು ಪ್ರದೇಶಗಳಲ್ಲಿ ಕಣಲೆ ತುಂಬಾ ಪ್ರಸಿದ್ಧಿ. ಮಳೆಗಾಲದ ಸಮಯದಲ್ಲಿ ಬಿದಿರು ಮೊಳಕೆ ಬರುವಾಗ ಅದನ್ನು ಕತ್ತರಿಸಿ ತಂದು 3 ದಿನಗಳ ಕಾಲ ನೀರಿನಲ್ಲಿ ಹಾಕಿ ಆಹಾರ ತಯಾರಿಸಲಾಗುವುದು. ಇದರಿಂದ ಉಪ್ಪಿನಕಾಯಿ ಹಾಗೂ ಸಾರು ಮಾಡಿ ಸವಿಯಲಾಗುವುದು. ಕಣಲೆ ತಿನ್ನಲು ತುಂಬಾ ರುಚಿಕರ ಆದರೆ ಸಾರು ಮಾಡುವಾಗ ಚೆನ್ನಾಗಿ ಬೇಯಿಸಬೇಕು, ಅಲ್ಲದೆ ಕತ್ತರಿಸಿ ತಂದ ದಿನ ಮಾಡಬಾರದು, ಏಕೆಂದರೆ ಇದು ತುಂಬಾ ವಿಷಕಾರಿಯೂ ಹೌದು.

ಮರಗೆಣಸು
ಮರಗೆಣಸು ಹಸಿ ತಿನ್ನಬೇಡಿ, ಏಕೆಂದರೆ ಮರಗೆಣಸಿನಲ್ಲಿ ಸೈನೋಜೆನಿಕ್ ಗ್ಲೂಕೋಸೈಡ್ಸ್ ಅಂಶವಿದ್ದು ಅದು ಹೈಡ್ರೋಜಿನ್ ಸೈನೈಡ್ ಬಿಡುಗಡೆ ಮಾಡುತ್ತದೆ. ಇದು ವಿಷಕಾರಿ. ಇದು ಆರೋಗ್ಯಕರ ಹೌದಾದರೂ ಬೇಯಿಸಿ ತಿನ್ನಿ.

ಚಿಕನ್
ಚಿಕನ್ ಚೆನ್ನಾಗಿ ಬೇಯಿಸಿ ತಿನ್ನಬೇಕು. ಮಾಂಸ ಸರಿಯಾಗಿ ಬೇಯದಿದ್ದರೆ ಸಾಲಮೋನಿಲ್ಲಾ ಎಂಬ ಅಂಶವಿರುತ್ತದೆ. ಆಗ ಮಾಂಸ ತಿಂದಾಗ ಬೇಧಿ, ಕಿಬ್ಬೊಟ್ಟೆ ನೋವು, ವಾಂತಿ ಮುಂತಾದ ಸಮಸ್ಯೆ ಕಾಡಬಹುದು. ಅದರಲ್ಲೂ ಮಕ್ಕಳು ಹಾಗೂ ಗರ್ಭಿಣಿಯರು ಯಾವುದೇ ಮಾಂಸವಾದರೂ ಸರಿ ಚೆನ್ನಾಗಿ ಬೇಯಿಸಿ ತಿನ್ನಬೇಕು.

ಲಿಮಾ ಬೀನ್ಸ್
ನೀವು ಲಿಮಾ ಬೀನ್ಸ್ ಅನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು, ಈ ಬೀನ್ಸ್ ಬೇಯಿಸುವಾಗ ಪಾತ್ರೆಯ ಬಾಯಿ ಮುಚ್ಚಿರಬಾರದು, ಅದರಲ್ಲಿರುವ ಸೈನೈಡ್ ಗ್ಯಾಸ್ ಹೊರ ಹೋಗಬೇಕು.

ಫುಗು ಮೀನು
ಈ ಮೀನು ಎಷ್ಟು ರುಚಿಕರವೋ ಅಷ್ಟು ಅಪಾಯಾರಿಯೂ ಹೌದು, ಆದ್ದರಿಂದ ಇದನ್ನು ಕ್ಲೀನ್ ಮಾಡುವಾಗ ಇದರ ಬಗ್ಗೆ ಚೆನ್ನಾಗಿ ಗೊತ್ತರುವವರೇ ಕ್ಲೀನ್ ಮಾಡಬೇಕು ಹಾಗೂ ಸರಿಯಾಗಿ ಬೇಯಿಸಿ ತಿನ್ನಬೇಕು.

ಕಿಡ್ನಿ ಬೀನ್ಸ್
ಕಿಡ್ನಿ ಬೀನ್ಸ್ ಸರಿಯಾಗಿ ಬೇಯಿಸದಿದ್ದರೆ ತುಂಬಾ ಅಪಾಯಕಾರಿ. ಕಿಡ್ನಿ ಬೀನ್ಸ್ ಅನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಅಧಿಕ ಉಷ್ಣತೆಯಲ್ಲಿ ಈ ಬೀನ್ಸ್ ಬೆಂದಾಗ ಯಾವುದೇ ಅಪಾಯ ಉಂಟಾಗುವುದಿಲ್ಲ.

ಅಣಬೆ
ಅಣಬೆ ತುಂಬಾ ಆರೋಗ್ಯಕರ ಹೌದಾದರೂ ಎಲ್ಲಾ ಬಗೆಯ ಅಣಬೆಗು ತಿನ್ನಲು ಯೋಗ್ಯವಲ್ಲ. ಕೆಲವೊಂದು ಅಣಬೆಗಳು ತುಂಬಾ ವಿಷಕಾರಿಯಾಗಿದ್ದು ಅವುಗಳನ್ನು ತಿಂದರೆ ಸಾವು ಸಂಭವಿಸಬಹುದು. ಅಲ್ಲದೆ ತಿನ್ನುವ ಅಣಬೆಯಾದರೂ ಅವುಗಳನ್ನು ಚೆನ್ನಾಗಿ ಬೇಯಿಸಿ ತಿನ್ನದಿದ್ದರೆ ವಾಂತಿ-ಬೇಧಿ ಉಂಟಾಗುವುದು.

ಆಲೂಗಡ್ಡೆ
ಆಲೂಗಡ್ಡೆ ಹಸಿರು ಬಣ್ಣದಲ್ಲಿ ಇದೆಯೇ ಅವುಗಳನ್ನು ಬಳಸಲೇಬೇಡಿ. ಏಕೆಂದರೆ ಅಂಥ ಆಲೂಗಡ್ಡೆ ತುಂಬಾ ವಿಷಕಾರಿಯಾಗಿದ್ದು ತಿಂದರೆ ಸಾವು ಸಂಭವಿಸಬಹುದು, ಆದ್ದರಿಂದ ಆಲೂಗಡ್ಡೆಯನ್ನು ಹಸಿ ತಿನ್ನಬಾರದು ಹಾಗೂ ಹಸಿರು ಬಣ್ಣಕ್ಕೆ ತಿರುಗಿದ ಆಲೂಗಡ್ಡೆ ತಿನ್ನಬಾರದು.



Click it and Unblock the Notifications
