Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಸುಕ್ಕು ತಡೆಗಟ್ಟಲು ಇಲ್ಲಿದೆ ನೈಸರ್ಗಿಕ ಮಾರ್ಗ

ಸುಕ್ಕು ತಡೆಯಲು ಕೆಮಿಕಲ್ ಮಿಶ್ರಿತ ಕ್ರೀಂಗಳ ಮೊರೆಹೋಗುವ ಬದಲು ನೈಸರ್ಗಿಕವಾಗಿ ತ್ವಚೆಯನ್ನು ಸಂರಕ್ಷಿಸಿಕೊಳ್ಳುವ ಸುಲಭ ವಿಧಾನವೊಂದು ಇಲ್ಲಿದೆ. ನಾವು ಸೇವಿಸುವ ಆಹಾರದಿಂದಲೇ ನಮ್ಮ ಚರ್ಮದ ಮೇಲಿನ ಸುಕ್ಕುಗಳನ್ನು ನಿಯಂತ್ರಿಸಬಹುದು.
ತಾಜಾ ತ್ವಚೆಗೆ ನೈಸರ್ಗಿಕ ಮಾರ್ಗ:
1. ಹಸಿರು ತರಕಾರಿಗಳು: ಪಾಲಾಕ್, ಹೂಕೊಸು, ಕೊತ್ತಂಬರಿ, ಕರಿಬೇವು ಇನ್ನೂ ಮುಂತಾದವು ಚರ್ಮದ ರಕ್ಷಣೆಯಲ್ಲಿ ಅತಿ ಹೆಚ್ಚು ಅವಶ್ಯಕ. ಇದರಲ್ಲಿ ಹಾನಿಯುಂಟು ಮಾಡುವ ಯಾವುದೇ ಅಂಶಗಳು ಇಲ್ಲದಿರುವುದರಿಂದ ಮತ್ತು ಇವುಗಳ ನಾರಿನಂಶ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವುದರಿಂದ ದೇಹವನ್ನೂ ಶುದ್ಧವಾಗಿಟ್ಟು, ತ್ವಚೆಯ ರಕ್ಷಣೆಗೆ ಮುಂದಾಗುತ್ತದೆ.
2. ಚರ್ಮದ ಸ್ವಾಸ್ಥ್ಯಕ್ಕೆ ವಿಟಮಿನ್: ವಿಟಮಿನ್ ಸಿ ಮತ್ತು ಇ ಇವೆರಡೂ ತ್ವಚೆ ಸುಕ್ಕುಗಟ್ಟುವುದನ್ನು ತಡೆಯುವ ಅತ್ಯಮೂಲ್ಯ ವಿಟಮಿನ್ ಗಳು. ಇವು ಚರ್ಮದ ಜೀವಕಣಗಳ ಪುನರುತ್ಪತ್ತಿಯನ್ನು ಹೆಚ್ಚುಗೊಳಿಸಿ ನಿರ್ಜೀವ ತ್ವಚೆಯನ್ನು ಸರಿಗೊಳಿಸುವಲ್ಲಿ ಸಹಾಯಕವಾಗುತ್ತದೆ. ವಿಟಮಿನ್ ಇ ತ್ವಚೆಗೆ ಎಣ್ಣೆಯಂಶ ಒದಗಿಸಿ ಚರ್ಮಕ್ಕೆ ತಾರುಣ್ಯ ನೀಡುತ್ತದೆ. ಬಿಸಿಲು, ಪ್ರದೂಷಣೆ, ಹೊಗೆ ಧೂಳಿನಿಂದ ಚರ್ಮದ ಮೇಲೆ ಹಾನಿಯಾಗದಂತೆ ತಡೆಯುತ್ತವೆ. ಕಿತ್ತಳೆ, ದ್ರಾಕ್ಷಿ, ನಿಂಬೆ, ಬಾದಾಮಿ, ಮತ್ತು ಇನ್ನಿತರ ಒಣಹಣ್ಣುಗಳ ಸೇವನೆ ತ್ವಚೆ ರಕ್ಷಣೆಗೆ ಅವಶ್ಯಕ.
3. ಸಿಪ್ಪೆಗಳು: ತ್ವಚೆ ಬೇಗ ಕಳೆಗುಂದಿ ನಿರ್ಜೀವವಾಗಿ ಕಾಣುವಂತೆ ಆಗುವುದನ್ನು ತಡೆಯಲು ತರಕಾರಿ ಮತ್ತು ಹಣ್ಣಿನ ಸಿಪ್ಪೆಯ ಸೇವನೆ ಮಾಡುವುದು ಮುಖ್ಯ. ಸೇಬು, ಚೆರ್ರಿ, ದ್ರಾಕ್ಷಿ ಮುಂತಾದ ಹಣ್ಣುಗಳ ಸೇವನೆಯಿಂದ ಇದರಲ್ಲಿನ ಸುಕ್ಕು ನಿವಾರಕ ಅಂಶ ತ್ವಚೆಗೆ ತಾಜಾತನ ನೀಡುತ್ತದೆ.
4. ಸಾಂಬಾರು ಪದಾರ್ಥ: ಲವಂಗ ಮತ್ತು ಮೆಣಸಿನಲ್ಲಿ ಚರ್ಮದ ಜೀವಕಣಗಳ ಪುನರುತ್ಪತ್ತಿ ಮಾಡುವ ಅತ್ಯಮೂಲ್ಯ ಅಂಶವಿದೆ. ಇವುಗಳನ್ನು ಆದಷ್ಟೂ ಅಡುಗೆಗೆ ಹೆಚ್ಚು ಬಳಸಿ ಸೇವಿಸಿದರೆ ಸುಕ್ಕನ್ನು ಮತ್ತು ಇನ್ನಿತರ ಚರ್ಮ ಸಂಬಂಧಿ ತೊಂದರೆಗಳನ್ನು ಕಡಿಮೆಮಾಡಬಹುದು.
ಈ ಎಲ್ಲ ತರಕಾರಿ, ಹಣ್ಣು ಮತ್ತು ಸಾಂಬಾರು ಪದಾರ್ಥಗಳನ್ನು ದಿನನಿತ್ಯ ಸ್ವಲ್ಪವಾದರೂ ಬಳಸಿ ನೋಡಿ, ನಿಮ್ಮ ಚರ್ಮದಲ್ಲಿನ ಬದಲಾವಣೆ ನಿಮಗೆ ಗೋಚರವಾಗುತ್ತದೆ.



Click it and Unblock the Notifications