Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ!
ಎಚ್ಚರ: ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತಿರುವ ಲಕ್ಷಣಗಳಿವು!
ಆರೋಗ್ಯವು ಸಾಮಾನ್ಯವಾಗಿದೆ ಎಂದು ನಮಗೆ ಅನಿಸುತ್ತದೆ. ಆದರೆ ಕೆಲವೊಮ್ಮೆ ಪದೇ ಪದೇ ಹಸಿವು ಆಗುವುದು, ತೂಕ ಹೆಚ್ಚಳವಾಗುವುದು ಇತ್ಯಾದಿಗಳು ಅನಾರೋಗ್ಯದ ಲಕ್ಷಣಗಳಾಗಿರುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಯದೇ ಇದ್ದರೆ ಅದು ರಕ್ತದಲ್ಲಿನ ಸಕ್ಕರೆ ಅಂಶವು (ಬ್ಲಡ್ ಶುಗರ್) ಹೆಚ್ಚಾಗುತ್ತಿರುವ ಲಕ್ಷಣಗಳಾಗಿದೆ. ಬ್ಲಡ್ ಶುಗರ್ ಎಷ್ಟು ಬಾರಿ ಪರೀಕ್ಷೆ ಆಗಬೇಕು?
ಹಾಗಂತ ಮಧುಮೇಹಿಗಳು ಮಾತ್ರ ತಮ್ಮ ಆಹಾರ ಕ್ರಮದ ಬಗ್ಗೆ ಎಚ್ಚರಿಕೆ ವಹಿಸುವುದಲ್ಲ, ಸಾಮಾನ್ಯ ಜನರು ಆಹಾರ ಕ್ರಮವನ್ನು ಸರಿಯಾಗಿ ಪಾಲಿಸಿಕೊಂಡು ಹೋದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ. ಇದನ್ನು ಕಡೆಗಣಿಸುತ್ತಾ ಹೋದರೆ ರಕ್ತದಲ್ಲಿನ ಸಕ್ಕರೆ ಅಂಶವು ಹೆಚ್ಚಾಗಿ ಅದು ಮಧುಮೇಹಕ್ಕೆ ಸೇರಲ್ಪಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಿದೆ ಎನ್ನುವುದಕ್ಕೆ ಕೆಲವೊಂದು ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಗಮನಿಸಿಕೊಳ್ಳಿ.....

ಅತಿಯಾದ ಬಾಯಾರಿಕೆ
ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದಾಗ ಕಿಡ್ನಿ ಸಕ್ಕರೆಯನ್ನು ಹೊರಗೆ ಹಾಕಲು ಅತಿಯಾಗಿ ಕೆಲಸ ಮಾಡುತ್ತದೆ. ಮೂತ್ರದ ಮೂಲಕ ಸಕ್ಕರೆಯು ಹೊರಬೀಳುವುದು. ಇದರಿಂದಾಗಿ ಅತಿಯಾದ ಬಾಯಾರಿಕೆ ಅಥವಾ ನಿರ್ಜಲೀಕರಣ ಉಂಟಾಗಬಹುದು.

ಪದೇ ಪದೇ ಹಸಿವು
ಮೂತ್ರ ಜಾಸ್ತಿಯಾದಾಗ ಕ್ಯಾಲರಿ ದಹಿಸಲ್ಪಡುತ್ತದೆ. ರಕ್ತದಲ್ಲಿ ಅತಿಯಾಗಿ ಸಕ್ಕರೆ ಅಂಶ ಇರುವ ಕಾರಣ ಆಹಾರದಲ್ಲಿನ ಸಕ್ಕರೆ ಅಂಶವು ಕೋಶಗಳನ್ನು ಸೇರಿಕೊಳ್ಳುವುದಿಲ್ಲ. ಇದರಿಂದಾಗಿ ಪದೇ ಪದೇ ಹಸಿವಾಗುತ್ತದೆ.

ಆಗಾಗ ಮೂತ್ರಶಂಕೆ
ರಕ್ತದಲ್ಲಿನ ಸಕ್ಕರೆ ಅಂಶವನ್ನು ಮೂತ್ರದ ಮೂಲಕ ಕಿಡ್ನಿ ಹೊರಹಾಕುವಾಗ ನಿರ್ಜಲೀಕರಣ ಮತ್ತು ಬಾಯಾರಿಕೆ ಉಂಟಾಗುತ್ತದೆ. ಇದರಿಂದಾಗಿ ನೀರನ್ನು ಹೆಚ್ಚು ಸೇವಿಸಬೇಕಾಗುತ್ತದೆ. ಇದರಿಂದ ಮೂತ್ರಶಂಕೆಯು ಹೆಚ್ಚಾಗುವುದು.

ತೂಕ ಕಳೆದುಕೊಳ್ಳುವುದು
ಮೂತ್ರಶಂಕೆಯು ಅತಿಯಾದಾಗ ಕ್ಯಾಲರಿ ದಹಿಸುವುದು ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದಾಗಿ ತೂಕವು ಕಡಿಮೆಯಾಗುವುದು.

ಮರಗಟ್ಟುವಿಕೆ
ರಕ್ತದಲ್ಲಿನ ಸಕ್ಕರೆ ಮಟ್ಟವು ಅತಿಯಾದಾಗ ಅದು ನರಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದರಿಂದ ಮರಗಟ್ಟುವಿಕೆ ಉಂಟಾಗಿ ಕೈ ಹಾಗೂ ಕಾಲುಗಳಲ್ಲಿ ಸ್ಪರ್ಶಜ್ಞಾನ ಇಲ್ಲದಂತಾಗುತ್ತದೆ.

ದೃಷ್ಟಿ ಮಂಜಾಗುವುದು
ಸಕ್ಕರೆ ಪ್ರಮಾಣವು ರಕ್ತದಲ್ಲಿ ಹೆಚ್ಚಾದ ಸಂದರ್ಭದಲ್ಲಿ ಅತಿಯಾದ ಮೂತ್ರಶಂಕೆಯಿಂದ ನಿರ್ಜಲೀಕರಣ ಮಾತ್ರವಲ್ಲದೆ ಕಣ್ಣುಗಳು ಒಣಗುವುದು. ಇದರಿಂದ ದೃಷ್ಟಿ ಮಂಜಾಗುವುದು.



Click it and Unblock the Notifications











