Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ತೂಕ ಕಡಿಮೆ ಮಾಡುತ್ತೆ ಅನ್ನುವ ಮಿಥ್ಯಗಳು

ತೂಕ ಕಡಿಮೆಯಾಗುತ್ತೆ ಎಂದು ಜನರು ಅನೇಕ ರೀತಿಯ ತಪ್ಪಾದ ಸಲಹೆಗಳನ್ನು ಅನುಸರಿಸಿ ಫಲವನ್ನು ಕಾಣಲು ವಿಫಲರಾಗುತ್ತಾರೆ. ಆರೋಗ್ಯಕರವಲ್ಲದ ಮತ್ತು ಪರಿಣಾಮಕಾರಿಯಲ್ಲದ ಆ ರೀತಿಯ ಮಿಥ್ಯಗಳ ಬಗ್ಗೆ ಮಾಹಿತಿ ಈ ಕೆಳಗೆ ನೀಡಲಾಗಿದೆ ನೋಡಿ:
ಅತೀ ಕಡಿಮೆ ಆಹಾರ ಸೇವಿಸಿದರೆ ಶಾಶ್ವತವಾಗಿ ತೂಕ ಕಡಿಮೆಯಾಗುವುದು: ಕೆಲವರು ತೂಕ ಕಡಿಮೆಯಾಗಬೇಕೆಂದು ಏನೂ ತಿನ್ನುವುದಿಲ್ಲ. ತುಂಬಾ ಹೊಟ್ಟೆ ಹಸಿವು ಆದಾಗ ಸ್ವಲ್ಪ ಆಹಾರ ಸೇವಿಸುತ್ತಾರೆ. ಈ ರೀತಿ ಮಾಡಿದರೆ ದೇಹಕ್ಕೆ ಬೇಕಾದ ಪೋಷಕಾಂಶ ದೊರೆಯದೆ ತೆಳ್ಳಗಾಗುವುದು. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ! ಈ ರೀತಿ ಮಾಡಿದರೆ ನಿಶ್ಯಕ್ತಿ ಉಂಟಾಗುತ್ತದೆ.
ಬಾಯಿಗೆ ರುಚಿಯಲ್ಲದ ಆಹಾರ ದಿನಾ ಸೇವಿಸಿದರೆ ಖಿನ್ನತೆ ಉಂಟಾಗುವುದು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಈ ರೀತಿಯ ಡಯಟ್ (ಆಹಾರಕ್ರಮವನ್ನು) ಜೀವನ ಪೂರ್ತಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಇದರಿಂದ ಶಾಶ್ವತ ಪರಿಹಾರ ದೊರಕಲು ಸಾಧ್ಯವಿಲ್ಲ.
ಅಧಿಕ ಪ್ರೊಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಆಹಾರಕ್ರಮದಿಂದ ತೂಕ ಕಡಿಮೆ ಮಾಡಬಹುದು: ಅಧಿಕ ಪ್ರೊಟೀನ್ ಇರುವ ಆಹಾರಗಳಾದ ಮೊಟ್ಟೆ, ಮಾಂಸ, ಬೀನ್ಸ್ ಹೀಗೆ ಬರೀ ಪ್ರೊಟೀನ್ ಇರುವ ವಸ್ತುಗಳನ್ನು ಮಾತ್ರ ತಿಂದರೆ ಸಾಕಾಗುವುದಿಲ್ಲ. ದೇಹಕ್ಕೆ ಅವಶ್ಯಕವಿರುವ ಕಾರ್ಬೋಹೈಡ್ರೇಟ್ ಪೂರೈಕೆಯಾಗದಿದ್ದರೆ ರಕ್ತದಲ್ಲಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ. ಇದರಿಂದ ಯೂರಿಕ್ ಅಸಿಡ್ (ಮೂತ್ರವಿಸರ್ಜನೆಗೆ ತೊಂದರೆ), ಮೊಣಕಾಲು, ಕೈಗಳು ಊದಿಕೊಳ್ಳುವುದು, ಕಿಡ್ನಿಯಲ್ಲಿ ಕಲ್ಲು ಮುಂತಾದ ಸಮಸ್ಯೆ ಕಂಡು ಬರುತ್ತದೆ. ಕಿಡ್ನಿ ಸಮಸ್ಯೆ ಮತ್ತು ಮಧುಮೇಹ ಸಮಸ್ಯೆಯಿರುವವರಿಗೆ ಇದರಿಂದ ಅಧಿಕ ತೊಂದರೆಗಳು ಕಾಣಿಸಿಕೊಳ್ಳುತ್ತದೆ.
ಅನ್ನ ಮತ್ತು ಆಲೂಗೆಡ್ಡೆ ತಿನ್ನಬಾರದು: ತುಕ ಕಡಿಮೆಯಗಲು ಅನ್ನ ಮತ್ತು ಆಲೂಗೆಡ್ಡೆ ಮುಟ್ಟಬಾರದು ಅನ್ನುವುದನ್ನು ಕೇಳಬಹುದು. ಆದರೆ ಇವುಗಳ ಮಿತಿಯಲ್ಲಿ ತಿನ್ನುವುದು ಅವಶ್ಯಕ ಏಕೆಂದರೆ ಇದು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಇದರ ಜೊತೆಗೆ ಇತರ ಸೊಪ್ಪು ತರಕಾರಿಗಳು, ನಾರಿನಂಶವಿರುವ ಪದಾರ್ಥಗಳನ್ನು ಹಾಕಿದ ಆಹಾರಕ್ರಮ ಪಾಲಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
