Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಸುಕ್ಕು ತಡೆಗಟ್ಟಲು ಇಲ್ಲಿದೆ ನೈಸರ್ಗಿಕ ಮಾರ್ಗ

ಸುಕ್ಕು ತಡೆಯಲು ಕೆಮಿಕಲ್ ಮಿಶ್ರಿತ ಕ್ರೀಂಗಳ ಮೊರೆಹೋಗುವ ಬದಲು ನೈಸರ್ಗಿಕವಾಗಿ ತ್ವಚೆಯನ್ನು ಸಂರಕ್ಷಿಸಿಕೊಳ್ಳುವ ಸುಲಭ ವಿಧಾನವೊಂದು ಇಲ್ಲಿದೆ. ನಾವು ಸೇವಿಸುವ ಆಹಾರದಿಂದಲೇ ನಮ್ಮ ಚರ್ಮದ ಮೇಲಿನ ಸುಕ್ಕುಗಳನ್ನು ನಿಯಂತ್ರಿಸಬಹುದು.
ತಾಜಾ ತ್ವಚೆಗೆ ನೈಸರ್ಗಿಕ ಮಾರ್ಗ:
1. ಹಸಿರು ತರಕಾರಿಗಳು: ಪಾಲಾಕ್, ಹೂಕೊಸು, ಕೊತ್ತಂಬರಿ, ಕರಿಬೇವು ಇನ್ನೂ ಮುಂತಾದವು ಚರ್ಮದ ರಕ್ಷಣೆಯಲ್ಲಿ ಅತಿ ಹೆಚ್ಚು ಅವಶ್ಯಕ. ಇದರಲ್ಲಿ ಹಾನಿಯುಂಟು ಮಾಡುವ ಯಾವುದೇ ಅಂಶಗಳು ಇಲ್ಲದಿರುವುದರಿಂದ ಮತ್ತು ಇವುಗಳ ನಾರಿನಂಶ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವುದರಿಂದ ದೇಹವನ್ನೂ ಶುದ್ಧವಾಗಿಟ್ಟು, ತ್ವಚೆಯ ರಕ್ಷಣೆಗೆ ಮುಂದಾಗುತ್ತದೆ.
2. ಚರ್ಮದ ಸ್ವಾಸ್ಥ್ಯಕ್ಕೆ ವಿಟಮಿನ್: ವಿಟಮಿನ್ ಸಿ ಮತ್ತು ಇ ಇವೆರಡೂ ತ್ವಚೆ ಸುಕ್ಕುಗಟ್ಟುವುದನ್ನು ತಡೆಯುವ ಅತ್ಯಮೂಲ್ಯ ವಿಟಮಿನ್ ಗಳು. ಇವು ಚರ್ಮದ ಜೀವಕಣಗಳ ಪುನರುತ್ಪತ್ತಿಯನ್ನು ಹೆಚ್ಚುಗೊಳಿಸಿ ನಿರ್ಜೀವ ತ್ವಚೆಯನ್ನು ಸರಿಗೊಳಿಸುವಲ್ಲಿ ಸಹಾಯಕವಾಗುತ್ತದೆ. ವಿಟಮಿನ್ ಇ ತ್ವಚೆಗೆ ಎಣ್ಣೆಯಂಶ ಒದಗಿಸಿ ಚರ್ಮಕ್ಕೆ ತಾರುಣ್ಯ ನೀಡುತ್ತದೆ. ಬಿಸಿಲು, ಪ್ರದೂಷಣೆ, ಹೊಗೆ ಧೂಳಿನಿಂದ ಚರ್ಮದ ಮೇಲೆ ಹಾನಿಯಾಗದಂತೆ ತಡೆಯುತ್ತವೆ. ಕಿತ್ತಳೆ, ದ್ರಾಕ್ಷಿ, ನಿಂಬೆ, ಬಾದಾಮಿ, ಮತ್ತು ಇನ್ನಿತರ ಒಣಹಣ್ಣುಗಳ ಸೇವನೆ ತ್ವಚೆ ರಕ್ಷಣೆಗೆ ಅವಶ್ಯಕ.
3. ಸಿಪ್ಪೆಗಳು: ತ್ವಚೆ ಬೇಗ ಕಳೆಗುಂದಿ ನಿರ್ಜೀವವಾಗಿ ಕಾಣುವಂತೆ ಆಗುವುದನ್ನು ತಡೆಯಲು ತರಕಾರಿ ಮತ್ತು ಹಣ್ಣಿನ ಸಿಪ್ಪೆಯ ಸೇವನೆ ಮಾಡುವುದು ಮುಖ್ಯ. ಸೇಬು, ಚೆರ್ರಿ, ದ್ರಾಕ್ಷಿ ಮುಂತಾದ ಹಣ್ಣುಗಳ ಸೇವನೆಯಿಂದ ಇದರಲ್ಲಿನ ಸುಕ್ಕು ನಿವಾರಕ ಅಂಶ ತ್ವಚೆಗೆ ತಾಜಾತನ ನೀಡುತ್ತದೆ.
4. ಸಾಂಬಾರು ಪದಾರ್ಥ: ಲವಂಗ ಮತ್ತು ಮೆಣಸಿನಲ್ಲಿ ಚರ್ಮದ ಜೀವಕಣಗಳ ಪುನರುತ್ಪತ್ತಿ ಮಾಡುವ ಅತ್ಯಮೂಲ್ಯ ಅಂಶವಿದೆ. ಇವುಗಳನ್ನು ಆದಷ್ಟೂ ಅಡುಗೆಗೆ ಹೆಚ್ಚು ಬಳಸಿ ಸೇವಿಸಿದರೆ ಸುಕ್ಕನ್ನು ಮತ್ತು ಇನ್ನಿತರ ಚರ್ಮ ಸಂಬಂಧಿ ತೊಂದರೆಗಳನ್ನು ಕಡಿಮೆಮಾಡಬಹುದು.
ಈ ಎಲ್ಲ ತರಕಾರಿ, ಹಣ್ಣು ಮತ್ತು ಸಾಂಬಾರು ಪದಾರ್ಥಗಳನ್ನು ದಿನನಿತ್ಯ ಸ್ವಲ್ಪವಾದರೂ ಬಳಸಿ ನೋಡಿ, ನಿಮ್ಮ ಚರ್ಮದಲ್ಲಿನ ಬದಲಾವಣೆ ನಿಮಗೆ ಗೋಚರವಾಗುತ್ತದೆ.



Click it and Unblock the Notifications