Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಕೃಷ್ಣಗೆ ಕ್ಲೀನ್ ಚಿಟ್ - ಶಿಡ್ಲಘಟ್ಟ ಮುನಿಯಪ್ಪ ಚಿತ್, ಏಕೆ?

ಅಲ್ಲ ಸ್ವಾಮಿ, ಯಾರ ಕಿವಿ ಮೇಲೆ ಲಾಲ್ ಬಾಗ್ ಇಡ್ಲಿಕ್ಕೆ ಹೊರಟಿದ್ದೀರಿ. ಮುನಿಯಪ್ಪ ಅಕ್ರಮ ಎಸೆಗುತ್ತಿದ್ದಾಗ ಕಣ್ಣಿಗೆ ಗಣಿ ಧೂಳು ಬಿದ್ದು, ಸನ್ಮಾನ್ಯ ಮುಖ್ಯಮಂತ್ರಿ ಕೃಷ್ಣ ಕಣ್ಮುಚ್ಚಿಕೊಂಡಿದ್ದರೆ !? ಅವರನ್ನೇಕೆ ದೋಷಿಯಾಗಿಸಿಲ್ಲ ನೀವು?
ಇನ್ನು, ಮತ್ತೊಬ್ಬ ಮುಖ್ಯಮಂತ್ರಿ ಕುಮಾರ ಸ್ವಾಮಿ ಬಗ್ಗೆ ಪಾಸಿಂಗ್ ಕಾಮೆಂಟ್ ಮಾಡಿದ್ದೀರಂತೆ. ನಿಖರವಾಗಿ ಅವರ ಬಗ್ಗೆ ಯಾವುದೇ ಆರೋಪಗಳು ಇಲ್ವಂತೆ. ಅವರೇ ಹೇಳಿಕೊಂಡು ತಿರುಗ್ತಿದ್ದಾರೆ. ಇದನ್ನು ನಾವು ನಂಬಬೇಕಾ? ಗೌಡರ ಕುಟುಂಬದ ಬಗ್ಗೆ ಯಾಕೆ ನಿಮಗೆ ಈ ವಿಶೇಷ ಪ್ರೀತಿ?
ಮತ್ತೆ, ವಸತಿ ಸಚಿವ ಸೋಮಣ್ಣ ಹೆಸರನ್ನು ಕೈಬಿಟ್ಟಿದ್ದೀರಂತೆ. ಅವರಂತೂ ಆನಂದತುಂದಿಲರಾಗಿದ್ದಾರೆ. ಆದರೆ ನಾವು ಇದನ್ನೂ ನಂಬಬೇಕಾ? ಇಷ್ಟಕ್ಕೂ ನಿಮ್ಮ ವರದಿ ಇನ್ನೂ ಯಾರೆಂದರೆ ಯಾರಿಗೂ ಸಿಕ್ಕಿಲ್ಲ. ಆದರೂ ಸನ್ಮಾನ್ಯ ಆಯನೂರು ಮುಂಜುನಾಥ್ ಹೇಳ್ತಿದ್ದಾರೆ - ನಿಮ್ಮ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರಂತೆ. ಸೋಮಣ್ಣ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ ಎಂದು ಖಂಡತುಂಡವಾಗಿ ಅವರೇ ಹೇಳಿದ್ದು. ವರದಿ ಮತ್ತೆ ಸೆಲೆಕ್ಟೀವ್ ಲೀಕೇಜ್ ಆಗಿದೆಯೇ?
ಎಲ್ಲಕ್ಕಿಂತ ಮುಖ್ಯವಾದ ವಿಷಯ ಮರೆತಿದ್ದೆ, ಸ್ವಲ್ಪ ಹಳೆ ವಿಷಯ. ಟೆಲಿಫೋನ್ ಟ್ಯಾಪಿಂಗ್ ನಿಂದ ವರದಿ ಸೋರಿಕೆ ಎಂದ್ದೀರಲ್ಲಾ, ಅಲ್ಲಾ ಸ್ವಾಮಿ. ಅದ್ಯಾವ ನಿಮ್ಮ ಪರಮವೈರಿ ಹೀಗೆಲ್ಲ ಪುಟಗಳಗಟ್ಟಲೆ ವರದಿಯನ್ನು ಟೆಲಿಫೋನ್ ನಲ್ಲಿ ಕದ್ದಾಲಿಸಿಕೊಂಡು ಖರಾರುವಕ್ಕಾಗಿ ವರದಿ ಮಾಡಿಕೊಂಡ? ಎಲ್ಲೋ ಹಾರ್ಡ್ ಕಾಪಿನೇ ಲೀಕ್ ಆಗಿರಬೇಕು. ಸ್ವಲ್ಪ ಚೆಕ್ ಮಾಡಿಸಿಕೊಳ್ಳಿ.
ಏನೋ ಸ್ವಾಮಿ ದೊಡ್ಡೋರ ವಿಷ್ಯಾ ನನಗ್ಯಾಕೆ, ಎಲ್ಲಾದರೂ ಹಾಳುಬಿದ್ದು ಹೋಗ್ಲಿ ಬಿಡಿ.



Click it and Unblock the Notifications











