Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಸುಕ್ಕು ತಡೆಗಟ್ಟಲು ಇಲ್ಲಿದೆ ನೈಸರ್ಗಿಕ ಮಾರ್ಗ

ಸುಕ್ಕು ತಡೆಯಲು ಕೆಮಿಕಲ್ ಮಿಶ್ರಿತ ಕ್ರೀಂಗಳ ಮೊರೆಹೋಗುವ ಬದಲು ನೈಸರ್ಗಿಕವಾಗಿ ತ್ವಚೆಯನ್ನು ಸಂರಕ್ಷಿಸಿಕೊಳ್ಳುವ ಸುಲಭ ವಿಧಾನವೊಂದು ಇಲ್ಲಿದೆ. ನಾವು ಸೇವಿಸುವ ಆಹಾರದಿಂದಲೇ ನಮ್ಮ ಚರ್ಮದ ಮೇಲಿನ ಸುಕ್ಕುಗಳನ್ನು ನಿಯಂತ್ರಿಸಬಹುದು.
ತಾಜಾ ತ್ವಚೆಗೆ ನೈಸರ್ಗಿಕ ಮಾರ್ಗ:
1. ಹಸಿರು ತರಕಾರಿಗಳು: ಪಾಲಾಕ್, ಹೂಕೊಸು, ಕೊತ್ತಂಬರಿ, ಕರಿಬೇವು ಇನ್ನೂ ಮುಂತಾದವು ಚರ್ಮದ ರಕ್ಷಣೆಯಲ್ಲಿ ಅತಿ ಹೆಚ್ಚು ಅವಶ್ಯಕ. ಇದರಲ್ಲಿ ಹಾನಿಯುಂಟು ಮಾಡುವ ಯಾವುದೇ ಅಂಶಗಳು ಇಲ್ಲದಿರುವುದರಿಂದ ಮತ್ತು ಇವುಗಳ ನಾರಿನಂಶ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವುದರಿಂದ ದೇಹವನ್ನೂ ಶುದ್ಧವಾಗಿಟ್ಟು, ತ್ವಚೆಯ ರಕ್ಷಣೆಗೆ ಮುಂದಾಗುತ್ತದೆ.
2. ಚರ್ಮದ ಸ್ವಾಸ್ಥ್ಯಕ್ಕೆ ವಿಟಮಿನ್: ವಿಟಮಿನ್ ಸಿ ಮತ್ತು ಇ ಇವೆರಡೂ ತ್ವಚೆ ಸುಕ್ಕುಗಟ್ಟುವುದನ್ನು ತಡೆಯುವ ಅತ್ಯಮೂಲ್ಯ ವಿಟಮಿನ್ ಗಳು. ಇವು ಚರ್ಮದ ಜೀವಕಣಗಳ ಪುನರುತ್ಪತ್ತಿಯನ್ನು ಹೆಚ್ಚುಗೊಳಿಸಿ ನಿರ್ಜೀವ ತ್ವಚೆಯನ್ನು ಸರಿಗೊಳಿಸುವಲ್ಲಿ ಸಹಾಯಕವಾಗುತ್ತದೆ. ವಿಟಮಿನ್ ಇ ತ್ವಚೆಗೆ ಎಣ್ಣೆಯಂಶ ಒದಗಿಸಿ ಚರ್ಮಕ್ಕೆ ತಾರುಣ್ಯ ನೀಡುತ್ತದೆ. ಬಿಸಿಲು, ಪ್ರದೂಷಣೆ, ಹೊಗೆ ಧೂಳಿನಿಂದ ಚರ್ಮದ ಮೇಲೆ ಹಾನಿಯಾಗದಂತೆ ತಡೆಯುತ್ತವೆ. ಕಿತ್ತಳೆ, ದ್ರಾಕ್ಷಿ, ನಿಂಬೆ, ಬಾದಾಮಿ, ಮತ್ತು ಇನ್ನಿತರ ಒಣಹಣ್ಣುಗಳ ಸೇವನೆ ತ್ವಚೆ ರಕ್ಷಣೆಗೆ ಅವಶ್ಯಕ.
3. ಸಿಪ್ಪೆಗಳು: ತ್ವಚೆ ಬೇಗ ಕಳೆಗುಂದಿ ನಿರ್ಜೀವವಾಗಿ ಕಾಣುವಂತೆ ಆಗುವುದನ್ನು ತಡೆಯಲು ತರಕಾರಿ ಮತ್ತು ಹಣ್ಣಿನ ಸಿಪ್ಪೆಯ ಸೇವನೆ ಮಾಡುವುದು ಮುಖ್ಯ. ಸೇಬು, ಚೆರ್ರಿ, ದ್ರಾಕ್ಷಿ ಮುಂತಾದ ಹಣ್ಣುಗಳ ಸೇವನೆಯಿಂದ ಇದರಲ್ಲಿನ ಸುಕ್ಕು ನಿವಾರಕ ಅಂಶ ತ್ವಚೆಗೆ ತಾಜಾತನ ನೀಡುತ್ತದೆ.
4. ಸಾಂಬಾರು ಪದಾರ್ಥ: ಲವಂಗ ಮತ್ತು ಮೆಣಸಿನಲ್ಲಿ ಚರ್ಮದ ಜೀವಕಣಗಳ ಪುನರುತ್ಪತ್ತಿ ಮಾಡುವ ಅತ್ಯಮೂಲ್ಯ ಅಂಶವಿದೆ. ಇವುಗಳನ್ನು ಆದಷ್ಟೂ ಅಡುಗೆಗೆ ಹೆಚ್ಚು ಬಳಸಿ ಸೇವಿಸಿದರೆ ಸುಕ್ಕನ್ನು ಮತ್ತು ಇನ್ನಿತರ ಚರ್ಮ ಸಂಬಂಧಿ ತೊಂದರೆಗಳನ್ನು ಕಡಿಮೆಮಾಡಬಹುದು.
ಈ ಎಲ್ಲ ತರಕಾರಿ, ಹಣ್ಣು ಮತ್ತು ಸಾಂಬಾರು ಪದಾರ್ಥಗಳನ್ನು ದಿನನಿತ್ಯ ಸ್ವಲ್ಪವಾದರೂ ಬಳಸಿ ನೋಡಿ, ನಿಮ್ಮ ಚರ್ಮದಲ್ಲಿನ ಬದಲಾವಣೆ ನಿಮಗೆ ಗೋಚರವಾಗುತ್ತದೆ.



Click it and Unblock the Notifications