ಕೃಷ್ಣಗೆ ಕ್ಲೀನ್ ಚಿಟ್ - ಶಿಡ್ಲಘಟ್ಟ ಮುನಿಯಪ್ಪ ಚಿತ್, ಏಕೆ?

By * ಶಂಭೋ ಶಂಕರ, ಬಸವನಗುಡಿ

SM Krishna
ಬೆಂಗಳೂರು, ಜುಲೈ 28: ಎಸ್ಎಂ ಕೃಷ್ಣಗೆ ಕ್ಲೀನ್ ಚಿಟ್ ನೀಡುತ್ತಾ 'ವರದಿಯಲ್ಲಿ ನಾನೆಲ್ಲೂ ಕೃಷ್ಣ ಹೆಸರನ್ನು ಹೇಳ್ಲಿಲ್ಲ. ಮಾಧ್ಯಮಗಳೇ ವರದಿ ಮಾಡಿವೆ' ಎಂದಿದ್ದೀರಿ. ಮತ್ತೆಲ್ಲೋ ಹೇಳಿದ್ದೀರಿ ಶಿಡ್ಲಘಟ್ಟದ ಮುನಿಯಪ್ಪ ಕೃಷ್ಣ ಮಂತ್ರಿಮಂಡಲದಲ್ಲಿ ಗಣಿ ಸಚಿವರಾಗಿದ್ದುಕೊಂಡು ಅಕ್ರಮ ನಡೆಸಿದ್ದಾರೆ' ಎಂದು.

ಅಲ್ಲ ಸ್ವಾಮಿ, ಯಾರ ಕಿವಿ ಮೇಲೆ ಲಾಲ್ ಬಾಗ್ ಇಡ್ಲಿಕ್ಕೆ ಹೊರಟಿದ್ದೀರಿ. ಮುನಿಯಪ್ಪ ಅಕ್ರಮ ಎಸೆಗುತ್ತಿದ್ದಾಗ ಕಣ್ಣಿಗೆ ಗಣಿ ಧೂಳು ಬಿದ್ದು, ಸನ್ಮಾನ್ಯ ಮುಖ್ಯಮಂತ್ರಿ ಕೃಷ್ಣ ಕಣ್ಮುಚ್ಚಿಕೊಂಡಿದ್ದರೆ !? ಅವರನ್ನೇಕೆ ದೋಷಿಯಾಗಿಸಿಲ್ಲ ನೀವು?

ಇನ್ನು, ಮತ್ತೊಬ್ಬ ಮುಖ್ಯಮಂತ್ರಿ ಕುಮಾರ ಸ್ವಾಮಿ ಬಗ್ಗೆ ಪಾಸಿಂಗ್ ಕಾಮೆಂಟ್ ಮಾಡಿದ್ದೀರಂತೆ. ನಿಖರವಾಗಿ ಅವರ ಬಗ್ಗೆ ಯಾವುದೇ ಆರೋಪಗಳು ಇಲ್ವಂತೆ. ಅವರೇ ಹೇಳಿಕೊಂಡು ತಿರುಗ್ತಿದ್ದಾರೆ. ಇದನ್ನು ನಾವು ನಂಬಬೇಕಾ? ಗೌಡರ ಕುಟುಂಬದ ಬಗ್ಗೆ ಯಾಕೆ ನಿಮಗೆ ಈ ವಿಶೇಷ ಪ್ರೀತಿ?

ಮತ್ತೆ, ವಸತಿ ಸಚಿವ ಸೋಮಣ್ಣ ಹೆಸರನ್ನು ಕೈಬಿಟ್ಟಿದ್ದೀರಂತೆ. ಅವರಂತೂ ಆನಂದತುಂದಿಲರಾಗಿದ್ದಾರೆ. ಆದರೆ ನಾವು ಇದನ್ನೂ ನಂಬಬೇಕಾ? ಇಷ್ಟಕ್ಕೂ ನಿಮ್ಮ ವರದಿ ಇನ್ನೂ ಯಾರೆಂದರೆ ಯಾರಿಗೂ ಸಿಕ್ಕಿಲ್ಲ. ಆದರೂ ಸನ್ಮಾನ್ಯ ಆಯನೂರು ಮುಂಜುನಾಥ್ ಹೇಳ್ತಿದ್ದಾರೆ - ನಿಮ್ಮ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರಂತೆ. ಸೋಮಣ್ಣ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ ಎಂದು ಖಂಡತುಂಡವಾಗಿ ಅವರೇ ಹೇಳಿದ್ದು. ವರದಿ ಮತ್ತೆ ಸೆಲೆಕ್ಟೀವ್ ಲೀಕೇಜ್ ಆಗಿದೆಯೇ?

ಎಲ್ಲಕ್ಕಿಂತ ಮುಖ್ಯವಾದ ವಿಷಯ ಮರೆತಿದ್ದೆ, ಸ್ವಲ್ಪ ಹಳೆ ವಿಷಯ. ಟೆಲಿಫೋನ್ ಟ್ಯಾಪಿಂಗ್ ನಿಂದ ವರದಿ ಸೋರಿಕೆ ಎಂದ್ದೀರಲ್ಲಾ, ಅಲ್ಲಾ ಸ್ವಾಮಿ. ಅದ್ಯಾವ ನಿಮ್ಮ ಪರಮವೈರಿ ಹೀಗೆಲ್ಲ ಪುಟಗಳಗಟ್ಟಲೆ ವರದಿಯನ್ನು ಟೆಲಿಫೋನ್ ನಲ್ಲಿ ಕದ್ದಾಲಿಸಿಕೊಂಡು ಖರಾರುವಕ್ಕಾಗಿ ವರದಿ ಮಾಡಿಕೊಂಡ? ಎಲ್ಲೋ ಹಾರ್ಡ್ ಕಾಪಿನೇ ಲೀಕ್ ಆಗಿರಬೇಕು. ಸ್ವಲ್ಪ ಚೆಕ್ ಮಾಡಿಸಿಕೊಳ್ಳಿ.

ಏನೋ ಸ್ವಾಮಿ ದೊಡ್ಡೋರ ವಿಷ್ಯಾ ನನಗ್ಯಾಕೆ, ಎಲ್ಲಾದರೂ ಹಾಳುಬಿದ್ದು ಹೋಗ್ಲಿ ಬಿಡಿ.

English summary

Digging illegal minig report, SM Krishna spared why? ಕೃಷ್ಣಗೆ ಕ್ಲೀನ್ ಚಿಟ್ - ಶಿಡ್ಲಘಟ್ಟ ಮುನಿಯಪ್ಪ ಚಿತ್, ಏಕೆ?

Our reader Shambo Shankara from Basavangudi While digging the illegal minig report submitted by Santosh Hegde is shocked as the former Chief Minister SM Krishna is spared but his minister was named in the Report. He asks why this?
X
Desktop Bottom Promotion