Latest Updates
-
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ!
ಕೃಷ್ಣಗೆ ಕ್ಲೀನ್ ಚಿಟ್ - ಶಿಡ್ಲಘಟ್ಟ ಮುನಿಯಪ್ಪ ಚಿತ್, ಏಕೆ?

ಅಲ್ಲ ಸ್ವಾಮಿ, ಯಾರ ಕಿವಿ ಮೇಲೆ ಲಾಲ್ ಬಾಗ್ ಇಡ್ಲಿಕ್ಕೆ ಹೊರಟಿದ್ದೀರಿ. ಮುನಿಯಪ್ಪ ಅಕ್ರಮ ಎಸೆಗುತ್ತಿದ್ದಾಗ ಕಣ್ಣಿಗೆ ಗಣಿ ಧೂಳು ಬಿದ್ದು, ಸನ್ಮಾನ್ಯ ಮುಖ್ಯಮಂತ್ರಿ ಕೃಷ್ಣ ಕಣ್ಮುಚ್ಚಿಕೊಂಡಿದ್ದರೆ !? ಅವರನ್ನೇಕೆ ದೋಷಿಯಾಗಿಸಿಲ್ಲ ನೀವು?
ಇನ್ನು, ಮತ್ತೊಬ್ಬ ಮುಖ್ಯಮಂತ್ರಿ ಕುಮಾರ ಸ್ವಾಮಿ ಬಗ್ಗೆ ಪಾಸಿಂಗ್ ಕಾಮೆಂಟ್ ಮಾಡಿದ್ದೀರಂತೆ. ನಿಖರವಾಗಿ ಅವರ ಬಗ್ಗೆ ಯಾವುದೇ ಆರೋಪಗಳು ಇಲ್ವಂತೆ. ಅವರೇ ಹೇಳಿಕೊಂಡು ತಿರುಗ್ತಿದ್ದಾರೆ. ಇದನ್ನು ನಾವು ನಂಬಬೇಕಾ? ಗೌಡರ ಕುಟುಂಬದ ಬಗ್ಗೆ ಯಾಕೆ ನಿಮಗೆ ಈ ವಿಶೇಷ ಪ್ರೀತಿ?
ಮತ್ತೆ, ವಸತಿ ಸಚಿವ ಸೋಮಣ್ಣ ಹೆಸರನ್ನು ಕೈಬಿಟ್ಟಿದ್ದೀರಂತೆ. ಅವರಂತೂ ಆನಂದತುಂದಿಲರಾಗಿದ್ದಾರೆ. ಆದರೆ ನಾವು ಇದನ್ನೂ ನಂಬಬೇಕಾ? ಇಷ್ಟಕ್ಕೂ ನಿಮ್ಮ ವರದಿ ಇನ್ನೂ ಯಾರೆಂದರೆ ಯಾರಿಗೂ ಸಿಕ್ಕಿಲ್ಲ. ಆದರೂ ಸನ್ಮಾನ್ಯ ಆಯನೂರು ಮುಂಜುನಾಥ್ ಹೇಳ್ತಿದ್ದಾರೆ - ನಿಮ್ಮ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರಂತೆ. ಸೋಮಣ್ಣ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ ಎಂದು ಖಂಡತುಂಡವಾಗಿ ಅವರೇ ಹೇಳಿದ್ದು. ವರದಿ ಮತ್ತೆ ಸೆಲೆಕ್ಟೀವ್ ಲೀಕೇಜ್ ಆಗಿದೆಯೇ?
ಎಲ್ಲಕ್ಕಿಂತ ಮುಖ್ಯವಾದ ವಿಷಯ ಮರೆತಿದ್ದೆ, ಸ್ವಲ್ಪ ಹಳೆ ವಿಷಯ. ಟೆಲಿಫೋನ್ ಟ್ಯಾಪಿಂಗ್ ನಿಂದ ವರದಿ ಸೋರಿಕೆ ಎಂದ್ದೀರಲ್ಲಾ, ಅಲ್ಲಾ ಸ್ವಾಮಿ. ಅದ್ಯಾವ ನಿಮ್ಮ ಪರಮವೈರಿ ಹೀಗೆಲ್ಲ ಪುಟಗಳಗಟ್ಟಲೆ ವರದಿಯನ್ನು ಟೆಲಿಫೋನ್ ನಲ್ಲಿ ಕದ್ದಾಲಿಸಿಕೊಂಡು ಖರಾರುವಕ್ಕಾಗಿ ವರದಿ ಮಾಡಿಕೊಂಡ? ಎಲ್ಲೋ ಹಾರ್ಡ್ ಕಾಪಿನೇ ಲೀಕ್ ಆಗಿರಬೇಕು. ಸ್ವಲ್ಪ ಚೆಕ್ ಮಾಡಿಸಿಕೊಳ್ಳಿ.
ಏನೋ ಸ್ವಾಮಿ ದೊಡ್ಡೋರ ವಿಷ್ಯಾ ನನಗ್ಯಾಕೆ, ಎಲ್ಲಾದರೂ ಹಾಳುಬಿದ್ದು ಹೋಗ್ಲಿ ಬಿಡಿ.



Click it and Unblock the Notifications