Latest Updates
-
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ!
ಎಚ್ಚರ: ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತಿರುವ ಲಕ್ಷಣಗಳಿವು!
ಆರೋಗ್ಯವು ಸಾಮಾನ್ಯವಾಗಿದೆ ಎಂದು ನಮಗೆ ಅನಿಸುತ್ತದೆ. ಆದರೆ ಕೆಲವೊಮ್ಮೆ ಪದೇ ಪದೇ ಹಸಿವು ಆಗುವುದು, ತೂಕ ಹೆಚ್ಚಳವಾಗುವುದು ಇತ್ಯಾದಿಗಳು ಅನಾರೋಗ್ಯದ ಲಕ್ಷಣಗಳಾಗಿರುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಯದೇ ಇದ್ದರೆ ಅದು ರಕ್ತದಲ್ಲಿನ ಸಕ್ಕರೆ ಅಂಶವು (ಬ್ಲಡ್ ಶುಗರ್) ಹೆಚ್ಚಾಗುತ್ತಿರುವ ಲಕ್ಷಣಗಳಾಗಿದೆ. ಬ್ಲಡ್ ಶುಗರ್ ಎಷ್ಟು ಬಾರಿ ಪರೀಕ್ಷೆ ಆಗಬೇಕು?
ಹಾಗಂತ ಮಧುಮೇಹಿಗಳು ಮಾತ್ರ ತಮ್ಮ ಆಹಾರ ಕ್ರಮದ ಬಗ್ಗೆ ಎಚ್ಚರಿಕೆ ವಹಿಸುವುದಲ್ಲ, ಸಾಮಾನ್ಯ ಜನರು ಆಹಾರ ಕ್ರಮವನ್ನು ಸರಿಯಾಗಿ ಪಾಲಿಸಿಕೊಂಡು ಹೋದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ. ಇದನ್ನು ಕಡೆಗಣಿಸುತ್ತಾ ಹೋದರೆ ರಕ್ತದಲ್ಲಿನ ಸಕ್ಕರೆ ಅಂಶವು ಹೆಚ್ಚಾಗಿ ಅದು ಮಧುಮೇಹಕ್ಕೆ ಸೇರಲ್ಪಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಿದೆ ಎನ್ನುವುದಕ್ಕೆ ಕೆಲವೊಂದು ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಗಮನಿಸಿಕೊಳ್ಳಿ.....

ಅತಿಯಾದ ಬಾಯಾರಿಕೆ
ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದಾಗ ಕಿಡ್ನಿ ಸಕ್ಕರೆಯನ್ನು ಹೊರಗೆ ಹಾಕಲು ಅತಿಯಾಗಿ ಕೆಲಸ ಮಾಡುತ್ತದೆ. ಮೂತ್ರದ ಮೂಲಕ ಸಕ್ಕರೆಯು ಹೊರಬೀಳುವುದು. ಇದರಿಂದಾಗಿ ಅತಿಯಾದ ಬಾಯಾರಿಕೆ ಅಥವಾ ನಿರ್ಜಲೀಕರಣ ಉಂಟಾಗಬಹುದು.

ಪದೇ ಪದೇ ಹಸಿವು
ಮೂತ್ರ ಜಾಸ್ತಿಯಾದಾಗ ಕ್ಯಾಲರಿ ದಹಿಸಲ್ಪಡುತ್ತದೆ. ರಕ್ತದಲ್ಲಿ ಅತಿಯಾಗಿ ಸಕ್ಕರೆ ಅಂಶ ಇರುವ ಕಾರಣ ಆಹಾರದಲ್ಲಿನ ಸಕ್ಕರೆ ಅಂಶವು ಕೋಶಗಳನ್ನು ಸೇರಿಕೊಳ್ಳುವುದಿಲ್ಲ. ಇದರಿಂದಾಗಿ ಪದೇ ಪದೇ ಹಸಿವಾಗುತ್ತದೆ.

ಆಗಾಗ ಮೂತ್ರಶಂಕೆ
ರಕ್ತದಲ್ಲಿನ ಸಕ್ಕರೆ ಅಂಶವನ್ನು ಮೂತ್ರದ ಮೂಲಕ ಕಿಡ್ನಿ ಹೊರಹಾಕುವಾಗ ನಿರ್ಜಲೀಕರಣ ಮತ್ತು ಬಾಯಾರಿಕೆ ಉಂಟಾಗುತ್ತದೆ. ಇದರಿಂದಾಗಿ ನೀರನ್ನು ಹೆಚ್ಚು ಸೇವಿಸಬೇಕಾಗುತ್ತದೆ. ಇದರಿಂದ ಮೂತ್ರಶಂಕೆಯು ಹೆಚ್ಚಾಗುವುದು.

ತೂಕ ಕಳೆದುಕೊಳ್ಳುವುದು
ಮೂತ್ರಶಂಕೆಯು ಅತಿಯಾದಾಗ ಕ್ಯಾಲರಿ ದಹಿಸುವುದು ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದಾಗಿ ತೂಕವು ಕಡಿಮೆಯಾಗುವುದು.

ಮರಗಟ್ಟುವಿಕೆ
ರಕ್ತದಲ್ಲಿನ ಸಕ್ಕರೆ ಮಟ್ಟವು ಅತಿಯಾದಾಗ ಅದು ನರಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದರಿಂದ ಮರಗಟ್ಟುವಿಕೆ ಉಂಟಾಗಿ ಕೈ ಹಾಗೂ ಕಾಲುಗಳಲ್ಲಿ ಸ್ಪರ್ಶಜ್ಞಾನ ಇಲ್ಲದಂತಾಗುತ್ತದೆ.

ದೃಷ್ಟಿ ಮಂಜಾಗುವುದು
ಸಕ್ಕರೆ ಪ್ರಮಾಣವು ರಕ್ತದಲ್ಲಿ ಹೆಚ್ಚಾದ ಸಂದರ್ಭದಲ್ಲಿ ಅತಿಯಾದ ಮೂತ್ರಶಂಕೆಯಿಂದ ನಿರ್ಜಲೀಕರಣ ಮಾತ್ರವಲ್ಲದೆ ಕಣ್ಣುಗಳು ಒಣಗುವುದು. ಇದರಿಂದ ದೃಷ್ಟಿ ಮಂಜಾಗುವುದು.



Click it and Unblock the Notifications