Just In
- 1 min ago ಐಸ್ ಟೀ ಮಾಡುವುದು ಹೇಗೆ? ಇಲ್ಲಿದೆ ಪರ್ಫೆಕ್ಟ್ ಐಸ್ ಟೀ ರೆಸಿಪಿ
- 48 min ago ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- 2 hrs ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 3 hrs ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
Don't Miss
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈರುಳ್ಳಿಯಲ್ಲಿದೆ ಕೂದಲಿನ ಸಮಸ್ಯೆಗೆ ಪರಿಹಾರ
ಬೆಳಗ್ಗೆ ತಲೆ ಬಾಚಿದಾಗ ಕೂದಲು ಗಂಟು ಗಂಟಾಗಿ ಬಾಚಣಿಗೆಯಲ್ಲಿ ಬರುವಾಗ ಹೊಟ್ಟೆ ಉರಿದು ಹೋಗುತ್ತದೆ ಅಲ್ಲವೇ? ದಿನಾ ತುಂಬಾ ಕೂದಲು ಉದುರಿದರೆ ಸ್ವಲ್ಪ ದಿನದಲ್ಲಿಯೇ ಕೂದಲು ತೆಳ್ಳಗಾಗಿ, ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ಕೂದಲು ಉದುರುತ್ತಿದೆಯೆಂದು ಮಂಡೆ ಬಿಸಿ ಮಾಡಿಕೊಂಡು, ಮತ್ತಷ್ಟು ಕೂದಲು ಉದುರಿಸಿಕೊಳ್ಳುವ ಬದಲು ಅದನ್ನು ತಡೆಗಟ್ಟಲು ಪ್ರಯತ್ನಿಸಬೇಕು.
ಕೂದಲು ಉದುರುವುದನ್ನು ತಡೆಗಟ್ಟಲು ಅನೇಕ ನೈಸರ್ಗಿಕವಾದ ವಿಧಾನಗಳಿವೆ. ಅದರಲ್ಲೊಂದು ಈರುಳ್ಳಿ ಬಳಸುವುದು. ಈರುಳ್ಳಿಯನ್ನು ಈ ಕೆಳಗಿನಂತೆ ಕೂದಲಿನ ಆರೈಕೆಯಲ್ಲಿ ಬಳಸಬಹುದು:
ಕೂದಲು ಉದುರುವುದನ್ನು ತಡೆಗಟ್ಟಲು: ಕೂದಲು ತುಂಬಾ ಉದುರುತ್ತಿದ್ದರೆ ಇದನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿ 30 ನಿಮಿಷ ಇಟ್ಟು ತಲೆ ತೊಳೆದರೆ ಸಾಕು. ಈ ಪೇಸ್ಟ್ ಹಚ್ಚಿ ಬಿಸಿ ನೀರಿನಲ್ಲಿ ಅದ್ದಿ ಹಿಂಡಿದ ಟವಲ್ ಅನ್ನು ತಲೆಗೆ ಸುತ್ತಿದರೆ ಮತ್ತಷ್ಟು ಒಳ್ಳೆಯದು. ಇದರಲ್ಲಿ ರಂಜಕದ ಅಂಶ ಅಧಿಕವಿರುವುದರಿಂದ ಕೂದಲು ಉದುರುವುದನ್ನು ತಡೆಗಟ್ಟುತ್ತದೆ.
ಸೊಂಪಾದ ಕೂದಲಿಗೆ: ಈರುಳ್ಳಿ ರಸವನ್ನು ತೆಂಗಿನೆಣ್ಣೆ ಜೊತೆ ಮಿಶ್ರ ಮಾಡಿ ತಲೆಗೆ ಹಚ್ಚಿ 30 ನಿಮಿಷದ ಬಳಿಕ ತಲೆ ತೊಳೆಯಬೇಕು. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ಸಾಕು, ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತದೆ.
ತಲೆಯಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ: ತಲೆ ಬುಡದಲ್ಲಿ ಬ್ಯಾಕ್ಟೀರಿಯಾಗಳಿದ್ದರೆ ತುರಿಕೆ, ಕಜ್ಜಿ ಉಂಟಾಗುತ್ತದೆ. ಈರುಳ್ಳಿ ಪೇಸ್ಟ್ ಹಚ್ಚಿದರೆ ಈ ಸಮಸ್ಯೆಯಿಂದ ಹೊರಬರಬಹುದು.
ತಲೆಹೊಟ್ಟನ್ನು ನಿವಾರಿಸುತ್ತದೆ: ತಲೆ ಹೊಟ್ಟಿದ್ದರೆ ಯಾವ ಶ್ಯಾಂಪೂವಿನ ಅಗ್ಯತವಿಲ್ಲ. ಈರುಳ್ಳಿ ಪೇಸ್ಟ್ ಹಚ್ಚಿದರೆ ಸಾಕು ತಲೆಹೊಟ್ಟಿಗೆ ಗುಡ್ ಬೈ ಹೇಳಬಹುದು.