Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಸುಕ್ಕು ತಡೆಗಟ್ಟಲು ಇಲ್ಲಿದೆ ನೈಸರ್ಗಿಕ ಮಾರ್ಗ

ಸುಕ್ಕು ತಡೆಯಲು ಕೆಮಿಕಲ್ ಮಿಶ್ರಿತ ಕ್ರೀಂಗಳ ಮೊರೆಹೋಗುವ ಬದಲು ನೈಸರ್ಗಿಕವಾಗಿ ತ್ವಚೆಯನ್ನು ಸಂರಕ್ಷಿಸಿಕೊಳ್ಳುವ ಸುಲಭ ವಿಧಾನವೊಂದು ಇಲ್ಲಿದೆ. ನಾವು ಸೇವಿಸುವ ಆಹಾರದಿಂದಲೇ ನಮ್ಮ ಚರ್ಮದ ಮೇಲಿನ ಸುಕ್ಕುಗಳನ್ನು ನಿಯಂತ್ರಿಸಬಹುದು.
ತಾಜಾ ತ್ವಚೆಗೆ ನೈಸರ್ಗಿಕ ಮಾರ್ಗ:
1. ಹಸಿರು ತರಕಾರಿಗಳು: ಪಾಲಾಕ್, ಹೂಕೊಸು, ಕೊತ್ತಂಬರಿ, ಕರಿಬೇವು ಇನ್ನೂ ಮುಂತಾದವು ಚರ್ಮದ ರಕ್ಷಣೆಯಲ್ಲಿ ಅತಿ ಹೆಚ್ಚು ಅವಶ್ಯಕ. ಇದರಲ್ಲಿ ಹಾನಿಯುಂಟು ಮಾಡುವ ಯಾವುದೇ ಅಂಶಗಳು ಇಲ್ಲದಿರುವುದರಿಂದ ಮತ್ತು ಇವುಗಳ ನಾರಿನಂಶ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವುದರಿಂದ ದೇಹವನ್ನೂ ಶುದ್ಧವಾಗಿಟ್ಟು, ತ್ವಚೆಯ ರಕ್ಷಣೆಗೆ ಮುಂದಾಗುತ್ತದೆ.
2. ಚರ್ಮದ ಸ್ವಾಸ್ಥ್ಯಕ್ಕೆ ವಿಟಮಿನ್: ವಿಟಮಿನ್ ಸಿ ಮತ್ತು ಇ ಇವೆರಡೂ ತ್ವಚೆ ಸುಕ್ಕುಗಟ್ಟುವುದನ್ನು ತಡೆಯುವ ಅತ್ಯಮೂಲ್ಯ ವಿಟಮಿನ್ ಗಳು. ಇವು ಚರ್ಮದ ಜೀವಕಣಗಳ ಪುನರುತ್ಪತ್ತಿಯನ್ನು ಹೆಚ್ಚುಗೊಳಿಸಿ ನಿರ್ಜೀವ ತ್ವಚೆಯನ್ನು ಸರಿಗೊಳಿಸುವಲ್ಲಿ ಸಹಾಯಕವಾಗುತ್ತದೆ. ವಿಟಮಿನ್ ಇ ತ್ವಚೆಗೆ ಎಣ್ಣೆಯಂಶ ಒದಗಿಸಿ ಚರ್ಮಕ್ಕೆ ತಾರುಣ್ಯ ನೀಡುತ್ತದೆ. ಬಿಸಿಲು, ಪ್ರದೂಷಣೆ, ಹೊಗೆ ಧೂಳಿನಿಂದ ಚರ್ಮದ ಮೇಲೆ ಹಾನಿಯಾಗದಂತೆ ತಡೆಯುತ್ತವೆ. ಕಿತ್ತಳೆ, ದ್ರಾಕ್ಷಿ, ನಿಂಬೆ, ಬಾದಾಮಿ, ಮತ್ತು ಇನ್ನಿತರ ಒಣಹಣ್ಣುಗಳ ಸೇವನೆ ತ್ವಚೆ ರಕ್ಷಣೆಗೆ ಅವಶ್ಯಕ.
3. ಸಿಪ್ಪೆಗಳು: ತ್ವಚೆ ಬೇಗ ಕಳೆಗುಂದಿ ನಿರ್ಜೀವವಾಗಿ ಕಾಣುವಂತೆ ಆಗುವುದನ್ನು ತಡೆಯಲು ತರಕಾರಿ ಮತ್ತು ಹಣ್ಣಿನ ಸಿಪ್ಪೆಯ ಸೇವನೆ ಮಾಡುವುದು ಮುಖ್ಯ. ಸೇಬು, ಚೆರ್ರಿ, ದ್ರಾಕ್ಷಿ ಮುಂತಾದ ಹಣ್ಣುಗಳ ಸೇವನೆಯಿಂದ ಇದರಲ್ಲಿನ ಸುಕ್ಕು ನಿವಾರಕ ಅಂಶ ತ್ವಚೆಗೆ ತಾಜಾತನ ನೀಡುತ್ತದೆ.
4. ಸಾಂಬಾರು ಪದಾರ್ಥ: ಲವಂಗ ಮತ್ತು ಮೆಣಸಿನಲ್ಲಿ ಚರ್ಮದ ಜೀವಕಣಗಳ ಪುನರುತ್ಪತ್ತಿ ಮಾಡುವ ಅತ್ಯಮೂಲ್ಯ ಅಂಶವಿದೆ. ಇವುಗಳನ್ನು ಆದಷ್ಟೂ ಅಡುಗೆಗೆ ಹೆಚ್ಚು ಬಳಸಿ ಸೇವಿಸಿದರೆ ಸುಕ್ಕನ್ನು ಮತ್ತು ಇನ್ನಿತರ ಚರ್ಮ ಸಂಬಂಧಿ ತೊಂದರೆಗಳನ್ನು ಕಡಿಮೆಮಾಡಬಹುದು.
ಈ ಎಲ್ಲ ತರಕಾರಿ, ಹಣ್ಣು ಮತ್ತು ಸಾಂಬಾರು ಪದಾರ್ಥಗಳನ್ನು ದಿನನಿತ್ಯ ಸ್ವಲ್ಪವಾದರೂ ಬಳಸಿ ನೋಡಿ, ನಿಮ್ಮ ಚರ್ಮದಲ್ಲಿನ ಬದಲಾವಣೆ ನಿಮಗೆ ಗೋಚರವಾಗುತ್ತದೆ.



Click it and Unblock the Notifications